Homeಅಂಕಣಗಳುನಿಮಗಿದು ಗೊತ್ತೆ? ಎಳನೀರು ಕಿತ್ತರೆ ಫಸಲು ಹೆಚ್ಚುತ್ತದೆ ಹೊರತು ಕಡಿಮೆಯಾಗುವುದಿಲ್ಲ!

ನಿಮಗಿದು ಗೊತ್ತೆ? ಎಳನೀರು ಕಿತ್ತರೆ ಫಸಲು ಹೆಚ್ಚುತ್ತದೆ ಹೊರತು ಕಡಿಮೆಯಾಗುವುದಿಲ್ಲ!

ಎಷ್ಟು ಎಳನೀರು ಕಿತ್ತು ಕುಡಿದರೂ ಆ ಮರಗಳಲ್ಲಿನ ಎಳನೀರನ್ನು ಖಾಲಿ ಮಾಡಲು ಆಗುತ್ತಿಲ್ಲ. ಈ ಮರಗಳಿಗೆ ನೆಲದಿಂದ ನೀರನ್ನು ತಮ್ಮ ಕಾಂಡದ ಜೀವದಿಂದ ಮೇಲಕ್ಕೆತ್ತಿ ಎಳನೀರು ಮಾಡುವುದೊಂದೇ ಕೆಲಸ.

- Advertisement -
- Advertisement -

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ…: ಭಾಗ-12

ನಿಮ್ಮ ಮೂರು ಮರಗಳು ಮಾತ್ರ ಎಳನೀರು ಬಿಡುತ್ತವೆ, ಬೇರೆ ತೆಂಗಿನ ಮರಗಳು ಎಳನೀರು ಕೊಡುವುದಿಲ್ಲವೇ ಎಂದು ಯಾರಾದರೂ ಕೇಳಿಬಿಡಬಹುದು. ಎಲ್ಲಾ ತೆಂಗಿನ ಮರಗಳು ಖಂಡಿತ ಎಳನೀರು ಬಿಡುತ್ತವೆ, ಅವು ಎಳನೀರಿನ ಮರಗಳಾಗಲು ಆ ಮರಗಳಿಂದ ಎಳನೀರು ಕುಡಿದರೆ ತಾನೇ?, ಇಲ್ಲದಿದ್ದರೆ ಅವು ಅಲ್ಲೆ ನಾವು ಇಲ್ಲೆ. ಇಲಿಗಳು ಯಾದಗಳು ಅವುಗಳ ಎಳನೀರು ಕುಡಿಯುತ್ತವೆ, ಆರೋಗ್ಯದಿಂದ ನೆಗೆದಾಡುತ್ತವೆ, ಅವು ಬಿಟ್ಟ ಎಳನೀರು ಕಾಯಿಗಳಾಗುತ್ತವೆ.

ಬಹುತೇಕ ತೆಂಗಿನ ಬೆಳೆಗಾರರು ಕೆಳಗಿನಿಂದಲೇ ಎಳನೀರು ನೋಡಿ ಆನಂದಿಸುತ್ತಾರೆ. ಸದರಿ ಮಾತಿನಲ್ಲಿ ವ್ಯಂಗ್ಯವಿರುವುದು ಸುಳ್ಳಲ್ಲ. ಬಯಲು ಸೀಮೆಗಳಲ್ಲಿ ತೆಂಗು ಬೆಳೆಯುವ ರೈತರು ಎಳನೀರು, ಕೊಬ್ಬರಿ ಇವೆರಡನ್ನು ಬಳಸುವುದು ತುಂಬಾ ಕಮ್ಮಿ. ತೆಂಗನ್ನು ಅಷ್ಟಾಗಿ ಬೆಳೆಯದ ಉತ್ತರ ಕರ್ನಾಟಕದ ಜನರು ಎಳನೀರನ್ನು ಕುಡಿಯುತ್ತಾರೆ. ಉತ್ತರ ಭಾರತದ ಜನ ಕೊಬ್ಬರಿಯನ್ನು ಯತೇಚ್ಚವಾಗಿ ತಿನ್ನುತ್ತಾರೆ, ಆದರೆ ತೆಂಗು ಬೆಳೆಯುವವರು ಮಾತ್ರ ದಿನಕ್ಕೆ ಒಂದು ಓಳು ಕಾಯನ್ನು ಬಳಸುವುದಕ್ಕೂ ಹಿಂದೆಮುಂದೆ ನೋಡುತ್ತಾರೆ. ಇದಲ್ಲವೆ ವಿಚಿತ್ರ. ಇತ್ತೀಚಿನವರೆಗೂ ಕೊಬ್ಬರಿ ಎಣ್ಣೆಯ ಬಳಕೆಯ ಸುದ್ದಿಯೇ ಇರಲಿಲ್ಲ, ಇದನ್ನು ತಲೆಗೆ ಹಚ್ಚುವುದನ್ನು ಸ್ವಲ್ಪ ರೂಢಿ ಮಾಡಿಕೊಂಡಿದ್ದಾರೆ ಅದೂ ಪ್ಯಾರಾ ಚೂಟ್‌ ನಕಲಿ ಕೊಬ್ಬರಿ ಎಣ್ಣೆಯನ್ನು. ಈಗ ಕೆಟ್ಟಮೇಲೆ ಬುದ್ಧಿ ಬಂದಿದೆ. ಕೊಬ್ಬರಿ ಎಣ್ಣೆಯನ್ನು ಊಟಕ್ಕೆ ಬಳಸಲು ಕೆಲವು ಜನರಾದರೂ ಆರಂಭಿಸಿರುವುದು ಶುಭ ಸೂಚನೆಯಾಗಿದೆ.

ಜಗತ್ತಿನ ಶ್ರೇಷ್ಟ ಪಾನೀಯಗಳಲ್ಲಿ ಎಳನೀರಿಗೆ ಅಗ್ರ ಸ್ಥಾನವಿದೆ. ಪ್ರಾಕೃತಿಕವಾಗಿ ಪ್ಯಾಕ್‌ ಆಗಿ ಸೀಲಾದ ಎಳನೀರನ್ನು ಕುಡಿಯುವ ಪರಿಪಾಠ ಬೆಳೆಯಲೇ ಇಲ್ಲ. ನಮ್ಮ ತಿಪಟೂರು ಸೀಮೆಯಲ್ಲಿ ಯಾರಾದರೂ ಸತ್ತರೆ ಅವರ ಗುಡ್ಡೆಯ ನಾಲ್ಕು ಮೂಲೆಗೆ ಕಟ್ಟಲು ನಾಲ್ಕು ಎಳನೀರನ್ನು ಬಳಸುವುದನ್ನು ಬಿಟ್ಟರೆ, ಶಿವರಾತ್ರಿಯಲ್ಲಿ ಎರಡು, ಕಾಯಿ ಕೆಡವಿದಾಗ ನಾಲ್ಕು ಇಷ್ಟೆ ನಮ್ಮ ಬಳಕೆ.

PC : India Gardening

ತಿಂಗ ತಿಂಗಳಿಗೂ ಹೊಂಬಾಳೆ ಅರಳಿಸಿ, ಹಾಗೇ ತಿಂಗ ತಿಂಗಳಿಗೂ ಫಸಲು ಕೊಡುವ ಈ ಮರದಲ್ಲಿ ಎಳನೀರು ಹೆಚ್ಚು ಕಡಿಮೆ ಇದ್ದೆ ಇರುತ್ತವೆ. ಎಳನೀರು ಕಿತ್ತರೆ ಮರಕ್ಕೆ ತೊಂದರೆಯಾಗುತ್ತದೆ ಎಂಬುದು ಕೆಲವು ಜನರ ನಂಬಿಕೆ, ಎಳನೀರನ್ನೇ ಕಿತ್ತು ಮಾರುವ ಕಾಸರಗೋಡಿನ ಡಾ ಚೌಟವರು ತಮ್ಮ ತೋಟದ ತೆಂಗಿನ ಮರಗಳು ಇನ್ನೂ ಹೆಚ್ಚು ಫಸಲು ಬಿಡುತ್ತವೆ ಎನ್ನುತ್ತಾರೆ. ನಮ್ಮ ಸುತ್ತಲ್ಲೂ ಕೆಲವರು ಎಳನೀರನ್ನೇ ಮಾರುವವರ ಅನುಭವವವೂ ಇದೇ ಆಗಿದೆ.

ಈಗ ನಮ್ಮ ಮೂರು ಎಳನೀರಿನ ಮರಗಳ ವಿಚಾರ. ನಾವು ಬಿಳಿಗೆರೆಯಲ್ಲಿ ಎರಡು ದಿನಗಳ ಎಳನೀರಿನ ಮೇಳವೊಂದನ್ನು ಮಾಡಿದ್ದೆವು. ಎಳನೀರಿನ ಹೆಚ್ಚುಗಾರಿಕೆ, ಮಾರುಕಟ್ಟೆ, ಮಾರಾಟ ಇತ್ಯಾದಿ ವಿಚಾರಗಳನ್ನು ತಿಳಿಸುವುದು, ಎಲ್ಲದಕ್ಕೂ ಮುಖ್ಯವಾಗಿ ಎಳನೀರು ಕುಡಿಯುವ ರೂಢಿ ಹುಟ್ಟು ಹಾಕುವುದು ಇದರ ಆಶಯವಾಗಿತ್ತು. ಈ ಸಂದರ್ಭದಲ್ಲಿ ಶ್ರಿಪಡ್ರೆ, ಚೌಟ, ಅಡಕೆ ಪತ್ರಿಕೆ ಕಾರಂತ, ಜಿ ಎನ್‌ ಎಸ್‌ ರೆಡ್ಡಿ, ಡಾ ನಂಜಪ್ಪ, ಶಿವನಂಜಯ್ಯ ಮುಂತಾದವರೆಲ್ಲ ಬಿಳಿಗೆರೆಗೆ ಬಂದಿದ್ದರು. ತಮ್ಮ ಅನೇಕ ಕೃಷಿ ಅನುಭವಗಳನ್ನು ಹಂಚಿಕೊಂಡಿದ್ದರು. ಎಳನೀರು ಕೇಂದ್ರ ಸ್ಥಾನಕ್ಕೆ ಬಂದು ಚರ್ಚೆಗೆ ಗ್ರಾಸವಾಗಿತ್ತು.

ಎಳನೀರು, ತೆಂಗು ಬೆಳೆಯುವುದರ ಜೊತೆ ಅವುಗಳನ್ನು ಉಪಯೋಗಿಸುವುದನ್ನು ಹೆಚ್ಚು ಮಾಡುವದಕ್ಕೆ ಹಲವು ಸಲಹೆಗಳು ಬಂದವು. ಎಳನೀರು, ಕಡುಬುಗಾಯಿ, ತೆಂಗಿನ ಕಾಯಿ, ತೆಂಗಿನ ಹಾಲು, ಕೊಬ್ಬರಿ, ಕಾಯಿ ಎಣ್ಣೆ, ಕೊಬ್ಬರಿ ಎಣ್ಣೆಗಳನ್ನು ಬಳಸಲು ಸಲಹೆಗಳು ಬಂದವು. ತೆಂತಾ ಮತ್ತು ಕೊಬ್ಬರಿ ಎಣ್ಣೆ ಗಾಣಗಳನ್ನು ಹೋಬಳಿಗೊಂದರಂತೆ ಆರಂಭಿಸುವುದು, ಎಳನೀರು, ನೀರಾ ಘಟಕಗಳನ್ನು ತೆರೆಯುವುದೂ ಸೇರಿದಂತೆ ಇನ್ನಿತರ ವಿಚಾರಗಳು ಮೇಳದ ರುಚಿ ಹೆಚ್ಚಿಸಿದ್ದನ್ನು ನೆನಪಿಸಿಕೊಳ್ಳಲೇಬೇಕು.

ಈ ಮೇಳದಿಂದ ಆಕರ್ಷಿತರಾಗಿ ಕರ್ನಾಟಕದ ಬಹುಭಾಗದಿಂದ ಎರಡು ಸಾವಿರ ಜನ ಆಸಕ್ತರು ಸೇರಿಕೊಂಡಿದ್ದರು, ಆರು ಸಾವಿರಕ್ಕೂ ಹೆಚ್ಚು ಎಳನೀರನ್ನು ಕೊಚ್ಚಿ ಕುಡಿಸಿದೆವು. ಸಾಂಕೇತಿಕ ಐದು ರೂಪಾಯಿ ನಿಗದಿ ಮಾಡಿದ್ದೆವು. ಬಿಡುತ್ತಾರೆಯೇ, ನಮ್ಮೂರಿನ ಜನರು ಬಲು ಉತ್ಸಾಹದಿಂದ ತಾವೇ ಅರ್ಧಕ್ಕೂ ಹೆಚ್ಚು ಎಳನೀರುನ್ನು ಕುಡಿದು ಪ್ರೋತ್ಸಾಹಿಸಿದರು. ಅಂದರೆ ಕೈಗೆ ಸಿಕ್ಕಿದರೆ ಎಲ್ಲರೂ ಎಳನೀರು ಕುಡಿಯುತ್ತಾರೆ ಎಂಬುದು ಆಗ ನಮಗೆ ತಿಳಿಯಿತು. ಆದರೆ ಯಾರು ತಾನೆ ತಿಂಗಳಿಗೊಂದು ಎಳನೀರು ಮೇಳ ಮಾಡಿ ನಾವು ಒಮ್ಮೆ ಮಾತ್ರ ಕೊಟ್ಟಂತೆ, ಐದು ರೂಪಾಯಿಗೆ ಒಂದು ಎಳನೀರನ್ನು ನಿಂಬೆರಸ, ಮೆಣಸು, ಉಪ್ಪು, ಜೇನು ಬೆರಸಿ ಕೊಡುತ್ತಾರೆ ಹೇಳಿ?

ನನ್ನ ಹುಡುಕಾಟವಿದ್ದದ್ದು ಜನ ಯಾವ ಕಾರಣಗಳಿಗೆ ತಮ್ಮ ತೋಟದಲ್ಲಿ ಎಳನೀರು ಕುಡಿಯುವುದಿಲ್ಲ ಎಂಬುದರ ಬಗೆಗೆ. ಒಂದು, ಎಳನೀರು ಕುಡಿಯುವುದು ನಮ್ಮಲ್ಲಿ ಆಹಾರ ಸಂಸ್ಕ್ರತಿಯ ಭಾಗವಾಗದಿರುವುದು, ಎರಡು ಎಳನೀರಿನ ಹೆಚ್ಚುಗಾರಿಕೆಯ ಅರಿವಿನ ಕೊರತೆ, ಕೊಬ್ಬರಿಯ ಆರ್ಥಿಕತೆ, ತೆಂಗಿನ ಮರಗಳು ಎಳನೀರನ್ನು ಬುಡದಲ್ಲಿ ಬಿಡದಿರುವುದು ಇತ್ಯಾದಿ ಕಾರಣಗಳನ್ನು ಪಟ್ಟಿ ಮಾಡಬಹುದು.

ಈಗ ಇರುವ ಪ್ರಶ್ನೆ ಎಳನೀರನ್ನು ಹತ್ತಿರ ಕರೆಯುವುದು, ಆರೋಗ್ಯದಾಯಿ ಎಳನೀರನ್ನು ಕುಡಿಯುವುದು ಹೇಗೆ, ಹಿತ್ತಲ ಗಿಡವನ್ನು ಮದ್ದಾಗಿ ಬಳಸುವುದಕ್ಕಿರುವ ಉಪಾಯವೇನು ಎಂಬುದು.

ನಮ್ಮ ತೋಟದಲ್ಲಿ ಎರಡು ಮೂರು ಚಿಕ್ಕ ಮರಗಳನ್ನು ಎಳನೀರಿನ ಮರಗಳೆಂದು ಘೋಷಿಸಬೇಕು. ಎಳನೀರು ಮರಗಳು ಮತ್ತು ನಮ್ಮ ನಡುವೆ ಒಂದು ಸೇತುವೆ ನಿರ್ಮಾಣ ಮಾಡಿಕೊಳ್ಳಬೇಕು, ಮರ ಹತ್ತಿ ಎಳನೀರು ಕೀಳುವ ದಾತರು ಈಗ ಇಲ್ಲ, ಬಿದಿರಿನ ಜವಣಿಗೆ (ರೋಟಿ ಕಡ್ಡಿ,ಗಳ) ನಮ್ಮ ಸಹಾಯಕ್ಕೆ ಬರುತ್ತದೆ. ಅದರ ತುದಿಗೆ ಕೊನೆಕತ್ತಿ ಕುಡ್ಲನ್ನು ಕಟ್ಟಿದರೆ, ನಮ್ಮ ಮತ್ತು ಎಳನೀರಿನ ನಡುವೆ ಸೇತುವೆ ಸಿದ್ದ. ಎಳನೀರು ನೆಟಕುತ್ತವೆ, ಆಗ ಎಳನೀರಿನ ದ್ರಾಕ್ಷಿ ಹುಳಿಯಾಗದೆ ಸಿಹಿಯಾಗಿ ಪರಿಣಮಿಸುತ್ತವೆ.

ನಿಜ ಆ ಜವಣಿಗೆಯನ್ನು ಮಳೆ ಬಿಸಿಲಿನಿಂದ ಕಾಪಾಡುವುದು, ಯಾರೋ ಹೊತ್ತೊಯ್ಯುವುದು, ಗೆದ್ದಲು ಹಿಡಿಯದಂತೆ ರಕ್ಷಿಸುವುದು ಎಲ್ಲ ಕಷ್ಟವೇ, ಏನು ಮಾಡುವುದು ಬೇರೆ ದಾರಿ ಇಲ್ಲ. ಸಂತೆಶಿವರ ಬಸವರಾಜು ಜವಣಿಗೆಯನ್ನು ರಕ್ಷಿಸಿಡಲು ಒಂದು ಉಪಾಯ ಕಂಡುಕೊಂಡಿದ್ದಾರೆ. ಪಿವಿಸಿ ಪೈಪ್‌ ನ್ನು ನೆಲಕ್ಕೆ ಹೂಳಿ ಅದರೊಳಕ್ಕೆ ಸದರಿ ಜವನಿಗೆಯನ್ನು ಸರಿದು ಇರಿಸುವುದು, ಎರಡೂ ಕಡೆ ಎಂಡ್‌ ಕ್ಯಾಪ್‌ ಹಾಕಿ ಭದ್ರಪಡಿಸಿದರೆ ಒಣಗುವ, ನೆನೆಯುವ, ಗೆದ್ದಲು ಹಿಡಿಯುವ ಅಪಾಯ ಇರುವುದಿಲ್ಲ. ಎಳನೀರು ಮೇಳ ಯಾರಿಗೆ ಎಷ್ಟು ಉಪಯುಕ್ತವಾಯಿತೋ ಗೊತ್ತಿಲ್ಲ. ನನಗೆ ಈ ದಾರಿ ಹಿಡಿಯಲು ಅನುವಾಯಿತು.

ಈ ಎಳನೀರಿನ ದಾರಿ ನನಗೆ ಎಷ್ಟು ಅನುಕೂಲ ಮಾಡಿತೆಂದರೆ ಎಳನೀರು  ಆ ಮೂರು ಮರಗಳಲ್ಲಿ ಯಾವಾಗಲೂ ಎಳನೀರು ಕೈಗೆಟುಕುವಂತಾಯಿತು. ಮನೆ ಜನರು ಎಳನೀರಿನ ಸುಖವನ್ನು ಅನುಭವಿಸತೊಡಗಿದರು. ಮನೆಗೆ ಬಂದವರಿಗೂ ಎಳನೀರು ಸೇವೆ ಆರಂಭವಾಯಿತು. ತೋಟಕ್ಕೆ ಬರುವ ಗೆಳೆಯರಿಗೆ ಅಮ್ಗಳ ಎಳನೀರು ಕುಡಿಸುವುದು ಸಾಧ್ಯವಾಯಿತು. ಸ್ವಲ್ಪ ಬಲಿತ ಎಳನೀರನ್ನು ಅಂದರೆ ಕಡುಬುಗಾಯನ್ನು ಬಳಸಿ ರುಚಿಕರ ನೀರ್ ದೋಸೆ ಮಾಡಲು‌ ಶುರುಮಾಡಿದೆವು. ಎಳನೀರಿನ ಜೊತೆ ಪಾನೀಯ ಸೇವನೆಯು ನಡೆಯುತ್ತಿದೆ.

ಆ ಮೂರು ಮರಗಳಲ್ಲಿ ಯತೇಚ್ಚವಾಗಿ ಎಳನೀರು ಕುಡಿಯ ತೊಡಗಿದ ಮೇಲೆ ಫಸಲು ಮೂರುಪಟ್ಟು ಹೆಚ್ಚಿದೆ. ಎಷ್ಟು ಎಳನೀರು ಕಿತ್ತು ಕುಡಿದರೂ ಆ ಮರಗಳಲ್ಲಿನ ಎಳನೀರನ್ನು ಖಾಲಿ ಮಾಡಲು ಆಗುತ್ತಿಲ್ಲ. ಎಳನೀರು ಕಿತ್ತರೆ ಫಸಲು ಹೆಚ್ಚುತ್ತದೆ ಎಂಬ ಚೌಟವರ ಮಾತು ದೃಢಪಟ್ಟಿದೆ. ಈ ಮರಗಳಿಗೆ ನೆಲದಿಂದ ನೀರನ್ನು ತಮ್ಮ ಕಾಂಡದ ಜೀವದಿಂದ ಮೇಲಕ್ಕೆತ್ತಿ ಎಳನೀರು ಮಾಡುವುದೊಂದೇ ಕೆಲಸ. ಅದಕ್ಕೆ ಇರಬೇಕು ಇವು ಈನಾಡಿ ಎಳನೀರು ಬಿಡುವುದು. ಎಳನೀರು ಕೆಡವಿದಾಗ ಬಿದ್ದು ಒಡೆದುಹೋಗದಂತೆ ಕಾಪಾಡುತ್ತಿರುವ ಅದರಡಿಯ ಒಂದು ಅಡಿ ಎತ್ತರದ ಮಲ್ಚಿಂಗ್‌ (ತೆಂಗಿನ ಮರದ ಗರಿ, ಎಡೆಮಟ್ಟೆ, ಕುರಂಬಳೆ, ಸೀಬಿ, ಎಳನೀರಿನ ಬುಲ್ಡೆ ಇತ್ಯಾದಿಗಳಿಂದ ಆದ ಮುಚ್ಚಿಕೆ)ಗೆ ಶರಣು ಹೇಳಿ ಬರಹ ಮುಗಿಸುವೆ.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ -6: ತೆಂಗಿನ ಗರಿಗಳ ಲೀಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...