Homeಮುಖಪುಟದ್ವೇಷ ಭಾಷಣ: ಕ್ರಿಮಿನಲ್ ಕಾನೂನಿನ ಬದಲಾವಣೆ ಈಗಿನ ತುರ್ತ: ತಜ್ಞರ ಸಮಿತಿ

ದ್ವೇಷ ಭಾಷಣ: ಕ್ರಿಮಿನಲ್ ಕಾನೂನಿನ ಬದಲಾವಣೆ ಈಗಿನ ತುರ್ತ: ತಜ್ಞರ ಸಮಿತಿ

- Advertisement -
- Advertisement -

ದ್ವೇಷ ಭಾಷಣ ನಿಯಂತ್ರಣದ ಕಾನೂನಿಗೆ ಬದಲಾವಣೆಯ ಅಗತ್ಯತೆ ಈಗಿನ ತುರ್ತು ಎಂದು, ಮೂರು ವರ್ಷಗಳ ಹಿಂದೆ ಐಪಿಸಿ, ಸಿಆರ್‌ಪಿಸಿ, ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿನ ಕೆಲವು ಬದಲಾವಣೆಗಳ ಕುರಿತು ಮತ್ತು ದ್ವೇಷದ ಭಾಷಣದ ಕುರಿತ ವಿಶಾಲವಾದ ವ್ಯಾಖ್ಯಾನಕ್ಕೆ ನಿಯೋಜಿಸಿದ್ದ ತಜ್ಞರ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ.

“ಅನೇಕ ವಿಷಯಗಳಲ್ಲಿ ಕ್ರಿಮಿನಲ್ ಕಾನೂನನ್ನು ಬದಲಾಯಿಸುವ ತುರ್ತು ಇದೆ. ಆದರೆ ಅದು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ದ್ವೇಷದ ಭಾಷಣವನ್ನು ನಿಯಂತ್ರಿಸುವುದು ಈ ಸಮಯದ ಅಗತ್ಯವಾಗಿರುವುದರಿಂದ, ನಾವು ನೀಡಿದ ಸಲಹೆಗಳನ್ನು ವ್ಯಾಪಕ ಸಮಾಲೋಚನೆಗಾಗಿ ಇಡಬೇಕು. ನಾವೇನೂ ಬುದ್ಧಿವಂತಿಕೆಯ ಮಾಲೀಕರಲ್ಲ. ಆದರೆ ನಾವು ನೀಡಿದ ಸಲಹೆಗಳನ್ನು ಗಮನಿಸಬೇಕು” ಎಂದು ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ಟಿ ಕೆ ವಿಶ್ವನಾಥನ್ ಸಮಿತಿಯ ಸದಸ್ಯ ನವನೀತ್ ವಾಸನ್ ಹೇಳಿದ್ದಾರೆ.

ಕಳೆದ ವರ್ಷ ಆಗಸ್ಟ್ ನಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಸುಧಾರಣೆಗೊಳಿಸುವುದಕ್ಕೆ ಕರೆ ನೀಡಿದ್ದರು. ನಾಲ್ಕು ಪ್ರಮುಖ ಅಪರಾಧ ನ್ಯಾಯ ಕಾನೂನುಗಳಲ್ಲಿ ಅಗತ್ಯವಿರುವ ಬದಲಾವಣೆಗಳ ಬಗ್ಗೆ ರಾಜ್ಯಗಳ ಅಭಿಪ್ರಾಯಗಳನ್ನು ಕೋರಿದ್ದರು.

ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ), ಶಸ್ತ್ರಾಸ್ತ್ರ ಕಾಯ್ದೆ ಮತ್ತು ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಕಾಯ್ದೆ (ಎನ್‌ಡಿಪಿಎಸ್)ಗಳ ಮೇಲೆ ಈ ಪ್ರಕ್ರಿಯೆ ನಡೆಯುತ್ತಿದೆ.

