Homeಮುಖಪುಟಭಾರತದ ಆರ್ಥಿಕತೆ ಕುಸಿಯುತ್ತಿದ್ದರೂ ಅದಾನಿ ಕಂಪನಿ ಮಾತ್ರ ಬೆಳೆಯುತ್ತಿರುವುದು ಹೇಗೆ?

ಭಾರತದ ಆರ್ಥಿಕತೆ ಕುಸಿಯುತ್ತಿದ್ದರೂ ಅದಾನಿ ಕಂಪನಿ ಮಾತ್ರ ಬೆಳೆಯುತ್ತಿರುವುದು ಹೇಗೆ?

ಕೊರೊನಾ ಸಾಂಕ್ರಾಮಿಕ ಈ ವರ್ಷ ಭಾರತವನ್ನು ಅಭೂತಪೂರ್ವ ಆರ್ಥಿಕ ಹಿಂಜರಿತದಲ್ಲಿ ಮುಳುಗಿಸಿದರೆ, ಅದಾನಿ ಕಂಪೆನಿ ಮಾತ್ರ ಬೆಳೆಯುತ್ತಲೇ ಇದೆ. ಅವರ ಕಂಪೆನಿಯು ಜಾಗತಿಕ ಪಾಲುದಾರರನ್ನು ಹಾಗೂ ಹೂಡಿಕೆಗಳನ್ನು ಪಡೆಯುವುದರೊಂದಿಗೆ ಹೊಸ ಕ್ಷೇತ್ರಗಳಿಗೂ ತನ್ನ ಕೈ ಚಾಚಿದೆ.

- Advertisement -
- Advertisement -

ಗೌತಮ್ ಅದಾನಿ ಬಿಕ್ಕಟ್ಟಿನಿಂದ ಬದುಕುಳಿಯುವ ಜಾಣ್ಮೆ ಹೊಂದಿದ್ದಾರೆ. ಎರಡು ದಶಕಗಳ ಹಿಂದೆ ಅವರನ್ನು ಹಣಕ್ಕಾಗಿ ಅಪಹರಣ ಮಾಡಲಾಗಿತ್ತು ಮತ್ತು 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದ 2008 ರ 26/11 ಎಂದೇ ಕುಖ್ಯಾತಿ ಪಡೆದ ಮುಂಬೈ ದಾಳಿಯಲ್ಲಿ ಮುಂಬೈಯ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌‌ನ ಒತ್ತೆಯಾಳುಗಳಲ್ಲಿ ಅವರೊಬ್ಬರಾಗಿದ್ದರು.

ವ್ಯವಹಾರದಲ್ಲಿ ಕುಶಾಗ್ರಮತಿ ಮತ್ತು ಅಡೆತಡೆಗಳನ್ನು ನಿವಾರಿಸುವ ಅವರ ಸಾಮರ್ಥ್ಯ, ನರೇಂದ್ರ ಮೋದಿಯಂತಹ ರಾಜಕರಾರಣಿಗಳ ಸಖ್ಯ ಅವರನ್ನು ಭಾರತದ ಅತ್ಯಂತ ಶ್ರೀಮಂತರಲ್ಲೊಬ್ಬರನ್ನಾಗಿ ಮಾಡಿದೆ. ಕೊರೊನಾ ಸಾಂಕ್ರಾಮಿಕ ಈ ವರ್ಷ ಭಾರತವನ್ನು ಅಭೂತಪೂರ್ವ ಆರ್ಥಿಕ ಹಿಂಜರಿತದಲ್ಲಿ ಮುಳುಗಿಸಿದರೆ, ಅದಾನಿ ಕಂಪೆನಿ ಮಾತ್ರ ಬೆಳೆಯುತ್ತಲೇ ಇದೆ. ಅವರ ಕಂಪೆನಿಯು ಜಾಗತಿಕ ಪಾಲುದಾರರನ್ನು ಹಾಗೂ ಹೂಡಿಕೆಗಳನ್ನು ಪಡೆಯುವುದರೊಂದಿಗೆ ಹೊಸ ಕ್ಷೇತ್ರಗಳಿಗೂ ತನ್ನ ಕೈ ಚಾಚಿದೆ.

