Homeಕರ್ನಾಟಕಹಿಂಜಾವೇ ಕಾರ್ತಿಕ್ ಕಗ್ಗೊಲೆಯೂ ಸಂಘಿಗಳ ಮುಗಮ್ ಮೌನವೂ!!

ಹಿಂಜಾವೇ ಕಾರ್ತಿಕ್ ಕಗ್ಗೊಲೆಯೂ ಸಂಘಿಗಳ ಮುಗಮ್ ಮೌನವೂ!!

- Advertisement -
- Advertisement -

| ಶುದ್ದೋಧನ |

ಪುತ್ತೂರು ಹೇಳಿಕೇಳಿ ಸಂಘಪರಿವಾರದ ಆಡಂಬೋಲ. ಸಣ್ಣಪುಟ್ಟ ವೈಯಕ್ತಿಕ ತಂಟೆ-ತಕರಾರಿಗೂ ಕೋಮುದ್ವೇಷದ ಕಲರ್ ಬಳಿದು ಬಿಜೆಪಿಯ ಮಾತೃ “ಸಂಘ” ಧರ್ಮಕಾರಣದ ಮೈಲೇಜ್ ಪಡೆಯುತ್ತಲೇ ಇದೆ. ಮಾಯಾಭಟ್ ಎಂಬ ಹವ್ಯಕರ ಹೆಣ್ಣಿನ ಪ್ರೇಮ್ ಕಹಾನಿಗೆ ಮತೀಯ ವೈಷಮ್ಯದ ಆಯಾಮ ಕೊಟ್ಟು ಹಲವು ವರ್ಷ ಕೇಸರಿ ಬೆಳೆ ತೆಗೆದ ಪರಿವಾರಕ್ಕೆ ಸೌಮ್ಯಭಟ್ ಎಂಬ ಮತ್ತೊಂದು ಹಾರವ ಹುಡುಗಿಯನ್ನು ಸಾಬರ ವಿಕೃತ ಹುಡುಗನೊಬ್ಬ ಕೊಂದು ಹಾಕಿದ್ದು “ಅಗತ್ಯವಿದ್ದಾಗೆಲ್ಲ” ಪುತ್ತೂರಿಗೆ ಬೆಂಕಿಹಾಕಲು ನೆಪವಾಗಿತ್ತು.

ಇಂದು ಕೇಂದ್ರ ಮಂತ್ರಿಯಾಗಿರುವ ಸುಳ್ಯದ ಸದಾನಂದಗೌಡ ಅಂದು ಪುತ್ತೂರಿನಲ್ಲಿ ಶಾಸಕರಾದದ್ದಾಗಲಿ, ಸದ್ಯ ಕಾಂಗ್ರೆಸ್‍ನಲ್ಲಿರುವ ಶಕುಂತಲಾ ಶೆಟ್ಟಿ ಹಿಂದೆ ಬಿಜೆಪಿಯಿಂದ ಗೆದ್ದದ್ದಾಗಲಿ, ಮತ್ತೀಗ ಎಮ್ಮೆಲ್ಲೆ ದರ್ಬಾರು ನಡೆಸಿರುವ ಸಂಜೀವ ಮಠಂದೂರು ಎಂಬ ಸದಾನಂದ ಗೌಡರ ನೆಂಟ ವಿಧಾನಸೌಧದ ಭಾಗ್ಯ ಕಂಡಿರುವುದಾಗಲಿ ಎಲ್ಲವೂ ಸಂಘ ಸಾಹಸದಿಂದಲೇ!!

ಹಿಂದೂತ್ವದ ಹೆಸರಲ್ಲಿ ಬಿಲ್ಲವರು, ಬಂಟರಂತಹ ಶೂದ್ರ ಸಮುದಾಯದ ಬಿಸಿರಕ್ತದ ಯುವಕರ ತಲೆಕೆಡಿಸಿ ಅವರಿಂದ ಗಲಾಟೆ, ದೊಂಬಿ ಮಾಡಿಸುವ ಬಿಜೆಪಿಗರು ಹೆಣಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದರಲ್ಲಿ ನಿಸ್ಸೀಮರು. ಕಾಂಗ್ರೆಸ್ ಸರ್ಕಾರವಿದ್ದಾಗ ಪರೇಶ್ ಮೇಸ್ತನ ಸಾವನ್ನು ಮುಂದಿಟ್ಟುಕೊಂಡು `ಇಡೀ ಕರಾವಳಿಗೆ ಬೆಂಕಿಹಚ್ಚುತ್ತೇವೆ’ ಎಂಬಂತೆ ಮಾತನಾಡಿ, ಹಿಂದೂತ್ವ ಸಂಘಟನೆಗಳ ಕಾರ್ಯಕರ್ತರ ಮಾರಣಹೋಮ ನಡೆಯುತ್ತಿದೆ ಅಂತೆಲ್ಲ ಬೊಬ್ಬಿಟ್ಟು ಕೇಂದ್ರಕ್ಕೆ ದೂರು ಕೊಡುವಷ್ಟರಮಟ್ಟಿಗೆ ಬಿಜೆಪಿಗರು ಹಾರಾಡಿದ್ದು ನೆನಪಿರಬಹುದು. ಆದರೆ ಅದೇ ಕರಾವಳಿಯಲ್ಲಿ ಈಗ ಹಿಂದೂ ಜಾಗರಣ ವೇದಿಕೆಯ ಪುತ್ತೂರು ತಾಲ್ಲೂಕು ಪ್ರಧಾನ ಕಾರ್ಯದರ್ಶಿಯನ್ನೇ ಹತ್ಯೆ ಮಾಡಲಾಗಿದೆ. ಕಾರಣ ಏನೇ ಇರಲಿ, ತನಿಖೆಗೂ ಮೊದಲೇ ಬೀದಿಗಿಳಿದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಬೆಂಕಿ ಹಚ್ಚುತ್ತಿದ್ದ ಸಂಘ ಪರಿವಾರ ಇದೀಗ ತುಟಿ ಎರಡು ಮಾಡುತ್ತಿಲ್ಲ. ಯಾಕೆಂದರೆ, ಈಗ ರಾಜ್ಯದಲ್ಲಿ ಅಧಿಕಾರದಲ್ಲಿರೋದು ಅವರದೇ ಬಿಜೆಪಿ ಸರ್ಕಾರ! ಧರ್ಮವನ್ನು ನೆಪ ಮಾಡಿಕೊಳ್ಳುವ ಇವರ ರಾಜಕಾರಣದ ವರಸೆ ಇಂತದ್ದು!

ಪುತ್ತೂರಿನ ಕಾರ್ತಿಕ್ ಸುವರ್ಣ ಆ ದುರ್ದೈವಿ. ಹಿಂದೂ ಜಾಗರಣಾ ವೇದಿಕೆಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಆಗಿದ್ದವ. ಅವನನ್ನು ಪೊಲೀಸ್ ಠಾಣೆಯ ಬಳಿಯೇ ಸಾರ್ವಜನಿಕರ ಕಣ್ಣೆದುರೇ ಚಾಕುವಿನಿಂದ ಬರ್ಬರವಾಗಿ ಇರಿದು ಸಾಯಿಸಲಾಗಿದೆ. ಆದರೆ ಹಿಂದೂ ಸಂಘಟನೆಯ ಪ್ರಮುಖ ಮುಂದಾಳಿನ ಹತ್ಯೆಯಾದರೂ ಸಂಘ ಪರಿವಾರದ ರಣಧೀರರ ಅಡ್ರಸ್ಸೇ ಇಲ್ಲಾ! ಕೊಲೆಯಾದವನು ಅಲ್ಪಸಂಖ್ಯಾತ ಸಮುದಾಯದವನೆಂಬಂತೆ ಪುತ್ತೂರು ತಣ್ಣಗಿದೆ!! ಹತ್ತಿರದಲ್ಲೇ ಇರುವ ಕಲ್ಲಡ್ಕದ ಕೇಸರಿ ಕಮಾಂಡರ್ ಪ್ರಭಾಕರ ಭಟ್, ಇದೇ ಏರಿಯಾದ ಕೂಗುಮಾರಿ ಶೋಭಾ ಕರಂದ್ಲಾಜೆ ಮತ್ತು ಸದಾನಂದಗೌಡರು ತುಟಿಕ್‍ಪಿಟಿಕ್ ಎನ್ನುತ್ತಿಲ್ಲ!!

