Homeಕರ್ನಾಟಕಹೇ ಹಿಂದೂ ಎದ್ದೇಳು: ಪೋಸ್ಟ್‌ ಕಾರ್ಡ್ ಪೋಸ್ಟರ್‌ಗೆ ನಾನಾ ರೂಪ!

ಹೇ ಹಿಂದೂ ಎದ್ದೇಳು: ಪೋಸ್ಟ್‌ ಕಾರ್ಡ್ ಪೋಸ್ಟರ್‌ಗೆ ನಾನಾ ರೂಪ!

‘ಹೇ ಹಿಂದೂ ಎದ್ದೇಳು’ ಪೋಸ್ಟರ್‌ಗೆ ಬೇರೆ ಬೇರೆ ರೂಪಗಳನ್ನು ನೀಡಲಾಗಿದೆ. ‘ಹೇ ದಲಿತ ಎದ್ದೇಳು’, ‘ಹೇ ಆದಿಮ ಎದ್ದೇಳು’ ಅವತರಣಿಕೆಗಳು ವೈರಲ್‌ ಆಗುತ್ತಿವೆ.

- Advertisement -
- Advertisement -

‘ಭೂತಾರಾಧನೆ ಹಿಂದೂ ಸಂಸ್ಕೃತಿಯಲ್ಲ’ ಎಂದು ನಟ ಚೇತನ್‌ ಅಹಿಂಸಾ ಹೇಳಿಕೆ ನೀಡಿದ ಬಳಿಕ ಸುಳ್ಳು ಸುದ್ದಿಗಳಿಗೆ ಹೆಸರಾದ ಬಲಪಂಥೀಯ ಫೇಸ್‌ಬುಕ್‌ ಪೇಜ್‌ ‘ಪೋಸ್ಟ್‌ಕಾರ್ಡ್’ನಲ್ಲಿ ‘ಹೇ ಹಿಂದೂ ಎದ್ದೇಳು’ ಎಂಬ ಪೋಸ್ಟರ್‌ ಹಾಕಲಾಗಿದ್ದು, ಅದನ್ನು ನಾನಾ ರೂಪದಲ್ಲಿ ಜನರು ವ್ಯಂಗ್ಯ ಮಾಡಿದ್ದಾರೆ.

ಕಾಂತಾರ ಸಿನಿಮಾದ ಚಿತ್ರವನ್ನು ಈ ಪೋಸ್ಟರ್‌ನಲ್ಲಿ ಬಳಸಲಾಗಿದೆ. “ಹೇ ಹಿಂದೂ, ಎದ್ದೇಳು” ಎಂದು ದೊಡ್ಡ ಶೀರ್ಷಿಕೆಯನ್ನು ನೀಡಿ, “ನಿನ್ನತನಕ್ಕೆ ಧಕ್ಕೆಯಾದಾಗ ನೀ ಸುಮ್ಮನಿದ್ದರೆ ನಿನ್ನ ಅಂತ್ಯಕ್ಕೆ ನೀನೇ ಕಾರಣವಾದಂತೆ” ಎಂದು ಬರೆಯಲಾಗಿದೆ.

May be an image of one or more people and text that says "ಹೇ ಹಿಂದೂ, ಎದ್ದೇಳು POST CARD CARD ನಿನ್ನತನಕ್ಕೆ ಧಕ್ಕೆಯಾದಾಗ ನೀ ಸುಮ್ಮನಿದ್ದರೆ ನಿನ್ನ ಅಂತ್ಯಕ್ಕೆ ನೀನೇ ಕಾರಣವಾದಂತೆ"

ಹಿಂದೂ- ಮುಸ್ಲಿಂ ಸಮುದಾಯಗಳ ನಡುವೆ ಒಡಕುಗಳನ್ನು ಮೂಡಿಸಲು ಈ ರೀತಿಯ ಪೋಸ್ಟ್‌ಗಳನ್ನು ‘ಪೋಸ್ಟ್‌ಕಾರ್ಡ್’ ನಿರಂತರ ಮಾಡುತ್ತಿರುವುದನ್ನು ಗಮನಿಸುತ್ತಾ ಬಂದಿರುವ ಜನರು, ‘ಹೇ ಹಿಂದೂ ಎದ್ದೇಳು’ ಎಂಬ ಟ್ಯಾಗ್‌ಲೈನ್‌ನಲ್ಲಿಯೇ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ‘ಹೇ ಹಿಂದೂ ಎದ್ದೇಳು’ ಪೋಸ್ಟರ್‌ನ ವಿವಿಧ ಅವತರಣಿಕೆಗಳು ವೈರಲ್ ಆಗುತ್ತಿವೆ.

