Homeಅಂಕಣಗಳುಬಹುಜನ ಭಾರತ; ಇಂಗ್ಲಿಷ್ ಜೊತೆ ಹಿಂದಿಯೂ ಆಡಳಿತ ಭಾಷೆಯೇ ವಿನಾ ರಾಷ್ಟ್ರಭಾಷೆ ಅಲ್ಲ

ಬಹುಜನ ಭಾರತ; ಇಂಗ್ಲಿಷ್ ಜೊತೆ ಹಿಂದಿಯೂ ಆಡಳಿತ ಭಾಷೆಯೇ ವಿನಾ ರಾಷ್ಟ್ರಭಾಷೆ ಅಲ್ಲ

- Advertisement -
- Advertisement -

ರಾಷ್ಟ್ರೀಯ ಭಾಷೆಯೆಂಬುದು ಒಂದು ನಿರ್ದಿಷ್ಟ ದೇಶದ ಸಾಂಸ್ಕೃತಿಕ ಪರಂಪರೆ ಮತ್ತು ಇತಿಹಾಸದ ಪ್ರತಿನಿಧಿ. ಆ ದೇಶದ ಎಲ್ಲ ನಾಗರಿಕರು ಬಲ್ಲ ಮತ್ತು ಆಡುವ ಭಾಷೆಯದು. ಆಡಳಿತ ಭಾಷೆಯೆಂಬುದು ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳ, ದಾಖಲೆ-ದಸ್ತಾವೇಜುಗಳು, ಸಂಸದೀಯ ಚರ್ಚೆಗಳು ಮತ್ತಿತರೆ ಅಧಿಕೃತ ಸೀಮಿತ ಉದ್ದೇಶಗಳಿಗೆ ಬಳಸಲಾಗುವ ಭಾಷೆ.

ಬ್ರಿಟಿಷ್ ಭಾರತದಲ್ಲಿ ಇಂಗ್ಲಿಷ್ ಆಡಳಿತ ಭಾಷೆಯಾಗಿತ್ತು. ಈ ಭಾಷೆಯನ್ನೇ ಮುಂದುವರಿಸಬೇಕೇ ಅಥವಾ ಆ ಜಾಗಕ್ಕೆ ಹಿಂದಿಯನ್ನು ತರಬೇಕೇ ಎಂದು ಸಂವಿಧಾನ ರಚನಾಸಭೆಯಲ್ಲಿ ಕಾವೇರಿದ ಚರ್ಚೆಗಳು ನಡೆದವು. ಕಡೆಗೆ ’ಮುನ್ಷೀ-ಅಯ್ಯಂಗಾರ್’ ರಾಜೀ ಸೂತ್ರವೊಂದನ್ನು ಅಳವಡಿಸಿಕೊಳ್ಳಲಾಯಿತು. ಈ ಸೂತ್ರದ ಪ್ರಕಾರ ಮೊದಲ 15 ವರ್ಷಗಳ ಕಾಲ ಇಂಗ್ಲಿಷನ್ನೇ ಆಡಳಿತ ಭಾಷೆಯಾಗಿ ಬಳಸಲಾಗುವುದು. ಆ ನಂತರ ಇಂಗ್ಲಿಷಿನ ಸ್ಥಾನವನ್ನು ಹಿಂದೀ ತುಂಬುವುದು. 15 ವರ್ಷಗಳ ನಂತರ ಇಂಗ್ಲಿಷಿನ ಮುಂದುವರಿಕೆಯ ಆಯ್ಕೆಯನ್ನೂ ಉಳಿಸಿಕೊಳ್ಳಲಾಗಿತ್ತು. 