ದೆಹಲಿಯಲ್ಲಿ ರೈತರ ಪ್ರತಿಭಟನೆ ವಿಷಯವಾಗಿ ನಟಿ ಕಂಗನಾ ರಣಾವತ್ ವಿರುದ್ಧ ಟ್ವಿಟ್ಟರ್ ವಾಗ್ವಾದಕ್ಕೆ ಇಳಿದಿದ್ದ ಬಾಲಿವುಡ್ ಗಾಯಕ-ನಟ ದಿಲ್ಜಿತ್ ದೋಸಂಜ್ ಚಳಿಯಲ್ಲಿ ನಡುಗುತ್ತಿರುವ ಹೋರಾಟನಿರತ ರೈತರಿಗಾಗಿ ಬರೋಬ್ಬರಿ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ನಿನ್ನೆ ಭಾಗವಹಿಸಿದ್ದ ದಿಲ್ಜಿತ್ ದೋಸಾಂಜ್, ಅನ್ನದಾತರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ರೈತರ ಬಗ್ಗೆ ಅವಹಳನಕಾರಿಯಾಗಿ ಮಾತಾಡಿದ್ದ ನಟಿ ಕಂಗನಾ ಜೊತೆಗಿನ ಟ್ವಿಟರ್ ಜಗಳದಲ್ಲಿ ರೈತರ ಪರವಹಿಸಿ ಸುದ್ದಿಯಾಗಿದ್ದರು ದಿಲ್ಜಿತ್ ದೋಸಂಜ್.
ಕೊರೆಯುವ ಚಳಿಯಲ್ಲೂ ಕೇಂದ್ರ ಸರ್ಕಾರದ ದೌರ್ಜನ್ಯಗಳಿಗೆ ಜಗ್ಗದೆ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಸ್ಪೆಟರ್, ಜ್ಯಾಕೆಟ್, ಹೊದಿಕೆ ಸೇರಿದಂತೆ ಬೆಚ್ಚಗಿನ ಬಟ್ಟೆಗಳನ್ನು ಕೊಳ್ಳಲು ದಿಲ್ಜಿತ್ ದೋಸಂಜ್ ಒಂದು ಕೋಟಿ ದೇಣಿಗೆ ನೀಡಿದ್ದಾರೆ.
ಇದನ್ನೂ ಓದಿ: ರೈತರ ಬಗ್ಗೆ ಅವಹೇಳನಕಾರಿ ಟ್ವೀಟ್: ನಟಿ ಕಂಗನಾಗೆ ಮತ್ತೊಂದು ಲೀಗಲ್ ನೋಟಿಸ್
ಪಂಜಾಬಿ ಗಾಯಕ ಸಿಂಗಾ ಎಂಬವರು ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ದಿಲ್ಜಿತ್ ದೋಸಂಜ್ ಅವರಿಗೆ ಧನ್ಯವಾದ ಹೇಳಿದ್ದಾರೆ. 10 ರೂಪಾಯಿ ಕೊಟ್ಟರು ಹೇಳಿಕೊಳ್ಳುವ ಜನರ ಮಧ್ಯೆ ನೀವು ಉದಾರವಾದ ದೇಣಿಗೆ ನೀಡಿದ್ದರೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡದೇ ದೊಡ್ಡತನ ಮೆರೆದಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
View this post on Instagram
“ಧನ್ಯವಾದಗಳು ಸಹೋದರ, ನೀವು ರೈತರಿಗೆ, ಅವರ ಬೆಚ್ಚಗಿನ ಬಟ್ಟೆಗಳಿಗೆ 1 ಕೋಟಿ ರೂ. ಕೊಟ್ಟಿದ್ದೀರಿ, ಮತ್ತು ಯಾರಿಗೂ ಈ ಬಗ್ಗೆ ತಿಳಿದಿಲ್ಲ. ನೀವು ಇದರ ಬಗ್ಗೆ ಯಾವುದೇ ಪೋಸ್ಟ್ ಮಾಡಿಲ್ಲ. ಇತ್ತೀಚಿನ ದಿನಗಳಲ್ಲಿ ಜನರು 10 ರೂ. ದೇಣಿಗೆ ನೀಡಿದರು ಜನ ಮುಚ್ಚಿಟ್ಟುಕೊಳ್ಳುವುದಿಲ್ಲ” ಎಂದಿದ್ದಾರೆ.
ನಿನ್ನೆ ಪ್ರತಿಭಟನಾ ನಿರತ ರೈತರಿಗೆ ಬೆಂಬಲ ಸೂಚಿಸಲು ಮತ್ತು ಅವರಲ್ಲಿ ಮತ್ತಷ್ಟು ಉತ್ಸಾಹ ತುಂಬಲು ಪಂಜಾಬಿ ಗಾಯಕರು ಸಿಂಗೂ ಗಡಿಯಲ್ಲಿ ಜಮಾಯಿಸಿದ್ದರು. ದಿಲ್ಜಿತ್ ದೋಸಂಜ್, ಗುರ್ಷಾಬಾದ್ ಸಿಂಗ್ ಕುಲಾರ್ ಮತ್ತು ಹಾರ್ಫ್ ಚೀಮಾ ಸೇರಿದಂತೆ ಹಲವಾರು ಗಾಯಕರು ಕಾಣಿಸಿಕೊಂಡರು.
“ನಾವು ನಮ್ಮ ಹಾಡುಗಳ ಮೂಲಕ ರೈತರ ಮನೋಸ್ಥೈರ್ಯವನ್ನು ಹೆಚ್ಚಿಸುತ್ತಿದ್ದೇವೆ” ಎಂದು ಗಾಯಕ ಗುರ್ಷಾಬಾದ್ ಎಸ್ ಕುಲಾರ್ ಹೇಳಿದ್ದರು.
ಇದನ್ನೂ ಓದಿ: ಡಿಸೆಂಬರ್ 8 ರ ಮಂಗಳವಾರ ಭಾರತ್ ಬಂದ್ಗೆ ಕರೆ ನೀಡಿದ ಹೋರಾಟನಿರತ ರೈತರು
#WATCH Delhi: Punjabi singers perform at Singhu border to express solidarity with protesting farmers. Several singers including Diljit Dosanjh, Gurshabad Singh Kular & Harf Cheema were seen.
"We're boosting the morale of farmers through our songs.,“ says singer Gurshabad S Kular pic.twitter.com/NPH6NaxIpd
— ANI (@ANI) December 5, 2020
ಇನ್ನು, ಸಿಂಗೂ ಗಡಿಯಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ್ದ ದೋಸಂಜ್, “ಎಲ್ಲ ರೈತರಿಗೆ ಹ್ಯಾಟ್ಸ್ ಆಫ್, ನೀವು ಹೊಸ ಇತಿಹಾಸವನ್ನು ರಚಿಸಿದ್ದೀರಿ. ಈ ಇತಿಹಾಸವನ್ನು ಮುಂದಿನ ಪೀಳಿಗೆಗೆ ವಿವರಿಸಲಾಗುವುದು. ರೈತರ ಪ್ರತಿಭಟನೆಯನ್ನು ಯಾರು ದಾರಿತಪ್ಪಿಸಬಾರದು” ಎಂದರು.
’ದಯವಿಟ್ಟು ನಮ್ಮ ರೈತರ ಬೇಡಿಕೆಗಳನ್ನು ಈಡೇರಿಸಿ. ಎಲ್ಲರೂ ಇಲ್ಲಿ ಶಾಂತಿಯುತವಾಗಿ ಕುಳಿತಿದ್ದಾರೆ ಮತ್ತು ಇಡೀ ದೇಶವು ರೈತರೊಂದಿಗೆ ಇದೆ. ಈ ರೈತರ ಪ್ರತಿಭಟನೆ ಬಗ್ಗೆ, ಟ್ವಿಟ್ಟರ್ನಲ್ಲಿ ವಿಷಯಗಳನ್ನು ತಿರುಚಲಾಗಿದೆ ಆದರೆ ಸತ್ಯವೆಂದರೆ ರೈತರು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಾರೆ. ಇಲ್ಲಿ ಯಾರೂ ರಕ್ತಪಾತದ ಬಗ್ಗೆ ಮಾತನಾಡುವುದಿಲ್ಲ. ಇವರ ಬೇಡಿಕೆಗಳನ್ನು ಪರಿಹರಿಸಿ’ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬಾಲಿವುಡ್ ನಟಿ ಸ್ವರಾ ಭಾಸ್ಕರ್, ರಿಚಾ ಚಾಡ್ಡಾ, ತಾಪ್ಸಿ ಪನ್ನು, ಮಿಕಾ ಸಿಂಗ್, ವಿಜೇಂದರ್ ಸಿಂಗ್ ಸೇರಿದಂತೆ ಪಂಜಾಬಿ ಚಿತ್ರೋದ್ಯಮ, ಕಂಗನಾ ವಿರುದ್ಧದ ನಿಲುವಿನಲ್ಲಿ ದಿಲ್ಜಿತ್ ದೋಸಂಜ್ ಅವರನ್ನು ಬೆಂಬಲಿಸಿದ್ದರು.