“ಹೇ ಹಿಂದೂ, ಎದ್ದೇಳು, ಪೆಟ್ರೋಲ್ ರೇಟು 105 ಆಗಿದೆ. ಗ್ಯಾಸ್ ಸಿಲಿಂಡರ್ 1100 ಆಗಿದೆ. ಡಾಲರ್ ಬೆಲೆ 83 ಆಗಿದೆ. ಎಲ್ಲಾ ಬೆಲೆ ಜಾಸ್ತಿ ಆಗ್ತಿದೆ. ಏಳು ಎದ್ದೇಳು, ಚುನಾವಣೆ ಬಂತು ಬಿಜೆಪಿಯನ್ನು ಸೋಲಿಸು” ಎಂಬ ಪೋಸ್ಟರ್‌ ಹರಿದಾಡಿದೆ.

ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ ಮತ್ತಷ್ಟು ಕುಸಿದಿರುವುದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದು ಸೇರಿದಂತೆ ಮೊದಲಾದ ಸಂಗತಿಗಳನ್ನು ಹೇ ಹಿಂದೂ ಎದ್ದೇಳು ಪೋಸ್ಟರ್‌ಗಳ ಮೂಲಕ ಮುನ್ನೆಲೆಗೆ ತರಲಾಗಿದೆ.

May be an image of one or more people and text that says "ಹೇ ಹಿಂದೂ ಎದ್ದೇಳು! POST CARD ಮೋದಿ ಆಡಳಿತದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 83 ಆಗಿದೆ, ನಿರುದ್ಯೋಗ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ, ಸಾರ್ವಜನಿಕ ಕಂಪನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ, ಹೀಗೇ ಬಿಟ್ಟರೆ ಭಾರತದ ಜನರು ಬೀದಿ ಪಾಲಾಗುತ್ತಾರೆ"May be an image of one or more people and text that says "ಹೇ ಹಿಂದೂ ಎದ್ದೇಳು! POST CARD ಪೆಟ್ರೋಲ್-ಡೀಸೆಲ್, ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿದೆ... ನೀ ಸುಮ್ಮನೆ ಇದ್ದರೆ ನಿಮ್ಮನು ಮೋದಿ & ಗ್ಯಾಂಗ್ ಧರ್ಮದ ಹೆಸರಲ್ಲಿ ತಿರ್ಪೆ ಎತ್ತುವ ಹಾಗೆ ಮಾಡುತ್ತಾರೆ."May be an image of one or more people and text that says "ಹೇ ಹಿಂದೂ ಎದ್ದೇಳು! POST CARD ಭಾರತದ ಜಾಗತಿಕ ಹಸಿವಿನ ಸೂಚ್ಯಂಕ ಪಾಕ್, ಬಾಂಗ್ಲಾದೇಶ, ಶ್ರೀಲಂಕಾಕ್ಕಿಂತ ಕಳಪೆಯಾಗಿ 107ನೇ ಸ್ಥಾನಕ್ಕೆಕುಸಿದಿದೆ, ಹೀಗೇ ಬಿಟ್ಟರೆ ಮೋದಿ ಮತ್ತವರ ಗ್ಯಾಂಗ್ ಭಾರತದ ಹೆಸರನ್ನು ವಿಶ್ವ ಭೂಪಟದಿಂದ ಕಿತ್ತು ಹಾಕುತ್ತದೆ"‘ಹಿಂದೂ ನಾವೆಲ್ಲ ಒಂದು’ ಎನ್ನುವ ಸಂಘಪರಿವಾರ ದಲಿತರ ಮೇಲೆ ದೌರ್ಜನ್ಯವಾದಾಗ ಮೌನ ತಾಳಿರುವುದನ್ನು ಈ ಅಭಿಯಾನದಲ್ಲಿ ಪ್ರಶ್ನಿಸಲಾಗಿದೆ.

