Homeಕರ್ನಾಟಕಪ್ರಗ್ಯಾ ಠಾಕೂರ್ ಸಹಚರರಿಗೆ ಗೌರಿ ಲಂಕೇಶ್ ಹತ್ಯೆಯ ಜೊತೆಗೆ ನಂಟು: ಕೋರ್ಟ್ ಗೆ ಹೇಳಿದ ಎಸ್‍ಐಟಿ

ಪ್ರಗ್ಯಾ ಠಾಕೂರ್ ಸಹಚರರಿಗೆ ಗೌರಿ ಲಂಕೇಶ್ ಹತ್ಯೆಯ ಜೊತೆಗೆ ನಂಟು: ಕೋರ್ಟ್ ಗೆ ಹೇಳಿದ ಎಸ್‍ಐಟಿ

- Advertisement -
- Advertisement -

| ನಾನುಗೌರಿ ಡೆಸ್ಕ್ |

ಅಭಿನವ್ ಭಾರತ್ ಗೂ ಸನಾತನ ಸಂಸ್ಥೆಗೂ ಇದೆ ನಂಟು

ಭೋಪಾಲ್‍ನ ಬಿಜೆಪಿ ಅಭ್ಯರ್ಥಿ, ಭಯೋತ್ಪಾದನೆಯ ಆರೋಪಿ ಪ್ರಗ್ಯಾ ಸಿಂಗ್ ಠಾಕೂರ್‍ರ ಜೊತೆ 2008ರ ಮಾಲೆಗಾಂವ್ ಸ್ಫೋಟದಲ್ಲಿ ಆರೋಪಿಯಾಗಿದ್ದು ತಲೆ ಮರೆಸಿಕೊಂಡವರೇ ಗೌರಿ ಲಂಕೇಶ್ ಹತ್ಯೆಯ ಆರೋಪಿಗಳಿಗೆ ಬಾಂಬ್ ಹಾಕುವ ತರಬೇತಿ ಕೊಟ್ಟಿದ್ದಾರೆಂದು ಎಸ್‍ಐಟಿ ಕೋರ್ಟ್‍ಗೆ ಸಲ್ಲಿಸಿದ ಮಾಹಿತಿಯಲ್ಲಿ ಹೇಳಿದೆ. ಅಷ್ಟೇ ಅಲ್ಲದೇ ಈ ಬಾಂಬ್ ತರಬೇತಿ ನೀಡಿದವರು ಪ್ರಗ್ಯಾ ಠಾಕೂರ್‍ರ ಸಂಘಟನೆ ಅಭಿನವ್ ಭಾರತ್‍ನ ಸದಸ್ಯರಾಗಿದ್ದಾರೆಂದೂ ಕೋರ್ಟ್‍ಗೆ ಸಲ್ಲಿಸಿದ ಮಾಹಿತಿಯಲ್ಲಿ ಹೇಳಲಾಗಿದೆ. ಈ ಕುರಿತು ಇಂದಿನ ಇಂಡಿಯನ್ ಎಕ್ಸ್‍ಪ್ರೆಸ್‍ನಲ್ಲಿ ವಿವರವಾಗಿ ವರದಿ ಮಾಡಲಾಗಿದೆ.

2006ರಿಂದ 2008ರವರೆಗೆ ಹಲವು ಬಾಂಬ್ ಸ್ಫೋಟಗಳು ನಡೆದಿದ್ದವು. ಅವುಗಳೆಂದರೆ ಮಾಲೆಗಾಂವ್, ಮೆಕ್ಕಾ ಮಸ್ಜಿದ್, ಅಜ್ಮೀರ್ ದರ್ಗಾ, ಸಂಝೋತಾ ಎಕ್ಸ್‍ಪ್ರೆಸ್ ಸ್ಫೋಟಗಳು. ಇವೆಲ್ಲದರಲ್ಲಿ ಒಟ್ಟು 117 ಜನರು ಸತ್ತಿದ್ದರು. ಸಂಝೋತಾ ಎಕ್ಸ್‍ಪ್ರೆಸ್ ಎಂಬುದು ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ದೆಹಲಿ ಮತ್ತು ಲಾಹೋರ್ ಮಧ್ಯೆ ಆರಂಭಿಸಲಾಗಿದ್ದ ರೈಲು.

ಈ ಸ್ಫೋಟಗಳಲ್ಲಿ ಅಭಿನವ್ ಭಾರತ್ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದಾರೆಂಬ ಆರೋಪದ ಮೇಲೆ ಹಲವರನ್ನು ಬಂಧಿಸಲಾಗಿತ್ತು. ಆದರೆ ತಲೆ ಮರೆಸಿಕೊಂಡಿದ್ದಾರೆಂದು ಹೇಳಲಾದ ಸಂದೀಪ್ ಡಾಂಗೆ, ರಾಮ್‍ಜಿ ಕಲ್ಸಾಂಗ್ರಾ ಮತ್ತು ಅಶ್ವಿನ್ ಚೌಹಾಣ್ ಇವರುಗಳು ನಡೆಸಿದ ರಹಸ್ಯ ಬಾಂಬ್ ತರಬೇತಿಯಲ್ಲಿ ಭಾಗವಹಿಸಿದ್ದವರಲ್ಲಿ ಕೆಲವರು ಗೌರಿ ಲಂಕೇಶ್ ಹತ್ಯೆ ಕೇಸಿನಲ್ಲಿ ಆರೋಪಿಗಳು ಮತ್ತು ಸಾಕ್ಷಿದಾರರಾಗಿದ್ದಾರೆ. ಈ ವಿಷಯವು ಎಸ್‍ಐಟಿಯು, ಸದರಿ ಕೇಸಿಲ್ಲಿ ಕೋರ್ಟಿಗೆ ಸಲ್ಲಿಸಿರುವ ದಾಖಲೆಗಳಲ್ಲಿ ಇದೆ.

