ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ತೆಗೆಯಬೇಕು ಎಂದು ಅಭಿಯಾನ ನಡೆಸುತ್ತಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS)ಯ ಮುಖ್ಯಸ್ಥ ರಾಜ್ ಠಾಕ್ರೆ ಅವರಿಗೆ AIMIM ನ ಔರಂಗಾಬಾದ್ ಸಂಸದ ಇಮ್ತಿಯಾಜ್ ಜಲೀಲ್ ಅವರು ಇಫ್ತಾರ್ ಕೂಟದ ಆಹ್ವಾನ ನೀಡಿದ್ದಾರೆ ಎಂದು ವರದಿಯಾಗಿದೆ. MNS ಮುಂದಿನ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡುವ ಸಂಭವವಿದೆ ಎಂದು ಊಹಿಸಲಾಗಿದೆ.
ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ತೆಗೆಯಬೇಕು ಎಂದು ರಾಜ್ ಠಾಕ್ರೆ ಔರಂಗಾಬಾದ್ನಲ್ಲಿ ರ್ಯಾಲಿಯಲ್ಲಿ ಆಯೋಜಿಸಿದ್ದಾರೆ. ಈ ಮಧ್ಯೆ ಅವರಿಗೆ AIMIM ಸಂಸದ ಇಫ್ತಾರ್ ಔತಣ ಕೂಟ ಆಹ್ವಾನ ನೀಡಿದ್ದಾರೆ. ಆದರೆ, ರಾಜ್ ಠಾಕ್ರೆ ಈ ಇಫ್ತಾರ್ ಕೂಟದಲ್ಲಿ ಭಾಗವಹಿಸುತ್ತಾರೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ರಾಜ್ ಠಾಕ್ರೆ ಮೇ 3 ರೊಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವ ಸಂಬಂಧ ಆಡಳಿತಕ್ಕೆ ನೀಡಿದ ಗಡುವಿನ ಹಿನ್ನೆಲೆಯಲ್ಲಿ, ಭಾನುವಾರ ಔರಂಗಾಬಾದ್ನಲ್ಲಿ ತಮ್ಮ ಯೋಜಿತ ರ್ಯಾಲಿಯನ್ನು ನಡೆಸಲಿದ್ದಾರೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಸಚಿನ್, ಲತಾ ಮಂಗೇಶ್ಕರ್ ಟ್ರೋಲ್ಗೊಳಗಾಗಲು ಕೇಂದ್ರ ಸರ್ಕಾರವೇ ಕಾರಣ: ರಾಜ್ ಠಾಕ್ರೆ
ಈ ಮಧ್ಯೆ, ಮಹಾರಾಷ್ಟ್ರದಲ್ಲಿ MNS ಮತ್ತು ಬಿಜೆಪಿ ನಡುವಿನ ಸಂಭವನೀಯ ಮೈತ್ರಿಯ ಬಗ್ಗೆ ಊಹಾಪೋಹಗಳು ಹೆಚ್ಚಾಗ ತೊಡಗಿದೆ. ಆದರೆ MNS ನಿಕಟ ಮೂಲಗಳು ಈ ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಊಹಾಪೋಹಗಳನ್ನು ನಿರಾಕರಿಸಿವೆ.
MNS ರ್ಯಾಲಿಯ ಕುರಿತು ಪ್ರತಿಕ್ರಿಯಿಸಿದ ಶಿವಸೇನೆ ವಕ್ತಾರ ಸಂಜಯ್ ರಾವತ್, “ಅವರು (ರಾಜ್ ಠಾಕ್ರೆ) ತಮ್ಮ ನಿಲುವನ್ನು ಎಷ್ಟು ಬಾರಿ ಬದಲಾಯಿಸಿದ್ದಾರೆ ಎಂಬುದು ಪಿಎಚ್ಡಿ ವಿಷಯವಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ.