Homeಕರ್ನಾಟಕಬಿಎಸ್‌ಪಿಗೆ ಬೆಂಬಲಕೊಟ್ಟರೂ ಎಸ್‌ಡಿಪಿಐಗೆ ಅವರು ಬೆಂಬಲ ನೀಡಿಲ್ಲ: ಭಾಸ್ಕರ್‌ ಪ್ರಸಾದ್ ಆರೋಪ

ಬಿಎಸ್‌ಪಿಗೆ ಬೆಂಬಲಕೊಟ್ಟರೂ ಎಸ್‌ಡಿಪಿಐಗೆ ಅವರು ಬೆಂಬಲ ನೀಡಿಲ್ಲ: ಭಾಸ್ಕರ್‌ ಪ್ರಸಾದ್ ಆರೋಪ

- Advertisement -
- Advertisement -

ಸೋಷಿಯಲ್‌ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಬೆಂಬಲ ನೀಡಿದರೂ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ನಮಗೆ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬೆಂಬಲ ನೀಡಿಲ್ಲ ಎಂದು ಎಸ್‌ಡಿಪಿಐ ಮುಖಂಡ ಬಿ.ಆರ್‌.ಭಾಸ್ಕರ್‌ ಪ್ರಸಾದ್ ಆರೋಪಿಸಿದ್ದಾರೆ.

ಪುಲಿಕೇಶಿನಗರದಲ್ಲಿ ಎಸ್‌ಡಿಪಿಐ ಅಭ್ಯರ್ಥಿಯಾಗಿರುವ ಭಾಸ್ಕರ್‌ ಪ್ರಸಾದ್‌ ಈ ಕುರಿತು ಬೇಸರ ವ್ಯಕ್ತಪಡಿಸಿದ್ದು, “ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್‌ಪಿಯನ್ನು ಎಸ್‌ಡಿಪಿಐ ಬೆಂಬಲಿಸಿದೆ. ಆದರೆ ಪುಲಿಕೇಶಿನಗರದಲ್ಲಿ ನಮಗೆ ಒಂದು ಮಾತನ್ನೂ ಹೇಳದೆ, ಕಾಂಗ್ರೆಸ್ ಟಿಕೆಟ್ ವಂಚಿತ ಅಖಂಡ ಶ್ರೀನಿವಾಸಮೂರ್ತಿಯವರಿಗೆ ಬಿಎಸ್‌ಪಿ ಟಿಕೆಟ್ ನೀಡಿದೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ಬಿ.ಆರ್‌.ಭಾಸ್ಕರ್‌ ಪ್ರಸಾದ್ ಹೇಳಿರುವುದೇನು?

“ನನಗೆ ಯಾರನ್ನೂ ದೂಷಿಸುವ ಮನಸ್ಸಿಲ್ಲ ಮತ್ತು ಅಗತ್ಯವೂ ಇಲ್ಲ. ಆದರೆ ಪ್ರತಿಯೊಂದು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ನಾನು ಈ ವಿಚಾರವನ್ನು ನಿಮಗೆ ತಿಳಿಸದೆ ಹೋದರೆ ತಪ್ಪು ನನ್ನದಾಗಿ ಬಿಡುತ್ತದೆ. ಹಾಗಾಗಿ ವಿಷಯ ನಿಮಗೆ ಗೊತ್ತಿರಲಿ ಎಂದು ಮಾತ್ರ ಇಲ್ಲಿ ಈ ನಂಬಿಕೆ ದ್ರೋಹದ ಕಥೆಯನ್ನು ಹೇಳಿಕೊಳ್ಳುತ್ತಿದ್ದೇನೆ. ಬಿಎಸ್‌ಪಿ ವಿರುದ್ಧ ಎಸ್‌ಡಿಪಿಐ ಅಭ್ಯರ್ಥಿಯನ್ನು ಹಾಕುವುದು ಬೇಡ, ದಯಮಾಡಿ ನೀವು ನಮಗೆ ಸಹಾಯ ಮಾಡಿ ಎಂದು ಬಿಎಸ್ಪಿ ರಾಜ್ಯ ಸಮಿತಿ ನಮ್ಮನ್ನು ಕೇಳಿಕೊಂಡಿತ್ತು. ನಾವು ಅದರಂತೆ ನಮ್ಮ ರಾಜ್ಯ ಸಮಿತಿಯಲ್ಲಿ ಮಾತಾಡಿ ಒಂದು ಒಳ್ಳೆಯ ಉದ್ದೇಶದಿಂದ ನಮ್ಮ ಆರು ಜನ ಕೌನ್ಸಿಲರ್‌ಗಳು ಇರುವಂತಹ ಚಾಮರಾಜನಗರದಲ್ಲಿ ನಾವು ನಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ಬಿಎಸ್‌ಪಿಯ ಹ ರಾ ಮಹೇಶ್ ಅವರಿಗೆ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದು ಅಲ್ಲದೆ ನಮ್ಮ ನೂರಾರು ಜನ ಕಾರ್ಯಕರ್ತರು BSP ಅಭ್ಯರ್ಥಿಯೊಂದಿಗೆ ಬಹಿರಂಗವಾಗಿ ಚುನಾವಣಾ ಕಣದಲ್ಲಿದ್ದು ಅವರ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.”

“ಅದೇ ರೀತಿಯಾಗಿ ಪುಲಿಕೇಶಿ ನಗರದಲ್ಲಿ ನಾವು ಬಿಎಸ್‌ಪಿ ಅಭ್ಯರ್ಥಿಯನ್ನು ಹಾಕದೆ, ನನಗೆ ಬೆಂಬಲ ಬೆಂಬಲ ನೀಡುವುದಾಗಿ ಅವರು ಘೋಷಿಸಿದ್ದರು. ಆದರೆ ನನಗೆ ಒಂದೇ ಒಂದು ಮಾತು ಹೇಳದೆ, ನನ್ನ ಗಮನಕ್ಕೂ ತರದೆ, ಅಥವಾ ನಮ್ಮ ಪಕ್ಷದ ಯಾವುದೇ ನಾಯಕರಿಗೂ ತಿಳಿಸದೆ ರಾತ್ರೋರಾತ್ರಿ ಅಖಂಡ ಶ್ರೀನಿವಾಸ್ ಮೂರ್ತಿ ಅವರಿಗೆ ಬಿಎಸ್‌ಪಿ ಬಿ ಫಾರ್ಮ್ ನೀಡುವುದರ ಮೂಲಕ ಅವರನ್ನು ಕಣಕ್ಕೆ ಇಳಿಸಲಾಗಿದೆ.”

“ಇಷ್ಟಾದರೂ ನಮ್ಮ ರಾಜ್ಯ ಸಮಿತಿಯು ಹ ರಾ ಮಹೇಶ್ ಅವರಿಗೆ ನೀಡಿರುವ ಬೆಂಬಲವನ್ನು ಇದೇ ರೀತಿಯಾಗಿ ಸಂಪೂರ್ಣವಾಗಿ ಚುನಾವಣೆಯ ಅಂತಿಮ ಕ್ಷಣದವರೆಗೂ ನೀಡುತ್ತದೆ. ನಮಗೆ ಗೊತ್ತಿದೆ ಈ ದ್ರೋಹದಲ್ಲಿ ಹ ರಾ ಮಹೇಶ್ ಅವರ ಯಾವ ಪಾತ್ರವೂ ಇಲ್ಲ. ಅವರಿಗೂ ಈ ಸುದ್ದಿ ಆಘಾತವನ್ನು ತಂದಿದೆ. ಆ ಪಕ್ಷದ ಮುಖಂಡರು ಮಾಡಿರುವ ನಂಬಿಕೆ ದ್ರೋಹದ ಪ್ರತಿಫಲವನ್ನು ಅವರೇ ಊಟ ಮಾಡಲಿ. ನಮಗದರ ಗೊಡವೆ ಬೇಡ.
ನಮ್ಮ ಪಕ್ಷದ ನಾಯಕರ ಆಶೀರ್ವಾದ ನಮ್ಮ ಕಾರ್ಯಕರ್ತರ ಶಕ್ತಿ ನನ್ನ ಜೊತೆಗೆ ಇರುವವರೆಗೂ, ನಾವು ಯಾರಿಗೂ ಅವಲಂಬನೆಯಾಗಿ ನಿಲ್ಲುವ ತುರ್ತು ಇಲ್ಲ. ನಮ್ಮ ಪಕ್ಷವೇ ನನ್ನ ಆತ್ಮ, ಉಸಿರು, ಜೀವ,
ನನ್ನ ಗೆಲುವು ನನ್ನ ಹಣೆಯಲ್ಲಿ ಬರೆದಿದ್ದರೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ.
ಎಲ್ಲರಿಗೂ ಧನ್ಯವಾದಗಳು”

-ಹೀಗೆ ಭಾಸ್ಕರ್‌ ಪ್ರಸಾದ್ ಬರೆದುಕೊಂಡಿದ್ದಾರೆ.

11 ಕಡೆ ಪರಸ್ಪರ ಸ್ಪರ್ಧೆ ಮಾಡಿದ್ದೇವೆ: ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಸ್ಪಷ್ಟನೆ

