Homeಮುಖಪುಟಸುಧಾಮೂರ್ತಿ 'ತುಕ್ಡೆ ತುಕ್ಡೆ ಗ್ಯಾಂಗ್‌ಗೆ ಸಹಾಯ ಮಾಡುತ್ತಿದ್ದಾರೆ' ಎಂದಿದ್ದ RSS ನಂಟಿನ ಮ್ಯಾಗ್‌ಝಿನ್‌

ಸುಧಾಮೂರ್ತಿ ‘ತುಕ್ಡೆ ತುಕ್ಡೆ ಗ್ಯಾಂಗ್‌ಗೆ ಸಹಾಯ ಮಾಡುತ್ತಿದ್ದಾರೆ’ ಎಂದಿದ್ದ RSS ನಂಟಿನ ಮ್ಯಾಗ್‌ಝಿನ್‌

- Advertisement -
- Advertisement -

ಇನ್ಫೊಸಿಸ್‌ನ ಸುಧಾಮೂರ್ತಿ ಅವರನ್ನು ನಿನ್ನೆ ಬಿಜೆಪಿ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿತ್ತು. ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶಿತರಾಗಿ ಘೋಷಿಸಿರುವ ಬೆನ್ನಲ್ಲಿ RSS-ಸಂಯೋಜಿತ ನಿಯತಕಾಲಿಕೆ ಈ ಹಿಂದೆ ಸುಧಾ ಮೂರ್ತಿಯನ್ನು ಮತ್ತು ಇನ್ಫೋಸಿಸ್ ಪೌಂಡೇಶನ್‌ ಬಗ್ಗೆ ಮಾಡಿರುವ ಟೀಕೆ ಮುನ್ನೆಲೆಗೆ ಬಂದಿದೆ.

ಆರೆಸ್ಸೆಸ್‌-ಸಂಯೋಜಿತ ನಿಯತಕಾಲಿಕ ‘ಪಾಂಚಜನ್ಯ’ ಈ ಹಿಂದೆ ಇನ್ಫೋಸಿಸ್ ಪೌಂಡೇಶನ್‌ ಮತ್ತು ಸುಧಾ ಮೂರ್ತಿ ವಿರುದ್ಧ ಭಾರತೀಯ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದ್ದಾರೆ ಮತ್ತು ನಕ್ಸಲರು, ಎಡಪಂಥೀಯರು ಮತ್ತು ತುಕ್ಡೆ ತುಕ್ಡೆ ಗ್ಯಾಂಗ್‌ಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಸೆಪ್ಟೆಂಬರ್ 2021ರಲ್ಲಿ, ಇನ್ಫೋಸಿಸ್ ಅಭಿವೃದ್ಧಿಪಡಿಸಿದ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿನ ದೋಷಗಳ ಹಿನ್ನೆಲೆಯಲ್ಲಿ, ಇನ್ಫೋಸಿಸ್ ನಕ್ಸಲರು, ಎಡಪಂಥೀಯರು ಮತ್ತು ತುಕ್ಡೆ ತುಕ್ಡೆ ಗ್ಯಾಂಗ್‌ಗೆ ಸಹಾಯವನ್ನು ಒದಗಿಸುತ್ತಿದೆ. ದೇಶದಲ್ಲಿ ವಿಭಜಕ ಶಕ್ತಿಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಇನ್ಫೋಸಿಸ್ ಬೆಂಬಲ ನೀಡುತ್ತಿದೆ ಎಂಬ ವಿಷಯ ಈಗಾಗಲೇ ಬಹಿರಂಗವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು.

ಸುಧಾ ಮೂರ್ತಿ ಅವರ ಅಧ್ಯಕ್ಷತೆಯ ಇನ್ಫೋಸಿಸ್ ಫೌಂಡೇಶನ್‌ನಿಂದ ನಿಧಿಯನ್ನು ಪಡೆದ ಕೆಲವು ನ್ಯೂಸ್ ಪೋರ್ಟಲ್‌ಗಳನ್ನು ಉಲ್ಲೇಖಿಸಿದ ನಿಯತಕಾಲಿಕವು, ಸುಧಾಮೂರ್ತಿ ತಪ್ಪು ಮಾಹಿತಿ ನೀಡುವ ವೆಬ್‌ಸೈಟ್‌ಗಳಿಗೆ ಧನಸಹಾಯ ಮಾಡಿದ್ದಾರೆ ಎಂದು ಆರೋಪಿಸಿತ್ತು. ಈ ವೆಬ್‌ಸೈಟ್‌ಗಳು ಸರ್ಕಾರ ಮತ್ತು ಸಂಘಪರಿವಾರವನ್ನು ಟೀಕಿಸುತ್ತಿದೆ ಎಂದು ಹೇಳಿತ್ತು.