1965ರಲ್ಲಿ 15 ವರ್ಷಗಳು ತುಂಬಿದಾಗ ಇಂಗ್ಲಿಷಿನ ಜಾಗಕ್ಕೆ ಹಿಂದಿಯನ್ನು ತರುವ ಪ್ರಸ್ತಾವಗಳಿಗೆ ದಕ್ಷಿಣ ಭಾರತೀಯ ರಾಜ್ಯಗಳಿಂದ, ವಿಶೇಷವಾಗಿ ತಮಿಳುನಾಡಿನಿಂದ ತೀವ್ರ ವಿರೋಧ ವ್ಯಕ್ತವಾಯಿತು. ಹಿಂದಿಯೇತರ ರಾಜ್ಯಗಳು ಹಿಂದಿಯನ್ನು ಆಡಳಿತ ಭಾಷೆಯಾಗಿ ಒಪ್ಪಿಕೊಳ್ಳುವ ತನಕ ಹಿಂದಿಯೊಂದಿಗೆ ಇಂಗ್ಲಿಷನ್ನೂ ಉಳಿಸಿಕೊಳ್ಳುವುದಾಗಿ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಭರವಸೆ ನೀಡಿದರು. (ಆದರೆ ವಿಶೇಷವಾಗಿ ಬಿಜೆಪಿ ಸರ್ಕಾರ ಈ ಭರವಸೆಯನ್ನು ನಿರ್ಲಕ್ಷಿಸಿ ಹಿಂದಿ ಹೇರಿಕೆಯ ಸತತ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದೆ). ಹೀಗಾಗಿ ಕೇಂದ್ರ ಮತ್ತು ರಾಜ್ಯಗಳ ನಡುವಣ ಅಧಿಕೃತ ಭಾಷೆಗಳಾಗಿ ಇಂಗ್ಲಿಷ್ ಮತ್ತು ಹಿಂದಿ ಎರಡೂ ಮುಂದುವರಿದಿವೆ. ರಾಜ್ಯಗಳು ಹಿಂದಿ ಅಥವಾ ತಮ್ಮ ಭಾಷೆಗಳನ್ನು ಅಧಿಕೃತ ಭಾಷೆಗಳನ್ನಾಗಿ ಅಳವಡಿಸಿಕೊಳ್ಳುವ ಅವಕಾಶವನ್ನು ಸಂವಿಧಾನವು ನೀಡಿತು. ಸಂವಿಧಾನದ ಪ್ರಕಾರ ಹೈಕೋರ್ಟುಗಳು ಮತ್ತು ಸುಪ್ರೀಮ್ ಕೋರ್ಟಿನ ಕಲಾಪದ ಭಾಷೆ, ಕೇಂದ್ರ ಮತ್ತು ರಾಜ್ಯಗಳ ಶಾಸಕಾಂಗ ದಸ್ತಾವೇಜು ಹಾಗೂ ಎರಡು ರಾಜ್ಯಗಳ ನಡುವೆ ಕೇಂದ್ರ ಮತ್ತು ರಾಜ್ಯಗಳ ನಡುವಣ ಸಂಪರ್ಕ ಭಾಷೆ ಇಂಗ್ಲಿಷೇ ಆಗಿದೆ. ಸಂವಿಧಾನದ ಎಂಟನೆಯ ಷೆಡ್ಯೂಲು ಒಟ್ಟು 22 ಭಾಷೆಗಳನ್ನು ಗುರುತಿಸಿ ಪಟ್ಟಿ ಮಾಡಿದೆ. ಇವುಗಳ ಪೈಕಿ ಯಾವುದೇ ಭಾಷೆ ಅಥವಾ ಭಾಷೆಗಳನ್ನು ರಾಜ್ಯಗಳು ತಮ್ಮ ಆಡಳಿತ ಭಾಷೆಗಳನ್ನಾಗಿ ಆರಿಸಿಕೊಳ್ಳಬಹುದು.