“ಹೇ ಹಿಂದೂ ಎದ್ದೇಳು, ರಾಮನಗರದಲ್ಲಿ ಒಬ್ಬ ದಲಿತ ಬಾಲಕಿಯ ಮೇಲೆ ನಿವೃತ್ತ ಪೊಲೀಸ್ ಪೇದೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಹೇ ಹಿಂದೂ ಎದ್ದೇಳು, ಸ್ವಾಮೀಜಿಯೊಬ್ಬರ ಮೇಲೆ ಅತ್ಯಾಚಾರದ ಆರೋಪ ಬಂದಿದೆ, ಧರ್ಮಸ್ಥಳದ ಬಳಿ ಬಜರಂಗದಳದ ಮುಖಂಡನೊಬ್ಬ ದಲಿತ ವ್ಯಕ್ತಿಯನ್ನು ಹೊಡೆದು ಕೊಂದಿದ್ದಾನೆ. ಪೆದ್ದನಹಳ್ಳಿಯ ಇಬ್ಬರು ದಲಿತರ ಹೆಣ ರಾತ್ರೋರಾತ್ರಿ ಬಿದ್ದಿವೆ. ಹೇ ಹಿಂದೂ ಎದ್ದೇಳು, ಶಿಕ್ಷಕನೇ ದಲಿತ ಬಾಲಕನನ್ನು ಹೊಡೆದು ಕೊಂದಿದ್ದಾನೆ. ಹೇ ಹಿಂದೂ ಎದ್ದೇಳು, ಗುಬ್ಬಿಯಲ್ಲಿ ದೇವಸ್ಥಾನಕ್ಕೆ ಒಳಹೋದ ದಲಿತನಿಗೆ ಅರ್ಚಕ ಜಾತಿ ನಿಂದನೆ ಮಾಡಿದ್ದಾನೆ. ಹೇ ಹಿಂದೂ ಎದ್ದೇಳು, ದೇವರ ಕೋಲು ಮುಟ್ಟಿದ್ದಕ್ಕೆ ದಲಿತ ಕುಟುಂಬಕ್ಕೆ ಛೀಮಾರಿ ಹಾಕಿದ್ದಾರೆ. ಹೇ ಹಿಂದೂ ಎದ್ದೇಳು, ಚಿಕ್ಕಮಗಳೂರಲ್ಲಿ ಗರ್ಭಿಣಿ ದಲಿತ ಮಹಿಳೆಗೆ ಹೊಡೆದು ಜಗತ್ತನೇ ನೋಡದ ಮಗುವನ್ನೇ ಕೊಲ್ಲಲಾಗಿದೆ” ಎಂಬ ಸಾಲುಗಳು ವೈರಲ್ ಆಗುತ್ತಿವೆ.

“ಹೇ, ಹಿಂದೂ ಎದ್ದೇಳು. ಚುನಾವಣೆ ಹತ್ತಿರವಾಗುತ್ತಿದೆ” ಎಂದು ಟೀಕಿಸಲಾಗಿದೆ.