ಇದನ್ನೂ ಓದಿ: ‘ಅದಾನಿ-ಅಂಬಾನಿ ಕೃಷಿ ಕಾನೂನುಗಳನ್ನು’ ಹಿಂತೆಗೆದುಕೊಳ್ಳಿ: ರಾಹುಲ್ ಗಾಂಧಿ

ಗಣಿಗಾರಿಕೆ, ಅನಿಲ ಮತ್ತು ಬಂದರುಗಳು ಸೇರಿದಂತೆ ಅವರ ಉದ್ಯಮ ಘಟಕಗಳ ಹೆಚ್ಚಿನ ಸಂಸ್ಥೆಗಳ ಷೇರುಗಳು ಹೆಚ್ಚಾಗಿದೆ. ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಈ ವರ್ಷ ಆರು ಪಟ್ಟು ಹೆಚ್ಚಾಗಿದೆ. ಯಾಕೆಂದರೆ ಇದು 6 ಬಿಲಿಯನ್ ಅಮೇರಿಕನ್ ಡಾಲರ್‌‌ ಸೌರಶಕ್ತಿ ಒಪ್ಪಂದವನ್ನು ಪಡೆದುಕೊಂಡಿದೆ. ಇದು 2025 ರ ವೇಳೆಗೆ ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ತಯಾರಕನಾಗುವ ಕಂಪನಿಯ ಗುರಿಯತ್ತ ಮತ್ತೊಂದು ಹೆಜ್ಜೆಯಾಗಿದೆ.

“ಅದಾನಿ ಷೇರುಗಳ ವಿಷಯಕ್ಕೆ ಬಂದಾಗ ಮಾರುಕಟ್ಟೆಯು ’ಫೋಮೋ ಸಿಂಡ್ರೋಮ್(ಕಳೆದು ಹೋಗುವ ಭಯ)’ ಅನ್ನು ಹೊಂದಿದೆ. ಅದಾನಿಯ ವ್ಯವಹಾರಗಳಿಗೆ ಪ್ರಸ್ತುತ ಕೇಂದ್ರ ಸರ್ಕಾರ ಪೂರ್ತಿ ಸಹಕಾರ ನೀಡುತ್ತಿದೆ ಮಾತ್ರವಲ್ಲದೆ, ಅವರಿಬ್ಬರ ನೀತಿಗಳು  ಹೊಂದಿಕೆಯಾಗಿವೆ. ಆದ್ದರಿಂದ ಅದಾನಿಗೆ ಕನಿಷ್ಠ ಐದರಿಂದ ಆರು ವರ್ಷಗಳವರೆಗೆ ಮುಂದಿನ ಹಾದಿ ಸುಗಮವಾಗಿರುತ್ತದೆ” ಎಂದು ಹೂಡಿಕೆ-ನಿರ್ವಹಣಾ ಸಂಸ್ಥೆ ಐಐಎಫ್ಎಲ್ ಸೆಕ್ಯುರಿಟೀಸ್ ಲಿಮಿಟೆಡ್‌ನ ನಿರ್ದೇಶಕ ಸಂಜೀವ್ ಭಾಸಿನ್ ಹೇಳುತ್ತಾರೆ.

32.4 ಶತಕೋಟಿ ಡಾಲರ್‌ ಮೌಲ್ಯದ ಸಂಪತ್ತಿನೊಂದಿಗೆ, ಅದಾನಿಯು ಮುಖೇಶ್ ಅಂಬಾನಿಯ ನಂತರ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕದ ಪ್ರಕಾರ, ಈ ವರ್ಷ ಅದಾನಿ ಸ್ಟಾಕ್‌‌ನ ನಿವ್ವಳ ಮೌಲ್ಯ 21.1 ಬಿಲಿಯನ್ ಡಾಲರ್‌ ಹೆಚ್ಚಾಗುತ್ತದೆ. ಇದು ಅಂಬಾನಿ ಗಳಿಸುವ ಲಾಭಕ್ಕಿಂತಲೂ ಹೆಚ್ಚಾಗುತ್ತದೆ. ಈ ವರದಿಯ ಬಗ್ಗೆ ಅದಾನಿ ಗ್ರೂಪ್ ಪ್ರತಿನಿಧಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಇದನ್ನೂ ಓದಿ:  ಭಾರತ-ಆಸ್ಟ್ರೇಲಿಯಾ ಏಕದಿನ ಪಂದ್ಯ: ಮೈದಾನಕ್ಕೆ ನುಗ್ಗಿ ‘ಸ್ಟಾಪ್ ಅದಾನಿ’ ಎಂದ ಪ್ರತಿಭಟನೆಗಾರ!