ಜಾತಿ ದ್ವೇಷವನ್ನು ಹರಡುವ ಕೆಲವು ಸಂಸ್ಥೆಗಳು ಇನ್ಫೋಸಿಸ್‌ನಿಂದ ಸಹಾಯ ಪಡೆದ ಫಲಾನುಭವಿಗಳೂ ಆಗಿದ್ದಾರೆ. ದೇಶವಿರೋಧಿ ಮತ್ತು ಅರಾಜಕತಾವಾದಿ ಸಂಘಟನೆಗಳಿಗೆ ಕಂಪನಿಯು ಧನಸಹಾಯ ಮಾಡಲು ಕಾರಣವೇನು ಎಂದು ಇನ್ಫೋಸಿಸ್ ಪ್ರವರ್ತಕರನ್ನು ಕೇಳಬೇಕಲ್ಲವೇ? ಅಂತಹ ಶಂಕಿತ ಕಂಪನಿಗಳಿಗೆ ಸರ್ಕಾರಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕೇ? ಎಂದು ವರದಿ ಕೇಳಿತ್ತು.

ಲೇಖನವನ್ನು ಪ್ರಕಟಿಸಿದ ಕೇವಲ ಮೂರು ತಿಂಗಳ ನಂತರ ಸುಧಾ ಮೂರ್ತಿ ಅವರು ಡಿಸೆಂಬರ್ 31, 2021 ರಂದು ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷರಾಗಿ ನಿವೃತ್ತರಾಗಿದ್ದರು. ಈ ಹಿಂದೆ ಬಿಜೆಪಿ ಆರೆಸ್ಸೆಸ್‌ನ ಸಂಯೋಜಿತ ನಿಯತಕಾಲಿಕ ಪಾಂಜನ್ಯ ಸುಧಾಮೂರ್ತಿಗೆ ಟೀಕೆ ಮಾಡಿದೆ. ಆದರೆ ಇದೀಗ ಬಿಜೆಪಿಯಿಂದಲೇ ಸುಧಾಮೂರ್ತಿಯನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವ ಬಗ್ಗೆ ಇನ್ಪೋಸಿಸ್‌ಗೆ ಸಂಪರ್ಕಿಸಿದಾಗ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ ಮತ್ತು ‘ಪಾಂಚಜನ್ಯ’ದ ವಕ್ತಾರರೂ ಕೂಡ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌.ಕಾಂ ವರದಿ ಮಾಡಿದೆ.

