Homeಮುಖಪುಟ’ಶೂ ನೆಕ್ಕಿದವನ ಹೆಸರನ್ನು ಕೇರಳ ಕಸದ ಬುಟ್ಟಿಗೆ ಎಸೆಯಬೇಕು’: ಗೋಲ್ವಾಲ್ಕರ್ ವಿರುದ್ದ ಕಿಡಿ

’ಶೂ ನೆಕ್ಕಿದವನ ಹೆಸರನ್ನು ಕೇರಳ ಕಸದ ಬುಟ್ಟಿಗೆ ಎಸೆಯಬೇಕು’: ಗೋಲ್ವಾಲ್ಕರ್ ವಿರುದ್ದ ಕಿಡಿ

ವೈಜ್ಞಾನಿಕ ಸಂಸ್ಥೆಗೆ ಆರೆಸ್ಸೆಸ್ ನಾಯಕನ ಹೆಸರಿಡುವ ಕೇಂದ್ರದ ಕ್ರಮಕ್ಕೆ ಕೇರಳದಾದ್ಯಂತ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿದೆ

- Advertisement -
- Advertisement -

ತಿರುವನಂತಪುರಂನ ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿ (RGCB) ಯ ಎರಡನೇ ಕ್ಯಾಂಪಸ್‌ಗೆ ಆರೆಸ್ಸೆಸ್ ಮುಖಂಡ ಗೋಲ್ವಾಲ್ಕರ್‌ ಹೆಸರಿಡುವುದಕ್ಕೆ ಕೇರಳದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಖ್ಯಾತ ಮಲಯಾಳಂ ಚಿತ್ರ ನಟ ಹರೀಶ್ ಪೆರಾಡಿ, “ಆ ಶೂ ನೆಕ್ಕಿದವನ ಹೆಸರನ್ನು ಕೇರಳ ಕಸದ ಬುಟ್ಟಿಗೆ ಎಸೆಯಬೇಕು” ಎಂದು ಕಿಡಿಕಾರಿದ್ದಾರೆ.

ಇಂಡಿಯಾ ಇಂಟರ್‌‌ನ್ಯಾಷನಲ್ ಸೈನ್ಸ್ ಫೆಸ್ಟಿವೆಲ್(IISF)ನ ಅಧಿವೇಶನದ ವೀಡಿಯೋ ಸಂದೇಶದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಹರ್ಷ್ ವರ್ಧನ್ ಈ ಬಗ್ಗೆ ತಿಳಿಸಿದ್ದು, ಸಂಸ್ಥೆಗೆ ಆರೆಸ್ಸೆಸ್‌‌ನ ಎರಡನೇ ನಾಯಕನಾಗಿದ್ದ ಎಂ.ಎಸ್. ಗೊಲ್ವಾಲ್ಕರ್‌ ಅವರ ಹೆಸರನ್ನು ಇಡುವುದಾಗಿ ಹೇಳಿದ್ದಾರೆ. ಅದನ್ನು ‘ಶ್ರೀ ಗೂರುಜಿ ಮಾಧವ ಸದಾಶಿವ ಗೋಲ್ವಾಲ್ಕರ್ ನ್ಯಾಷನಲ್ ಸೆಂಟರ್ ಫಾರ್ ಕಾಂಪ್ಲೆಕ್ಸ್ ಡಿಸೀಸ್ ಇನ್ ಕ್ಯಾನ್ಸರ್ ಮತ್ತು ವೈರಲ್ ಇನ್‌‌ಫೆಕ್ಷನ್’ ಎಂದು ಕರೆದಿದ್ದಾರೆ.

ಇದನ್ನೂ ಓದಿ: ಹೆಸರೂ ಸೇರಿ ಎಲ್ಲವೂ ಸಂಶಯಾಸ್ಪದವಾಗಿದ್ದ ಸತ್ಯಶೋಧನಾ ಸಮಿತಿ: ಆರೆಸ್ಸೆಸ್ ಹೀಗೇಕೆ ಮಾಡಿತು?

ವೈಜ್ಞಾನಿಕ ಸಂಸ್ಥೆಗೆ ಆರೆಸ್ಸೆಸ್ ನಾಯಕನ ಹೆಸರಿಡುವ ಕೇಂದ್ರದ ಕ್ರಮಕ್ಕೆ ಕೇರಳದಾದ್ಯಂತ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ಗೆ ಗೋಲ್ವಾಲ್ಕರ್ ಹೆಸರಿಡದಂತೆ ಕೋರಿ ಪತ್ರ ಬರೆದಿದ್ದಾರೆ. ಸಂಸ್ಥೆಗೆ ಅಂತರಾಷ್ಟ್ರೀಯ ಖ್ಯಾತಿಯ ಭಾರತೀಯ ವಿಜ್ಞಾನಿಗಳನ್ನು ಹೆಸರಿಡಬಹುದು ಮತ್ತು ಪ್ರಸ್ತುತ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ.