1980 ರ ದಶಕದ ಆರಂಭದಲ್ಲಿ ಕಾಲೇಜಿನಿಂದ ಹೊರಬಂದ ಅದಾನಿಯು ಮುಂಬೈನ ವಜ್ರ ಉದ್ಯಮದಲ್ಲಿ ತನ್ನ ಅದೃಷ್ಟವನ್ನು ಪ್ರಯತ್ನಿಸಿದರು. 1988 ರಲ್ಲಿ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ ಸ್ಥಾಪಿಸುವ ಮೊದಲು ತನ್ನ ಸಹೋದರನ ಪ್ಲಾಸ್ಟಿಕ್ ವ್ಯವಹಾರವನ್ನು ನಡೆಸಲು ಸಹಾಯ ಮಾಡಲು ತನ್ನ ಸ್ವಂತ ರಾಜ್ಯವಾದ ಗುಜರಾತ್‌ಗೆ ಹಿಂದಿರುಗಿದರು. ಇದಾಗಿ ಒಂದು ದಶಕದ ನಂತರ, ಅವರು ಅರಬ್ಬಿ ಸಮುದ್ರದ ಕರಾವಳಿಯಲ್ಲಿರುವ ಮುಂಡ್ರಾ ಬಂದರನ್ನು ನಿರ್ವಹಿಸಲು ಪ್ರಾರಂಭಿಸಿದರು, ಅಂತಿಮವಾಗಿ ಭಾರತದ ಅತಿದೊಡ್ಡ ಖಾಸಗಿ ವಲಯದ ಬಂದರನ್ನಾಗಿ ಅದನ್ನು ನಿರ್ಮಿಸಿದರು.

ಅಷ್ಟೇ ಅಲ್ಲದೆ ಅದಾನಿಯ ಗ್ರೂಪ್, ರಾಷ್ಟ್ರದ ಅತಿದೊಡ್ಡ ಖಾಸಗಿ ವಿದ್ಯುತ್ ಉತ್ಪಾದಕ ಮತ್ತು ಕಲ್ಲಿದ್ದಲು ಗಣಿಗಾರಿಕೆಯ ಮುಖ್ಯ ಸ್ಥಾನದಲ್ಲಿ ನಿಂತಿತು ಮತ್ತು ಇದನ್ನು ವಿದೇಶದಲ್ಲಿಯು ವಿಸ್ತರಿಸಿದೆ. ಆಸ್ಟ್ರೇಲಿಯಾದಲ್ಲಿ ಅದಾನಿಯು ಕಾರ್ಮೈಕಲ್ ಥರ್ಮಲ್ ಕಲ್ಲಿದ್ದಲು ಗಣಿಗಾರಿಕೆಗೆ ಕಳೆದ ವರ್ಷ ಅನುಮೋದನೆ ಪಡೆದಿದ್ದಾರೆ. ಇದರ ವಿರುದ್ದ ಪರಿಸರ ಹೋರಾಟಗಾರರು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ.

ಇತರ ಉದ್ಯಮಿಗಳಂತೆ, ಅದಾನಿ ಪದೇ ಪದೇ ಹೊಸ ಕೈಗಾರಿಕೆಗಳನ್ನು ಆರಿಸಿಕೊಂಡವರು. ಅದರಲ್ಲೂ ಸರ್ಕಾರವು ಅಭಿವೃದ್ಧಿ ಪಡಿಸಲು ಮುಂದಾಗಿರುವ ಮತ್ತು ಕಡಿಮೆ ಸ್ಪರ್ಧೆ ಇರುವಲ್ಲಿ…, ಈಗಲೂ ಕೂಡಾ ಅದಾನಿಯು “ರಾಷ್ಟ್ರ ನಿರ್ಮಾಣ” ವನ್ನು ತನ್ನ ಕಾರ್ಯತಂತ್ರದ ಪ್ರಮುಖ ವಿಷಯವಾಗಿದೆ ಎಂದು ಉಲ್ಲೇಖಿಸುತ್ತಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ. ಅದಾನಿ ಅಂಬಾನಿಗಾಗಿಯೇ ನರೇಂದ್ರ ಮೋದಿಯವರು ವಿವಾದಾತ್ಮಕ ಕೃಷಿ ಮಸೂದೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಆರೋಪಿಸಿರುವ ರೈತರು ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣ ಇನ್ನು ಮುಂದೆ ಅದಾನಿ ಏರ್‌ಪೋರ್ಟ್ಸ್!: ನೆಟ್ಟಿಗರ ಕಿಡಿ

