Homeಅಂಕಣಗಳುಮನೆ ಮನಸ್ಸು ಬೀದಿಗಳು ತ್ಯಾಜ್ಯಮುಕ್ತವಾಗಲಿ; ಗುಡಿಸಿ ತೊಳೆಯುವವರ ಸಂಕಷ್ಟ-ಶೋಷಣೆ ಕೊನೆಯಾಗಲಿ

ಮನೆ ಮನಸ್ಸು ಬೀದಿಗಳು ತ್ಯಾಜ್ಯಮುಕ್ತವಾಗಲಿ; ಗುಡಿಸಿ ತೊಳೆಯುವವರ ಸಂಕಷ್ಟ-ಶೋಷಣೆ ಕೊನೆಯಾಗಲಿ

- Advertisement -
- Advertisement -

ನ್ಯಾಯಪಥ ಪತ್ರಿಕೆಯಲ್ಲಿ ಕೆಲವು ಸಣ್ಣ ಪತ್ರಿಕೆಗಳ, ಜರ್ನಲ್‌ಗಳ ಪರಿಚಯ ಮಾಡಿಕೊಡಲೆಂದು (ಕಿರು ಪರಿಚಯದ ಈ ಅಂಕಣ ಮುಂದಿನ ವಾರದಿಂದ ಪ್ರಾರಂಭವಾಗಲಿದೆ) – ಅದರ ಭಾಗವಾಗಿ ಇಂಡಿಯನ್ ಕಾರ್ಟೂನಿಸ್ಟ್ ಅಸೋಸಿಯೇಷನ್ ಈ ವರ್ಷ ಹೊರತಂದಿರುವ ಕಾರ್ಟೂನಿಸ್ಟ್ ಇಂಡಿಯಾ ಆನ್ಯಯಲ್ 2022 ಜರ್ನಲ್ ತರಲು ಇಂಡಿಯನ್ ಕಾರ್ಟೂನ್ ಗ್ಯಾಲರಿಗೆ ಹೋದೆ. ಗ್ಯಾಲರಿಯಲ್ಲಿ ಯುದ್ಧದ ಥೀಮ್ ಇರುವ ದೇಶವಿದೇಶಗಳ ಕಾರ್ಟೂನ್‌ಗಳ ಪ್ರದರ್ಶನ ನಡೆಯುತ್ತಿದೆ. ಯುದ್ಧ ಯಾರಿಗೂ ಒಳಿತನ್ನು ಮಾಡದ ’ವೇಸ್ಟ್’ ಎಂದು ಎರಡನೇ ವಿಶ್ವಯುದ್ಧದ ನಂತರ ಜಗತ್ತು ಕಂಡುಕೊಳ್ಳಲು ಸ್ವಲ್ಪ ಪ್ರಯತ್ನಿಸಿತಾದರೂ, ತದನಂತರವೂ ಯುದ್ಧಗಳಿಲ್ಲದ ಸಮಯವನ್ನು ಹುಡುಕುವುದು ಕಷ್ಟವೇ. ಈಗ ವ್ಲಾಡಿಮಿರ್ ಪುಟಿನ್ ಎಂಬ ರಷ್ಯಾ ಸರ್ವಾಧಿಕಾರಿಯ ದಾಹ ತಣಿಸಲು ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದೆ. ಅಪಾರ ಸಾವುನೋವುಗಳ ಜೊತೆಗೆ, ಉಕ್ರೇನ್‌ನಲ್ಲಿ ಈ ಯುದ್ಧದಿಂದ ಉಂಟಾಗುವ ಭಗ್ನಾವಶೇಷಗಳ ಕಸ ಗುಡಿಸುವವರು ಯಾರು? ಮಾನವ ಸಂಕುಲ ತನ್ನ ನಾಗರಿಕತೆಯಲ್ಲಿ ವಿವಿಧ ಹಂತದಲ್ಲಿ ತ್ಯಾಜ್ಯಗಳ ಜೊತೆಗೆ ಹೋರಾಡುವುದು, ಅದನ್ನು ನಿಯಂತ್ರಿಸುವುದು ಮತ್ತು ನಿರ್ವಹಿಸುವುದು ಸುದೀರ್ಘ ಚರಿತ್ರೆಯ ಮುಖ್ಯ ಭಾಗವಾಗಿದೆ.