ಲೇಖಕ ರುದ್ರ ಪುನೀತ್‌ ಆರ್‌.ಸಿ. ಅವರು ಬರೆದಿರುವ ಪೋಸ್ಟ್‌ಅನ್ನು ಅನೇಕರು ಹಂಚಿಕೊಳ್ಳುತ್ತಿದ್ದಾರೆ. “ಏಳೋದೇನೋ ಏಳೋಣ, ಆದ್ರೆ ಯಾರ್ ಎಳ್ಬೇಕು ಅನ್ನೋದನ್ನ ಸ್ಪೆಸಿಫಿಕ್ ಆಗಿ ಹೇಳ್ಬೇಕಲ್ವಾ?” ಎಂದು ಪ್ರಶ್ನಿಸಿರುವ ಅವರು, “ಹೇ ಹಿಂದೂ ಎದ್ದೇಳು ಅಂದ್ರೆ, ಬ್ರಾಹ್ಮಣರು ಎಳ್ಬೇಕಾ ? ಕ್ಷತ್ರಿಯರು ಎಳ್ಬೇಕಾ? ವೈಶ್ಯರು ಎಳ್ಬೇಕಾ? ಲಿಂಗಾಯತರು? ಒಕ್ಕಲಿಗರು? ಗಾಣಿಗರು? ಕುಂಚಿಟಿಗರು? ಭಂಟರು? ಮೊಗವೀರರು? ಪೂಜಾರರು ಮಾದಿಗರು? ಹೊಲೆಯರು? ದಕ್ಕಲಿಗರು? ಲಂಬಾಣಿಗರು? ಭೋವಿಗಳು? ಕೊರಚ ಕೊರಮರು? ಅಲೆಮಾರಿಗಳು ಆದಿವಾಸಿಗಳು? ಹಂದಿಜೋಗಿ, ಮಾಂಗ್ ಗಾರುಡಿಗಳು? ಯಾರು ಏಳಬೇಕು” ಎಂದು ಕೇಳಿದ್ದಾರೆ.

“ನಾನು ಹಿಂದೂನೇ, ಎಲೆಕ್ಷನ್ ಬಂದಾಗ, ಯಾತ್ರೆ ಮೆರವಣಿಗೆ ರ್‍ಯಾಲಿ ನಡೆದಾಗ ಮಾತ್ರ. ಬಾಕಿ ಸಮಯದಲ್ಲಿ ನನ್ನನ್ನು ಒಂದು ಜಾತಿಗೆ ಕಟ್ಟಿಹಾಕಿ ಶೋಷಣೆ ಮಾಡ್ತಾರೆ. ನಾನೂ ಹಿಂದೂ ಅಂತೆ- ಆದರೆ ನಾನು ನನ್ನ ಮದುವೆಯಲ್ಲಿ ಕುದುರೆ ಏರಿದರೆ ನನ್ನನ್ನು ಹೊಡೆದು ಕೊಲ್ಲುತ್ತಾರೆ. ನಾನು ಹಿಂದೂ ಅಂತೆ- ಆದರೆ ಉಡುಪಿಯ ಕೋಟಾ ಬಳಿ ನನ್ನ ಮದುವೆಯಲ್ಲಿ ಡಿಜೆ ಹಾಕಿದ್ದಕ್ಕೆ ನನ್ನನ್ನು ಮದುಮಗ ಅಂತಲೂ ನೋಡದೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿ ಬೆತ್ತಲೆ ನಿಲ್ಲಿಸುತ್ತಾರೆ. ನಾನು ಹಿಂದೂ ಅಂತೆ- ಕೆಎಎಸ್‌ ಪರೀಕ್ಷೆ ಬರೆದು ಬಂದು ನನ್ನ ಹಳ್ಳಿಗೆ ಬಸ್ ಸಿಗಲಿಲ್ಲವೆಂದು ಹತ್ತಿರವಿದ್ದ ದೇವಸ್ಥಾನವೊಂದರಲ್ಲಿ ಮಲಗಿದ್ದಕ್ಕೆ ನನ್ನನ್ನ ಕತ್ತೆಮೇಲೆ ಮೆರವಣಿಗೆ ಮಾಡುತ್ತಾರೆ. ನಾನು ಹಿಂದೂ ಅಂತೆ- ಆದರೆ ನನ್ನ ತಂಗಿ ದಾನಮ್ಮನ ಅತ್ಯಾಚಾರವಾದಾಗ ನಮ್ಮ ನ್ಯಾಯಕ್ಕಾಗಿ ಯಾರೂ ಬರಲಿಲ್ಲ. ನಾನು ಹಿಂದೂ ಅಂತೆ- ನನ್ನ ಕೇರಿಗಳು, ತಾಂಡಾಗಳು, ಓಣಿಗಳು, ಹಟ್ಟಿಗಳು, ಡೇರೆಗಳು ಈಗಲೂ ಊರಾಚೆ ಇವೆ”- ಹೀಗೆ ಹಲವಾರು ನೋವುಗಳನ್ನು ಪುನೀತ್‌ ವ್ಯಕ್ತಪಡಿಸಿದ್ದಾರೆ.

