ಆಗಸ್ಟ್ 29 ಮತ್ತು 30 ರ ರಾತ್ರಿ ಚೀನಾ ಸೈನ್ಯದ ಚುಶುಲ್ನಲ್ಲಿನ ಆಕ್ರಮಣಕಾರಿ ಪ್ರಯತ್ನಗಳನ್ನು ಭಾರತೀಯ ಸೈನ್ಯ ತಡೆದ ನಂತರ ಪೂರ್ವ ಲಡಾಖ್ನಲ್ಲಿ ಪರಿಸ್ಥಿತಿ ಗಂಭೀರವಾಗಿದೆ.
“ಚುಶುಲ್ ಪ್ರದೇಶದಲ್ಲಿ ಪರಿಸ್ಥಿತಿ ತುಂಬಾ ಉದ್ವಿಗ್ನವಾಗಿದ್ದು, ಚೀನಾ ಸೇನೆ ಸಂಪೂರ್ಣವಾಗಿ ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ. ಭಾರತದ ಸೈನ್ಯ ಪ್ರತ್ಯುತ್ತರ ನೀಡುವಂತೆ ಹೆವಿ-ಕ್ಯಾಲಿಬರ್ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುತ್ತದೆ. ಭಾರತೀಯ ಸೇನೆಯು ಶಸ್ತ್ರಾಸ್ತ್ರಗಳನ್ನು ಹೊಂದಿಸಿ, ದಕ್ಷಿಣ ಪ್ಯಾಂಗಾಗ್ತ್ಸೋ ಮತ್ತು ರೆಂಜನ್ಲಾದ ಚೀನಾದ ಆಕ್ರಮಣವನ್ನು ವಿಶೇಷ ಗಡಿರಕ್ಷಣಾ ಪಡೆಗಳು ಪ್ರತಿ-ಆಕ್ರಮಣ ಮಾಡಿದೆ” ಎಂದು ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ಹೇಳಿದ್ದಾಗಿ ಹಿಂದೂಸ್ಥಾನ್ ಟೈಂಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: ಭಾರತ-ಚೀನಾ ಗಡಿ ಉದ್ವಿಗ್ನತೆ: ಮತ್ತೆ ಲಡಾಖ್ ಗಡಿ ಅತಿಕ್ರಮಿಸಿದ ಚೀನಾ ಪಡೆಗಳು
ಪ್ರಸ್ತುತ ಲಡಾಖ್ನ 1,597 ಕಿ.ಮೀ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಚೀನಾದ ಯಾವುದೇ ಆಕ್ರಮಣವನ್ನು ಹಿಮ್ಮೆಟ್ಟಿಸಲು ಭಾರತೀಯ ಸೇನೆ ತಯಾರಾಗಿದೆ ಎನ್ನಲಾಗಿದೆ.
ಭಾರತದ ಪ್ರತಿದಾಳಿಯು ವಾಸ್ತವಿಕ ನಿಯಂತ್ರಣ ರೇಖೆಯಯಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ ಮತ್ತು ಚೀನಾದ ನಡೆಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಖಚಿತಪಡಿಸಿದೆ. “ಪರಿಸ್ಥಿತಿ ಭೀಕರವಾಗಿದೆ ಮತ್ತು ಚೀನಾದ ಸೂಚನೆಯ ಮೇರೆಗೆ ಚೀನೀ ಸೈನ್ಯ ಭಾರತೀಯ ಸೈನ್ಯವನ್ನು ಹಿಮ್ಮೆಟ್ಟಿಸಲು ಹೊರಟಿದೆ, ಪರಿಸ್ಥಿತಿ ಉಲ್ಬಣಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ” ಎಂದು ಎರಡನೇ ಹಿರಿಯ ಮಿಲಿಟರಿ ಕಮಾಂಡರ್ ಹೇಳಿದ್ದಾರೆ.
ಮಾಸ್ಕೋದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ಸಭೆಯ ಸನಿಹದಲ್ಲೇ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ಯಿ ನಡುವಿನ ಸಭೆ ನಡೆದರೆ ಶಾಂತಿ ಮರುಸ್ಥಾಪನೆಗೊಳ್ಳುವ ಭರವಸೆ ಇದೆ. ಆದರೆ ಚೀನಾ ಸೈನ್ಯದ ಆಕ್ರಮಣಕಾರಿ ನಡೆಯು ಈ ರಾಜತಾಂತ್ರಿಕ ಉಪಕ್ರಮವನ್ನು ತಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಲಡಾಖ್ನಲ್ಲಿ ಚೀನಾ ಸೈನ್ಯದ ಆಕ್ರಮಣ ನಡೆಯುತ್ತಿರುವಾಗಲೂ, ಭಾರತದ ರಾಷ್ಟ್ರೀಯ ಭದ್ರತಾ ಯೋಜಕರು ಲಡಾಖ್ನಲ್ಲಿ ಅಥವಾ 3,488 ಕಿ.ಮೀ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಎಲ್ಲಿಯೂ ಯಾವುದೇ ಪ್ರಾದೇಶಿಕ ರಾಜಿ ಮಾಡಿಕೊಳ್ಳಬಾರದು ಎಂಬ ಸ್ಪಷ್ಟ ನಿರ್ದೇಶನಗಳೊಂದಿಗೆ ಎಲ್ಲಾ ನಡೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: ಲಡಾಖ್ನಲ್ಲಿನ ಇತ್ತೀಚಿನ ಉದ್ವಿಗ್ನತೆಗೆ ಭಾರತವೇ ಕಾರಣ; ಚೀನಾ ಸೇನೆ ಆರೋಪ