Homeಕರೋನಾ ತಲ್ಲಣಬಡಜನರ ಕೈಗೆ ನೇರ ನಗದು ನೀಡುವುದರಿಂದ ಮಾತ್ರ ಕುಸಿದಿರುವ ಆರ್ಥಿಕತೆ ಮೇಲೆತ್ತಲು ಸಾಧ್ಯ: ಆದರೆ ಸರ್ಕಾರಗಳು...

ಬಡಜನರ ಕೈಗೆ ನೇರ ನಗದು ನೀಡುವುದರಿಂದ ಮಾತ್ರ ಕುಸಿದಿರುವ ಆರ್ಥಿಕತೆ ಮೇಲೆತ್ತಲು ಸಾಧ್ಯ: ಆದರೆ ಸರ್ಕಾರಗಳು ಮಾಡುತ್ತಿರುವುದೇನು?

- Advertisement -
- Advertisement -

‘ಈಗ ಬಡತನ ರೇಖೆಗಿಂತ ಕೆಳಗೆ ಹೊಸದಾಗಿ ಸೇರಿರುವ ಜನರು ವಾಸ್ತವವಾಗಿ ಸಾಂಕ್ರಾಮಿಕಕ್ಕೆ ಮೊದಲು ಬಡತನ ರೇಖೆಗಿಂತ ಮೇಲಿದ್ದ ಜನರು. ಅವರು ಸಾಮಾನ್ಯ ಸ್ಥಿತಿಗೆ ಬರಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಎನ್‍ಡಿಟಿವಿಗೆ ಗುರುವಾರ ನೀಡಿದ ಸಂದರ್ಶನದಲ್ಲಿ ಅವರು, “ಕೌಶಲ್ಯರಹಿತ ಕಾರ್ಮಿಕರು ಕೆಲಸ ಮಾಡುವ ಹೋಟೆಲ್‌ಗಳು, ಉತ್ಪಾದನೆ ಮತ್ತು ನಿರ್ಮಾಣ ವಲಯ ತ್ವರಿತವಾಗಿ ಪುನರುಜ್ಜೀವನಗೊಂಡರೆ, ಪರಿಸ್ಥಿತಿ ಸುಧಾರಿಸಬಹುದು” ಎಂದಿದ್ದಾರೆ.

ದೇಶದಲ್ಲಿ ಹಲವಾರು ಪ್ರಗತಿಪರ ಸಂಘಟನೆಗಳು-ನಮ್ಮ ರಾಜ್ಯದ ಕರ್ನಾಟಕ ಜನಶಕ್ತಿ ಸಂಘಟನೆಯೂ ಸೇರಿ- ಇದೇ ರೀತಿ ಆಗ್ರಹಿಸುತ್ತ ಬಂದಿವೆ. ಸರ್ಕಾರಗಳ ಕಿವಿಗಳಿಗೆ ಇದು ತಲುಪುತ್ತಿಲ್ಲ ಅಥವಾ ತಲುಪಿದರೂ ಅವು ತಮ್ಮದೇ ಸ್ವ ಹಿತಾಸಕ್ತಿಯ ಕಾರಣಕ್ಕೆ ಇದನ್ನು ಕೇಳಿಸಿ ಕೊಳ್ಳುತ್ತಿಲ್ಲ ಎಂಬುದು ಕಳೆದ ವರ್ಷದಿಂದ ಸಾಬೀತಾಗುತ್ತಲೇ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸಿದ ಆರ್ಥಿಕ ಪ್ಯಾಕೇಜ್‍ಗಳು ಬಡವರನ್ನು ಭಾಗಶಃ ತಲುಪಿವೆ ಅಷ್ಟೇ.

ಸಾಂಕ್ರಾಮಿಕ ರೋಗದಿಂದಾಗಿ ಬಡತನಕ್ಕೆ ಇಳಿದ ಜನರಿಗೆ ಸಹಾಯ ಮಾಡಲು ನರೇಗಾ ಯೋಜನೆಯಡಿ ಸರ್ಕಾರ ದೊಡ್ಡ ಪ್ರಮಾಣದಲ್ಲಿ ನೇರ ಹಣ ಪಾವತಿ ಮಾಡಬೇಕೆಂದು ಹೇಳಿರುವ ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