ಸ್ವತಃ ಗುಜರಾತಿ ಆಗಿರುವ ಪ್ರಧಾನಿ ಮೋದಿ ಅಧಿಕಾರ ಗಳಿಸಿದಂತೆಯೇ ಅದಾನಿ ಕೂಡಾ ಎತ್ತರಕ್ಕೆ ಏರುತ್ತಲೆ ಹೋದರು. ಅದಾನಿಯು ಮುಂಡ್ರಾ ಬಂದರಿನ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿ, ಮೋದಿ ಮುಖ್ಯಮಂತ್ರಿಯಾಗಿದ್ದಾಗ ಅದರಲ್ಲಿ ಕೈಗಾರಿಕಾ ವಲಯವನ್ನು ನಿರ್ಮಿಸಿದರು. ಅದಾನಿ ಸುಮಾರು ಎರಡು ದಶಕಗಳಿಂದ ರಾಜಕಾರಣಿಗಳ ಪ್ರಮುಖ ಬೆಂಬಲಿಗರಲ್ಲಿ ಒಬ್ಬರಾಗಿದ್ದಾರೆ.

ಅದಾನಿಯ ಕ್ಷಿಪ್ರ ಬೆಳವಣಿಗೆಯು 2015 ರ ಆಸುಪಾಸಿನಲ್ಲಿ ಪ್ರಾರಂಭವಾಯಿತು. ಸ್ಥಳೀಯವಾಗಿ ರಕ್ಷಣಾ ಸಾಧನಗಳ ಉತ್ಪಾದನೆಯನ್ನು ಅಭಿವೃದ್ಧಿಪಡಿಸುವುದಾಗಿ ಮೋದಿ ಪ್ರತಿಜ್ಞೆ ಮಾಡಿದಾಗ, ರಕ್ಷಣಾ ಕ್ಷೇತ್ರದ ಗುತ್ತಿಗೆದಾರರೊಂದಿಗೆ ಸಹಭಾಗಿತ್ವ ಮಾಡಿ ಮಿಲಿಟರಿ ಸಾಧನಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೆಚ್ಚಿಸಿದರು. ಇದಾಗಿ ಮೂರು ವರ್ಷಗಳ ನಂತರ ಖಾಸಗಿ ಅನಿಲ ಪೂರೈಕೆಯಲ್ಲಿ ಭಾರತದ ಅತಿದೊಡ್ಡ ಚಿಲ್ಲರೆ ವ್ಯಾಪಾರಿಗಳನ್ನಾಗಿ ಮಾಡಿತು. 2019 ರಲ್ಲಿ ಅವರು ವಿಮಾನ ನಿಲ್ದಾಣಗಳತ್ತ ಗಮನಹರಿಸಲು ಪ್ರಾರಂಭಿಸಿದರು, ಮತ್ತು ಈಗ ಡೇಟಾ ಸಂಗ್ರಹಣೆ ಮತ್ತು ಹಣಕಾಸು ಸೇವೆಗಳು ಸೇರಿದಂತೆ ಹಲವು ಕ್ಷೇತ್ರಗಳನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ:  ರೈತರ ಪ್ರತಿಭಟನೆಗೆ ಹೋಗುವವರಿಗೆ 100 ಲೀ.ಪೆಟ್ರೋಲ್ ಉಚಿತ- ಹರಿಯಾಣ ಶಾಸಕ

