Homeದಿಟನಾಗರಫ್ಯಾಕ್ಟ್‌ಚೆಕ್: ಜಿಡಿಪಿ ಪಾತಾಳದಲ್ಲಿದ್ದರೂ ಸುಳ್ಳು ಹೇಳುತ್ತಿರುವ ಕರ್ನಾಟಕ ಬಿಜೆಪಿ..

ಫ್ಯಾಕ್ಟ್‌ಚೆಕ್: ಜಿಡಿಪಿ ಪಾತಾಳದಲ್ಲಿದ್ದರೂ ಸುಳ್ಳು ಹೇಳುತ್ತಿರುವ ಕರ್ನಾಟಕ ಬಿಜೆಪಿ..

ಭಾರತದ ಸಂಖ್ಯಾಶಾಸ್ತ್ರೀಯ ಕಚೇರಿ ಬಿಡುಗಡೆ ಮಾಡಿದ ಅಂಕಿ ಅಂಶದ ಪ್ರಕಾರ 2021ರ ಮೊದಲ ತ್ರೈಮಾಸಿಕ ಏಪ್ರಿಲ್-ಜೂನ್ ಅವಧಿಯಲ್ಲಿ 23.9ರ ಋಣಾತ್ಮಕ ಕುಸಿತ ಕಾಣುವ ಮೂಲಕ ಮಹಾ ಆರ್ಥಿಕ ಕುಸಿತಕ್ಕೆ ಸಾಕ್ಷಿಯಾಗಿದೆ.

- Advertisement -
- Advertisement -

ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸುವುದರೊಂದಿಗೆ ವಿಶ್ವದ ಪ್ರಮುಖ ಆರ್ಥಿಕತೆಗಳು ದೊಡ್ಡಮಟ್ಟದ ಹೊಡೆತವನ್ನು ಅನುಭವಿಸುತ್ತಿದ್ದರೆ, ಭಾರತವು 2020 ರಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ಕಾಣುತ್ತಿದೆ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ಸ್ಥಾನಮಾನವನ್ನು ಉಳಿಸಿಕೊಂಡಿದೆ ಎಂದು ಕರ್ನಾಟಕ ಬಿಜೆಪಿ ಪಕ್ಷದ ಫೇಸ್‌ಬುಕ್‌ನಲ್ಲಿ ಆಗಸ್ಟ್ 23 ರಂದು ಪೋಸ್ಟ್ ಮಾಡಿದೆ. ಅದು ನಿಜವೇ?

ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸುವುದರೊಂದಿಗೆ ವಿಶ್ವದ ಪ್ರಮುಖ ಆರ್ಥಿಕತೆಗಳು ದೊಡ್ಡಮಟ್ಟದ ಹೊಡೆತವನ್ನು…

Posted by BJP Karnataka on Sunday, August 23, 2020

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿ ಇಲ್ಲಿದೆ.

ಪೋಸ್ಟ್‌ನಲ್ಲಿನ ಚಿತ್ರದಲ್ಲಿ ಮಾಹಿತಿ ಮೂಲ ಐಎಂಎಫ್ ಎಂದು ನಮೂದಿಸಿದೆ. ಅದರ ಆಧಾರದಲ್ಲಿ ಐಎಂಎಫ್‌ ಈ ಕುರಿತು ಹುಡುಕಿದಾಗ 2020ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿರುವ ವರ್ಲ್ಡ್ ಎಕಾನಾಮಿಕ್ ಔಟ್‌ಲುಕ್ ವರದಿ ಕಾಣುತ್ತದೆ. ಅದರಲ್ಲಿ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ವಿಶ್ವದ ಹಲವು ಆರ್ಥಿಕತೆಗಳ ಬೆಳವಣಿಗೆ ದರವನ್ನು ಅಂದಾಜಿಸಲಾಗಿದೆ.

ಆದರೆ 2020ರ ಜೂನ್ ತಿಂಗಳಿನಲ್ಲಿ ಐಎಂಎಫ್ ಮತ್ತೊಂದು ವರದಿಯನ್ನು ಬಿಡುಗಡೆಗೊಳಿಸಿದೆ. ಆ ವರದಿಯಲ್ಲಿ 2020ರ ಭಾರತದ ಜಿಡಿಪಿ ಬೆಳವಣಿಗೆಯು -4.5 ಕ್ಕೆ ಕುಸಿದಿದ್ದು, ಚೀನಾ ಮಾತ್ರವೇ ಸಕರಾತ್ಮಕ (1.0) ಬೆಳವಣಿಗೆ ಹೊಂದಿದೆ ದೇಶವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿನ ಪ್ರತಿಪಾದನೆ ಹಿಂದಿನದೇ ಹೊರತು ಇತ್ತೀಚಿನದಲ್ಲ ಎಂದು ಹೇಳಬಹುದಾಗಿದೆ.