ದೊಡ್ಡ ಪ್ರಮಾಣದ ನೇರ ನಗದು ವರ್ಗಾವಣೆ ಬಗ್ಗೆ ಸರ್ಕಾರ ಆಸಕ್ತಿ ಹೊಂದಿಲ್ಲ ಎಂಬುದನ್ನು ಅದು ಈಗಾಗಲೇ ಸೂಚಿಸಿದೆ, ಜನರು ಹಣವನ್ನು ಬ್ಯಾಂಕ್ ಖಾತೆಗಳಲ್ಲಿ ಮಾತ್ರ ಇಡುತ್ತಾರೆ ಮತ್ತು ಅದನ್ನು ಖರ್ಚು ಮಾಡುವುದಿಲ್ಲ ಎಂದು ಸರ್ಕಾರ ಭಾವಿಸಿದೆ ಎಂದು ಟೀಕಿಸಿದ್ದಾರೆ.

“ಈ ಸಮಯದಲ್ಲಿ ನಮಗೆ ನೇರ ನಗದು ವರ್ಗಾವಣೆ ಬೇಕು ಎಂದು ಹೇಳುವವರ ದೃಷ್ಟಿಕೋನವನ್ನು ನಾನು ಅನುಮೋದಿಸುತ್ತೇನೆ. ಆದರೆ ಎಲ್ಲಾ ನಗದು ವರ್ಗಾವಣೆಯು ಹೆಚ್ಚಿನ ಬ್ಯಾಂಕ್ ಠೇವಣಿಗಳಿಗೆ ಮಾತ್ರ ಕಾರಣವಾಗುತ್ತದೆ ಮತ್ತು ಹೆಚ್ಚಿನ ಬಳಕೆಯ ಖರ್ಚು ಸಂಭವಿಸುವುದಿಲ್ಲ. ಇದು ನಮಗೆ ಅಗತ್ಯವಿಲ್ಲ” ಎಂದು ನೀತಿ ಆಯೋಗ ಉಪಾಧ್ಯಕ್ಷ ರಾಜೀವ್ ಕುಮಾರ್ ಈ ವಾರದ ಆರಂಭದಲ್ಲಿ ಹೇಳಿದ್ದಾರೆ. ಅಂದರೆ ಇದರರ್ಥ ಸರ್ಕಾರಕ್ಕೆ ನೇರ ವರ್ಗಾವಣೆ ಮಾಡಲು ಮನಸ್ಸಿಲ್ಲ. ಅದು ಪ್ಯಾಕೇಜ್‍ಗಳ ಮೂಲಕ ಭ್ರಷ್ಟಾಚಾರವನ್ನು ವಿಕೇಂದ್ರಿಕರಣ ಮಾಡುತ್ತಿದೆ ಅಥವಾ ದೊಡ್ಡ ಅಂಕಿಸಂಖ್ಯೆ ತೋರಿಸಿ ಜನರನ್ನು ಮರಳು ಮಾಡುತ್ತಿದೆ ಅಲ್ಲವೇ? ಕಳೆದ ವರ್ಷದ ಪ್ಯಾಕೇಜ್‍ಗಳ ಪರಿಣಾಮಗಳು ಕಣ್ಣ ಮುಂದೆಯೇ ಇವೆಯಲ್ಲ?

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಚಿಂತಕ, ಸಾಮಾಜಿಕ ಹೋರಾಟಗಾರ ಬಂಜಗೆರೆ ಜಯಪ್ರಕಾಶ್‍, ‘ನರೇಗಾ ಕೆಲಸದ ದಿನಗಳನ್ನು ಹೆಚ್ಚಿಸುವುದು ಪರಿಣಾಮಕಾರಿ. ಆದರೆ ಇದು ರಾಜ್ಯದ ಬಹುಪಾಲು ಜನರನ್ನು ತಲುಪಲಾರದು. ಇಲ್ಲಿ ಟೇಲರ್‌ಗಳು, ಕ್ಷೌರಿಕರು, ಬಜ್ಜಿ-ಪಕೋಡಾ, ಸೊಪ್ಪು-ತರಕಾರಿ ಮಾರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ತಿಂಗಳಿಗೆ 5 ಸಾವಿರ ರೂ. ಹಾಕಿದರೆ ಸರ್ಕಾರಕ್ಕೇನೂ ಹೊರೆ ಆಗಲಾರದು. ಉದ್ಯಮಿಗಳ ಸಾವಿರಾರು ಕೋಟಿ ರೂ ಸಾಲವನ್ನು ಮನ್ನಾ ಮಾಡಿರುವಾಗ ಇದೇನೂ ದೊಡ್ಡ ಹೊರೆಯಲ್ಲ, ಬದಲಿಗೆ ಅದು ಸಾಂವಿಧಾನಿಕ ಬದ್ಧತೆ’ ಎಂದು ಅಭಿಪ್ರಾಯಪಟ್ಟರು.