“ಪ್ರಧಾನಿ ಮೋದಿಯ ನೀತಿಗಳು ಅವರ ಗುಜರಾತ್ ದಿನಗಳಿಂದಲೂ ವ್ಯಾಪಾರಿ ಗುಂಪುಗಳಿಗೆ ಸಹಾಯ ಮಾಡಿವೆ ಮತ್ತು ಅದಾನಿ ಗ್ರೂಪ್‌ನಂತಹ ಸಂಘಟನೆಗಳ ತ್ವರಿತ ಬೆಳವಣಿಗೆಗೆ ಇದು ಕಾರಣವಾಗಿದೆ. ಕಾರ್ಪೊರೇಟ್ ಕಾರ್ಯತಂತ್ರಗಳನ್ನು ಸರ್ಕಾರದ ಆದ್ಯತೆಗಳನ್ನಾಗಿ ಮಾಡುವುದು ಭಾರತದಲ್ಲಿ ವ್ಯವಹಾರ ಮಾಡುವ ವಿಧಾನವಾಗಿದೆ” ಎಂದು ಅಹಮದಾಬಾದ್‌ನ ಅಭಿವೃದ್ಧಿ ಪರ್ಯಾಯ ಕೇಂದ್ರದ ನಿರ್ದೇಶಕ ಇಂದಿರಾ ಹಿರ್ವೇ ಹೇಳುತ್ತಾರೆ.

 

ಇತ್ತ ಅದಾನಿ ತನ್ನ ತಾಯ್ನಾಡಿನಲ್ಲಿ ಸರ್ಕಾರದಿಂದ ಅತ್ಯಧಿಕ ಬೆಂಬಲ ಪಡೆಯುತ್ತಿರುವಾಗ, ಅತ್ತ ಆಸ್ಟ್ರೇಲಿಯಾದಲ್ಲಿ ವಿರೋಧ ಮತ್ತು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲಿ ಚಳುವಳಿ ಹೆಚ್ಚಾಗುತ್ತಿದ್ದಂತೆ ಸಾಲದಾತರು ವಿವಾದಾತ್ಮಕ ಕಾರ್ಮೈಕಲ್ ಕಲ್ಲಿದ್ದಲು ಯೋಜನೆಯಿಂದ ದೂರ ಸರಿದರು. ಈ ಚಳುವಳಿಯು 2019 ರ ಸಂಸತ್ತಿನ ಮತದಾನದಲ್ಲಿ ಚುನಾವಣಾ ವಿಷಯವಾಗಿ ಕೂಡಾ ಮಾರ್ಪಟ್ಟಿತು.

ಅಂತರರಾಷ್ಟ್ರೀಯ ಹೂಡಿಕೆದಾರರು ಮತ್ತು ಜಾಗತಿಕ ಇಂಧನದ ದೊಡ್ಡ ಕಂಪೆನಿಗಳು ತಮ್ಮ ಬಂಡವಾಳವನ್ನು ವಿಸ್ತರಿಸಲು ಮತ್ತು ಲಾಭದಾಯಕ ಭಾರತೀಯ ಮಾರುಕಟ್ಟೆಯ ಒಂದು ಭಾಗವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ, ಇದಕ್ಕಾಗಿ ಅದಾನಿ ಗ್ರೂಪ್ ಅವರಿಗೆ ಆಕರ್ಷಕವಾಗಿ ಕಾಣುತ್ತದೆ. ಫ್ರಾನ್ಸ್‌ನ ಇಂಧನ ದೈತ್ಯ ಟೋಟಲ್ ಎಸ್‌ಎ ಈಗಾಗಲೇ ಅದಾನಿ ಗ್ರೀನ್ ಮತ್ತು ವಿತರಕ ಅದಾನಿ ಗ್ಯಾಸ್ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡಿದೆ.

ಮಾಹಿತಿ ಕೃಪೆ: ದಿ ಪ್ರಿಂಟ್

ಇದನ್ನೂ ಓದಿ: ಕಲ್ಲಿದ್ದಲು ಪೂರೈಕೆ ಗುತ್ತಿಗೆಗಾಗಿ ಟೆಂಡರ್ ತಿದ್ದಿದ ಆರೋಪ: ಗೌತಮ್ ಅದಾನಿ ಕಂಪನಿ ವಿರುದ್ಧ FIR

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...