ಬಿಜೆಪಿಯ ಆಜ್ಞೆಯ ಮೇರೆಗೆ ಫೇಸ್‌ಬುಕ್ ತನ್ನ ಕೆಲಸವನ್ನು ಕುಶಲತೆಯಿಂದ ನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದ ನಂತರ, 2017 ರಲ್ಲಿ ವಿವರವಾದ ವರದಿಯನ್ನು ಸಿದ್ಧಪಡಿಸಿದ ತಜ್ಞರ ಸಮಿತಿಯ ಸದಸ್ಯರನ್ನು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಪರ್ಕಿಸಿತ್ತು.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಾದಾತ್ಮಕ ಸೆಕ್ಷನ್ 66 ಎ ಅನ್ನು ಸುಪ್ರೀಂ ಕೋರ್ಟ್ 2015 ರಲ್ಲಿ ತಡೆದ ನಂತರ ಮಾಜಿ ಕಾನೂನು ಕಾರ್ಯದರ್ಶಿ ಮತ್ತು ಲೋಕಸಭಾ ಪ್ರಧಾನ ಕಾರ್ಯದರ್ಶಿ ಟಿ.ಕೆ.ವಿಶ್ವನಾಥನ್ ನೇತೃತ್ವದ ತಜ್ಞರ ಸಮಿತಿಯನ್ನು ಕೇಂದ್ರ ರಚಿಸಿತು.

ಇದು 2017 ರಲ್ಲಿ ಸಲ್ಲಿಸಿದ ತನ್ನ ವರದಿಯಲ್ಲಿ, ದ್ವೇಷ ಮತ್ತು ಪ್ರಚೋದನೆಯನ್ನು ಹರಡಲು ದ್ವೇಷದ ಭಾಷಣ ಮತ್ತು ಸೈಬರ್‌ಪೇಸ್‌ನ ಬಳಕೆಯ ಪ್ರಕರಣಗಳನ್ನು ಎದುರಿಸಲು ಕಠಿಣ ನಿಬಂಧನೆಗಳನ್ನು ಪರಿಚಯಿಸಲು ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು ಐಟಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಶಿಫಾರಸು ಮಾಡಿತ್ತು.

ಡಿಜಿಟಲ್ ತಂತ್ರಜ್ಞಾನದಿಂದ ಒದಗಿಸಲಾದ ಅವಕಾಶಗಳು ಅಗಾಧವಾಗಿದ್ದರೂ, ಸಾರ್ವಜನಿಕ ಸುವ್ಯವಸ್ಥೆ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆಗಳು ನೈಜವಾಗಿವೆ. ಡಿಜಿಟಲ್ ವೇದಿಕೆಯ ಮೂಲಕ ಪ್ರಚಾರ ಮಾಡುವ ಹಾನಿಕಾರಕ ವಿಷಯಗಳಿಗೆ ಮತ್ತು ಇದು ದ್ವೇಷವನ್ನು ಸೃಷ್ಟಿಸುವ ಕಾರಣಕ್ಕೆ ಸರ್ಕಾರಗಳು ಮೂಕ ಪ್ರೇಕ್ಷಕನಂತಿರಲು ಸಾಧ್ಯವಿಲ್ಲ ಎಂದು ವರದಿ ಹೇಳಿದೆ.

ಅಪರಾಧ ನ್ಯಾಯ ವ್ಯವಸ್ಥೆಯ ಸಮಗ್ರ ಪುನರುಜ್ಜೀವನದಿಂದ ಮಾತ್ರ ದ್ವೇಷ ಭಾಷಣವನ್ನು ಪರಿಶೀಲಿಸುವ ಕ್ರಮಗಳನ್ನು ಒದಗಿಸಬಹುದು ಎಂದು ಸಮಿತಿಯ ಮತ್ತೊಬ್ಬ ಸದಸ್ಯರಾದ ಡಾ ಎಸ್ ಶಿವಕುಮಾರ್ ಹೇಳಿದ್ದಾರೆ.


ಇದನ್ನೂ ಓದಿ: ಕ್ರಿಮಿನಲ್ ಕಾನೂನುಗಳನ್ನು ಬದಲಿಸಲು ಕೇಂದ್ರ ಸಮಿತಿ; ಅಬ್ಜೆಕ್ಶನ್, ಮೈ ಲಾರ್ಡ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ದೇಶದ ಶ್ರೀಮಂತ ಉದ್ಯಮಿಗಳ ‘ಸಾಧನ’: ರಾಹುಲ್ ಗಾಂಧಿ

0
ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ ಕೆಲವೇಕೆಲವು ಶ್ರೀಮಂತ ಉದ್ಯಮಿಗಳ ಸಾಧನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದ ನೈಜ ಸಮಸ್ಯೆಗಳಿಂದ ಜನರನ್ನು ಬೇರೆಡೆಗೆ ಸೆಳೆಯುವುದು, ಭಾರತದ...