Homeಮುಖಪುಟದೆಹಲಿ ಹಿಂಸಾಚಾರದಲ್ಲಿ ಫೇಸ್‌ಬುಕ್ ಸಹ ಆರೋಪಿ: ಶಾಸಕಾಂಗ ಸಮಿತಿ

ದೆಹಲಿ ಹಿಂಸಾಚಾರದಲ್ಲಿ ಫೇಸ್‌ಬುಕ್ ಸಹ ಆರೋಪಿ: ಶಾಸಕಾಂಗ ಸಮಿತಿ

ದೆಹಲಿ ಅಲ್ಪಸಂಖ್ಯಾತರ ಆಯೋಗ ರಚಿಸಿದ್ದ ಸತ್ಯ ಶೋಧನಾ ಸಮಿತಿ ವರದಿ ಸಲ್ಲಿಸಿದ್ದು, ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರ ಭಾಷಣವನ್ನು ಮುಸ್ಲಿಂ ವಿರೋಧಿ, ಹಿಂಸಾಚಾರಕ್ಕೆ ಪ್ರಚೋದನಕಾರಿ ಎಂದು ಗುರುತಿಸಿದೆ.

- Advertisement -
- Advertisement -

ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಫೇಸ್‌ಬುಕ್ ಸಹ ಆರೋಪಿಯಾಗಬೇಕು ಎಂದು ಶಾಂತಿ ಮತ್ತು ಸಾಮರಸ್ಯದ ಸಭೆಯಲ್ಲಿ ದೆಹಲಿ ಶಾಸಕಾಂಗ ಸಮಿತಿಯ ವರದಿ ತಿಳಿಸಿದೆ.

ದೆಹಲಿ ಗಲಭೆಗಳ ಕುರಿತು ಸತ್ಯಾಸತ್ಯತೆಗಳನ್ನು ಕಂಡುಹಿಡಿಯಲು ದೆಹಲಿ ಅಲ್ಪಸಂಖ್ಯಾತರ ಆಯೋಗ ರಚಿಸಿದ್ದ ಸತ್ಯ ಶೋಧನಾ ಸಮಿತಿ ವರದಿ ಸಲ್ಲಿಸಿದ್ದು, ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಭಾಷಣವನ್ನು ಮುಸ್ಲಿಂ ವಿರೋಧಿ, ಹಿಂಸಾಚಾರಕ್ಕೆ ಪ್ರಚೋದನಕಾರಿ ಎಂದು ಗುರುತಿಸಿದೆ.

ಫೆಬ್ರವರಿ 24-25ರಂದು ಅಮೆರಿಕಾ ಅಧ್ಯಕ್ಷರ ಭಾರತ ಭೇಟಿ ಸಂದರ್ಭದಲ್ಲಿ “ಮೂರು ದಿನಗಳೊಳಗೆ ಪೊಲೀಸರು ಪ್ರತಿಭಟನಾಕಾರರನ್ನು ತೆಗೆದುಹಾಕಬೇಕೆಂದು ಒತ್ತಾಯಿಸುತ್ತೇನೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೆಹಲಿಯಲ್ಲಿ ಇರುವವರೆಗೂ ನಾವು ಕಾಯುತ್ತೇವೆ. ಆದರೆ ಅದರ ನಂತರ, ರಸ್ತೆಗಳನ್ನು ತೆರವುಗೊಳಿಸದಿದ್ದರೆ ನಾವು ಪೊಲೀಸರನ್ನು ಕೇಳುವುದಿಲ್ಲ, ಬೀದಿಗಿಳಿಯಬೇಕಾಗುತ್ತದೆ” ಎಂದು ಪೊಲೀಸ್‌ ಅಧಿಕಾರಿಗಳ ಎದುರಿಗೆ ಕಪಿಲ್ ಮಿಶ್ರಾ ಆಡಿದ್ದ ಮಾತುಗಳು ವೈರಲ್‌ ಆಗಿದ್ದವು.

ಇದನ್ನೂ ಓದಿ; ದೆಹಲಿ ಹಿಂಸಾಚಾರಕ್ಕೆ ಪ್ರಚೋದನೆ: BJPಯ ಕಪಿಲ್‌ ಮಿಶ್ರಾ ವಿರುದ್ಧ ದೂರು ದಾಖಲು

ವಾಲ್ ಸ್ಟ್ರೀಟ್ ಜರ್ನಲ್ ವರದಿಯಂತೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲು ಫೇಸ್‌ಬುಕ್‌ನಲ್ಲಿ ಕಾರ್ಯನಿರ್ವಹಿಸಿದ್ದ ಅಂಖಿದಾಸ್ ದ್ವೇಷ ಭಾಷಣಗಳನ್ನು ಮಾಡುವ ಕನಿಷ್ಟ ಮೂವರು ಬಿಜೆಪಿ ನಾಯಕರನ್ನು ರಕ್ಷಿಸಿದ್ದು, ಅವರಲ್ಲಿ ಕಪಿಲ್ ಮಿಶ್ರಾ ಕೂಡ ಒಬ್ಬರಾಗಿದ್ದಾರೆ.