ಕಾರ್ಟೂನಿಸ್ಟ್ ಇಂಡಿಯಾ ಆನ್ಯಯಲ್ ಜರ್ನಲ್ ಒಂದನ್ನು ಕೊಂಡೆ. ಅದನ್ನು ಒಂದು ಪಾರದರ್ಶಕ ಏಕ ಬಳಕೆಯ ಪ್ಲಾಸ್ಟಿಕ್ ಕವರ್‌ನಿಂದ ಸುತ್ತಲಾಗಿತ್ತು. ಧೂಳಿನಿಂದ ಪುಸ್ತಕವನ್ನು ಸಂರಕ್ಷಿಸಲು ಇದು ಉತ್ತಮ ವಿಧಾನ ಎಂಬ ನಂಬಿಕೆಯಿದೆ. ಅಲ್ಲಿಂದ ಅನತಿ ದೂರದಲ್ಲಿರುವ, ರೋಡ್ ಸೈಡ್ ನಾಷ್ಟಾ ಅಂಗಡಿಯೊಂದರ ಮುಂದೆ ನಿಂತೆ. ಸಾಮಾನ್ಯವಾಗಿ ಅಲ್ಲಿ ನಾನು ತಿನ್ನುವ ಮೊಟ್ಟೆದೋಸೆಯನ್ನು ಪ್ಲೇಟಿನಲ್ಲಿ ಹಾಕಿಕೊಡುವಾಗ ಪ್ಲೇಟನ್ನು ಮಾಮೂಲಿನಂತೆ ಪ್ಲಾಸ್ಟಿಕ್ ಶೀಟ್‌ನಿಂದ ಹೊದಿಸಿರಲಿಲ್ಲ. ಏಕೆಂದು ಕೇಳಿದ್ದಕ್ಕೆ, ಆಗಲೇ ಪಕ್ಕದ ಬೀದಿಯಲ್ಲಿ ಬಿಬಿಎಂಪಿ ಮಾರ್ಷಲ್‌ಗಳು ಪ್ಲಾಸ್ಟಿಕ್ ಬಳಸುವ ಅಂಗಡಿಗಳ ತಲಾಷ್‌ನಲ್ಲಿದ್ದು ದಂಡ ವಿಧಿಸುತ್ತಿರುವುದರ ಮಾಹಿತಿ ತಿಳಿದು, ಇಲ್ಲಿ ಪ್ಲಾಸ್ಟಿಕ್‌ಅನ್ನು ಅವಿತಿಟ್ಟಿದ್ದರು. ತಟ್ಟೆಯ ಮೇಲೆ ಪ್ಲಾಸ್ಟಿಕ್ ಹರಡಿ ಅದರ ಮೇಲೆ ತಿಂಡಿ ಹಾಕಿಕೊಟ್ಟರೆ, ಗ್ರಾಹಕನಿಗೆ ಅದು ಬಹಳ ಸ್ವಚ್ಛ ಎಂಬ ಭಾವ-ಭರವಸೆ, ಅತ್ತ ಅಂಗಡಿಯವರಿಗೂ ತಟ್ಟೆ ತೊಳೆಯುವ ತಾಪತ್ರಯ ಕೆಲಸದಲ್ಲಿ ತ್ರಾಸ ತುಸು ಕಡಿಮೆಯಾಗತ್ತೆ. ಒಟ್ಟಿನಲ್ಲಿ ಸ್ವಚ್ಛತೆಯ ಸೋಗು ಹಾಕಿಕೊಂಡು ಬಂದ ಪ್ಲಾಸ್ಟಿಕ್ ಇಂದು ಎಲ್ಲರ ಮನೆಮನಗಳನ್ನು ಪ್ರವೇಶಿಸಿ, ಅಲ್ಲಿಂದ ನಿರ್ಮೂಲನೆಗೊಳ್ಳಲು ನಿರಾಕರಿಸುತ್ತಿದೆ. ಇಂದು ಜಗತ್ತಿನಲ್ಲಿ ಅತಿ ದೊಡ್ಡ ಮಾರಕ ಕಸವೆಂದು ಪ್ಲಾಸ್ಟಿಕ್ ಪರಿಗಣಿಸಲ್ಪಟ್ಟಿದೆ. ಪ್ಲಾಸ್ಟಿಕ್ ತ್ಯಾಜ್ಯ ಎಲ್ಲಾ ರಿಸೈಕ್ಲಿಂಗ್ ಪ್ರಕ್ರಿಯೆಗಳ ಹೊರತಾಗಿಯೂ, ಸಮುದ್ರಗಳಲ್ಲಿ ಬೃಹತ್ ಅವಶೇಷವಾಗಿ ತೇಲುತ್ತಿದೆ. (ಗ್ರೇಟ್ ಫೆಸಿಫಿಕ್ ಸಮುದ್ರದಲ್ಲಿ ಸುಮಾರು 1.6 ದಶಲಕ್ಷ ಚದುರ ಕಿಲೋಮೀಟರ್‌ನಷ್ಟು ಅಂದರೆ ಯುಕೆ ದೇಶದ ವಿಸ್ತೀರ್ಣಕ್ಕೆ ಐದು ಪಟ್ಟು ಹೆಚ್ಚು ದೊಡ್ಡ ಕಸದ ಗುಡ್ಡ ಬೆಳೆದಿದೆ). ಇದು ಜಲಚರಗಳ ಜೀವಕ್ಕೆ ಮಾತ್ರ ಸಂಚಕಾರ ತರದೆ, ಜಲಚರಗಳ ಖಾದ್ಯಗಳ ಮೂಲಕ ಅನಗತ್ಯ ಹಾಗೂ ವಿಷಕಾರಿ ಕಣಗಳು ಆಹಾರ ಸರಪಳಿಯಲ್ಲಿಯೂ ಸೇರಿ ಊಟದ ತಟ್ಟೆಗೂ ಬರುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಸದ್ಯಕ್ಕೆ ಸಮುದ್ರ ಜಲಚರ ಮತ್ತು ಪ್ಲಾಸ್ಟಿಕ್ ಅನುಪಾತ 5:1 ಇದ್ದರೆ, ಜಗತ್ತಿನಾದ್ಯಂತ ಇರುವ ಪ್ಲಾಸ್ಟಿಕ್ ಬಳಕೆ ಇಂದಿನ ಮಟ್ಟದಲ್ಲೇ ಮುಂದುವರೆದರೆ, ಈ ಅನುಪಾತ 2050ರ ಹೊತ್ತಿಗೆ ಅದು 1:1 ಇರಲಿದೆ ಎನ್ನಲಾಗಿದೆ. ಇದು ತಂದೊಡ್ಡಬಲ್ಲ ಅಪಾಯಗಳ ಅಂದಾಜು ನಡೆಯುತ್ತಲೇ ಇದೆ. ಸಮುದ್ರಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ಅನ್ನು ಕ್ಲಿಯರ್ ಮಾಡಲು ತೊಡಗಿದರೆ, ದೇಶಗಳು ಬ್ಯಾಂಕರಪ್ಟ್ ಆಗಲಿವೆ ಅನ್ನುತ್ತವೆ ವರದಿಗಳು. ಆದುದರಿಂದ ಎಲ್ಲಾ ದೇಶಗಳು ಮೌನವಾಗಿ ಕುಳಿತಿವೆ. ಒಟ್ಟಿನಲ್ಲಿ ಬೆಂಗಳೂರು ನಗರ ಕಾರ್ಪೊರೇಶನ್ ಕೂಡ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಅಂಗಡಿ ಮುಂಗಟ್ಟುಗಳಲ್ಲಿ ’ದಂಡ’ದ ಭಯವನ್ನು ಉತ್ಪಾದಿಸಲು ಪ್ರಯತ್ನಿಸುತ್ತಿದೆಯೇ ಹೊರತು, ತ್ಯಾಜ್ಯ ನಿರ್ವಹಣೆಯ ತನ್ನ ಕರ್ತವ್ಯದಲ್ಲಾಗಲೀ, ಜನರಿಗೆ ಮನವರಿಕೆ ಮಾಡಿಕೊಡಬೇಕಾದ ಮಾರ್ಗದಲ್ಲಾಗಲೀ ಅಥವಾ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪಾದನೆಯ ಮೂಲವನ್ನು ನಿಯಂತ್ರಿಸಬೇಕಾಗಿರುವ ಕೆಲಸದಲ್ಲಾಗಲೀ ದಕ್ಷತೆಯನ್ನು ಮೆರೆಯುತ್ತಿಲ್ಲ. ಬಿಬಿಎಂಪಿ ಕಸದ ನಿರ್ವಹಣೆಯಲ್ಲಿನ ತನ್ನ ಸೋಲನ್ನು ಕಾಸ್ಮೆಟಿಕ್ ಬದಲಾವಣೆಗಳ ಮೂಲಕ ಮುಚ್ಚಿಕೊಳ್ಳಲೆತ್ನಿಸುತ್ತಿದೆ.

ಕಸ ಭೌತಿಕವಾಗಿ ನಗರಗಳನ್ನು ಎಷ್ಟು ಸಮಸ್ಯೆಯ ಸುಳಿಯಲ್ಲಿ ತಂದು ನಿಲ್ಲಿಸಿದೆಯೋ, ಹಾಗೆಯೇ ಸಾಮಾಜಿಕ ಸಾಮರಸ್ಯ ಸಾಧ್ಯವಾಗದಂತೆ ಅದರ ಬುಡ ಅಲ್ಲಾಡಿಸುತ್ತಿರುವ ರಾಜಕೀಯ ಕಸ ಕೂಡ ಅಷ್ಟೇ ಅಪಾಯಕಾರಿಯಾದದ್ದು. ’ಇಂಡಿಯಾ ಎಗೇನಸ್ಟ್ ಕರಪ್ಷನ್’ ಎಂಬ ಆಂದೋಲನ ಪ್ಲಾಸ್ಟಿಕ್‌ನಂತೆಯೇ ಮೊದಲಿಗೆ ಭ್ರಷ್ಟರನ್ನು ಸ್ವಚ್ಛಗೊಳಿಸುವ ಗೇಮ್‌ಚೇಂಜರ್‌ನಂತೆ ಕಾಣಿಸಿಕೊಂಡರೂ ಕೊನೆಗೆ ಅದರ ಮೂಲಮಂತ್ರವನ್ನು ಮರೆತು ಧಾರ್ಮಿಕ ಅಸಹನೆಯನ್ನು ಸೃಷ್ಟಿಸುವ, ಸರ್ವಾಧಿಕಾರವನ್ನು ಪ್ರತಿಷ್ಠಾಪಿಸುವ ನಿಟ್ಟಿನಲ್ಲಿ ಜನರ ಮನಸುಗಳನ್ನು ಕೆಡಿಸುವ ಕಸವನ್ನು ಅದು ಧಾರಾಳವಾಗಿ ಚೆಲ್ಲಿತು. ಈ ಕಸಕ್ಕೆ ಲ್ಯಾಂಡ್‌ಫಿಲ್‌ಗಳಾಗಿ ಕಂಡದ್ದು ಹೆಚ್ಚಾಗಿ ಟಿವಿ ಮಾಧ್ಯಮಗಳು. ಈಗ ಟಿವಿ ಮಾಧ್ಯಮಗಳಲ್ಲಿ ಉತ್ಪಾದನೆಯಾಗುವ ದಿನನಿತ್ಯದ ಕಸ ಜನರ ಮನಸ್ಸನ್ನು ಕೆಡಿಸುತ್ತಿದೆ. ಥೇಟ್ ಪ್ಲಾಸ್ಟಿಕ್ ಜಗತ್ತಿಗೆ ಗಂಡಾಂತರ ಒಡ್ಡಿರುವಂತೆಯೇ!

ಮುಖ್ಯವಾಹಿನಿ ಎನಿಸಿಕೊಂಡಿರುವ ಮಾಧ್ಯಮಗಳಲ್ಲಿ (ಮುಖ್ಯವಾಗಿ ಟಿವಿಗಳಲ್ಲಿ) ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಮಾಡುತ್ತಿರುವ ಕಾರ್ಯಕ್ರಮಗಳು ಎಕ್ಸ್ಪೋನೆನ್ಷಿಯಲ್ ಆಗಿ ಬೆಳೆದಿವೆ ಎನ್ನುತ್ತಾರೆ ಅವುಗಳ ಬಗ್ಗೆ ಅಧ್ಯಯನ ಮಾಡಿರುವವರು. ಅದರಿಂದ ನಷ್ಟಕ್ಕೆ ಒಳಗಾಗಿರುವುದು ಮತ್ತು ಸೊರಗಿ ಕೃಶವಾಗಿರುವುದು ಜನಪರವಾದ ಮತ್ತು ಜನರ ಸಮಸ್ಯೆಗಳನ್ನು ಬಿಂಬಿಸಬೇಕಿರುವ ಕಾರ್ಯಕ್ರಮಗಳು. ಕಸ ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ಬೆಟ್ಟದಂತಹ ಸಮಸ್ಯೆಯಾಗಿದ್ದರೂ ಟಿವಿ ಮಾಧ್ಯಮಗಳು ಅದಕ್ಕೆ ಕೊಡುವ ಸಮಯ ನಗಣ್ಯ. ಆದರೆ ಇಲ್ಲೊಂದು ವಿಪರ್ಯಾಸವಿದೆ. ಮಾಧ್ಯಮಗಳು ಉತ್ಪಾದಿಸುವ ಕಸವನ್ನು ಜನ ರಸವತ್ತಾಗಿ ಸವಿದರೆ, ತಾವು ಉತ್ಪಾದಿಸುವ ಭೌತಿಕ ಕಸವನ್ನು ಅಡ್ಡಾದಿಡ್ಡಿಯಾಗಿ ಬಿಸಾಕಿ, ಅದನ್ನು ಗುಡಿಸಿ ಸ್ವಚ್ಛಗೊಳಿಸುವವರನ್ನು ನಿಕೃಷ್ಟವಾಗಿ ಕಾಣುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಇದೆಲ್ಲವೂ ನಾವು ಸಾಮಾಜಿಕವಾಗಿ ಕಟ್ಟಿಕೊಂಡಿರುವ ಅತಿ ಕೆಟ್ಟ ವಿನ್ಯಾಸ ವ್ಯವಸ್ಥೆಯ ಭಾಗವಾಗಿಹೋಗಿದೆ. ಇನ್ನೂ ಬಹುತೇಕ ಮನೆಗಳಲ್ಲಿ ಯಾವುದು ಹಸಿಕಸ ಯಾವುದು ಒಣಕಸ ಎಂಬುದರ ಬಗ್ಗೆ ನಿಖರ ಮಾಹಿತಿಯಿಲ್ಲ ಮತ್ತು ತಿಳಿವಳಿಕೆಯ ಕೊರತೆಯಿದೆ. ಅದನ್ನು ವಿಂಗಡಿಸಿದರೂ ಬಿಬಿಎಂಪಿ ಕಾಂಟ್ರಾಕ್ಟರ್‌ಗಳಿಗೆ ಅದು ಬೇಕಾಗಿಲ್ಲ. ರಸ್ತೆಗಳಲ್ಲಿ ಹಾಕದಂತಹ ವ್ಯವಸ್ಥೆ ತಂದಿದ್ದೇವೆಂಬ ಮೇಲ್ಪದರದ ಬದಲಾವಣೆಯಷ್ಟೇ ನಮ್ಮ ಪ್ರಭುತ್ವಕ್ಕೆ ಬೇಕಾಗಿರುವುದು. ಪ್ರಧಾನಿಗಳು ವಿದೇಶಗಳಲ್ಲಿ ಭಾರತ ಬಹಿರಂಗ ವಿಸರ್ಜನೆ ಮುಕ್ತ ದೇಶವಾಗಿದೆ ಎಂಬ ಸುಳ್ಳು ಮಾಹಿತಿಯನ್ನು ಕೊಚ್ಚಿಕೊಳ್ಳುವಂತೆಯೇ ಇದು!

ಕಳೆದ ವಾರದಿಂದ ನಗರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರು ಕನಿಷ್ಠ ಸೌಲಭ್ಯಗಳನ್ನು ಕೇಳಿಕೊಂಡು ಪ್ರತಿಭಟನೆ ನಡೆಸಿದವು. ಹಲವು ಗಂಟೆಗಳ ಕಾಲ ಇದರ ಬಗ್ಗೆ ಎಲ್ಲಾ ಟಿವಿಗಳು ಕಾರ್ಯಕ್ರಮಗಳನ್ನು ಮಾಡಬೇಕಿತ್ತು! ಆದರೆ ಮಾರಿಕೊಂಡ ಮಾಧ್ಯಮಗಳು ಒಬ್ಬ ನಟಿಯ ಖಾಸಗಿ ಜೀವನದ ಹಿಂದೆ ಬಿದ್ದು ಅವರ ಚಾರಿತ್ರ್ಯಹರಣಕ್ಕೆ ನಿಂತವು! ಹಗಲುರಾತ್ರಿ ಅದನ್ನೇ ತೋರಿಸಿ ಅಟ್ಟಹಾಸ ಮೆರೆದವು. ಭೌತಿಕ ಹಸಿ ಕಸವನ್ನು ನಿಭಾಯಿಸಿದರೆ ಗೊಬ್ಬರವಾದೀತು. ಅದರ ಬಗ್ಗೆ ಇಂದಲ್ಲ ನಾಳೆ ತಿಳಿವಳಿಕೆ ಮೂಡಿಸುವ ಸಾಧ್ಯತೆಯಂತೂ ತೆರೆದಿದೆ. ಆದರೆ ಈ ಮಾಧ್ಯಮಗಳ ತ್ಯಾಜ್ಯವನ್ನು ನಿರ್ವಹಿಸಲು ಸಾಧ್ಯವಿಲ್ಲ. ಇದು ಪ್ಲಾಸ್ಟಿಕ್‌ಗಿಂತಲೂ ಅಪಾಯ. ಬಯೋಮೆಡಿಕಲ್ ವೇಸ್ಟ್‌ನಂತೆ ಆರೋಗ್ಯವನ್ನು ಮನಸ್ಸುಗಳನ್ನು ಕೆಡಿಸಿ ಕರಪ್ಟ್ ಮಾಡಬಲ್ಲದು. ಇದನ್ನು ನಿರ್ಮೂಲನೆ ಮಾಡದೆ ಜಗಕೆ ಉಳಿವಿಲ್ಲ. ಕುವೆಂಪು ಅವರ ಜಲಗಾರ ನಾಟಕದಲ್ಲಿ ಶಿವನೇ ಜಲಗಾರನ ವೇಷದಲ್ಲಿ ಮೂಡಿಬಂದು ಸಾಂತ್ವನ ಹೇಳುವ ದೃಶ್ಯ ಬರುತ್ತದೆ. ಆದರೆ ಮಾಧ್ಯಮದ ಈ ಕಸ, ’ಮುಸ್ಲಿಂ ಪಾತ್ರವಿದೆ’ ಎಂದು ನಾಟಕ ನಿಲ್ಲಿಸುವ ಮನಸ್ಥಿತಿಯ ಕಸ ಗುಡಿಸಲು ಜನರೇ ಎಚ್ಚರಗೊಳ್ಳಬೇಕು, ತಾವೇ ಸಂಘಟಿತ ಹೋರಾಟ ನಡೆಸಬೇಕಿರುವ ಪರಿಸ್ಥಿತಿ ಇಂದು ಎದುರಾಗಿದೆ.

ಪೌರಕಾರ್ಮಿಕರು ಪ್ರತಿಭಟನೆ ನಡೆಸಿ ತಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರದಿಂದ ಲಿಖಿತ ವಾಗ್ದಾನ ಪಡೆದಿರುವುದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸೋಣ. ಪೌರಕಾರ್ಮಿಕರನ್ನು ವ್ಯವಸ್ಥೆ ಗೌರವದಿಂದ ನಡೆಸಿಕೊಂಡು ಅವರ ಹಕ್ಕುಗಳನ್ನು ಕಾಪಾಡುವುದು ಅದರ ಕರ್ತವ್ಯವಾದರೇ, ಅವರನ್ನು ಶೋಷಿಸದ ವಾತಾವರಣ ಸೃಷ್ಟಿಸುವಲ್ಲಿ ನಾಗರಿಕರದ್ದೂ ಪಾಲಿದೆ. ಪೌರಕಾರ್ಮಿಕರ ಜೊತೆಗೆ ಸಂಯಮ ಮತ್ತು ಸಹಾನುಭೂತಿಯಿಂದ ವರ್ತಿಸುವುದರಿಂದ ಹಿಡಿದು, ಅವರ ಕೆಲಸ ಅವರಿಗೆ ಹಾನಿಕಾರಕವಾಗಿ ಮಾರ್ಪಾಡಾಗದಂತೆ ಕಸವನ್ನು ನಿರ್ವಹಣೆ ಮಾಡುವುದನ್ನು ನಾಗರಿಕರು ಅದರಲ್ಲೂ ಮಹಾನಗರದ ನಿವಾಸಿಗಳು ಕಲಿತುಕೊಳ್ಳಬೇಕಿದೆ. ಅದು ತುಸು ಕಷ್ಟದಾಯಕವಾದರೂ, ಅನಾನುಕೂಲತೆಯಿಂದ ಕೂಡಿದ್ದರೂ ಶೋಷಣೆಯನ್ನು ಹೆಚ್ಚಿಸುವ ವ್ಯವಸ್ಥೆಯ ಭಾಗವಾಗದಂತೆ ನಮ್ಮನ್ನು ನಾವು ತಿದ್ದಿಕೊಳ್ಳದಿದ್ದರೆ, ಬದಲಾಯಿಸಿಕೊಳ್ಳದಿದ್ದರೆ ಅದು ಅನಾಗರಿಕತೆಯ ಲಕ್ಷಣವಲ್ಲದೆ ಮತ್ತೇನಲ್ಲ.


ಇದನ್ನೂ ಓದಿ: ಸರ್ಕಾರ-ನಾಗರಿಕರ ಉದಾಸೀನತೆ ಮತ್ತು ಜಾತೀಯತೆಯ ಹಿಂಸೆ; ಸುಧಾರಿಸದ ಪೌರಕಾರ್ಮಿಕರ ಜೀವನಮಟ್ಟ ಮತ್ತು ಕೆಲಸದ ಪರಿಸ್ಥಿತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....