ಬಡತನವನ್ನು ಕಡಿಮೆ ಮಾಡುವ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಅಭಿಜಿತ್ ಬ್ಯಾನರ್ಜಿ, ನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಅಡಿಯಲ್ಲಿ ವಾರ್ಷಿಕ ಕೆಲಸದ ದಿನಗಳನ್ನು 100 ದಿನಗಳಿಂದ 150 ದಿನಗಳವರೆಗೆ ಹೆಚ್ಚಿಸಲು ಸೂಚಿಸುತ್ತಾರೆ.

ದುರ್ಬಲ ಕುಟುಂಬಗಳಿಗೆ ನೇರ ನಗದು ಹಸ್ತಾಂತರಿಸುವ ಬದಲು ಕಠಿಣವಾದ ವ್ಯವಹಾರಗಳಿಗೆ ಸಾಲವನ್ನು ಕೇಂದ್ರೀಕರಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಬಡ ಗ್ರಾಮೀಣ ಪ್ರದೇಶಗಳನ್ನು ಆವರಿಸಿರುವ ವಿನಾಶಕಾರಿ ಎರಡನೇ ಅಲೆಯು ಹೆಚ್ಚಿನ ಪ್ರಮಾಣದ ಸಾವುಗಳ ಮೂಲಕ ಹೊಸ ಅನಾಹುತಕ್ಕೆ ಕಾರಣವಾಗಬಹುದು ಎಂಬ ಆತಂಕಗಳಿವೆ.

‘ಎಲ್ಲಿಯವರೆಗೆ ಗ್ರಾಹಕರು ಹೊರಹೋಗಲು ಮತ್ತು ಸಂವಹನ ನಡೆಸಲು ಭಯ ಪಡುತ್ತಾರೋ  ಅಲ್ಲಿವರೆಗೆ ನೀವು ಏನೇ ಮಾಡಿದರೂ ಹೆಚ್ಚಿನ ಬಳಕೆ, ಹೆಚ್ಚಿನ ಬೇಡಿಕೆ ಮತ್ತು ಹೆಚ್ಚಿನ ಆರ್ಥಿಕ ಚಟುವಟಿಕೆ ಅಸಾಧ್ಯ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳುತ್ತಾರೆ.

ಜನರನ್ನು ಮನೆಯಲ್ಲಿ ಲಾಕ್‍ ಮಾಡಿದರೂ ಕೂಡ ನಿಗದಿತ ಅನುಮತಿಯ ಅವಧಿಯಲ್ಲಿ ಹೊರ ಬಂದು ತಮಗೆ ತೀರಾ ಅಗತ್ಯ ವಸ್ತುಗಳನ್ನು ಖರೀದಿಸುತ್ತಾರೆ ಎಂಬ ಪರಿಜ್ಞಾನವಿಲ್ಲದೇ ನೀತಿ ಆಯೋಗದ ಉಪಾಧ್ಯಕ್ಷ  ರಾಜೀವ್ ಕುಮಾರ್ ಮಾತನಾಡುತ್ತಿದ್ದಾರೆ. ಅವರ ಒಟ್ಟೂ ಉದ್ದೇಶ ನರೇಗಾಕ್ಕೆ ಹೆಚ್ಚು ಹಣ ನೀಡುವುದನ್ನು ಮತ್ತು ಜನರಿಗೆ ನೇರ ನಗದು ವರ್ಗಾವಣೆ ಮಾಡುವುದನ್ನು ವಿರೋಧಿಸುವ ಧಾಟಿಯಲ್ಲಿಯೇ ಇದೆ.

