Homeಅಂಕಣಗಳುನಾನೂ ಗೋವುಗಳನ್ನು ಸಾಕಿದೆ, ಮಾರಿದೆ

ನಾನೂ ಗೋವುಗಳನ್ನು ಸಾಕಿದೆ, ಮಾರಿದೆ

- Advertisement -
- Advertisement -

| ಗೌರಿ ಲಂಕೇಶ್ |
10 ಮಾರ್ಚ್, 2010 (ಸಂಪಾದಕೀಯದಿಂದ)

ಯಡಿಯೂರಪ್ಪನ ‘ಬ್ರಾಹ್ಮಣಶಾಹಿ’ ಸರ್ಕಾರ ಜಾರಿಗೆ ತರಲು ಇಚ್ಛಿಸಿರುವ ಗೋಹತ್ಯೆ ನಿಷೇಧ ಕಾನೂನನ್ನು ಕುರಿತಂತೆ ನಿಮ್ಮ ಈ ಪತ್ರಿಕೆ ಮತ್ತು ಇತರೆ ಮಾಧ್ಯಮಗಳು ಬಹಳಷ್ಟು ಚರ್ಚಿಸಿವೆ. ಆದರೆ ಎಲ್ಲ ಚರ್ಚೆಗಳೂ ಆಹಾರ ಸಂಸ್ಕೃತಿ, ಸಂವಿಧಾನ, ಆರ್ಥಿಕ ಪರಿಸ್ಥಿತಿ, ವೈಯಕ್ತಿಕ ಆಯ್ಕೆ ಇತ್ಯಾದಿಗಳ ಸುತ್ತ ನಡೆದಿದೆ.

ಆದ್ದರಿಂದ ನಾನಿಲ್ಲಿ ರೈತರ ದೃಷ್ಟಿಕೋನದಿಂದ ಮತ್ತು ವೈಯಕ್ತಿಕ ಅನುಭವದಿಂದ ಹತ್ತಿರವಿರುವ ಅಮ್ಮನ ತೋಟದ ಜವಾಬ್ದಾರಿಯನ್ನು ಐದಾರು ವರ್ಷಗಳ ಹಿಂದೆ ವಹಿಸಿಕೊಂಡಾಗ ತೋಟದೊಂದಿಗೆ ಒಂದು ಜೊತೆ ಎತ್ತು ಬಂದಿದ್ದವು.

ಎರಡು ವರ್ಷಗಳ ಹಿಂದೆ ತೋಟವನ್ನು ನೋಡಿಕೊಳ್ಳಲು ಬಂದ ನಮ್ಮ ಲಿಂಗರಾಜು ಆ ಎರಡೂ ಎತ್ತುಗಳು ಮುದಿ ಆಗಿವೆ ಎಂದೂ, ಅವುಗಳನ್ನು ಮಾರಿ ಬೇರೆ ಜೋಡಿಯನ್ನು ಖರೀದಿಸಿದರೆ ಉತ್ತಮ ಎಂದೂ ಹೇಳಿದ. ಆ ಎತ್ತುಗಳಿಗೆ ಎಷ್ಟು ವಯಸ್ಸಾಗಿತ್ತೆಂದರೆ ಅವುಗಳಿಂದ ಯಾವ ಕೆಲಸವೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಅವುಗಳನ್ನು ಮಾರದೆ ಹಾಗೆ ಇಟ್ಟುಕೊಳ್ಳುವುದೂ ಸುಲಭವಾಗಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ಮೇವಿನ ಸಮಸ್ಯೆ.