ಭಾಸ್ಕರ್‌ ಪ್ರಸಾದ್ ಅವರ ಆರೋಪಗಳಿಗೆ ಸಂಬಂಧಿಸಿದಂತೆ ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, “ಚಾಮರಾಜನಗರ ಕ್ಷೇತ್ರದಲ್ಲಿ ಬಿಎಸ್‌ಪಿಗೆ ಎಸ್‌ಡಿಪಿಐ ಬೆಂಬಲ ನೀಡುವುದು ಹಾಗೆಯೇ ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಡಿಪಿಐಗೆ ಬಿಎಸ್‌ಪಿ ಬೆಂಬಲ ನೀಡುವುದು ಎಂಬ ಒಪ್ಪಂದ ಮಾಡಿಕೊಂಡೆವು. ಎರಡು ಕಡೆಯಿಂದಲೂ ಪರಸ್ಪರ ಪತ್ರಿಕಾಗೋಷ್ಠಿಗಳನ್ನು ನಡೆಸಲಾಯಿತು. ಬೆಂಗಳೂರಿನಲ್ಲೂ ಈ ರೀತಿಯ ಮಾತುಕತೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಭಾಸ್ಕರ್‌ ಪ್ರಸಾದ್ ಅವರು ಚುನಾವಣಾ ಪ್ರಕ್ರಿಯೆಗಳಲ್ಲಿ ಉಳಿದರು. ಪುಲಿಕೇಶಿನಗರ ಮತ್ತು ಸರ್ವಜ್ಞನಗರದಲ್ಲಿ ಪರಸ್ಪರ ಬೆಂಬಲ ಘೋಷಿಸುವ ಉದ್ದೇಶಗಳಿದ್ದವು. ಆದರೆ ಸರಿಯಾದ ಮಾತುಕತೆಗಳಾಗದೆ ಪ್ರೆಸ್‌ಮೀಟ್‌ ಕೂಡ ಆಗಲಿಲ್ಲ” ಎಂದರು.

“ಕೊನೆ ಕ್ಷಣದಲ್ಲಿ ಪುಲಿಕೇಶಿನಗರದ ಹಾಲಿ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿಯವರು ಬಂದು ಬಿಎಸ್‌ಪಿ ಸೇರಿಕೊಂಡರು. ಹೀಗಾಗಿ ಬಿಎಸ್‌ಪಿ ಅವರಿಗೆ ಟಿಕೆಟ್ ನೀಡಿದೆ. ಬೆಂಗಳೂರಿನಲ್ಲಿ ಸರಿಯಾದ ಪ್ರಕ್ರಿಯೆಗಳು ನಡೆಯದೆ ಇದ್ದಿದ್ದರಿಂದ ಗೊಂದಲವಾಗಿದೆ. ನರಸಿಂಹರಾಜ, ಚಾಮರಾಜನಗರದಲ್ಲಿ ಆದಂತೆ ಪಟ್ಟು ಹಿಡಿದು ಪ್ರಕ್ರಿಯೆಗಳನ್ನು ಮುಗಿಸಿಕೊಂಡಿದ್ದರೆ ಬಿಎಸ್‌ಪಿ- ಎಸ್‌ಡಿಪಿಐ ಒಪ್ಪಂದವಿದೆ ಎಂದು ಅಖಂಡ ಅವರು ನಮ್ಮ ಬಳಿ ಬರುತ್ತಿರಲಿಲ್ಲ. ಪ್ರೆಸ್‌ಮೀಟ್ ಮಾಡಲೂ ಆಗಲಿಲ್ಲ. ಎರಡು ಪಕ್ಷಗಳ ನಡುವೆ ಗ್ಯಾಪ್‌ ಆದದ್ದರಿಂದ ಈ ಸಮಸ್ಯೆಯಾಗಿದೆ. ಎರಡೂ ಕಡೆಯಿಂದಲೂ ತಪ್ಪುಗಳಾದವು” ಎಂದು ಸ್ಪಷ್ಟನೆ ನೀಡಿದರು.

“ಎಸ್‌ಡಿಪಿಐನವರು 19 ಕಡೆ ಕ್ಯಾಂಡಿಡೇಟ್ ಹಾಕಿದ್ದಾರೆ. ಉಳಿದ ಕಡೆ ಸೌದಾರ್ಹಯುತವಾಗಿ ಫೈಟ್ ನಡೆಯುತ್ತಿದೆ. ಒಟ್ಟು ಹನ್ನೊಂದು ಕಡೆ ಎಸ್‌ಡಿಪಿಐ- ಬಿಎಸ್‌ಪಿ ಪರಸ್ಪರ ಸ್ಪರ್ಧಿಸಿವೆ. ಅದರಲ್ಲಿ ಪುಲಿಕೇಶಿನಗರವೂ ಒಂದು. ಮೈಸೂರು, ಚಾಮರಾಜನಗರಕ್ಕೆ ಮಾತ್ರ ಒಪ್ಪಂದವನ್ನು ಸೀಮಿತಗೊಳಿಸಿಕೊಂಡು ಸೌಹಾರ್ದಯುತವಾಗಿ ಚುನಾವಣೆ ಎದುರಿಸುವಂತಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿರಿ: ಕೊಳ್ಳೇಗಾಲ: ನಾಮಪತ್ರ ಹಿಂಪಡೆದ ಬಿಎಸ್‌ಪಿ ಅಭ್ಯರ್ಥಿ, ಕಾಂಗ್ರೆಸ್‌ಗೆ ಬೆಂಬಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...