ಈ ಬಗ್ಗೆ ನಾನುಗೌರಿ. ಕಾಂ ಗೆ ಪ್ರತಿಕ್ರಿಯೆ ನೀಡಿದ ಜನಶಕ್ತಿ ಸಂಘಟನೆಯ ಸಂಚಾಲಕಿ ಮಲ್ಲಿಗೆ ಸಿರಿಮನೆ, ‘ನೀತಿ ಆಯೋಗ ಎಂಬುದೇ ಬ್ರಾಹ್ಮಣಶಾಹಿ ಆಲೋಚನೆಯಲ್ಲಿ ಮುಳುಗಿದೆ. ಬೆವರಿನ ಬೆಲೆ ಗೊತ್ತಿಲ್ಲದ, ಉದ್ಯಮಿಗಳ ಆರಾಧನೆ ಮಾಡುವ ಜನರೇ ಅಲ್ಲಿ ತುಂಬಿದ್ದಾರೆ. ಅಭಿಜಿತ್ ಬ್ಯಾನರ್ಜಿ, ಅಮರ್ತ್ಯಾ ಸೇನ್‍, ರಘುರಾಮ ರಾಜನ್‍ ತರಹದವರ ಜನಪರ ಆರ್ಥಿಕ ನಿಲುವುಗಳನ್ನು ನಮ್ಮ ಜನಶಕ್ತಿಯೂ ಬೆಂಬಲಿಸುತ್ತದೆ. ಸರ್ಕಾರದ ಮಾನದಂಡಗಳ ಪ್ರಕಾರವೇ ಒಂದು ಕುಟುಂಬಕ್ಕೆ ಕನಿಷ್ಠ ಮಾಸಿಕ 18 ಸಾವಿರ ರೂ. ಬೇಕು. ಇವರು ಅಷ್ಟು ಕೊಡುವುದು ಬೇಕಿಲ್ಲ. ಕುಟುಂಬದಲ್ಲಿ ದುಡಿಯುವ ಒಬ್ಬರಿಗೆ ಕನಿಷ್ಠ 5 ಸಾವಿರ ರೂ. ಮಾಸಿಕ ನಗದು ನೀಡಲಿ. ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿ  ಕೋವಿಡ್‍ನಿಂದ ಮೃತನಾಗಿದ್ದರೆ ಆ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಕೂಡಲೇ ಒದಗಿಸಲಿ. ಎನ್‍ಪಿಎಗೆ (ವಸೂಲಾಗದ ಉದ್ಯಮಿಗಳ ಸಾಲ) ಹೋಲಿಸಿದರೆ ಇದೇನೂ ದೊಡ್ಡ ಮೊತ್ತವಲ್ಲ. ಇದನ್ನು ಮಾಡುವುದು ಸರ್ಕಾರಗಳ ಸಾಂವಿದಾನಿಕ ಬದ್ಧತೆ. ಸಾಮಾನ್ಯ ಜನರ ಕೈಗೆ ಬರುವ ನೇರ ನಗದು ಮರಳಿ ಮಾರುಕಟ್ಟೆಗೇ ಬರುತ್ತದೆ. ಇದರಿಂದ ಕುಸಿದ ಆರ್ಥಿಕತೆ ಚಿಗುರುತ್ತದೆ. ಎನ್‍ಪಿಎ ಗಿರಾಕಿಗಳು ದೇಶ ಬಿಟ್ಟು ಓಡಿ ಹೋಗಿ ಅಲ್ಲಿ ತಮ್ಮ ಅಕ್ರಮ ಸಂಪತ್ತನ್ನು ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಜನರ ಕೈಗೆ ನಗದು ನೀಡಿ ನೋಡಿ, ಅವರು ಅದನ್ನು ಇಲ್ಲೇ ಹಾಕುತ್ತಾರೆ, ನಮ್ಮ ಆರ್ಥಿಕತೆಯನ್ನು ಕೆಳಗಿನಿಂದ ಮೇಲಕ್ಕೆ ಎತ್ತುತ್ತಾರೆ’ ಎಂದು ವಿವರಿಸಿದರು.