ಇವತ್ತು ನೆಲಮಂಗಲದ ಸುತ್ತಮುತ್ತ ಕೃಷಿ ಚಟುವಟಿಕೆ ಸ್ಥಗಿತಗೊಳ್ಳುತ್ತಿದೆ; ಹೊಲಗಳಿದ್ದ ಜಾಗಗಳಲ್ಲಿ ಫ್ಯಾಕ್ಟರಿಗಳು ತಲೆ ಎತ್ತುತ್ತಿವೆ; ಗೋಮಾಳಗಳು ಸೈಟುಗಳಾಗಿ ಪರಿವರ್ತನೆಗೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಆ ಎತ್ತುಗಳಿಗೆ ಎಲ್ಲಿಂದ ಮೇವು ತರುವುದು? ಹಿಂಡಿ, ಬೂಸಾ ಮಾತು ಬದಿಗಿರಲಿ, ಒಣಹುಲ್ಲು ಕೂಡ ಎಷ್ಟು ದುಬಾರಿ ಆಗಿದೆ ಎಂದರೆ ಒಂದು ಮೆದೆ ಹುಲ್ಲಿಗೆ ಇವತ್ತು ಕನಿಷ್ಠ ಆರು ಸಾವಿರ ರೂಪಾಯಿಗಳನ್ನು ತೆರಬೇಕು. ಇವತ್ತು ಹಲವಾರು ಚೆಡ್ಡಿಗಳು “ಗೋವು ಸಗಣಿ ಕೊಡುತ್ತದಲ್ಲ” ಎಂದೆಲ್ಲ ವಾದಿಸುತ್ತಿದ್ದಾರೆ. ಆದರೆ ಒಂದು ಸಾವಿರ ರೂಪಾಯಿ ಬೆಲೆಬಾಳುವ ಸಗಣಿಗಾಗಿ ಹತ್ತಾರು ಸಾವಿರಾರು ರೂಪಾಯಿಗಳನ್ನು ವೆಚ್ಚ ಮಾಡಿ ಹುಲ್ಲು ಖರೀದಿಸುವುದು ಎಷ್ಟು ಸಮಂಜಸ? ಅಷ್ಟು ಆರ್ಥಿಕ ಶಕ್ತಿ ಅದೆಷ್ಟು ರೈತರಿಗೆ ಇರುತ್ತದೆ? ಈಗಾಗಲೇ ಸಾಲ-ನಷ್ಟಗಳಡಿ ತತ್ತರಿಸುತ್ತಿರುವ ರೈತರ ಮೇಲೆ ಇಂತಹ ಇನ್ನೊಂದು ಆರ್ಥಿಕ ಹೊರೆಯನ್ನು ಹೊರಿಸುವಷ್ಟು ಅಮಾನವೀಯರಾಗಿದ್ದೇವೆಯೇ ನಾವು?

ತೋಟದ ಮುದಿ ಎತ್ತುಗಳನ್ನು ಮಾರಲು ಲಿಂಗರಾಜುವಿಗೆ ಹೇಳಿದೆ. ಅವುಗಳನ್ನು ಕೊಂಡವರು ಅವುಗಳನ್ನು ಸಾಕಿದರೋ ಅಥವಾ ಕಸಾಯಿಖಾನೆಗೆ ಮಾರಿದರೋ, ಅದರ ಬಗ್ಗೆ ನಾನು ಯೋಚಿಸಲಿಲ್ಲ. ಆದರೆ ಅವುಗಳನ್ನು ಮಾರಿ ಬಂದ 10,500 ರೂಪಾಯಿಗಳೊಂದಿಗೆ ಇನ್ನೂ ನಾಲ್ಕು ಸಾವಿರ ಸೇರಿಸಿ ಎರಡು ನಾಟಿ ಹಸುಗಳನ್ನು ಕೊಂಡುಕೊಂಡೆ. ಈ ಎರಡೂ ಹಸುಗಳು ಈಗ ಎರಡು ಗಂಡು ಕರುಗಳನ್ನು ಈದಿವೆ. ನನ್ನ ಈ ನಾಲ್ಕು ಗೋವುಗಳಲ್ಲದೆ ಲಿಂಗರಾಜು ಕೂಡ ಎರಡು ಹಸುಗಳನ್ನು ಸಾಕಿದ್ದಾನೆ. ಆದರೆ ಆ ಹಸುಗಳನ್ನು ಕೊಂಡ ವರ್ಷ ಮಳೆ ಮತ್ತು ನಮ್ಮ ಬೋರ್‍ವೆಲ್ ಕೈಕೊಟ್ಟಿದ್ದರಿಂದ ಮೇವಿಗಾಗಿ ನಾನು ಮತ್ತು ಲಿಂಗರಾಜು ಪಟ್ಟ ಪಾಡು ಅಷ್ಟಿಷ್ಟಲ್ಲ. ಕೊನೆಗೆ ನಮ್ಮ ಚಂದ್ರೇಗೌಡರ ಬಿದಿರಿನ ಕೆರೆಯಿಂದ ಏಳು ಸಾವಿರ ರೂಪಾಯಿ ಕೊಟ್ಟು ಒಣಹುಲ್ಲು ತರಿಸಿದ್ದಾಯಿತು. ಆದೂ ಸಾಕಾಗದೆ ಹತ್ತಿರದಿಂದಲೇ ಮತ್ತೆ ಐದು ಸಾವಿರ ರೂಪಾಯಿ ಕೊಟ್ಟು ಕೊಂಡುಕೊಳ್ಳಬೇಕಾಯಿತು. ಇನ್ನು ಎರಡೂ ಹಸುಗಳು ಗಬ್ಬ ಆಗಿದ್ದಾಗ ಹಿಂಡಿ, ಬೂಸಾ ಅಂತ ಮತ್ತಷ್ಟು ಸಾವಿರ ರೂಪಾಯಿಗಳು ಕೈಬಿಟ್ಟವು. ಹೀಗೆ ಲೆಕ್ಕ ಹಾಕಿದರೆ ಆ ಎರಡು ಹಸು ಮತ್ತು ಅವುಗಳ ಕರುಗಳಿಗೆಂದು ಈಗಾಗಲೇ 30,000 ರೂಪಾಯಿಗಳು ವೆಚ್ಚವಾಗಿವೆ.

