Homeಮುಖಪುಟದಕ್ಷಿಣ ದೆಹಲಿ: ಶೋ ರೂಂನಲ್ಲಿ ಭಾರಿ ಬೆಂಕಿ ಅವಘಡ

ದಕ್ಷಿಣ ದೆಹಲಿ: ಶೋ ರೂಂನಲ್ಲಿ ಭಾರಿ ಬೆಂಕಿ ಅವಘಡ

- Advertisement -
- Advertisement -

ದಕ್ಷಿಣ ದೆಹಲಿಯ ಲಜಪತ್ ನಗರದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ. ಸೆಂಟ್ರಲ್ ಮಾರ್ಕೆಟ್‌ನ ಶೋ ರೂಂನಿಂದ ಬೆಂಕಿ ಭುಗಿಲೆದ್ದಿದ್ದು, ಕನಿಷ್ಠ 30 ಅಗ್ನಿಶಾಮಕ ದಳದ ವಾಹನಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥ ಅತುಲ್ ಗರ್ಗ್ ತಿಳಿಸಿದ್ದಾರೆ.

ಬೆಂಕಿಯು ಕಟ್ಟಡವನ್ನು ಆವರಿಸಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೆ ಹರಿದಾಡುತ್ತಿದೆ.

ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಏಳು ವರ್ಷ; ರಾಜ್ಯಗಳ ಮೇಲೆ ಸವಾರಿ ದೇಶದ ಸಮಗ್ರತೆಯ ಜತೆ ಚೆಲ್ಲಾಟ: ಎ ನಾರಾಯಣ

ಬೆಳಿಗ್ಗೆ 10.20 ರ ಸುಮಾರಿಗೆ ಸೆಂಟ್ರಲ್ ಮಾರ್ಕೆಟ್‌ನ ಐ-ಬ್ಲಾಕ್‌ನಿಂದ ಬೆಂಕಿ ಅನಾಹುತದ ಬಗ್ಗೆ ಕರೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ತಕ್ಷಣವೆ 16 ಅಗ್ನಿಶಾಮಕ ವಾಹನಗಳನ್ನು ಮತ್ತು ಆಂಬುಲೆನ್ಸ್‌ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೆಂಕಿಯನ್ನು ನಂದಿಸಲು 70 ಕ್ಕೂ ಹೆಚ್ಚು ಅಗ್ನಿಶಾಮಕ ದಳದವರನ್ನು ಸ್ಥಳದಲ್ಲಿಯೇ ನಿಯೋಜಿಸಲಾಗಿದ್ದು, ಇದುವರೆಗೂ ಯಾವುದೆ ಸಾವುನೋವುಗಳು ವರದಿಯಾಗಿಲ್ಲ ಎಂದು ಅತುಲ್ ಗರ್ಗ್ ತಿಳಿಸಿದ್ದಾರೆ.

ಶೋ ರೂಂ ಒಳಗೆ ಯಾರಾದರೂ ಇದ್ದಾರೆಯೆ ಎಂದು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬಡಜನರ ಕೈಗೆ ನೇರ ನಗದು ನೀಡುವುದರಿಂದ ಮಾತ್ರ ಕುಸಿದಿರುವ ಆರ್ಥಿಕತೆ ಮೇಲೆತ್ತಲು ಸಾಧ್ಯ: ಆದರೆ ಸರ್ಕಾರಗಳು ಮಾಡುತ್ತಿರುವುದು ಏನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತಮಿಳುನಾಡು: ‘ಜಾತಿ ದೌರ್ಜನ್ಯ ಎಸಗಿದ ಸವರ್ಣೀಯರನ್ನು ಸರ್ಕಾರ ರಕ್ಷಿಸುತ್ತಿದೆ..’ ಎಂದು ಚುನಾವಣೆ ಬಹಿಷ್ಕರಿಸಿದ ದಲಿತ...

0
ತಾವು ಕುಡಿಯುವ ನೀರನ್ನು ಮಲದಿಂದ ಕಲುಷಿತಗೊಳಿಸಿದ ಅಪರಾಧಿಗಳ ವಿರುದ್ಧ ತಮಿಳುನಾಡು ಸರ್ಕಾರ ತೋರಿದ ನಿಷ್ಕ್ರಿಯತೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪುದುಕೊಟ್ಟೈನ ವೆಂಗವಯಲ್ ಗ್ರಾಮದ ದಲಿತ ನಿವಾಸಿಗಳು, ಇಂದು ನಡೆದ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ...