Homeಮುಖಪುಟವಿಮರ್ಶಾತ್ಮಕ ಚಿಂತನೆ (Critical thinking) ಪ್ರಾರಂಭಿಸಲು ಒಂದು ಸರಳ ವಿಧಾನ ಇಲ್ಲಿದೆ

ವಿಮರ್ಶಾತ್ಮಕ ಚಿಂತನೆ (Critical thinking) ಪ್ರಾರಂಭಿಸಲು ಒಂದು ಸರಳ ವಿಧಾನ ಇಲ್ಲಿದೆ

- Advertisement -
- Advertisement -

ಜೀವನ ಕಲೆಗಳು : ಅಂಕಣ – 10

ವಿಮರ್ಶಾತ್ಮಕ ಚಿಂತನೆ

ಸ್ಪಷ್ಟ ಮತ್ತು ತರ್ಕಬದ್ಧವಾಗಿ ಯೋಚಿಸುವ ಕಲೆಯನ್ನು ವಿಮರ್ಶಾತ್ಮಕ ಚಿಂತನೆ ಎಂದು ಕರೆಯಬಹುದು. ಯೋಚನೆಯ ಒಂದೊಂದು ಭಾಗಗಳನ್ನು ಅಥವಾ ಯೋಚನೆ/ಹೇಳಿಕೆ/ವಾದಗಳ ನಡುವಿನ ಕೊಂಡಿಯನ್ನು ಬೇರೆ ಬೇರೆ ಪಾರ್ಶ್ವದಿಂದ ತರ್ಕಬದ್ಧವಾಗಿ ವಿಶ್ಲೇಷಿಸಿ, ಅರ್ಥಮಾಡಿಕೊಂಡು, ಅದರ ಆಧಾರದ ಮೇಲೆ ಒಂದು ನಿರ್ಧಾರಕ್ಕೆ ಬರುವುದು ವಿಮರ್ಶಾತ್ಮಕ ಚಿಂತನೆ. ಇತ್ತೀಚಿನ ದಿನಗಳಲ್ಲಿ ಇದರ ಪ್ರಯೋಗವನ್ನು ಅಪ-ಪ್ರಚಾರ (ಫೇಕ್-ನ್ಯೂಸ್) ಗುರುತಿಸಲು ಬಳಸಬಹುದು. ವಿವಿಧ ಮೂಲಗಳಿಂದ ದಿನನಿತ್ಯ ಬರುವ ಮಾಹಿತಿಯ ಮಹಾಪೂರದ ಮೂಕ ಪ್ರೇಕ್ಷಕ/ವಾಚಕ/ಸಂವಾಹಕರಾಗದೆ, ಸತ್ಯಾಸತ್ಯತೆಯನ್ನು ಅರಿಯುವ ವಿವೇಕವೇ ವಿಮರ್ಶಾತ್ಮಕ ಚಿಂತನೆ. ಇದಕ್ಕೆ ಅನೇಕ ಪೂರಕ ಕಲೆಗಳು ಇರಬೇಕು, ಉದಾ: ಅವಲೋಕನ, ವಿಶ್ಲೇಷಣ, ಗ್ರಹಣಶಕ್ತಿ, ವ್ಯಕ್ತಪಡಿಸುವಿಕೆ, ಊಹೆ, ವಿವರಣೆ, ಪ್ರಯೋಗ, ಇತ್ಯಾದಿ. ಇದನ್ನು ವ್ಯಕ್ತಿಯ ಜಾಣತನ ಎಂದರೂ ಸರಿ.

ವಿಮರ್ಶಾತ್ಮಕ ಚಿಂತನೆಯುಳ್ಳ ವ್ಯಕ್ತಿ:

·         ವಿವಿಧ ಯೋಚನೆ/ಹೇಳಿಕೆಗಳ ಪರಸ್ಪರ ಸಂಬಂಧವನ್ನು ಅರ್ಥ ಮಾಡಿಕೊಳ್ಳುವರು.

·         ಈ ವಿವಿಧ ಯೋಚನೆ/ಹೇಳಿಕೆ/ವಾದಗಳ ಮಹತ್ವ/ಸಂಗತವನ್ನು ಇತ್ಯರ್ಥಮಾಡಬಲ್ಲರು.

·         ಅವಶ್ಯಕತೆಗೆ ಬೇಕಾದಷ್ಟು ಮಾಹಿತಿಯನ್ನು ಕಲೆಹಾಕಬಲ್ಲರು.

·         ಪರ/ವಿರುದ್ಧ ವಾದಗಳನ್ನು ಗುರುತಿಸಿ/ಸೃಷ್ಟಿಸಿ/ಅವಲೋಕಿಸಬಲ್ಲರು.

·         ವಾದದಲ್ಲಿ ಇರುವ ಅಸಮರ್ಥತೆ, ತರ್ಕದ ಕೊರತೆಯನ್ನು ಗುರುತಿಸಬಲ್ಲರು.

·         ತಮ್ಮ ಸ್ವಂತ ಅರ್ಥೈಸುವಿಕೆ ಅಥವಾ ವಾದ/ನಂಬಿಕೆ/ಮೌಲ್ಯವನ್ನು ಸಮರ್ಥಿಸಿಕೊಳ್ಳಬಲ್ಲರು.

·         ಸಮಸ್ಯೆಯನ್ನು ಸ್ಥಿರ ಮತ್ತು ವ್ಯವಸ್ಥಿತ ರೀತಿಯಲ್ಲಿ ಎದುರಿಸಬಲ್ಲರು.

·         ವಿಮರ್ಶಾತ್ಮಕ ರೀತಿಯಲ್ಲಿ ಯೋಚಿಸಿ, ಸಮಸ್ಯೆಗೆ ಉತ್ತಮ ಪರಿಹಾರ ದೊರಕಿಸಿಕೊಡಬಲ್ಲರು.

ಎಡ್ವರ್ಡ್ ಡಿ. ಬೋನೋ ಅವರ “ಆರು ಯೋಚಿಸುವ ಟೋಪಿಗಳು” (ಸಿಕ್ಸ್ ಥಿಂಕಿಂಗ್ ಹ್ಯಾಟ್ಸ್) ಎಂಬ ಮಾದರಿ (ಮಾಡಲ್)ವ್ಯಕ್ತಿಯ ಮತ್ತು ಗುಂಪಿನ ವಿಮರ್ಶಾತ್ಮಕ ಚಿಂತನೆಗೆ ಸಹಕಾರಿಯಾಗಿರುತ್ತದೆ. ಇದರ ಪ್ರಕಾರ ಯೋಚಿಸುವವರು ತಮ್ಮ ಬುದ್ಧಿಯನ್ನು ಶಕ್ತಿಶಾಲಿ ಅಸ್ತ್ರವನ್ನಾಗಿ ಬಳಸಿ, ಗಮನವನ್ನು ಕೇಂದ್ರೀಕರಿಸಿ, ತಕ್ಕ ನಿರ್ಧಾರಕ್ಕೆ ಬರಬಹುದು. ಪ್ರತಿಯೊಂದು ಟೋಪಿಗೂ ಬೇರೆ-ಬೇರೆ ಬಣ್ಣ ಕೊಡಲಾಗಿದ್ದು ಪ್ರತಿಯೊಂದು ಬಣ್ಣ ಒಂದು ನಿರ್ದಿಷ್ಟ ಯೋಚನಾ ಲಹರಿ/ವಾದವನ್ನು ಉತ್ತೇಜಿಸುತ್ತದೆ. ಟೋಪಿ ಬದಲಾಯಿಸಿ ಇನ್ನೊಂದು ರೀತಿಯಲ್ಲಿ ಯೋಚಿಸಿ ಅಥವಾ ಚರ್ಚಿಸಬಹುದು, ಇದರಿಂದ ವಿವಿಧ ಪಾರ್ಶ್ವಗಳ ದರ್ಶನವೂ ಆಗುತ್ತದೆ, ಏಕೆಂದರೆ ಪ್ರತಿಯೊಂದು ವಾದ/ಪಕ್ಷವೂ ಅಷ್ಟೇ ಮಹತ್ವದ್ದಾಗಿರುತ್ತದೆ.

ಬಿಳಿ ಟೋಪಿ:ಇದನ್ನು ಧರಿಸಿ ನೀವು ಇರುವ ಮಾಹಿತಿ/ತಥ್ಯವನ್ನು ಗಮನದಲ್ಲಿಟ್ಟುಕೊಂಡು, ವಿಶ್ಲೇಷಿಸಿ, ಹಿಂದಿನ ಆಗು-ಹೋಗುಗಳನ್ನು ಪರಿಗಣಿಸಿ, ಮಾಹಿತಿಯಲ್ಲಿ ಇರುವ ಕೊರತೆಯನ್ನು ಭರಿಸಿಕೊಂಡು ಅಥವಾ ಅದಕ್ಕೆ ಪರ್ಯಾಯ ಹುಡುಕಿಕೊಂಡು, ಯಾವ ನಿರ್ಧಾರಕ್ಕೆ ಬರಬಹುದು ಎಂದು ಯೋಚಿಸಬಹುದು.

ಕೆಂಪು ಟೋಪಿ:ಇದನ್ನು ಧರಿಸಿ ಸಮಸ್ಯೆಗಳತ್ತ ನಿಮ್ಮ ಒಳಗಿನ ಅನಿಸಿಕೆ, ಭಾವನೆಗಳನ್ನು ಬಳಸಿ ಯೋಚಿಸಿ. ಹಾಗೇ ಇತರರು ಹೇಗೆ ಭಾವನಾತ್ಮಕವಾಗಿ ಮತ್ತು ನಿಮ್ಮ ತರ್ಕದ ಬಗ್ಗೆ ಸರಿಯಾಗಿ ಗೊತ್ತಿಲ್ಲದವರು ಹೇಗೆ ಸ್ಪಂದಿಸಬಹುದು ಎಂಬುದನ್ನು ಯೋಚಿಸಿ.

ನೀಲಿ ಟೋಪಿ:ಇದನ್ನು ಧರಿಸಿ ನೀವು ಪ್ರಕ್ರಿಯೆಯಲ್ಲಿರುವ ನಿಯಂತ್ರಣದಿಂದ ಹತೋಟಿಯ ಕೆಲಸ ಮಾಡಬಹುದು. ಯೋಚನೆ ತಂಡದ ಮುಖ್ಯಸ್ಥ ಇದನ್ನು ಬಳಸಿ ಹೊಸ ಯೋಚನೆಗೆ ಕರೆ ನೀಡಬಹುದು ಅಥವಾ ಯೋಚನೆಗಳು ದಾರಿ ತಪ್ಪಿ ಹೋಗುವುದನ್ನು ತಡೆಯಬಹುದು.

ಹಸಿರು ಟೋಪಿ:ಇದನ್ನು ಧರಿಸಿ ನೀವು ಸೃಜನಶೀಲತೆಯಿಂದ ಯೋಚಿಸಬಹುದು. ಇದರಿಂದ ನೀವು ಹೊಸ ಅಥವಾ ಹಳೆಯ ಸಮಸ್ಯೆಗೆ ಹೊಸ ರೀತಿಯ ಪರಿಹಾರ ಕಂಡು ಹಿಡಿಯಬಹುದು. ಇದು ಮುಕ್ತ ಯೋಚನೆಗೆ ಸಹಕಾರಿಯಾಗಿದ್ದು, ಇದರ ಬಗ್ಗೆ ಹೆಚ್ಚಿನ ವಿವಾದ ಇರುವುದಿಲ್ಲ.

ಹಳದಿ ಟೋಪಿ:ಇದನ್ನು ಧರಿಸಿ ನೀವು ಧನಾತ್ಮಕವಾಗಿ ಯೋಚಿಸಬಹುದು. ಇದು ಸಕರಾತ್ಮಕ ದೃಷ್ಟಿಕೋಣವಾಗಿರುವುದರಿಂಡ ಎಲ್ಲಾ ವಿಧವಾದ ಪ್ರಯೋಜನ ಮತ್ತು ಲಾಭಗಳ ಬಗ್ಗೆ ಯೋಚಿಸಬಹುದು. ಇದು ನಿಮ್ಮನ್ನು ಕಷ್ಟಕಾಲದಲ್ಲೂ ಮುಂದೆ ಹೋಗಲು ಪ್ರೇರೇಪಿಸುತ್ತದೆ.

ಕರಿ ಟೋಪಿ:ಇದನ್ನು ಧರಿಸಿ ನಿರ್ಧಾರದ ಬಗ್ಗೆ ಜಾಗೃತೆಯಿಂದ ಮತ್ತು ರಕ್ಷಣೆಯ ದೃಷ್ಟಿಯಿಂದ ಎಲ್ಲಾ ಋಣಾತ್ಮಕ ಪರಿಣಾಮ, ಅನಿಸಿಕೆಗಳ ಬಗ್ಗೆ ಯೋಚಿಸಿ. ಯಾವುದು ನಡೆಯಲಾರದು ಎಂದು ಯೋಚಿಸಿ ಅದರಲ್ಲಿರುವ ಋಣಾತ್ಮಕ ಅಂಶಗಳನ್ನು ಗುರುತಿಸಿ. ಇದರಿಂದ ಅವುಗಳನ್ನು ಬದಲಾಯಿಸಲು, ಹೋಗಲಾಡಿಸಲು ಅಥವಾ ಎದುರಿಸಲು ಪರ್ಯಾಯ ಮಾರ್ಗ ಹುಡುಕಲು ನೆರವಾಗುತ್ತದೆ. ಕರಿ ಟೋಪಿ ನಿಮ್ಮ ಕೆಲಸವನ್ನು ಇನ್ನಷ್ಟು ಕಷ್ಟಕರವಾಗಿಸುತ್ತದೆ ಆದರೆ ಬಿದ್ದಲ್ಲಿ ಏಳುವುದಕ್ಕೆ ಸಹಕಾರಿಯಾಗಿರುತ್ತದೆ. ಇದು ನಿಮ್ಮ ಯೋಜನೆಯ ಅತ್ಯಂತ ಮಹತ್ವದ ಟೋಪಿ ಏಕೆಂದರೆ ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುವವರು ರಸ್ತೆಯ ಅಡೆತಡೆಗಳನ್ನು ನಿರ್ಲಕ್ಷಿಸಿರುತ್ತಾರೆ ಮತ್ತು ಅದಕ್ಕೆ ತಯಾರಿ ನಡೆಸಿರುವುದಿಲ್ಲ.

ವಿಮರ್ಶಾತ್ಮಕ ಚಿಂತನೆ ಪ್ರಾರಂಭಿಸಲು ಒಂದು ಸರಳ ವಿಧಾನ ಪ್ರಯೋಗಿಸಿ ನೋಡಿ:

ಯಾರಾದರೂ ನಿಮಗೆ ಇತ್ತೀಚೆಗೆ ಹೇಳಿದ ಮಾಹಿತಿ/ಹೇಳಿಕೆ ನೆನಪಿಸಿಕೊಳ್ಳಿ. ನಂತರ ಕೆಳಗಿನ ಪ್ರಶ್ನೆ ಸಾಲಾಗಿ ಕೇಳಿ ಮತ್ತು ಉತ್ತರಿಸಿಕೊಳ್ಳಿ.

ಯಾರು ಹೇಳಿದರು?
ನಿಮಗೆ ಅವರು ತಿಳಿದವರೇ? ಅಧಿಕಾರಯುಕ್ತ ಸ್ಥಾನದಲ್ಲಿ ಇರುವವರೇ? ಯಾರು ಹೇಳಿದರು ಎಂಬುದು ಮಹತ್ವವೇ?

ಏನು ಹೇಳಿದರು?
ಅವರು ನಿಮಗೆ ತಥ್ಯಗಳನ್ನು ಅಥವಾ ಅಭಿಪ್ರಾಯವನ್ನು ತಿಳಿಸಿದರೇ? ಎಲ್ಲಾ ವಿಷಯಗಳನ್ನು ತಿಳಿಸಿದರೋ ಥವಾ ಕೆಲವನ್ನು ತಿಳಿಸದೇ ಬಿಟ್ಟರೇ?

ಎಲ್ಲಿ ಹೇಳಿದರು?
ಸಾರ್ವಜನಿಕವಾಗಿಯೋ ಅಥವಾ ಖಾಸಗಿಯಾಗಿಯೋ? ಇತರರು ಅದಕ್ಕೆ ಪ್ರತಿಕ್ರಯಿಸಲು ಅಥವಾ ಬೇರೆ ಕಡೆಯ ಚಿತ್ರಣ ನೀಡಲು ಅವಕಾಶವಿತ್ತೇ?

ಯಾವಾಗ ಹೇಳಿದರು?
ಯಾವುದೇ ಒಂದು ಮುಖ್ಯ ಸಂದರ್ಭದ ಮುಂಚೆಯೋ, ಮಧ್ಯದಲ್ಲಿಯೋ ಅಥವಾ ನಂತರವೋ? ಸಮಯ ವಿಷಯಕ್ಕೆ ಅಷ್ಟು ಮಹತ್ವವೇ?

ಯಾಕೆ ಹೇಳಿದರು?
ಅವರ ಅಭಿಪ್ರಾಯ ನೀಡುವುದಕ್ಕೆ ಕಾರಣ ತಿಳಿಸಿದರೇ? ಇನ್ಯಾರನ್ನಾದರೂ ಚೆನ್ನಾಗಿ ಅಥವಾ ಕೆಟ್ಟದಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದರೇ?

ಹೇಗೆ ಹೇಳಿದರು?
ಹೇಳುವಾಗ ಅವರು ಸಂತೋಷದಿಂದ ಅಥವಾ ದುಃಖದಲ್ಲಿ ಅಥವಾ ಕೋಪದಲ್ಲಿ ಅಥವಾ ಅನ್ಯಮನಸ್ಕರಾಗಿ ಇದ್ದರೇ? ಅವರು ಹೇಳಿದ್ದು ನಿಮಗೆ ಅರ್ಥವಾಯಿತೇ?

ಈ ಪ್ರಶ್ನೋತ್ತರಗಳ ನಂತರ ನಿಮಗೆ ವಿಮರ್ಶಾತ್ಮಕ ಚಿಂತನೆ ಏನು, ಹೇಗೆ ಎನ್ನುವುದು ಸಂಪೂರ್ಣ ಮನವರಿಕೆಯಾಗಿರಬಹುದು ಎಂದು ತಿಳಿದಿದ್ದೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...