ಅಷ್ಟೇ ಅಲ್ಲ, 2007ರ ಅಜ್ಮೀರ್ ದರ್ಗಾ ಸ್ಫೋಟದ ಪ್ರಕರಣದ ನಂತರ ಭೂಗತನಾಗಿದ್ದ ಸುರೇಶ್ ನಾಯರ್ ಅಲಿಯಾಸ್ ಬಾಬಾಜಿಯು ಆ ರಹಸ್ಯ ಕ್ಯಾಂಪಿನಲ್ಲಿ ತರಬೇತಿದಾರನಾಗಿದ್ದ ಮತ್ತು ಆತನನ್ನು ನವೆಂಬರ್ 2018ರಲ್ಲಿ ಗುಜರಾತ್‍ನ ಭರೂಚ್‍ನಲ್ಲಿ ಬಂಧಿಸಲಾಗಿದೆ. ಅಂದರೆ, ಅಭಿನವ್ ಭಾರತ್ ಮತ್ತು ಸನಾತನ ಸಂಸ್ಥೆಗೂ ಸಂಬಂಧವಿದೆಯೆಂದಾಯಿತು!

ಬಾಬಾಜಿ ಮತ್ತು ಗುರೂಜಿಗಳಿಂದ ಬಾಂಬ್ ತರಬೇತಿ

ಬಾಬಾಜಿಯ ಜೊತೆಗೆ ನಾಲ್ಕು ಜನ ಗುರೂಜಿಗಳೂ ಬಾಂಬ್ ತರಬೇತಿಯಲ್ಲಿದ್ದರೆಂದು ಗೌರಿ ಲಂಕೇಶ್ ಹಂತಕರು ಪೊಲೀಸರಿಗೆ ಹೇಳಿದ್ದರು. ಅಂತಹ ಒಬ್ಬ ತರಬೇತಿದಾರನನ್ನೂ ಬಂಧಿಸಲಾಗಿದ್ದು ಆತನ ಹೆಸರೇ ಪ್ರತಾಪ್ ಹಾಜಾ. ಆತ ಪ.ಬಂಗಾಳದ ಭವಾನಿ ಸೇನಾಕ್ಕೆ ಸೇರಿದ ವ್ಯಕ್ತಿ. ಈ ಎಲ್ಲಾ ಸಂಘಟನೆಗಳೂ ಹಿಂದುತ್ವವನ್ನು ತಮ್ಮ ಸಿದ್ಧಾಂತವೆಂದು ಹೇಳುತ್ತವೆ.

ಇದನ್ನೂ ಓದಿ: ಪ್ರಗ್ಯಾ ಎಂಬ ಭಯೋತ್ಪಾದನೆಯ ಆರೋಪಿಯೂ ನರೇಂದ್ರ ಮೋದಿಯೂ

ಆರೆಸ್ಸೆಸ್ ಇವರುಗಳ ಮಾತೃಸಂಸ್ಥೆಯಾಗಿದ್ದು, ಬಹುತೇಕರು ಒಂದಲ್ಲಾ ಒಂದು ಸಂದರ್ಭದಲ್ಲಿ ನೇರವಾಗಿ ಆರೆಸ್ಸೆಸ್ ಅಥವಾ ಅದರ ಅಂಗಸಂಘಟನೆಗಳಲ್ಲಿ ಸಕ್ರಿಯರಾಗಿರುತ್ತಾರೆ. ಇಂಥವರು ಸಿಕ್ಕಿಬಿದ್ದಾಗ ಅವರಿಗೂ, ಆರೆಸ್ಸೆಸ್‍ಗೂ ಅಥವಾ ಬಿಜೆಪಿಗೂ ಸಂಬಂಧ ಇಲ್ಲವೆಂದು ಪ್ರತಿಪಾದಿಸುತ್ತಾರೆ. ಆದರೆ ನಿಧಾನಕ್ಕೆ ಅವರನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡುತ್ತಾ, ಬಹಿರಂಗವಾಗಿಯೇ ಜೊತೆಗೂಡುತ್ತಾರೆ. ಅದಕ್ಕೆ ದೊಡ್ಡ ಉದಾಹರಣೆ, ಪ್ರಗ್ಯಾ ಠಾಕೂರ್. ಆಕೆ ಮತ್ತು ಸಹಚರರು ಸಿಕ್ಕಿಬಿದ್ದಾಗ ಆರೆಸ್ಸೆಸ್‍ನ ಮುಖ್ಯಸ್ಥರೊಬ್ಬರು ಸಕಾರ್ರ್ಧರಕ್ಕೆ ಪತ್ರ ಬರೆದು, ಅವರಿಗೂ ತಮಗೂ ಯಾವುದೇ ಸಂಬಂಧವಿಲ್ಲವೆಂದು ಬಲವಾಗಿ ಪ್ರತಿಪಾದಿಸಿದ್ದರು. ಈಗ ಭೋಪಾಲ್‍ನಿಂದ ಎಂಪಿ ಟಿಕೆಟ್ಟೇ ಕೊಟ್ಟಿದ್ದಾರೆ.

ಇಂಡಿಯನ್ ಎಕ್ಸಪ್ರೆಸ್ ವರದಿ 

ಇವರುಗಳು ಹಿಂಸೆ, ಕೊಲೆ ಇತ್ಯಾದಿಗಳನ್ನು ತಮ್ಮ ಉದ್ದೇಶಗಳಿಗಾಗಿ ಬಳಸುವವರು. ಉದಾಹರಣೆಗೆ ಬಾಂಬ್ ಪರಿಣಿತ ಎನ್ನಲಾಗುವ ಡಾಂಗೆ, ಆರೆಸ್ಸೆಸ್‍ನಲ್ಲಿದ್ದ ವ್ಯಕ್ತಿ ಮತ್ತು ಆತನ ಮೇಲೆ ಇಂಟರ್‍ಪೋಲ್ ರೆಡ್ ಕಾರ್ನರ್ ನೋಟೀಸ್ ಹೊರಡಿಸಲಾಗಿದೆ. ಡಾಂಗೆ ಮತ್ತು ಕಲ್ಸಾಂಗ್ರಾ ಹಿಡಿದುಕೊಟ್ಟವರಿಗೆ ಸರ್ಕಾರವು 10 ಲಕ್ಷ ರೂ. ಮತ್ತು ಹಾಕ್ಲಾ ತಲೆಗೆ 5 ಲಕ್ಷ ರೂ ಬಹುಮಾನ ಘೋಷಿಸಿದ್ದಾರೆ.

ಅಹಮದಾಬಾದ್ ಮತ್ತು ಮಂಗಳೂರುಗಳಲ್ಲಿ ತರಬೇತಿ

ಬಾಬಾಜಿ ಅಲಿಯಾಸ್ ಸುರೇಶ್ ನಾಯರ್ ಹೇಗಿರುತ್ತಾನೆಂಬ ವಿವರವನ್ನು ಗೌರಿ ಲಂಕೇಶ್ ಹತ್ಯೆ ಕೇಸಿನಲ್ಲಿ ಬಂಧಿತರಾಗಿರುವ ಶ್ರೀಕಾಂತ್ ಪಂಗ್ರೇಕರ್, ಶರದ್ ಕಲಸ್ಕರ್ (ನರೇಂದ್ರ ಧಾಬೋಲ್ಕರ್ ಹತ್ಯೆಗೈದ ಶೂಟರ್ ಎಂಬ ಆರೋಪಿ)) ಮತ್ತು ವಾಸುದೇವ ಸೂರ್ಯವಂಶಿ ಇವರುಗಳು ಕೊಟ್ಟಿದ್ದಾರೆ. ಬಾಂಬ್ ಸ್ಫೋಟ ಮತ್ತು ಶಸ್ತ್ರಾಸ್ತ್ರ ತರಬೇತಿಯನ್ನು ನೀಡಲು 19 ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿತ್ತೆಂದು ಎಸ್‍ಐಟಿ ಹೇಳಿದೆ. ಇಂತಹ ತರಬೇತಿ ನೀಡಲು ಬರುತ್ತಿದ್ದವರಲ್ಲಿ ಕೆಲವರು ಸಂತ/ಸ್ವಾಮೀಜಿ ವೇಷದಲ್ಲಿ ತಿರುಗಾಡುತ್ತಿದ್ದರೆಂದೂ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಶಿಬಿರಗಳು ಅಹಮದಾಬಾದ್  ಮತ್ತು ಮಂಗಳೂರುಗಳಲ್ಲಿ ನಡೆಯಿತೆಂದು ಹೇಳಲಾಗುತ್ತಿದೆ.

ಇದೀಗ ಆರೆಸ್ಸೆಸ್ ಮತ್ತು ಬಿಜೆಪಿ ಏನು ಹೇಳುತ್ತವೆ ಕಾದು ನೋಡಬೇಕು.

ಆಧಾರ: ಇಂಡಿಯನ್ ಎಕ್ಸಪ್ರೆಸ್

ಬಿಜೆಪಿ ಅಭ್ಯರ್ಥಿ, ಭಯೋತ್ಪಾದನೆಯ ಆರೋಪಿ ಪ್ರಗ್ಯಾ ವಿರುದ್ಧ ಐಪಿಎಸ್ ಸಂಘ ಗುಟುರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...