2021ರ ವರದಿಯು, ಇನ್ಫೋಸಿಸ್‌ನ ಪ್ರವರ್ತಕರಲ್ಲಿ ಒಬ್ಬರು ಕಾಂಗ್ರೆಸ್ ಟಿಕೆಟ್‌ನಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ನಂದನ್ ನಿಲೇಕಣಿ, ಕಂಪನಿಯ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿಯವರು ಅಧಿಕಾರದಲ್ಲಿರುವ ಸರ್ಕಾರದ ಸಿದ್ಧಾಂತದ ವಿರುದ್ಧದ ವಿರೋಧವನ್ನು ವ್ಯಕ್ತಪಡಿಸಿರುವುದು ಗೌಪ್ಯವಾಗಿಲ್ಲ. ಇನ್ಫೋಸಿಸ್ ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಹೊಂದಿಕೊಂಡಿರುವ ಜನರನ್ನು ಪ್ರಮುಖ ಪೋಸ್ಟ್‌ಗಳಿಗೆ ನೇಮಿಸುತ್ತದೆ. ಇವರಲ್ಲಿ ಹೆಚ್ಚಿನವರು ಬಂಗಾಳದ ಮಾರ್ಕ್ಸ್‌ವಾದಿಗಳು, ಅಂತಹ ಕಂಪನಿಯು ಪ್ರಮುಖ ಸರ್ಕಾರಿ ಟೆಂಡರ್‌ಗಳನ್ನು ಪಡೆದರೆ, ಚೀನಾ ಮತ್ತು (ಪಾಕಿಸ್ತಾನ ಬೇಹುಗಾರಿಕಾ ಸಂಸ್ಥೆ) ಐಎಸ್‌ಐನಿಂದ ಪ್ರಭಾವದ ಬೆದರಿಕೆ ಇಲ್ಲವೇ? ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಇನ್ಫೋಸಿಸ್‌ಗೆ ಒಪ್ಪಂದ ಮಾಡಿಕೊಂಡಿರುವ ಯೋಜನೆಗಳಲ್ಲಿನ ಲೋಪದೋಷಗಳು ಭಾರತೀಯ ಕಂಪನಿಗಳಿಗೆ ಗುತ್ತಿಗೆ ನೀಡುವ ತನ್ನ ನೀತಿಯನ್ನು ಬದಲಾಯಿಸಲು ಸರ್ಕಾರವನ್ನು ಒತ್ತಾಯಿಸುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿಪಕ್ಷಗಳ ತಂತ್ರವಾಗಿರಬಹುದು ಎಂಬ ಅನುಮಾನವನ್ನೂ ಮ್ಯಾಗ್‌ಝಿನ್‌ ಮುಂದಿಟ್ಟಿತ್ತು ಮತ್ತು ಇದು ಆತ್ಮನಿರ್ಭರ ಭಾರತದ ಕಲ್ಪನೆಗೆ ಧಕ್ಕೆ ತರುತ್ತದೆ ಎಂದು ಹೇಳಿತ್ತು.

ಪಾಂಚಜನ್ಯ ವರದಿಯ ಬಗ್ಗೆ ವಿವಾದವಾಗುತ್ತಿದ್ದಂತೆ RSS ನಂತರ ದೂರವಿರಲು ಪ್ರಯತ್ನಿಸಿತು. ಭಾರತೀಯ ಕಂಪನಿಯಾಗಿ, ಇನ್ಫೋಸಿಸ್ ದೇಶದ ಪ್ರಗತಿಗೆ ಪ್ರಮುಖ ಕೊಡುಗೆ ನೀಡಿದೆ. ಇನ್ಫೋಸಿಸ್ ನಡೆಸುತ್ತಿರುವ ಪೋರ್ಟಲ್‌ನಲ್ಲಿ ಕೆಲವು ಸಮಸ್ಯೆಗಳಿರಬಹುದು, ಆದರೆ ಈ ಸಂದರ್ಭದಲ್ಲಿ ಪಾಂಚಜನ್ಯ ಪ್ರಕಟಿಸಿದ ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯವನ್ನು ಮಾತ್ರ ಪ್ರತಿಬಿಂಬಿಸುತ್ತದೆ ಎಂದು ಆರ್‌ಎಸ್‌ಎಸ್ ವಕ್ತಾರ ಸುನೀಲ್ ಅಂಬೇಕರ್ ಹೇಳಿದ್ದರು. ಪಾಂಚಜನ್ಯ ಆರ್‌ಎಸ್‌ಎಸ್‌ನ ಮುಖವಾಣಿ ಅಲ್ಲ ಮತ್ತು ಅದರಲ್ಲಿ ವ್ಯಕ್ತಪಡಿಸಿದ ಲೇಖನ ಅಥವಾ ಅಭಿಪ್ರಾಯಗಳನ್ನು ಆರ್‌ಎಸ್‌ಎಸ್‌ನೊಂದಿಗೆ ಜೋಡಿಸಬಾರದು ಎಂದು ಹೇಳಿದ್ದರು.

ಇದನ್ನು ಓದಿ: ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ: ವಿಡಿಯೋ ಬಿಡುಗಡೆ ಮಾಡಿದ ಕೆನಡಾ ಸುದ್ದಿ ಸಂಸ್ಥೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

0
'ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ' ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ...