Homeಮುಖಪುಟಕೊಚ್ಚಿ; ವಿವಿ ಕ್ಯಾಂಪಸ್‌ನಲ್ಲಿ ಕಾಲ್ತುಳಿತ ಸಂಭವಿಸಿದ್ದೇಗೆ? ಪ್ರತ್ಯಕ್ಷದರ್ಶಿಗಳಿಂದ ದುರಂತದ ವಿವರಣೆ..

ಕೊಚ್ಚಿ; ವಿವಿ ಕ್ಯಾಂಪಸ್‌ನಲ್ಲಿ ಕಾಲ್ತುಳಿತ ಸಂಭವಿಸಿದ್ದೇಗೆ? ಪ್ರತ್ಯಕ್ಷದರ್ಶಿಗಳಿಂದ ದುರಂತದ ವಿವರಣೆ..

- Advertisement -
- Advertisement -

ಕೊಚ್ಚಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ (CUSAT) ಸ್ಕೂಲ್ ಆಫ್ ಇಂಜಿನಿಯರಿಂಗ್‌ನ ಟೆಕ್‌ಫೆಸ್ಟ್‌ನಲ್ಲಿ ಕಾಲ್ತುಳಿತ ಸಂಭವಿಸಿ ನಾಲ್ವರು ಸಾವನ್ನಪ್ಪಿ 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.  ಸ್ಕೂಲ್ ಆಫ್ ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಆಯೋಜಿಸಿದ್ದ ಟೆಕ್ ಫೆಸ್ಟ್ ಈ ದುರಂತ ಸಾವಿಗೆ ಕಾರಣವಾಗಿತ್ತು.

ಕಾಲ್ತುಳಿತದಲ್ಲಿ ಅತುಲ್ ತಂಬಿ, ಆನ್ ರುಫ್ತಾ, ಸಾರಾ ಥಾಮಸ್ ಮತ್ತು ಅಲ್ವಿನ್ ಜೋಸೆಫ್ ಪ್ರಾಣವನ್ನು ಕಳೆದುಕೊಂಡಿದ್ದರು. ಅಲ್ವಿನ್ ಹೊರತುಪಡಿಸಿ ಉಳಿದ ಮೂವರು CUSAT ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದರು.

ಕೊಚ್ಚಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಧಿಷ್ನಾ ಎಂಬ ವಾರ್ಷಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸ್ಕೂಲ್ ಆಫ್ ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ವಸ್ತು ಪ್ರದರ್ಶನಗಳು ಇರುತ್ತದೆ. ಇದಕ್ಕೆ ಪ್ರವೇಶಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ನೀಡಲಾಗಿತ್ತು. ಉತ್ಸವದ ಪ್ರತಿ ದಿನದ ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಏರ್ಪಡಿಸಲಾಗುತ್ತಿತ್ತು. 2020ರಲ್ಲಿ ಧಿಷ್ಣಾದ ಕೊನೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೋವಿಡ್‌ ಬಳಿಕ ಮೊದಲ ಬಾರಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸ್ಕೂಲ್ ಆಫ್ ಇಂಜಿನಿಯರಿಂಗ್‌ ಪ್ರಾಂಶುಪಾಲ ಡಾ. ದಿಲೀಪ್‌ಕುಮಾರ್ ಹೇಳಿದ್ದಾರೆ.

ಈವೆಂಟ್‌ನ್ನು ವಿವಿಧ ವಿಭಾಗಗಳ ವಿದ್ಯಾರ್ಥಿಗಳನ್ನು ಒಳಗೊಂಡಿರುವ ಕೋರ್ ಕಮಿಟಿ ಆಯೋಜಿಸುತ್ತದೆ ಮತ್ತು ಸಾಮಾನ್ಯವಾಗಿ ಇಬ್ಬರು ಅಧ್ಯಾಪಕರು ಸಂಯೋಜಕರಾಗಿರುತ್ತಾರೆ. ಶನಿವಾರದ ದಿನ ಬಾಲಿವುಡ್ ಗಾಯಕಿ ನಿಖಿತಾ ಗಾಂಧಿಯವರ ಸಂಗೀತ ಕಚೇರಿಗಾಗಿ ವಿಶ್ವವಿದ್ಯಾಲಯದ ಮುಖ್ಯ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಒಟ್ಟುಗೂಡಿದ್ದರು.

ವಿಶ್ವವಿದ್ಯಾನಿಲಯದ ಮುಖ್ಯ ದ್ವಾರದಲ್ಲೇ ಸಭಾಂಗಣವು ಇತ್ತು. ಥಿಯೇಟರ್‌ನಂತೆ ಸಭಾಂಗಣವನ್ನು ರಚನೆ ಮಾಡಲಾಗಿದೆ. ಇದರಲ್ಲಿ ಪ್ರವೇಶ ಮತ್ತು ನಿರ್ಗಮನ ಎರಡಕ್ಕೂ ಹಿಂಭಾಗದಲ್ಲಿ ಒಂದೇ ಗೇಟ್ ವ್ಯವಸ್ಥೆ ಮಾಡಲಾಗಿತ್ತು. ಇದಲ್ಲದೆ ಸಂಘಟಕರು ಥಿಯೇಟರ್‌ನೊಳಗೆ ಬ್ಯಾರಿಕೇಡ್‌ಗಳನ್ನು ಹಾಕಿದರು, ವಿದ್ಯಾರ್ಥಿಗಳು ಮತ್ತು ಇತರ ಭಾಗವಹಿಸುವವರಿಗೆ ಕುಳಿತುಕೊಳ್ಳಲು ಸ್ಥಳಗಳನ್ನು ಗೊತ್ತುಪಡಿಸಿದ್ದರು.

ಸಂಜೆ 7 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗುವ ಮೊದಲು, ಎಸ್‌ಒಇ ವಿದ್ಯಾರ್ಥಿಗಳಿಗೆ ಮೊದಲು ಸಭಾಂಗಣಕ್ಕೆ ಪ್ರವೇಶಿಸಲು ಅನುಮತಿಸಲಾಗಿದೆ. ಅವರ ಪ್ರವೇಶವನ್ನು ಸ್ವಯಂಸೇವಕರಾಗಿದ್ದ ವಿದ್ಯಾರ್ಥಿಗಳು ನಿಯಂತ್ರಿಸಿದರು. ಇದರ ನಂತರ ವಿಶ್ವವಿದ್ಯಾನಿಲಯದ ಇತರ ಶಾಲೆಗಳು ಮತ್ತು ಇತರ ಕಾಲೇಜುಗಳ ವಿದ್ಯಾರ್ಥಿಗಳನ್ನು ಒಳಗೆ ಬಿಡಲಾಯಿತು. ಪ್ರೇಕ್ಷಕರ ಪ್ರವೇಶವನ್ನು ನಿಯಂತ್ರಿಸಲು ಸಂಘಟಕರು ಒಬ್ಬರು ಅಥವಾ ಇಬ್ಬರು ವ್ಯಕ್ತಿಗಳು ಪ್ರವೇಶಿಸುವಷ್ಟು ಗೇಟ್‌ನ್ನು ತೆರೆದಿದ್ದರು. ಕಾರ್ಯಕ್ರಮಕ್ಕೆ ನಿಗದಿತ ಸಮಯ ಸಮೀಪಿಸುತ್ತಿದ್ದಂತೆ ಹೆಚ್ಚಿನ ಜನರು ಬರಲು ಪ್ರಾರಂಭಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಹಠಾತ್ ಮಳೆಯಿಂದಾಗಿ ವಿದ್ಯಾರ್ಥಿಗಳು ಆಶ್ರಯ ಪಡೆಯಲು ಸಭಾಂಗಣಕ್ಕೆ ತೆರಳಿದ್ದರು. ಈ ವೇಳೆ ನೂಕು ನುಗ್ಗಲು ನಡೆದಿದೆ ಎಂದು ಆರಂಭಿಕ ವರದಿಗಳು ಹೇಳಿದರೆ, ಈವೆಂಟ್‌ಗೆ ಸ್ವಲ್ಪ ಮೊದಲು ಜನರು ಧಾವಿಸಿ ಗೇಟ್‌ನಲ್ಲಿ ಕಿಕ್ಕಿರಿದು ನೂಕುನುಗ್ಗಲಿಗೆ ಕಾರಣವಾಗಿದೆ ಎಂಬುವುದು ಈಗ ಸ್ಪಷ್ಟವಾಗಿ ತೋರುತ್ತದೆ. ಅಲ್ಲಿ ತುಂತುರು ಮಳೆಯಾಗಿದ್ದು ಮಳೆಯಿಂದ ರಕ್ಷಣೆ ಪಡೆಯಲು ಜನರು ಧಾವಿಸಿರುವುದು ದುರಂತಕ್ಕೆ ಕಾರಣವಾಗಿರಲು ಸಾಧ್ಯವಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ.