ಈ ವೆಚ್ಚದೊಂದಿಗೆ ಆ ಗೋವುಗಳಿಂದ ಆದ ಉಳಿತಾಯ ಯಾವ ಲೆಕ್ಕಕ್ಕೂ ಆಗುವುದಿಲ್ಲ. ಆದರೆ ತೋಟದಲ್ಲಿ ಗೋವುಗಳಿದ್ದರೆ ಚಂದ ಎಂಬ ನಂಬಿಕೆ ಮತ್ತು ಆ ಕರುಗಳಿಂದ ನಮ್ಮ ಇಶಾಳಿಗೆ ಆಗುವ ಆನಂದ(ಅವುಗಳಿಗೆ ಶಿವ ಮತ್ತು ಬಸವ ಎಂದು ಹೆಸರಿಟ್ಟಿದ್ದಾಳೆ)ಕ್ಕೆ ಹೋಲಿಸಿದರೆ ವೆಚ್ಚವೆಲ್ಲ ಗೌಣ. ಹವ್ಯಾಸಿ ರೈತ ಮಹಿಳೆಯಾದ ನನಗೆ ಆ ಆರ್ಥಿಕ ಭಾರವನ್ನು ಹೊರುವ ಶಕ್ತಿ ಮತ್ತು ಹುಮ್ಮಸ್ಸು ಇರಬಹುದು, ಆದರೆ ಅದು ಎಲ್ಲ ರೈತರಿಂದ ನಿರೀಕ್ಷಿಸುವುದು ತಪ್ಪು ಮಾತ್ರವಲ್ಲ ದೊಡ್ಡ ಅನ್ಯಾಯವಾಗುತ್ತದೆ.

ಅಂದಹಾಗೆ, ಈಗಿರುವ ಹಸುಗಳೂ ಮುದಿ ಆದಾಗ ಅವುಗಳನ್ನೂ ಮಾರುತ್ತೇನೆ. ಕರುಗಳು ಬೆಳೆದಾಗ ಅವುಗಳನ್ನು ಇತರೆ ರೈತರಿಗೆ ಮಾರುತ್ತೇನೆ. ಬಂದ ಹಣದಲ್ಲಿ ಹೊಸ ಹಸುಗಳನ್ನು, ಹೊಸ ಎತ್ತುಗಳನ್ನು ಕೊಂಡು ಸಾಕುತ್ತೇನೆ. ಬುದ್ದಿ ಇರುವ ಎಲ್ಲಾ ಕೃಷಿಕರೂ ಮಾಡುವುದು ಇದನ್ನೇ.

ಆದರೆ ಬುದ್ದಿ ಇಲ್ಲದ, ಗೋವನ್ನು ಸಾಕದ ಅವುಗಳಿಗಾಗಿ ಪರದಾಡುವ, ಅವುಗಳನ್ನು ಆರ್ಥಿಕ ಲಾಭ-ನಷ್ಟದ ಲೆಕ್ಕದಲ್ಲಿ ನೋಡದ ಯಡಿಯೂರಪ್ಪನಂತಹ ಬುದ್ಧಿಹೀನರು ಮಾತ್ರ ಗೋಹತ್ಯೆ ಮತ್ತು ಗೋಮಾಂಸ ಮಾರಾಟವನ್ನು ನಿಷೇಧಿಸಲು ಹೊರಡುತ್ತಾರೆ…..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...