‘ಹೇ ಹಿಂದೂ ಎದ್ದೇಳು’ ರೀತಿಯಲ್ಲಿ ‘ಹೇ ದಲಿತ ಎದ್ದೇಳು’ ಅವತರಣಿಕೆಯನ್ನು ‘ನಾನೊಬ್ಬ ದಲಿತ’ ಪೇಜ್‌ ಪೋಸ್ಟ್‌ ಮಾಡಿದೆ. ನೂರಾರು ಜನರು ಈ ಪೋಸ್ಟರ್‌ಗಳನ್ನು ಶೇರ್‌ ಮಾಡುತ್ತಿದ್ದಾರೆ.

May be an image of one or more people and text that says "ಹೇ ದಲಿತ ಎದ್ದೇಳು ಹೇ ದಲಿತ ಎದ್ದೇಳು ಶಿಕ್ಷಕನೇ ದಲಿತ ಬಾಲಕನನ್ನು ಹೊಡೆದು ಕೊಂದಿದ್ದಾನೆ ಯೂಪಿಯಲ್ಲಿ..."

May be an image of one or more people and text that says "ಹೇ ದಲಿತ ಎದ್ದೇಳು ಹೇ ದಲಿತ ಎದ್ದೇಳು... ರಾಮನಗರದಲ್ಲಿ ಒಬ್ಬ ದಲಿತ ಬಾಲಕಿಯ ಮೇಲೆ ನಿವೃತ್ತ ಪೊಲೀಸ್ ಪೇದೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ..."

May be an image of one or more people and text that says "ಹೇ ದಲಿತ ಎದ್ದೇಳು ಹೇ ದಲಿತ ಎದ್ದೇಳು... ಧರ್ಮಸ್ಥಳದ ಬಳಿ ಬಜರಂಗದಳದ ಮುಖಂಡನೊಬ್ಬ ದಲಿತ ವ್ಯಕ್ತಿಯನ್ನು ಹೊಡೆದು ಕೊಂದಿದ್ದಾನೆ."

May be an image of one or more people and text that says "ಹೇ ದಲಿತ ಎದ್ದೇಳು ಹೇ ದಲಿತ ದೇವರ ಎದ್ದೇಳು... ಕೋಲು ಮುಟ್ಟಿದ್ದಕ್ಕೆ ದಲಿತ ಕುಟುಂಬಕ್ಕೆ ಛೀಮಾರಿ ಹಾಕಿದ್ದರು..."

May be an image of one or more people and text that says "ಹೇ ದಲಿತ ಎದ್ದೇಳು ಹೇ ದಲಿತ ಎದ್ದೇಳು... ಗುಬ್ಬಿಯಲ್ಲಿ ದೇವಸ್ಥಾನಕ್ಕೆ ಒಳಹೋದ ದಲಿತರಿಗೆ ಅರ್ಚಕ ಜಾತಿ ನಿಂದನೆ ಮಾಡಿದ್ದಾನೆ...."

May be an image of one or more people and text that says "ಹೇ ದಲಿತ ಎದ್ದೇಳು ಹೇ ದಲಿತ ಎದ್ದೇಳು... ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿಯಲ್ಲಿ ಇಬ್ಬರು ದಲಿತ ಯುವಕರ ಹೆಣ ರಾತ್ರೋರಾತ್ರಿ ಬಿದ್ದವು..."

May be an image of one or more people and text that says "ಹೇ ದಲಿತ ಎದ್ದೇಳು ಹೇ ದಲಿತ ಎದ್ದೇಳು ಚಿಕ್ಕಮಗಳೂರಲ್ಲಿ ಗರ್ಭಿಣಿ ದಲಿತ ಮಹಿಳೆಗೆ ಹೊಡೆದು ಜಗತ್ತನೇ ನೋಡದ ಕಂದಮ್ಮನನ್ನು ಕೊಂದಿದ್ದಾನೆ"

‘ನಾವು ಹೊಲೆಯರು- ಚಲವಾದೇರು’ ಪೇಜ್‌ನಲ್ಲಿ ‘ಎದ್ದೇಳು ಆದಿಮ’ ಅವತರಣಿಕೆಯನ್ನು ಪೋಸ್ಟ್‌ ಮಾಡಲಾಗಿದೆ.

