Homeಮುಖಪುಟ'ಬಿಜೆಪಿಯ ಸಾಗರೋತ್ತರ ಗೆಳೆಯರ ಬಳಗ'ದ ಸಂಸ್ಥಾಪಕನಿಂದ ಅತ್ಯಾಚಾರ: ತಪ್ಪಿತಸ್ಥ ಎಂದು ಘೋಷಿಸಿದ ಸಿಡ್ನಿ ನ್ಯಾಯಾಲಯ

‘ಬಿಜೆಪಿಯ ಸಾಗರೋತ್ತರ ಗೆಳೆಯರ ಬಳಗ’ದ ಸಂಸ್ಥಾಪಕನಿಂದ ಅತ್ಯಾಚಾರ: ತಪ್ಪಿತಸ್ಥ ಎಂದು ಘೋಷಿಸಿದ ಸಿಡ್ನಿ ನ್ಯಾಯಾಲಯ

- Advertisement -
- Advertisement -

ಬಿಜೆಪಿಯ ಓವರ್‌ಸೀಸ್ ಫ್ರೆಂಡ್ಸ್‌ನ (ಸಾಗರೋತ್ತರ ಸ್ನೇಹಿತರು) ಆಸ್ಟ್ರೇಲಿಯಾ ವಿಭಾಗದ ಸಂಸ್ಥಾಪಕರಲ್ಲಿ ಒಬ್ಬರಾದ ಬಾಲೇಶ್ ಧಂಖರ್ ಅವರು, ಸುಳ್ಳು ಉದ್ಯೋಗ ಜಾಹೀರಾತುಗಳ ಮೂಲಕ ಭೇಟಿಯಾಗಿ, ಐವರು ಮಹಿಳೆಯರಿಗೆ ಮಾದಕವಸ್ತು ನೀಡಿ ಅವರ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಸೋಮವಾರದಂದು ಸಿಡ್ನಿಯ ಡೌನಿಂಗ್ ಸೆಂಟರ್‌ನಲ್ಲಿರುವ ಜಿಲ್ಲಾ ನ್ಯಾಯಾಲಯದ ತೀರ್ಪುಗಾರರು ಆತನ ವಿರುದ್ಧದ 39 ಆರೋಪಗಳಲ್ಲಿ ಪ್ರತಿಯೊಂದನ್ನು ತಪ್ಪಿತಸ್ಥರೆಂದು ಘೋಷಿಸಿದ್ದಾರೆ ಎಂದು ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.

ಅವರು 13 ಅತ್ಯಾಚಾರ ಪ್ರಕರಣಗಳು, 6 ಅತ್ಯಾಚಾರಕ್ಕೆ ಅನುಕೂಲವಾಗುವಂತೆ ಮಾದಕ ವಸ್ತುವನ್ನು ಉದ್ದೇಶಪೂರ್ವಕವಾಗಿ ಸೇವಿಸಿದ ಘಟನೆಗಳು, 17 ಸಂಬಂಧಿಸಿದ ವೀಡಿಯೊಗಳನ್ನು ಅನಧಿಕೃತವಾಗಿ ರೆಕಾರ್ಡ್ ಮಾಡಿದ ಘಟನೆಗಳು ಮತ್ತು 3 ಅಸಭ್ಯವಾಗಿ ಹಲ್ಲೆಯ ಘಟನೆಗಳಿಗೆ ಸಂಬಂಧಿಸಿದ ಆರೋಪಗಳನ್ನು ಎದುರಿಸಿದರು.

ಧಂಖರ್ ಮಹಿಳೆಯರಿಗೆ ವೈನ್ ಅಥವಾ ಐಸ್ ಕ್ರೀಂನಲ್ಲಿ ನಿದ್ರಾಮಾತ್ರೆ ಬೆರಸುತ್ತಿದ್ದನು. ಅವರು ಅದನ್ನು ಸೇವಿಸಿದ ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪ್ರಾಸಿಕ್ಯೂಷನ್ ಹೇಳಿದೆ. ಅಲಾರಾಮ ಗಡಿಯಾರದ ಹಿಂದೆ ತನ್ನ ಫೋನ್ ಇಟ್ಟು, ತನ್ನ ಲೈಂಗಿಕ ಕ್ರಿಯೆಯ ವಿಡಿಯೋ ಚಿತ್ರಿಕರಿಸುತ್ತಿದ್ದನು.

ಪ್ರಕರಣದ ವಿಚಾರಣೆಯ ಸಮಯದಲ್ಲಿ, ತೀರ್ಪುಗಾರರು, ಆತನ ಲೈಂಗಿಕ ದೌರ್ಜನ್ಯದ ರೆಕಾರ್ಡಿಂಗ್‌ಗಳನ್ನು ವೀಕ್ಷಿಸಬೇಕಾಗಿತ್ತು. ಆ ವೀಡಿಯೊಗಳನ್ನು ವೀಕ್ಷಿಸಿದ ನಂತರ ಅವರು ಆಘಾತಕ್ಕೊಳಗಾದರು ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.

ಅಕ್ಟೋಬರ್ 2018 ರಲ್ಲಿ ಪೊಲೀಸರು ಧಂಖರ್ಸ್ ಸಿಬಿಡಿ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿದಾಗ, ಡಜನ್‌ಗಟ್ಟಲೇ ವಿಡಿಯೋಗಳು ಸಿಕ್ಕಿವೆ. ಆ ವಿಡಿಯೋಗಳಲ್ಲಿ ಪ್ರಜ್ಞಾಹೀನರಾಗಿರುವ ಅಥವಾ ಹೆಣಗಾಡುತ್ತಿರುವ ಮಹಿಳೆಯರ ಲೈಂಗಿಕ ದೌರ್ಜನ್ಯದ ದೃಶ್ಯಗಳಿದ್ದವು. ಆ ವಿಡಿಯೊಗಳನ್ನು ಫೋಲ್ಡರ್‌ಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದನ್ನು ಕೊರಿಯನ್ ಮಹಿಳೆಯ ಹೆಸರಿನಲ್ಲಿ ಸೇವ್ ಮಾಡಲಾಗಿದೆ.

ಏತನ್ಮಧ್ಯೆ, 2018 ರಲ್ಲಿ ಧಂಖರ್ ಅವರು ಸಂಘಟನೆಗೆ ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿಯ ಆಸ್ಟ್ರೇಲಿಯಾ ಘಟಕ ಹೇಳಿದೆ. ”ಬಾಲೇಶ್ ಧನಕರ್ ಅವರು ಜುಲೈ 2018 ರಲ್ಲಿ OFBJP ಆಸ್ಟ್ರೇಲಿಯಾಕ್ಕೆ ರಾಜೀನಾಮೆ ನೀಡಿದ್ದಾರೆ. ನಾವು ಅವರ ಕ್ರಮಗಳನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ಅವರು ಸಂಪೂರ್ಣ ಕಾನೂನು ಬಲವನ್ನು ಎದುರಿಸಬೇಕು” ಎಂದು ಸಂಘಟನೆ ಟ್ವೀಟ್ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...