‘ರಾಜ್ಯದಲ್ಲಿ 7 ಸಾವಿರ ಕೋಟಿ ರೂ. ಹಣವನ್ನು ಬಿಪಿಎಲ್‍ ಕುಟುಂಬಗಳಿಗೆ ನೇರ ವರ್ಗಾಯಿಸಬೇಕು. ಇದೇನೂ ದೊಡ್ಡ ಹೊರೆಯಾ? ಈಗಾಗಲೇ ಅನ್ನಭಾಗ್ಯ ಯೋಜನೆ ಇದೆಯಲ್ಲ, ಅದರಲ್ಲಿ ಕನಿಷ್ಠ 10 ಕೆ.ಜಿ. ಅಕ್ಕಿಯನ್ನಾದರೂ ಕೊಡಬೇಕು. ಇದೆಲ್ಲ ಸರ್ಕಾರದ ಪ್ರಾಥಮಿಕ ಕರ್ತವ್ಯ. ಅತಂತ್ರವಾದ ಕುಟುಂಬಗಳಿಗೆ ಕನಿಷ್ಠ 5 ಸಾವಿರ ರೂ ನೇರ ನಗದು ನೀಡಬೇಕು. ಆಗ ಅವರ ಖರೀದಿ ಶಕ್ತಿಯೂ ಹೆಚ್ಚಾಗುತ್ತದೆ, ಅದರಿಂದ ಒಟ್ಟೂ ಆರ್ಥಿಕತೆ ಬಲಗೊಳ್ಳುತ್ತದೆ’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಕೆ.ಎಲ್‍ ಅಶೋಕ್‍.

‘ಭಾರತದಂತಹ ಬಡ ದೇಶಗಳಿಗಿಂತ ಭಿನ್ನವಾಗಿ, ಸಾಂಕ್ರಾಮಿಕ ಪರಿಣಾಮಗಳನ್ನು ನಿವಾರಿಸಲು ಅಮೆರಿಕ, ಬ್ರಿಟನ್‍ ಮತ್ತು ಯುರೋಪಿಯನ್‍ ಒಕ್ಕೂಟದ  ಶ್ರೀಮಂತ ಸರ್ಕಾರಗಳು  ಕೂಡ ಬೃಹತ್ ಪ್ರಮಾಣದಲ್ಲಿ ಸಾಲ ಪಡೆದು, ಸಾಂಕ್ರಾಮಿಕದಿಂದ ನಿರುದ್ಯೋಗಿ ಆದವರಿಗೆ  ನಗದು ಪಾವತಿಸುತ್ತಿವೆ ಎಂದು ಬ್ಯಾನರ್ಜಿ ಹೇಳುತ್ತಾರೆ. ಸಾಂಕ್ರಾಮಿಕ ರೋಗದ ಆರಂಭದ ಮೊದಲಿಗಿಂತ ಈಗ ಜಾಗತಿಕವಾಗಿ ಸುಮಾರು 100 ಮಿಲಿಯನ್ ಜನರು ತೀವ್ರ ಬಡತನದಲ್ಲಿ ಬದುಕುತ್ತಿದ್ದಾರೆ ಎಂದು ಅವರು ಅಂದಾಜಿಸಿದ್ದಾರೆ.

ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಲಾಕ್‌ಡೌನ್ ಮೂಲಕ  ಆರ್ಥಿಕತೆಯನ್ನು ವಿನಾಶ  ಮಾಡುತ್ತಿವೆ. ಸದ್ಯ ಸಾಂಕ್ರಾಮಿಕ ಇನ್ನಷ್ಟು ಹೆಚ್ಚಿದೆ ಮತ್ತು ಸಾವಿನ ಸಂಖ್ಯೆ ಉಲ್ಬಣಗೊಂಡಿದೆ ಎನ್ನುವ ಬ್ಯಾನರ್ಜಿ, ಭಾರತದಲ್ಲಿ ಮೊದಲ ಲಾಕ್‌ಡೌನ್ ಕಾರಣಕ್ಕೆ ದೇಶದ ಜಿಡಿಪಿಯ ಕಾಲು ಭಾಗ ಕುಸಿದಿತ್ತು ಎನ್ನುತ್ತಾರೆ.

ತಜ್ಞರ ಮಾತುಗಳನ್ನೂ ಕೇಳದ, ತಳಮಟ್ಟದಲ್ಲಿ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತರ ಬೇಡಿಕೆಗಳನ್ನೂ ಪರಿಗಣಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕುಸಿದಿರುವ ಆರ್ಥಿಕತೆ ಯಾವ ರೀತಿ ಮೇಲೆತ್ತುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಲಕ್ಷದ್ವೀಪ: ಕೇಂದ್ರದಿಂದ ಜೈವಿಕ ಅಸ್ತ್ರ ಬಳಕೆ ಆರೋಪ, ನಿರ್ಮಾಪಕಿ ವಿರುದ್ಧ ದೇಶದ್ರೋಹ ಪ್ರಕರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...