Homeಕರ್ನಾಟಕಬಿಎಸ್‌ಪಿಗೆ ಬೆಂಬಲಕೊಟ್ಟರೂ ಎಸ್‌ಡಿಪಿಐಗೆ ಅವರು ಬೆಂಬಲ ನೀಡಿಲ್ಲ: ಭಾಸ್ಕರ್‌ ಪ್ರಸಾದ್ ಆರೋಪ

ಬಿಎಸ್‌ಪಿಗೆ ಬೆಂಬಲಕೊಟ್ಟರೂ ಎಸ್‌ಡಿಪಿಐಗೆ ಅವರು ಬೆಂಬಲ ನೀಡಿಲ್ಲ: ಭಾಸ್ಕರ್‌ ಪ್ರಸಾದ್ ಆರೋಪ

- Advertisement -
- Advertisement -

ಸೋಷಿಯಲ್‌ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಬೆಂಬಲ ನೀಡಿದರೂ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ನಮಗೆ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬೆಂಬಲ ನೀಡಿಲ್ಲ ಎಂದು ಎಸ್‌ಡಿಪಿಐ ಮುಖಂಡ ಬಿ.ಆರ್‌.ಭಾಸ್ಕರ್‌ ಪ್ರಸಾದ್ ಆರೋಪಿಸಿದ್ದಾರೆ.

ಪುಲಿಕೇಶಿನಗರದಲ್ಲಿ ಎಸ್‌ಡಿಪಿಐ ಅಭ್ಯರ್ಥಿಯಾಗಿರುವ ಭಾಸ್ಕರ್‌ ಪ್ರಸಾದ್‌ ಈ ಕುರಿತು ಬೇಸರ ವ್ಯಕ್ತಪಡಿಸಿದ್ದು, “ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್‌ಪಿಯನ್ನು ಎಸ್‌ಡಿಪಿಐ ಬೆಂಬಲಿಸಿದೆ. ಆದರೆ ಪುಲಿಕೇಶಿನಗರದಲ್ಲಿ ನಮಗೆ ಒಂದು ಮಾತನ್ನೂ ಹೇಳದೆ, ಕಾಂಗ್ರೆಸ್ ಟಿಕೆಟ್ ವಂಚಿತ ಅಖಂಡ ಶ್ರೀನಿವಾಸಮೂರ್ತಿಯವರಿಗೆ ಬಿಎಸ್‌ಪಿ ಟಿಕೆಟ್ ನೀಡಿದೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ಬಿ.ಆರ್‌.ಭಾಸ್ಕರ್‌ ಪ್ರಸಾದ್ ಹೇಳಿರುವುದೇನು?

“ನನಗೆ ಯಾರನ್ನೂ ದೂಷಿಸುವ ಮನಸ್ಸಿಲ್ಲ ಮತ್ತು ಅಗತ್ಯವೂ ಇಲ್ಲ. ಆದರೆ ಪ್ರತಿಯೊಂದು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ನಾನು ಈ ವಿಚಾರವನ್ನು ನಿಮಗೆ ತಿಳಿಸದೆ ಹೋದರೆ ತಪ್ಪು ನನ್ನದಾಗಿ ಬಿಡುತ್ತದೆ. ಹಾಗಾಗಿ ವಿಷಯ ನಿಮಗೆ ಗೊತ್ತಿರಲಿ ಎಂದು ಮಾತ್ರ ಇಲ್ಲಿ ಈ ನಂಬಿಕೆ ದ್ರೋಹದ ಕಥೆಯನ್ನು ಹೇಳಿಕೊಳ್ಳುತ್ತಿದ್ದೇನೆ. ಬಿಎಸ್‌ಪಿ ವಿರುದ್ಧ ಎಸ್‌ಡಿಪಿಐ ಅಭ್ಯರ್ಥಿಯನ್ನು ಹಾಕುವುದು ಬೇಡ, ದಯಮಾಡಿ ನೀವು ನಮಗೆ ಸಹಾಯ ಮಾಡಿ ಎಂದು ಬಿಎಸ್ಪಿ ರಾಜ್ಯ ಸಮಿತಿ ನಮ್ಮನ್ನು ಕೇಳಿಕೊಂಡಿತ್ತು. ನಾವು ಅದರಂತೆ ನಮ್ಮ ರಾಜ್ಯ ಸಮಿತಿಯಲ್ಲಿ ಮಾತಾಡಿ ಒಂದು ಒಳ್ಳೆಯ ಉದ್ದೇಶದಿಂದ ನಮ್ಮ ಆರು ಜನ ಕೌನ್ಸಿಲರ್‌ಗಳು ಇರುವಂತಹ ಚಾಮರಾಜನಗರದಲ್ಲಿ ನಾವು ನಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ಬಿಎಸ್‌ಪಿಯ ಹ ರಾ ಮಹೇಶ್ ಅವರಿಗೆ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದು ಅಲ್ಲದೆ ನಮ್ಮ ನೂರಾರು ಜನ ಕಾರ್ಯಕರ್ತರು BSP ಅಭ್ಯರ್ಥಿಯೊಂದಿಗೆ ಬಹಿರಂಗವಾಗಿ ಚುನಾವಣಾ ಕಣದಲ್ಲಿದ್ದು ಅವರ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.”

“ಅದೇ ರೀತಿಯಾಗಿ ಪುಲಿಕೇಶಿ ನಗರದಲ್ಲಿ ನಾವು ಬಿಎಸ್‌ಪಿ ಅಭ್ಯರ್ಥಿಯನ್ನು ಹಾಕದೆ, ನನಗೆ ಬೆಂಬಲ ಬೆಂಬಲ ನೀಡುವುದಾಗಿ ಅವರು ಘೋಷಿಸಿದ್ದರು. ಆದರೆ ನನಗೆ ಒಂದೇ ಒಂದು ಮಾತು ಹೇಳದೆ, ನನ್ನ ಗಮನಕ್ಕೂ ತರದೆ, ಅಥವಾ ನಮ್ಮ ಪಕ್ಷದ ಯಾವುದೇ ನಾಯಕರಿಗೂ ತಿಳಿಸದೆ ರಾತ್ರೋರಾತ್ರಿ ಅಖಂಡ ಶ್ರೀನಿವಾಸ್ ಮೂರ್ತಿ ಅವರಿಗೆ ಬಿಎಸ್‌ಪಿ ಬಿ ಫಾರ್ಮ್ ನೀಡುವುದರ ಮೂಲಕ ಅವರನ್ನು ಕಣಕ್ಕೆ ಇಳಿಸಲಾಗಿದೆ.”

“ಇಷ್ಟಾದರೂ ನಮ್ಮ ರಾಜ್ಯ ಸಮಿತಿಯು ಹ ರಾ ಮಹೇಶ್ ಅವರಿಗೆ ನೀಡಿರುವ ಬೆಂಬಲವನ್ನು ಇದೇ ರೀತಿಯಾಗಿ ಸಂಪೂರ್ಣವಾಗಿ ಚುನಾವಣೆಯ ಅಂತಿಮ ಕ್ಷಣದವರೆಗೂ ನೀಡುತ್ತದೆ. ನಮಗೆ ಗೊತ್ತಿದೆ ಈ ದ್ರೋಹದಲ್ಲಿ ಹ ರಾ ಮಹೇಶ್ ಅವರ ಯಾವ ಪಾತ್ರವೂ ಇಲ್ಲ. ಅವರಿಗೂ ಈ ಸುದ್ದಿ ಆಘಾತವನ್ನು ತಂದಿದೆ. ಆ ಪಕ್ಷದ ಮುಖಂಡರು ಮಾಡಿರುವ ನಂಬಿಕೆ ದ್ರೋಹದ ಪ್ರತಿಫಲವನ್ನು ಅವರೇ ಊಟ ಮಾಡಲಿ. ನಮಗದರ ಗೊಡವೆ ಬೇಡ.
ನಮ್ಮ ಪಕ್ಷದ ನಾಯಕರ ಆಶೀರ್ವಾದ ನಮ್ಮ ಕಾರ್ಯಕರ್ತರ ಶಕ್ತಿ ನನ್ನ ಜೊತೆಗೆ ಇರುವವರೆಗೂ, ನಾವು ಯಾರಿಗೂ ಅವಲಂಬನೆಯಾಗಿ ನಿಲ್ಲುವ ತುರ್ತು ಇಲ್ಲ. ನಮ್ಮ ಪಕ್ಷವೇ ನನ್ನ ಆತ್ಮ, ಉಸಿರು, ಜೀವ,
ನನ್ನ ಗೆಲುವು ನನ್ನ ಹಣೆಯಲ್ಲಿ ಬರೆದಿದ್ದರೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ.
ಎಲ್ಲರಿಗೂ ಧನ್ಯವಾದಗಳು”

-ಹೀಗೆ ಭಾಸ್ಕರ್‌ ಪ್ರಸಾದ್ ಬರೆದುಕೊಂಡಿದ್ದಾರೆ.

11 ಕಡೆ ಪರಸ್ಪರ ಸ್ಪರ್ಧೆ ಮಾಡಿದ್ದೇವೆ: ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಸ್ಪಷ್ಟನೆ

ಭಾಸ್ಕರ್‌ ಪ್ರಸಾದ್ ಅವರ ಆರೋಪಗಳಿಗೆ ಸಂಬಂಧಿಸಿದಂತೆ ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, “ಚಾಮರಾಜನಗರ ಕ್ಷೇತ್ರದಲ್ಲಿ ಬಿಎಸ್‌ಪಿಗೆ ಎಸ್‌ಡಿಪಿಐ ಬೆಂಬಲ ನೀಡುವುದು ಹಾಗೆಯೇ ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಡಿಪಿಐಗೆ ಬಿಎಸ್‌ಪಿ ಬೆಂಬಲ ನೀಡುವುದು ಎಂಬ ಒಪ್ಪಂದ ಮಾಡಿಕೊಂಡೆವು. ಎರಡು ಕಡೆಯಿಂದಲೂ ಪರಸ್ಪರ ಪತ್ರಿಕಾಗೋಷ್ಠಿಗಳನ್ನು ನಡೆಸಲಾಯಿತು. ಬೆಂಗಳೂರಿನಲ್ಲೂ ಈ ರೀತಿಯ ಮಾತುಕತೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಭಾಸ್ಕರ್‌ ಪ್ರಸಾದ್ ಅವರು ಚುನಾವಣಾ ಪ್ರಕ್ರಿಯೆಗಳಲ್ಲಿ ಉಳಿದರು. ಪುಲಿಕೇಶಿನಗರ ಮತ್ತು ಸರ್ವಜ್ಞನಗರದಲ್ಲಿ ಪರಸ್ಪರ ಬೆಂಬಲ ಘೋಷಿಸುವ ಉದ್ದೇಶಗಳಿದ್ದವು. ಆದರೆ ಸರಿಯಾದ ಮಾತುಕತೆಗಳಾಗದೆ ಪ್ರೆಸ್‌ಮೀಟ್‌ ಕೂಡ ಆಗಲಿಲ್ಲ” ಎಂದರು.

“ಕೊನೆ ಕ್ಷಣದಲ್ಲಿ ಪುಲಿಕೇಶಿನಗರದ ಹಾಲಿ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿಯವರು ಬಂದು ಬಿಎಸ್‌ಪಿ ಸೇರಿಕೊಂಡರು. ಹೀಗಾಗಿ ಬಿಎಸ್‌ಪಿ ಅವರಿಗೆ ಟಿಕೆಟ್ ನೀಡಿದೆ. ಬೆಂಗಳೂರಿನಲ್ಲಿ ಸರಿಯಾದ ಪ್ರಕ್ರಿಯೆಗಳು ನಡೆಯದೆ ಇದ್ದಿದ್ದರಿಂದ ಗೊಂದಲವಾಗಿದೆ. ನರಸಿಂಹರಾಜ, ಚಾಮರಾಜನಗರದಲ್ಲಿ ಆದಂತೆ ಪಟ್ಟು ಹಿಡಿದು ಪ್ರಕ್ರಿಯೆಗಳನ್ನು ಮುಗಿಸಿಕೊಂಡಿದ್ದರೆ ಬಿಎಸ್‌ಪಿ- ಎಸ್‌ಡಿಪಿಐ ಒಪ್ಪಂದವಿದೆ ಎಂದು ಅಖಂಡ ಅವರು ನಮ್ಮ ಬಳಿ ಬರುತ್ತಿರಲಿಲ್ಲ. ಪ್ರೆಸ್‌ಮೀಟ್ ಮಾಡಲೂ ಆಗಲಿಲ್ಲ. ಎರಡು ಪಕ್ಷಗಳ ನಡುವೆ ಗ್ಯಾಪ್‌ ಆದದ್ದರಿಂದ ಈ ಸಮಸ್ಯೆಯಾಗಿದೆ. ಎರಡೂ ಕಡೆಯಿಂದಲೂ ತಪ್ಪುಗಳಾದವು” ಎಂದು ಸ್ಪಷ್ಟನೆ ನೀಡಿದರು.

“ಎಸ್‌ಡಿಪಿಐನವರು 19 ಕಡೆ ಕ್ಯಾಂಡಿಡೇಟ್ ಹಾಕಿದ್ದಾರೆ. ಉಳಿದ ಕಡೆ ಸೌದಾರ್ಹಯುತವಾಗಿ ಫೈಟ್ ನಡೆಯುತ್ತಿದೆ. ಒಟ್ಟು ಹನ್ನೊಂದು ಕಡೆ ಎಸ್‌ಡಿಪಿಐ- ಬಿಎಸ್‌ಪಿ ಪರಸ್ಪರ ಸ್ಪರ್ಧಿಸಿವೆ. ಅದರಲ್ಲಿ ಪುಲಿಕೇಶಿನಗರವೂ ಒಂದು. ಮೈಸೂರು, ಚಾಮರಾಜನಗರಕ್ಕೆ ಮಾತ್ರ ಒಪ್ಪಂದವನ್ನು ಸೀಮಿತಗೊಳಿಸಿಕೊಂಡು ಸೌಹಾರ್ದಯುತವಾಗಿ ಚುನಾವಣೆ ಎದುರಿಸುವಂತಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿರಿ: ಕೊಳ್ಳೇಗಾಲ: ನಾಮಪತ್ರ ಹಿಂಪಡೆದ ಬಿಎಸ್‌ಪಿ ಅಭ್ಯರ್ಥಿ, ಕಾಂಗ್ರೆಸ್‌ಗೆ ಬೆಂಬಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...