ಇನ್ನು ಬಿಜೆಪಿಯು ಆಗಸ್ಟ್ 23 ರಂದು ಈ ರೀತಿ ಭಾರತದ ಜಿಡಿಪಿ ಮಾತ್ರ ಸಕರಾತ್ಮಕವಾಗಿದೆ ಎಂದು ಪೋಸ್ಟ್ ಮಾಡಿದೆ. ಆದರೆ ಅದೇ ಆಗಸ್ಟ್ 31 ರಂದು ಅಂದರೆ ಒಂದು ವಾರದ ನಂತರ ಭಾರತದ ಸಂಖ್ಯಾಶಾಸ್ತ್ರೀಯ ಕಚೇರಿ ಬಿಡುಗಡೆ ಮಾಡಿದ ಅಂಕಿ ಅಂಶದ ಪ್ರಕಾರ 2021ರ ಮೊದಲ ತ್ರೈಮಾಸಿಕ ಏಪ್ರಿಲ್-ಜೂನ್ ಅವಧಿಯಲ್ಲಿ 23.9ರ ಋಣಾತ್ಮಕ ಕುಸಿತ ಕಾಣುವ ಮೂಲಕ ಮಹಾ ಆರ್ಥಿಕ ಕುಸಿತಕ್ಕೆ ಸಾಕ್ಷಿಯಾಗಿದೆ.

1996 ರಿಂದಲೂ ತ್ರೈಮಾಸಿಕ ಜಿಡಿಪಿ ಅಂಕಿಅಂಶ ಬಿಡುಗಡೆ ಮಾಡುತ್ತಿದ್ದರೂ ಇದೇ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ಜಿಡಿಪಿ ಕುಸಿತ ಕಂಡಿದೆ. ಈ ರೀತಿಯ ಕುಸಿತಕ್ಕೆ ಕೊರೊನಾ ಲಾಕ್‌ಡೌನ್‌ ಕಾರಣ ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಮೋದಿಯವರು ಕೈಗೊಂಡ ನೋಟು ಅಮಾನ್ಯೀಕರಣ, ಜಿಎಸ್‌ಟಿ ಸೇರಿದಂತೆ ಮುಂದಾಲೋಚನೆಯಿಲ್ಲದ ಕ್ರಮಗಳು ಹಾಗೂ ಆರ್ಥಿಕತೆಯನ್ನು ನಿಭಾಯಿಸುವಲ್ಲಿ ಸರ್ಕಾರ ಎಡವಿರುವುದು ಇಂದಿನ ಮಹಾಕುಸಿತಕ್ಕೆ ಕಾರಣ ಎಂದು ದೂರಿದ್ದಾರೆ.

ಸಿಕ್ಕಿದ್ದೇಚಾನ್ಸ್ ಅಂತ ಎಲ್ಲವನ್ನೂ ಸೇರಿಸಿ ದೂಡಿದ್ದು!- – – – – – – – – – ಈವತ್ತು ಪತ್ರಿಕೆಗಳಲ್ಲಿ GDP ಕುಸಿತದ ವರದಿಯ “ಸ್ಪಿನ್”…

Posted by Rajaram Tallur on Monday, August 31, 2020

ಹಾಗಾಗಿ ಜಿಡಿಪಿ ಪಾತಾಳ ಸೇರುತ್ತಿದ್ದರೂ ಬಿಜೆಪಿ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ನಾವೇ ವಿಶ್ವಗುರು ಎಂದು ಹೇಳಿಕೊಳ್ಳುತ್ತಿರುವುದು ಸಂಪೂರ್ಣ ಸುಳ್ಳಾಗಿದೆ.


ಇದನ್ನೂ ಓದಿ: ಐತಿಹಾಸಿಕ ಕುಸಿತಕ್ಕೆ ಸಾಕ್ಷಿಯಾದ ಭಾರತದ ಆರ್ಥಿಕತೆ; ವರ್ಷದ ಮೊದಲ ತ್ರೈಮಾಸಿಕದಲ್ಲೇ ಶೇ.-23.9 ರಷ್ಟು ಕುಸಿತ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಂದುವರಿದ ಬಿಜೆಪಿ ನಾಯಕರ ದ್ವೇಷ ಭಾಷಣ; ‘ಕಾಂಗ್ರೆಸ್ ದೇಶದಲ್ಲಿ ಷರಿಯಾ ಕಾನೂನು ಜಾರಿಗೆ ತರಲಿದೆ’...

0
ಸಂಪತ್ತು ಮರು ಹಂಚಿಕೆ ಕುರಿತು ದ್ವೇಷ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ನಂತರ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಮಂಗಳವಾರ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 'ಕಾಂಗ್ರೆಸ್...