ಎಂಟನೆಯ ಷೆಡ್ಯೂಲಿನಿಂದ ಹೊರಗಿಟ್ಟಿರುವ ದೊಡ್ಡ ಸಂಖ್ಯೆಯ ಮಾತೃಭಾಷೆಗಳನ್ನು ’ನುಡಿಗಟ್ಟುಗಳು’, ’ಬುಡಕಟ್ಟು ಭಾಷೆಗಳು’, ’ಸಣ್ಣ ಭಾಷೆ’ಗಳು ಎಂದು ಹೆಸರಿಟ್ಟು ಕರೆದು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಇಂಗ್ಲಿಷಿನ ಜೊತೆಗೆ ಹಿಂದಿ ಒಂದು ಆಡಳಿತ ಭಾಷೆಯೇ ವಿನಾ ರಾಷ್ಟ್ರಭಾಷೆ ಅಲ್ಲ. ರಾಷ್ಟ್ರಭಾಷೆಯ ಕುರಿತು ಸಂವಿಧಾನ ಮೌನವಹಿಸಿದೆ.

ಹಿಂದಿಯನ್ನು ರಾಷ್ಟ್ರಭಾಷೆ ಎಂದು ಘೋಷಿಸಿದರೆ ದೇಶದ ಎಲ್ಲ ನಾಗರಿಕರು ಆ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕಾಗುತ್ತದೆ. ಇಂತಹ ಸ್ಥಿತಿ ಉತ್ತರ ಭಾರತೀಯರಿಗೆ ಅನುಕೂಲದ್ದೂ, ದಕ್ಷಿಣದವರಿಗೆ ಪ್ರತಿಕೂಲದ್ದೂ ಆಗಿ ಪರಿಣಮಿಸಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹಿಂದಿ ಭಾಷೆಯೇ ರಾಷ್ಟ್ರಭಾಷೆ ಎಂದು ಹಿಂದಿ ಚಿತ್ರನಟ ಅಜಯ್ ದೇವಗನ್ ಅವರ ಆಧಾರರಹಿತ ಘೋಷಣೆಗೆ ತಕ್ಕ ಮಾರುತ್ತರ ನೀಡಿದ್ದಾರೆ ಕಿಚ್ಚ ಸುದೀಪ್. ಸಾಮಾಜಿಕ ಜಾಲತಾಣದಲ್ಲಿ ನಡೆದ ಈ ಚರ್ಚೆಗೆ ರಾಜಕಾರಣಿಗಳೂ ದನಿಗೂಡಿಸಿದ್ದಾರೆ.

’ಹಿಂದಿ ಭಾಷೆಯನ್ನು ಪ್ರೀತಿ ಮಾಡದವರು ವಿದೇಶೀಯರು. ಅವರು ಭಾರತವನ್ನು ಬಿಟ್ಟು ಇನ್ನೆಲ್ಲಿಗಾದರೂ ತೊಲಗಬೇಕು’ ಎಂದು ಉತ್ತರಪ್ರದೇಶದ ಯೋಗಿ ಆದಿತ್ಯನಾಥರ ಸಂಪುಟದ ಮಂತ್ರಿ ಸಂಜಯ ನಿಷಾದ್ ಅಪ್ಪಣೆ ಕೊಡಿಸಿದ್ದಾರೆ. ’ಭಾರತದಲ್ಲಿ ಇರಬೇಕಿದ್ದರೆ ಹಿಂದಿಯನ್ನು ಪ್ರೀತಿಸಬೇಕು. ಪ್ರಾದೇಶಿಕ ಭಾಷೆಗಳನ್ನು ನಾವು ಗೌರವಿಸುತ್ತೇವೆ. ಆದರೆ ಸಂವಿಧಾನವು ಈ ದೇಶವನ್ನು ಹಿಂದುಸ್ತಾನ ಎಂದು ಕರೆದಿದೆ. ಹಿಂದುಸ್ತಾನವು ಹಿಂದಿ ಭಾಷಿಕರದು. ಹಿಂದಿ ಮಾತನಾಡದವರಿಗೆ ಹಿಂದುಸ್ತಾನದಲ್ಲಿ ಜಾಗವಿಲ್ಲ’ ಎಂದು ಅವರು ಸಾರಿದ್ದಾರೆ. ಹಾಗಿದ್ದರೆ ಹಿಂದಿ ಬಾರದ ಮತ್ತು ಕಲಿಯಲು ಬಯಸದ ಬಹುತೇಕ ದಕ್ಷಿಣ ಭಾರತೀಯರನ್ನು ಎಲ್ಲಿಗೆ ತೊಲಗಿಸಬೇಕೆಂದು ನಿಷಾದ್ ಮತ್ತು ಅವರ ಈ ನಿಲುವನ್ನು ಬೆಂಬಲಿಸುವವರು ಗಂಭೀರವಾಗಿ ಆಲೋಚಿಸಬೇಕಿದೆ.

