ಇಂದು ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಸಿಎಎ ಪರ ರ್ಯಾಲಿಯಲ್ಲಿ ಅಮಿತ್ ಶಾ ಭಾಗವಹಿಸಿದ್ದು, ನಗರದೆಲ್ಲೆಡೆ “ದೇಶ್ಕೆ ಗದ್ದಾರೋಂಕೋ, ಗೋಲಿಮಾರೋ ಸಾಲೋಂಕೋ (ದೇಶದ್ರೋಹಿಗಳಿಗೆ ಗುಂಡಿಕ್ಕಿ) ಎಂಬ ಘೋಷಣೆಗಳು ಮಾರ್ಧನಿಸಿದ್ದು ಆತಂಕಕಾರಿ ವಾತವರಣ ಸೃಷ್ಟಿಯಾಗಿದೆ.
‘Desh ke gaddaro ko, goli maaro saalon ko’ slogans raised by BJP workers who were on their way to Amit Shah’s public meeting in Kolkata @dna @ZeeNews pic.twitter.com/60AHNOY3Og
— Pooja Mehta (@pooja_news) March 1, 2020
ಇದಕ್ಕೂ ಮೊದಲು ಗೋ ಬ್ಯಾಕ್ ಅಮಿತ್ ಶಾ ಎಂಬ ಪ್ರತಿಭಟನೆಗಳು ಜರುಗಿದ್ದವು. ಗೃಹ ಸಚಿವರ ಭೇಟಿಯ ವಿರುದ್ಧ ನಗರದ ಕೆಲವು ಭಾಗಗಳಲ್ಲಿ ಕಪ್ಪು ಭಾವುಟ ಪ್ರದರ್ಶನಗಳು ನಡೆದಿವೆ. ಇನ್ನು ಕೆಲವರು ಶಾಂತಿಯುತವಾಗಿ ಅಮಿತ್ ಶಾಗೆ ಹೂವು, ಹಣ್ಣು ಮತ್ತು ಪ್ರೇಮಪತ್ರಗಳನ್ನು ತಲುಪಿಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ್ದರು.
'Goli maro' slogan by BJP supporters going to @AmitShah rally at Shahid Minar in Kolkata today.pic.twitter.com/cLTF7oOeBm
— Mohammed Zubair (@zoo_bear) March 1, 2020
ಅದಾದ ನಂತರ ಸಿಎಎ ಪರ ರ್ಯಾಲಿ ನಡೆಯುವ ಸ್ಥಳಕ್ಕೆ ಹೋಗುತ್ತಿರುವ ಬಿಜೆಪಿ ಕಾರ್ಯಕರ್ತರು ದೇಶದ್ರೋಹಿಗಳಿಗೆ ಗುಂಡಿಕ್ಕಿ ಎಂದು ಬಹಿರಂಗವಾಗಿ ಘೋಷಣೆಗಳನ್ನು ಕೂಗಿದ್ದಾರೆ. ಇದು ಆಕ್ಷೇಪಾರ್ಹ ಘೋಷಣೆಯಾಗಿದ್ದು ಇದರ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿದ್ದವು.
“ದೇಶದ್ರೋಹಿಗಳಿಗೆ ಗುಂಡಿಕ್ಕಿ” ಎನ್ನುವ ಈ ಘೋಷಣೆಗಳನ್ನು ಸಿಎಎ ಪರ ಸಭೆಗಳಲ್ಲಿ ಕೂಗಲಾಗುತ್ತಿದೆ. ಅಲ್ಲದೆ ಕಳೆದ ತಿಂಗಳು ನಡೆದ ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರದ ಸಂಧರ್ಭದಲ್ಲಿ ಕೂಡಾ ಸಂಸದ ಅನುರಾಗ್ ಠಾಕೂರ್ ಕೂಡ ಇದೇ ಘೋಷಣೆ ಕೂಗಿದ್ದರು. ಪೌರತ್ವ ಕಾನೂನನ್ನು ವಿರೋಧಿಸುವವರನ್ನು “ದೇಶದ್ರೋಹಿ” ಎಂದು ಈ ಘೋಷಣೆಯಲ್ಲಿ ಉದ್ದೇಶಿಸಲಾಗುತ್ತಿದೆ.
ನಿನ್ನೆ ಕೂಡ ದೆಹಲಿಯ ಮೆಟ್ರೊ ನಿಲ್ದಾಣವೊಂದರ ಬಳಿ ಇದೇ ಘೋಷಣೆ ಕೂಗಿದ್ದ ಆರು ಜನರನ್ನು ಪೊಲೀಸರು ಬಂಧಿಸಿದ್ದರು. ಇಂದು ಅಮಿತ್ ಶಾ ರ್ಯಾಲಿಯಲ್ಲೇ ಕೂಗಿರುವುದು ದೆಹಲಿಯ ಹಿಂಸಾಚಾರ ಕಡಿಮೆಯಾಗಿರುವ ಹೊತ್ತಿನಲ್ಲಿ ಮತ್ತಷ್ಟು ಆತಂಕ ಹುಟ್ಟಿಸಿದೆ.