“ಆರಂಬ ಮಾಡಿದ‌ ನಮ್ಮನು ಅಡಿಯಾಳಾಗಿಸಿಕೊಂಡಿದ್ದಾರೆ. ನಮ್ಮ ಮುಟ್ಟಿ ಮೈಲಿಗೆಯೆಂದು ಕೈ ತೊಳೆದುಕೊಂಡಿದ್ದಾರೆ. ನೆಡೆದ ದಾರಿಗೆ ಪಂಚಗವ್ಯ ಚೆಲ್ಲಿ ಶುಚಿಗೊಳಿಸಿದ್ದಾರೆ. ನಾವೆಲ್ಲ ಒಂದೇ ಎಂದು ತಲೆಸವರಿ, ನಮ್ಮ ಮೇಲಾದ ದೌರ್ಜನ್ಯಗಳ ಕಂಡು ಕಾಣದಂತೆ ಸುಮ್ಮನಿದ್ದಾರೆ. ನಮ್ಮ ಹೊಲತಿ ಮಾದಿಗಿತ್ತಿ ಕೊರತಿ ಪಾಣರತಿ ಊರದೇವರ ಮಾರಿದೇವರ ಬಿಸಿಲವ್ವ ಬೆಳ್ಳಿಪಣದವ್ವರನ್ನೆಲ್ಲಾ ಲಲಿತಾ ಗಾಯಿತ್ರಿ ಶಾಖಾಂಬರಿ ಶ್ವೇತಾವರಾಹಿಯಾಗಿಸಿಕೊಂಡಿದ್ದಾರೆ. ನಮ್ಮ ವಾಸ್ತವ್ಯದ ತೆಂಕಣ ದಿಕ್ಕನ್ನು ಕೆಟ್ಟ ದಿಕ್ಕೆಂದಿದ್ದಾರೆ. ಹೊಲಯ ಮಾದಿಗ ಕೊರಗ ಪಾಣ ಪಂಬದ ನಲಿಕೆ ಪರವರ ಹೆಸರಿನರ್ಥಗಳಗೆಡಿಸಿ ಆ ಹೆಸರುಗನ್ನ ಬಳಸಲು ಕೀಳರಿಮೆಗೆ ಬೀಳುವಂತ ಸ್ಥಿತಿ ನಿರ್ಮಿಸಿದ್ದಾರೆ. ನಮ್ಮ ಶೋಷಣೆಯ ಇತಿಹಾಸದೊಳಗೆ ನಮ್ಮ ವೈಭವದ ಇತಿಹಾಸವನ್ನು ಕರಗಿಸಿ ರಾಜಕೀಯ ದಾಳವಾಗಿಸಿಕೊಂಡಿದ್ದಾರೆ. ನಮ್ಮ ಊರದ್ಯಾವ್ರು ಮಾರಿದ್ಯಾವ್ರು ಭೂತಗಳ ಕ್ಷುದ್ರದೈವಗಳೆಂದು ಜರಿದಿದ್ದಾರೆ. ನಮ್ಮ ಇತಿಹಾಸವ ತಿದ್ದಿ ವಿರೂಪಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ಏಳೋ ಆದಿಮ, ಎದ್ದೇಳು…” ಎಂದು ಪೋಸ್ಟ್‌ ಮಾಡಲಾಗಿದೆ.

ವಿವಿಧ ರೀತಿಯ ಪೋಸ್ಟರ್‌ಗಳು ವೈರಲ್ ಆಗುತ್ತಿದ್ದಂತೆ ಪೋಸ್ಟ್‌ ಕಾರ್ಡ್ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆ ಮತ್ತೊಂದು ಪೋಸ್ಟರ್‌ ಹಾಕಿ ಸ್ಪಷ್ಟನೆ ನೀಡಿದ್ದಾರೆ. “ಮನಸೋ ಇಚ್ಛೆ ಎಡಿಟ್‌ ಮಾಡಿ ಪೋಸ್ಟ್‌ ಮಾಡಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...