ಪಾಟ್ನಾ ಹೈಕೋರ್ಟ್ 2003ರಲ್ಲಿ ನೀಡಿದ ತೀರ್ಪೊಂದರಲ್ಲಿ (ಜಯಕಾಂತ ಮಿಶ್ರಾ ವರ್ಸಸ್ ಸ್ಟೇಟ್ ಅಫ್ ಬಿಹಾರ) ಹಿಂದಿ ಹೇರಿಕೆ ಕುರಿತು ಆಡಿರುವ ಈ ಮಾತುಗಳನ್ನು ಇಲ್ಲಿ ಉಲ್ಲೇಖಿಸಲೇಬೇಕಿದೆ- “ಉತ್ತರ ಭಾರತದ ಜನರು ನಾನಾ ನುಡಿಗಟ್ಟುಗಳಲ್ಲಿ ಆಡುವ ಪ್ರಮುಖ ಭಾಷೆಯನ್ನು ಆಧಾರವಾಗಿ ಇಟ್ಟುಕೊಂಡು ರಾಷ್ಟ್ರವಾದವನ್ನು ಸರ್ಕಾರ ನಡೆಸುವವರು ಮಾಡಿದರೂ ಅದು ದುರಭಿಮಾನವೇ. ತಪ್ಪನ್ನು ಯಾರು ಮಾಡಿದರೂ ಅದು ತಪ್ಪೇ. ಆಡಳಿತ ಭಾಷೆ, ರಾಷ್ಟ್ರಭಾಷೆ ಹಾಗೂ ಮಾತೃಭಾಷೆಯ ನಡುವಣ ವ್ಯತ್ಯಾಸಗಳನ್ನು ಬಿಹಾರ ಸರ್ಕಾರ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಈ ತಪ್ಪು ತಿಳಿವಳಿಕೆಯೇ ಮೊದಲ ಮೂಲಭೂತ ತಪ್ಪು. ಹಿಂದಿ ಭಾಷಿಕ ರಾಜ್ಯಗಳ ಆಡಳಿತಗಳು ಇತರೆ ಭಾಷೆಗಳನ್ನು ಎದುರಾಳಿಗಳೆಂದು ಬಗೆದಿರುವ ಸಂದರ್ಭಗಳಿವೆ. ಈ ಭಾವನೆ ವಾಸ್ತವ ಅಲ್ಲ. ಹಿಂದಿಯ ಯಜಮಾನಿಕೆಯನ್ನು ಸಮರ್ಥಿಸುತ್ತ, ಸಂವಿಧಾನವೇ ವಿಧಿಸಿರುವ ರಾಷ್ಟ್ರಭಾಷೆಯಿದು ಎಂದು ಆ ಭಾಷೆಯನ್ನು ಆಕ್ರಮಣಕಾರಿಯಾಗಿ ಹೇರುವುದು ಅತಿ ದೊಡ್ಡ ತಪ್ಪು. ಹಿಂದಿ ಮಾತನಾಡದಿರುವ ಪ್ರದೇಶಗಳಲ್ಲಿ ಒಡಕಿನ ದನಿಯನ್ನು ಹುಟ್ಟಿಸಲು ಕಾರಣವಾಗುವ ಅಂಶವಿದು. ಹಿಂದಿ ಮಾತನಾಡದಿರುವ ವ್ಯಕ್ತಿ ಕೂಡ ಹಿಂದಿ ಭಾಷಿಕ ರಾಜ್ಯಗಳ ಪೌರರಷ್ಟೇ ದೇಶಾಭಿಮಾನಿಯೂ, ರಾಷ್ಟ್ರವಾದಿಯೂ ಆಗಿರುತ್ತಾಳೆ ಅಥವಾ ಆಗಿರುತ್ತಾನೆ. ಅದನ್ನೊಂದು ಸಂಪರ್ಕ ಭಾಷೆಯಾಗಿಸಲು ಪ್ರೋತ್ಸಾಹಿಸಬೇಕು ಎಂಬುದು ಬೇರೆ ಮಾತು. ಆದರೆ ಅಂತಹ ಪ್ರಯತ್ನಗಳು ಇತರೆ ಭಾಷೆಗಳನ್ನು ಮಾತನಾಡುವ ಮತ್ತು ಆ ಭಾಷೆಗಳ ಕುರಿತು ಹೆಮ್ಮೆ ಹೊಂದಿರುವ ಭಾರತೀಯರ ಸಂವೇದನೆಗಳನ್ನು ಘಾಸಿಗೊಳಿಸುವ ಮಟ್ಟಕ್ಕೆ ಹೋಗಕೂಡದು”.

ಬಹುಭಾಷೆಗಳು, ಬಹುಮುಖೀ ಸಂಸ್ಕೃತಿಯ ದೇಶದಲ್ಲಿ ಒಂದು ನಿರ್ದಿಷ್ಟ ಭಾಷೆಯನ್ನು ರಾಷ್ಟ್ರೀಯತೆಯ ತಳಪಾಯವೆಂದು, ಸಾಂಸ್ಕೃತಿಕ ತಳಹದಿಯೆಂದೂ ಎತ್ತಿ ಕಟ್ಟಿ ಹೇರುವುದು ಜನತಾಂತ್ರಿಕ ಧೋರಣೆ ಅಲ್ಲ. ಭಾಷೆ ಎಂಬುದು ಕಡು ಅಸ್ಮಿತೆಯ ತೀವ್ರ ಭಾವನಾತ್ಮಕ ಸಂಗತಿ. ಪಾಕಿಸ್ತಾನದಿಂದ ಸಿಡಿದು ಬಾಂಗ್ಲಾ ದೇಶ ಎಂಬ ಹೊಸ ರಾಷ್ಟ್ರ ಹುಟ್ಟಿದ್ದಕ್ಕೆ ಉರ್ದು ಹೇರಿಕೆಯೇ ಮೂಲ ಕಾರಣ ಎಂಬ ಕಟು ಸತ್ಯವನ್ನು ಮರೆಯಕೂಡದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಬಹುಜನ ಭಾರತ; ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆ: ಬಲಿತ ಬಲಪಂಥ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...