ಕೋಮುವಾದ ಸಿದ್ಧಾಂತವನ್ನು ಪ್ರತಿಪಾದಿಸಿದ ಗೋಲ್ವಾಲ್ಕರ್ ಅವರಂತಹ ವ್ಯಕ್ತಿಯ ಹೆಸರನ್ನು ವೈಜ್ಞಾನಿಕ ಸಂಶೋಧನಾ ಸಂಸ್ಥೆಗೆ ಇಡುವುದು ಸೂಕ್ತವಲ್ಲ ಎಂದು ಪಿಣರಾಯಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದು, “ಇಂತಹ ಸಂಸ್ಥೆಯು ಮುಕ್ತ ಚಿಂತನೆಯನ್ನು ಕಟ್ಟಿಕೊಟ್ಟ ವ್ಯಕ್ತಿಗಳ ಇತಿಹಾಸದಿಂದ ಪ್ರೇರಿತವಾಗಬೇಕೇ ಹೊರತು ಕೋಮುವಾದವನ್ನು ಆಧರಿಸಿದ ದ್ವೇಷದ ಸಿದ್ಧಾಂತವನ್ನು ಪ್ರತಿಪಾದಿಸಿದವರದ್ದಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಜೊತೆಗೆ ಆರೆಸ್ಸೆಸ್ ಮುಖಂಡರು ಕೂಡಾ ಕೊರೊನಾ ಹಗರಣದಲ್ಲಿ ಬಾಗಿ: ಡಿ.ಕೆ. ಸುರೇಶ್

ಕೋಮುವಾದವನ್ನು ಉತ್ತೇಜಿಸಿರುವುದರ ಹೊರತಾಗಿ ಗೋಲ್ವಾಲ್ಕರ್‌ಗೂ ವಿಜ್ಞಾನಕ್ಕೂ ಏನು ಸಂಬಂಧವಿದೆ ಎಂದು ಸಂಸದ ಶಶಿ ತರೂರ್ ಕೇಳಿದ್ದು, “ಧರ್ಮವು ವಿಜ್ಞಾನದಲ್ಲಿ ಪ್ರಾಬಲ್ಯ ಸಾಧಿಸಬೇಕು” ಎಂಬ ಉಲ್ಲೇಖಕ್ಕಾಗಿ ಹಿಟ್ಲರ್ ಅಭಿಮಾನಿ ಗೋಲ್ವಾಲ್ಕರ್ ಅವರನ್ನು ನೆನಪಿಸಿಕೊಳ್ಳಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಗೋಲ್ವಾಲ್ಕರ್ ಅತಿದೊಡ್ಡ ಕೋಮುವಾದಿ ಮತ್ತು ಅವರ ನಾಮಕರಣ ಕ್ರಮವನ್ನು ವಿರೋಧಿಸುವುದಾಗಿ ಸಿಪಿಐ (ಎಂ) ಪೊಲಿಟ್‌ಬ್ಯುರೊ ಸದಸ್ಯ ಎಂ.ಎ. ಬೇಬಿ ಹೇಳಿದ್ದು, “ಕೇರಳದ ಪ್ರಜಾಪ್ರಭುತ್ವ ಸಮುದಾಯವು ಈ ಕ್ರಮವನ್ನು ವಿರೋಧಿಸಬೇಕು. ಗಾಂಧೀಜಿಯವರ ಹತ್ಯೆಯ ಸಮಯದಲ್ಲಿ ಈ ಆರೆಸ್ಸೆಸ್ ಮುಖ್ಯಸ್ಥ ಭಾರತದಲ್ಲಿ ಕೋಮು ದ್ವೇಷದ ಹರಡುವಿಕೆಗೆ ಕಾರಣವಾಗಿದ್ದರು. 1940 ರಿಂದ 1970 ರವರೆಗೆ ಗೋಲ್ವಾಲ್ಕರ್ ಮುಖ್ಯಸ್ಥರಾಗಿದ್ದಾಗ, ಆರೆಸ್ಸೆಸ್ ಭಾರತ ಕಂಡ ಅತಿದೊಡ್ಡ ಕೋಮು ಗಲಭೆಗಳನ್ನು ನಡೆಸಿತ್ತು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಣ್ಣ ಕೈಗಾರಿಕೆಗೆ ಘೋಷಿಸಿದ ಸಾಲ ಯೋಜನೆಯ ಅನುಷ್ಠಾನ ವಿಳಂಬ: ಆರೆಸ್ಸೆಸ್ ಅಂಗಸಂಸ್ಥೆ ಆರೋಪ

ಎರಡನೇ ಕ್ಯಾಂಪಸ್ ತಂತ್ರಜ್ಞಾನ ನಾವೀನ್ಯತೆಯ ಕೇಂದ್ರವಾಗಲಿದ್ದು, ಇದು ಕೋಶ ಆಧಾರಿತ ಚಿಕಿತ್ಸಾ ಸಂಶೋಧನೆಗೆ ಅತ್ಯಾಧುನಿಕ ಸೌಲಭ್ಯ ಒದಗಿಸಲಿದೆ. ಕ್ಯಾನ್ಸರ್ ಔಷಧಗಳು, ಇಮ್ಯುನೊಥೆರಪಿ ಸಂಶೋಧನೆ, ಸ್ಟೆಮ್ ಸೆಲ್ ಕಸಿ, ಜೀನ್ ಥೆರಪಿ ಮತ್ತು ಸೂಕ್ಷ್ಮಜೀವಿಯ ಕ್ಯಾನ್ಸರ್ ಪತ್ತೆ ಮತ್ತು ವಿಶ್ಲೇಷಣೆ ಕುರಿತು ಸಂಶೋಧನೆಗಳು ಇಲ್ಲಿ ನಡೆಯಲಿದೆ.

ಇದನ್ನೂ ಓದಿ: ಆಪರೇಷನ್ ಕಮಲದಲ್ಲಿ ಶುರುವಾಯ್ತು ಕೃಷ್ಣ ಗಾರುಡಿ: ಒಕ್ಕಲಿಗ ವರ್ಸಸ್ ಒಕ್ಕಲಿಗೆ! ಇದು ಆರೆಸ್ಸೆಸ್ಸಿನ ಹೊಸ ದಾಳ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...