ಹಿಂದೂ ಗಂಡಿನ ಜೀವ, ಹಿಂದೂ ಹೆಣ್ಣಿನ ಮಾನ ಬಂಡವಾಳ ಮಾಡಿಕೊಂಡು ರಾಜಕಾರಣ ಮಾಡುವ ಸಂಘಪರಿವಾರದ ಘಟಾನುಘಟಿ ಬೆಂಕಿ ನವಾಬರೆಲ್ಲಾ ಏಕಿಂಥ ಘನಘೋರ ಮೌನದಲ್ಲಿದ್ದಾರೆ. ಹಿಂದೂ ಹೆಣ ಬಿದ್ದಾಗ ಧರ್ಮ ರಕ್ಷಣೆಯ ದೈವ ಆವಾಹನೆಯಾದಂತೆ ಹಾರಾಡುತ್ತಿದ್ದ ಬಿಜೆಪಿ-ಆರೆಸ್ಸೆಸ್-ಹಿಂಜಾವೇ…… ಮುಂತಾದ ಗ್ಯಾಂಗಿನ ಭಜರಂಗ ಬಲಿಗಳ ನಿಗೂಢ ಮೌನದ ಜಾಡು ಹಿಡಿದು ಹೊರಟರೆ ಕಾರ್ತಿಕ್‍ನನ್ನು ಕೊಂದ ಕೊಲೆಗಡುಕರು ಹಿಂದೂತ್ವದ ಅಭಿಯಾನದಲ್ಲಿ ಅರ್ಪಣಾಭಾವದಿಂದ ತೊಡಗಿಸಿಕೊಂಡವರೇ ಆಗಿದ್ದಾರೆಂಬ ಅಚ್ಚರಿ ಬೆಳಕಿಗೆ ಬರುತ್ತದೆ. ಪಾತಕಿಗಳಾದ ಕಿರಣ್ ರೈ ಮತ್ತು ಚರಣ್ ರೈ ಸಹೋದರರು ಹಾಗೂ ಪ್ರಿತೇಶ್ ಶೆಟ್ಟಿಗೆ ಬಿಜೆಪಿಯ ಆಯಕಟ್ಟಿನ ಅಧಿಕಾರಸ್ಥರ ಸಂಪರ್ಕವೂ ಇದೆಯೆಂಬ ಪುಕಾರುಗಳು ಎದ್ದಿವೆ. ಪವರ್‍ಫುಲ್ ಹಿಂಜಾವೇ ನಾಯಕ ತಾನೆಂಬ ಹುಂಬ ಅಹಮಿಕೆಯಲ್ಲಿ ಲೇವಾದೇವಿ, ಕೌಟುಂಬಿಕ ವ್ಯಾಜ್ಯ, ಚಿಟ್‍ಫಂಡ್, ಹೊಡಪೆಟ್‍ಗಳಲ್ಲಿ ಸಂಧಾನಕಾರನಾಗಿ ಮೂಗುತೂರಿಸುತ್ತಿದ್ದ ಕಾರ್ತಿಕ್‍ನ ಹತ್ಯೆ ಸುತ್ತ ಮೂರು ಸಾಧ್ಯತೆಯನ್ನು ಪೊಲೀಸರು ತರ್ಕಿಸುತ್ತಿದ್ದಾರೆ.

ಪೊಲೀಸರು ಅಂದಾಜಿಸಿರುವಂತೆ ಚಿಟ್‍ಫಂಡ್ ವ್ಯವಹಾರದ ಸೇಡು ಬರೀ ಇಪ್ಪತ್ತೇಳು ವರ್ಷದ ಕಾರ್ತಿಕ್‍ನನ್ನು ಬಲಿ ಹಾಕಿದೆ. ಪುತ್ತೂರಿನ ದರ್ಬೆಯಲ್ಲಿ ಮಾತೃಛಾಯ ಎಂಬ ಹೆಸರಿನ ಚಿಟ್‍ಫಂಡ್ ದಂಧೆ ಕಿರಣ್-ಚರಣ್ ಸಹೋದರರು ನಡೆಸಿಕೊಂಡಿದ್ದರು. ಕಿಶೋರ್ ಎಂಬಾತ ಬರೋಬ್ಬರಿ ನಾಲ್ಕು ಲಕ್ಷ ಹಣವನ್ನು ಚರಣ್ ರೈಗೆ ಕೊಡಬೇಕಿತ್ತು. ಆದರೆ ಆತ ಕೊಡದೆ ಸತಾಯಿಸುತ್ತಿದ್ದ. ಹಾಗಾಗಿ ಚರಣ್ ಆತನಿಗೆ ಲಾಯರ್ ನೋಟಿಸ್ ಕೊಟ್ಟಿದ್ದ. ಇದರಿಂದ ಕೆರಳಿದ ಕಿಶೋರ್ ಸುಜಿತ್ ಬಂಗೇರ, ಮನೀಶ್ ಕುಮಾರ್, ಪ್ರೀತಮ್ ಶೆಟ್ಟಿಯೊಂದಿಗೆ ಗ್ಯಾಂಗ್ ಕಟ್ಟಿಕೊಂಡು ಚರಣ್‍ಗೆ ಹಲ್ಲೆ ಮಾಡಿ ಹೆದರಿಸಿದ್ದ. ಈ ಪುಂಡರ ಪಟಾಲಂಗೆ ಹಿಂಜಾವೇ ಕಿಂಗ್ ಕಾರ್ತಿಕ್ ಸುವರ್ಣ ತನ್ನ ರಾಜಕೀಯ ಬಲದಿಂದ ನೆರವಾಗುತ್ತಿದ್ದ. ಹೀಗಾಗಿ ಕಿರಣ್-ಚರಣ್ ತಂಡ ಮತ್ತು ಕಾರ್ತಿಕ್ ಗುಂಪಿನ ನಡುವೆ 2018ರ ಜನವರಿಯಿಂದ ಆಗಾಗ ಜಗಳ-ಕದನ ಆಗುತ್ತಲೇ ಇತ್ತು. ಮೊನ್ನೆ ಸೆಪ್ಟೆಂಬರ್ 3ರಂದು ಚೌತಿಯ ಗಣೇಶ ವಿಸರ್ಜನೆ ಬಳಿಕ ಸಂಪ್ಯದಲ್ಲಿ ನಡೆದ ಯಕ್ಷಗಾನ ನೋಡುತ್ತಾ ನಿಂತಿದ್ದ ಕಾರ್ತಿಕ್ ಸುವರ್ಣನ ಮುಂದೆ ಕಿರಣ್-ಚರಣ್ ಪ್ರತ್ಯಕ್ಷರಾಗಿದ್ದಾರೆ. ಎರಡೂ ಕಡೆಯವರು ಗುರಾಯಿಸಿದ್ದಾರೆ. ಮಾತಿಗೆ ಮಾತಾಗಿದೆ. ಇದೇ ಸಂದರ್ಭವೆಂದು ವೈರಿ ಪಡೆ ಕಾರ್ತಿಕ್‍ನನ್ನು ಇರಿದು ಕೊಂದು ಪರಾರಿಯಾಗಿದ್ದಾರೆ.

ಮತ್ತೊಂದು ಅನುಮಾನದ ಸಾಧ್ಯತೆಯಲ್ಲಿ ಗಾಂಜಾ ದಂಧೆಯ ಅಮಲೇರಿದೆ! ಗಾಂಜಾ ವ್ಯವಹಾರದ ವೈಷಮ್ಯದಿಂದ ಕಿರಣ್-ಚರಣ್ ಮತ್ತು ಕಾರ್ತಿಕ್ ಸುವರ್ಣ ಬದ್ಧವೈರಿಗಳಾಗಿದ್ದರೆಂಬ ಮಾತು ಪುತ್ತೂರಲ್ಲಿ ಪಿಸುಗುಡುತ್ತಿದೆ. ಕಾರ್ತಿಕ್‍ಗೆ ರಾಜಕೀಯ ಪ್ರಭಾವ ಇದ್ದುದರಿಂದ ಆತನದೇ ಮೇಲುಗೈ ಆಗುತ್ತಿದ್ದುದು ಎದುರಾಳಿಗಳನ್ನು ಕೊಲೆ ಸ್ಕೆಚ್‍ಗೆ ಪ್ರಚೋದಿಸಿರಬಹುದೆಂಬ ಲೆಕ್ಕಾಚಾರ ಹಾಕಲಾಗುತ್ತಿದೆ. ಆದರೆ ಕಾರ್ತಿಕ್‍ನ ತಾಯಿ ಆಡಿರುವ ಮಾತುಗಳು ಸಂಘಪರಿವಾರದ ಜನಿವಾರಿಗಳು ಶೂದ್ರ ಹುಡುಗರನ್ನು ಬೇಕಾದಂತೆ ಬಳಸಿಕೊಂಡು ಬಲಿ ಹಾಕುತ್ತಿರುವ ಧರ್ಮೋನ್ಮಾದ ಹಿಕಮತ್ತುಗಳನ್ನು ಬಿಚ್ಚಿಟ್ಟಿದೆ!! “ನನ್ನ ಮಗ ಅಮಾಯಕ. ಯಾರ ತಂಟೆಗೂ ಹೋದವನಲ್ಲ. ಆದರೆ ಯಾವಾಗ ಹಿಂದೂ ಜಾಗರಣ ವೇದಿಕೆ ಸೇರಿಕೊಂಡನೋ, ಬಿಜೆಪಿ ರಾಜಕಾರಣಿಗಳೊಂದಿಗೆ ಒಡನಾಟ ತೊಡಗಿದನೋ ಆಗಾತ ಕೆಲವರ ಕೆಂಗಣ್ಣಿಗೆ ತುತ್ತಾಗಿದ್ದ; ವೈಷಮ್ಯ ಬೆಳೆಸಿಕೊಂಡಿದ್ದ….. ಆತ ಸಂಘಟನೆ(ಹಿಂಜಾವೇ) ರಾಜಕೀಯ(ಬಿಜೆಪಿ) ಸೇರಿಕೊಂಡು ಒಂದಿಷ್ಟು ದ್ವೇಷ, ಹಗೆತನ ಸಂಪಾದಿಸಿದ್ದನಷ್ಟೇ… ಅದೇ ಆತನ ಕೊಲೆ ಮಾಡಲಾಗಿದೆ….. ಪೊಲೀಸ್ ಠಾಣೆ ಎದುರೇ ಕೊಲೆ ಮಾಡುತ್ತಾರೆಂದರೆ ರಾಜಕಾರಣಿಗಳ ಬೆಂಬಲ ಇರಲೇಬೇಕು…. ಇಲ್ಲದಿದ್ದರೆ ಪಾತಕಿಗಳಿಗೆ ಅಷ್ಟು ಧೈರ್ಯ ಎಲ್ಲಿಂದ ಬರಬೇಕು?” ಎಂದು ಬಿಕ್ಕುತ್ತಾರೆ ಕಾರ್ತಿಕ್‍ನ ತಾಯಿ.

ದಕ್ಷಿಣ ಕನ್ನಡದ ಸಂಘಪರಿವಾರದ ಭಜರಂಗದಳ, ಆರೆಸ್ಸೆಸ್, ಹಿಂಜಾವೇ, ವಿಶ್ವ ಹಿಂದೂ ಪರಿಷತ್, ಮಹಿಳಾ ಸಂಘಟನೆಗಳಲ್ಲಿ ಲೀಡರಿಕೆ, ಹಿಡಿತ ಸಾಧಿಸುವಿಕೆಯ ಮೇಲಾಟದ ಸಂಘರ್ಷ ಮಾಮೂಲಿ ಎಂಬಂತಾಗಿದೆ. ಪಾಪದ ಶೂದ್ರ ಹುಡುಗ, ಹುಡುಗಿಯರಿಗೆ ಹಿಂದೂತ್ವದ ಪುಂಡಾಟದಿಂದ ಪ್ರಾಪ್ತವಾಗುವ ಸಾಮಾಜಿಕ ಇಮೇಜ್‍ನ ಆಕರ್ಷಣೆಗೆ ಒಳಗಾಗುವಂತೆ ಮಾಡಲಾಗುತ್ತದೆ. ಈ ಆ್ಯಂಟಿ ಹೀರೋಯಿಸಮ್ ಜತೆಗೆ ರಾಜಕೀಯ ಗೌರವ, ಹಣಕಾಸಿನ ಲಾಭ, ತಾಪಂ-ಜಿಪಂ ಮುಂತಾದ ಸ್ಥಳೀಯ ಸಂಸ್ಥೆ ಸದಸ್ಯರ ಸೆಳೆತಕ್ಕೆ ಹಿಂದುಳಿದ ವರ್ಗದ ತರುಣ-ತರುಣಿಯರು ಬೀಳುವಂತೆ ನಾಜೂಕಾಗಿ ಮಾಡಲಾಗುತ್ತಿದೆ. ಈ ಆಮಿಷ ಸಂಘಪರಿವಾರದ ತರಹೇವಾರಿ ತಂಡಗಳಲ್ಲಿ ಸೇಡು-ದ್ವೇಷ-ಹಗೆತನದ ಶೀತಲ ಸಂಘರ್ಷವಾಗಿ ಮಾರ್ಪಟ್ಟಿದೆ. ಇದು ಕಾರ್ತಿಕ್ ಸುವರ್ಣನಂಥ ಧಾಡಸಿ ಯುವಕರನ್ನು ಆಪೋಷನ ಪಡೆಯುತ್ತಿದೆ! ಕರಾವಳಿಯ ಕೇಸರಿ ಪರಿವಾರದ ಯಾವ್ಯಾವ ಪಡೆಯಲ್ಲಿ ಯಾರ್ಯಾರಿಗೆ ಎಂತೆಂಥ ಕೇಡು ಕಾದಿದೆಯೋ?!!

ಅದೇನೇ ಇರಲಿ, ಒಂದಂತೂ ಸತ್ಯ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಲ್ಲದೇ, ಕಾಂಗ್ರೆಸ್ಸೊ, ಜೆಡಿಎಸ್ಸೊ ಅಥವಾ ಮೈತ್ರಿ ಸರ್ಕಾರವೋ ಇದ್ದಿದ್ದರೆ ಕಾರ್ತಿಕ್ ಕೊಲೆಯಾದ ಇಷ್ಟೊತ್ತಿಗಾಗಲೇ ಬಿಜೆಪಿ-ಸಂಘ ಪರಿವಾರದ ಜಂಟಿ `ಬೆಂಕಿ’ ಕಾರ್ಯಾಚರಣೆಗಳು ಶುರುವಾಗಿರುತ್ತಿತ್ತು. ಪೊಲೀಸರು ಇದೇ ಆರೋಪಿಗಳನ್ನು ಬಂಧಿಸಿದ್ದರೂ `ಸಾಬರನ್ನು ಬಚಾವು ಮಾಡುವ ಸಲುವಾಗಿ ಅಮಾಯಕ ಹಿಂದೂ ಹುಡುಗರನ್ನು ಫಿಟ್ ಮಾಡಿದ್ದಾರೆ’ ಅಂತ ಭೀಕರ ಭಾಷಣಗಳು ಉದುರುತ್ತಿದ್ದವು. ಹಿಂದೂಗಳ ಮಾರಣಹೋಮ ನಡೆಯುತ್ತಿದೆ ಅಂತ ಬದುಕಿರುವವರ ಹೆಸರನ್ನೂ ಸೇರಿಸಿ ಒಂದು `ಹುತಾತ್ಮರ ಪಟ್ಟಿ’ ತಯಾರಿಸಿಕೊಂಡು ಊರೂರು ಅಲೆದಾಡುತ್ತಿದ್ದರು. ಆದರೀಗ ಗಪ್‍ಚುಪ್. ಇದು ಸಂಘ ಪರಿವಾರಕ್ಕೆ ಹೊಸದೇನೂ ಅಲ್ಲ. ತೀರ ಈಚೆಗೆ ವಿವೇಕಾನಂದ ಕಾಲೇಜಿನ ಎಬಿವಿಪಿಯ ನಾಲ್ಕೈದು ನೀಚ ಹುಡುಗರು ಪಾಪದ ಬುಡಕಟ್ಟು ಹುಡುಗಿಯನ್ನು ಕಾಡಿಗೆ ಕರೆದೊಯ್ದು ಕಾರಲ್ಲೇ ಸರದಿಯಲ್ಲಿ ರೇಪ್ ಮಾಡಿದಾಗಲೂ ಎಬಿವಿಪಿಗಳು `ಈ ರೇಪಿಸ್ಟ್‍ಗಳು ತಮ್ಮವರಲ್ಲ’ ಎಂದಿದ್ದಷ್ಟೇ ಅಲ್ಲ, ಆ ಹುಡುಗಿಯ ನಡತೆಯೇ ಸರಿ ಇಲ್ಲ ಎಂದು ಸಮರ್ಥನೆಗೆ ಇಳಿದಿದ್ದರು. ತಮ್ಮ ಮಕ್ಕಳನ್ನು ಬೇಕಾದಂತೆ ಬಳಸಿಕೊಂಡು ಅವರ ಭವಿಷ್ಯವನ್ನೇ ಹಾಳುಗೆಡಹುವ ಇವರ ಹುನ್ನಾರಗಳನ್ನು ಹೆತ್ತವರು ಈಗಲಾದರು ಅರ್ಥಮಾಡಿಕೊಳ್ಳದಿದ್ದರೆ ಕಾರ್ತಿಕ್‍ನ ತಾಯಿಯಂತೆ ತಮ್ಮದೇ ಮಕ್ಕಳ ಹೆಣದ ಮುಂದೆ ಗೋಳಾಡುವಂತಹ ದುರ್ವಿಧಿಯೇ ಗತಿ!

 

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...