ಸಭಾಂಗಣವು ಕೆಳಮಟ್ಟದಲ್ಲಿದ್ದು, ಗೇಟ್‌ನಿಂದ ಕೆಳಗಿಳಿಯುವಾಗ ಮೆಟ್ಟಿಲುಗಳನ್ನು ಹೊಂದಿದೆ. ಮೆಟ್ಟಿಲುಗಳ ಮೇಲ್ಭಾಗದಲ್ಲಿ ಪ್ರವೇಶಿಸಲು ಪ್ರಯತ್ನಿಸುತ್ತಿರುವ ಜನರು ಕೆಳಭಾಗದಲ್ಲಿದ್ದವರನ್ನು ಕೆಳಗೆ ತಳ್ಳಿದ್ದಾರೆ. ಈ ವೇಳೆ  ಹಲವರು ಕೆಳಗೆ ಬಿದ್ದಿದ್ದಾರೆ. ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಹಾಕಿದ್ದರಿಂದ ಜನರು ಬದಿಗೆ ತೆರಳಲು ಸಾಧ್ಯವಾಗಿರಲಿಲ್ಲ. ಆ ಹೊತ್ತಿಗೆ ಗೇಟ್‌ನಿಂದ ಕೆಳಗಿಳಿಯುವ ಮೆಟ್ಟಿಲುಗಳು ತುಂಬಿದ್ದವು. ಕೆಲವು ಜನರು ಉಸಿರುಗಟ್ಟಿ ಪ್ರಜ್ಞೆ ಕಳೆದುಕೊಂಡಿದ್ದರು. ಮೆಟ್ಟಿಲುಗಳ ಕೆಳಭಾಗದಲ್ಲಿ ಕೆಳಗೆ ಬಿದ್ದವರ ಮೇಲೆ  ಹಲವರು ಎಡವಿ ಬಿದ್ದಿದ್ದಾರೆ. ಸ್ವಯಂಸೇವಕರು ಗೇಟ್‌ನಲ್ಲಿ ಗುಂಪನ್ನು ಚದುರಿಸಲು ಮತ್ತು ಬಿದ್ದವರಿಗೆ ಸಹಾಯ ಮಾಡಲು ಈ ವೇಳೆ ಪ್ರಯತ್ನಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ನಮಗೆ ಸಾಧ್ಯವಾಗಿಲ್ಲ. ಕಾಲ್ತುಳಿತ ಸಂಭವಿಸಿದಾಗ ಪ್ರವೇಶ ದ್ವಾರದಲ್ಲಿದ್ದ ಮಹಿಳಾ ವಿದ್ಯಾರ್ಥಿಗಳ ಗುಂಪು ಸಿಲುಕಿತ್ತು. ನಮ್ಮೆಲ್ಲರನ್ನು ಒಮ್ಮೆ ಮುಂದಕ್ಕೆ ನಂತರ ಹಿಂದಕ್ಕೆ ತಳ್ಳಲಾಯಿತು. ಜನಸಂದಣಿಯೊಂದಿಗೆ ಮುಂದುವರಿಯುವುದು ಬಿಟ್ಟು ನಾವು ಏನೂ ಮಾಡಲಾಗಲಿಲ್ಲ. ತಳ್ಳಾಟದ ವೇಳೆ ಜನರು ಬಿದ್ದಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

ನಾವು ಸಾಧ್ಯವಾದಷ್ಟು ಬೇಗ ಸಭಾಂಗಣದಿಂದ ನಿರ್ಗಮಿಸಿದೆವು. ಆದರೆ ದುರಂತದ ಪ್ರಮಾಣದ ಬಗ್ಗೆ ನಮಗೆ ತಿಳಿದಿರಲಿಲ್ಲ. ನಾವು ಆಂಬ್ಯುಲೆನ್ಸ್ ಹೊರಡುವುದನ್ನು ನೋಡಿದ್ದೇವೆ ಮತ್ತು ಯಾವುದೋ ಕಾರಣದಿಂದ ಯಾರಿಗಾದರೂ ಸಣ್ಣ ಗಾಯವಾಗಿದೆ ಎಂದು ಭಾವಿಸಿದ್ದೇವೆ. ಇನ್ನೂ ಅನೇಕ ಆಂಬ್ಯುಲೆನ್ಸ್‌ಗಳು ಮತ್ತು ಖಾಸಗಿ ವಾಹನಗಳು ಕ್ಯಾಂಪಸ್‌ಗೆ ಬಂದವು. ಈ ವೇಳೆ ಅಸಲಿ ವಿಚಾರ ನಮ್ಮಗಮನಕ್ಕೆ ಬಂದಿದೆ ಎಂದು ವಿದ್ಯಾರ್ಥಿಯೋರ್ವರು ಹೇಳಿದ್ದಾರೆ.

ಮೃತ ಅತುಲ್ ಥಂಪಿಯ ಸಹಪಾಠಿಗಳಾದ ಅಭಿರಾಮ್ ಕೆಆರ್ ಮತ್ತು ಅರುಣ್ ಪಿಎ ಮಾತನಾಡಿದ್ದು, ಅತುಲ್ ಥಂಪಿಯ ಸಾವು ಮತ್ತು ಗಾಯಗಳಿಗೆ ಒಳಗಾದ ಇತರ ಸ್ನೇಹಿತರ ನೋವನ್ನು ಅರಗಿಸಿಕೊಳ್ಳುವುದು ಕಷ್ಟಕರವಾಗಿದೆ. ಆಡಿಟೋರಿಯಂ ಪ್ರವೇಶಿಸುವಾಗ ಅತುಲ್ ನಮ್ಮ ಹಿಂದೆಯೇ ಇದ್ದರು. ಆಸ್ಪತ್ರೆಗೆ ಕರೆದೊಯ್ದವರು ಕರೆಗಳನ್ನು ಮಾಡಿದ ನಂತರವೇ ದುರಂತದ ಬಗ್ಗೆ ನಮಗೆ ತಿಳಿದಿದೆ. ನಾವು ಈ ವೇಳೆ ಸಭಾಂಗಣದಲ್ಲಿದ್ದೆವು. ಆದರೆ ಪ್ರವೇಶದ್ವಾರದಲ್ಲಿ ಇದು ಸಂಭವಿಸಿದೆ ಎಂದು ನಮಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: ಕೊಚ್ಚಿ: ‘ಟೆಕ್‌ ಫೆಸ್ಟ್‌’ನಲ್ಲಿ ಕಾಲ್ತುಳಿತ; ನಾಲ್ವರು ವಿದ್ಯಾರ್ಥಿಗಳು ಸಾವು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...