ಹಿಂಸಾಚಾರ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಮಾರ್ಚ್ ತಿಂಗಳಲ್ಲಿ ಶಾಂತಿ ಮತ್ತು ಸಾಮರಸ್ಯ ಸಮಿತಿ ರಚಿಸಿತ್ತು. ಈ ಸಮಿತಿಯು ಸೌರಭ್ ಭಾರದ್ವಾಜ್, ಅತಿಶಿ, ರಾಘವ್ ಚಾಡ್ಡಾ, ಅಬ್ದುಲ್ ರೆಹಮಾನ್, ಅಜಯ್ ಕುಮಾರ್ ಮಹಾವರ್, ಬಿ.ಎಸ್.ಜೋನ್, ದಿಲೀಪ್ ಪಾಂಡೆ, ಜಮೈಲ್ ಸಿಂಗ್ ಮತ್ತು ಕುಲದೀಪ್ ಕುಮಾರ್‌ರನ್ನು ಒಳಗೊಂಡಿತ್ತು. ಇದರಲ್ಲಿ ಬಹಳಷ್ಟು ಜನ ಆಪ್‌ ಶಾಸಕರಾಗಿದ್ದಾರೆ.

ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ವರದಿ ಬಳಿಕ ಎಚ್ಚೆತ್ತ ಶಾಂತಿ ಮತ್ತು ಸಾಮರಸ್ಯ ಸಮಿತಿ, ಅಂಖಿದಾಸ್ ಸೇರಿದಂತೆ ಫೇಸ್‌ಬುಕ್ ಅಧಿಕಾರಿಗಳನ್ನು ಕರೆಸಿ ಭಾರತದಲ್ಲಿ ದ್ವೇಷದ ವಿಷಯಗಳನ್ನು ಹರಡುವ ಬಗ್ಗೆ ವಿಚಾರಣೆ ನಡೆಸುವುದಾಗಿ ಘೋಷಿಸಿತ್ತು.

ದೆಹಲಿ ಹಿಂಸಾಚಾರದ ಬಗ್ಗೆ ಪರಿಶೀಲಿಸಲು ಸಮಿತಿಯ ಇಬ್ಬರು ಸದಸ್ಯರು  ಆಗಸ್ಟ್ 25 ರಂದು ಪರ್ತಕರ್ತರ ಜೊತೆಗೆ ಮಾತನಾಡಿದ್ದಾರೆ.  ಅವರಲ್ಲಿ “ದಿ ರಿಯಲ್ ಫೇಸ್ ಆಫ್ ಫೇಸ್‌ಬುಕ್‌ ಇನ್ ಇಂಡಿಯಾ” ದ ಸಹ ಲೇಖಕ ಪರಂಜೋಯ್ ಠಾಕುರ್ತಾ ಕಳೆದ 6-7 ವರ್ಷಗಳಲ್ಲಿ ನಡೆದ ಹತ್ಯೆಗಳ ಹಿಂದೆ ಫೇಸ್‌ಬುಕ್ ಮತ್ತು ವಾಟ್ಸಾಪ್ ಮೇಸೆಜ್‌ಗಳ ಕೈವಾಡವಿದೆ ಎಂದಿದ್ದಾರೆ. ಆದರೆ ಮುಖಪುಟದಲ್ಲಿ ಪೋಸ್ಟ್ ಹಾಕಿದವರ ಮೂಲವನ್ನು ಬಿಟ್ಟುಕೊಡುವುದಿಲ್ಲ ಎಂದು ಸಮಿತಿ ಬಳಿ ಹೇಳಿದ್ದಾರೆ.

ಇನ್ನು ಫೇಸ್‌ಬುಕ್ ಮಾನ್ಯತೆ ಹೊಂದಿಲ್ಲದ ನ್ಯೂಸ್ ಚಾನೆಲ್‌ಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಇವುಗಳ ಕೆಲಸ ಬರೀ ದ್ವೇಷ ಬಿತ್ತುವ, ಸುಳ್ಳನ್ನು ಆಳವಾಗಿಸಿ ಬೇರೂರಿಸುವುದೇ ಆಗಿದೆ. ಸಾಮರಸ್ಯ ಮತ್ತು ಭ್ರಾತೃತ್ವ ಬೆಳೆಸುವ ವಿಚಾರಗಳನ್ನು ತೆಗೆದುಹಾಕಿ ಕೋಮುಗಲಭೆಗೆ ಕಾರಣವಾಗುವಂತಹದನ್ನು ಪ್ರಚಾರ ಮಾಡುತ್ತದೆ ಎಂದು ಶಾಸಕಾಂಗ ಸಮಿತಿ ತಿಳಿಸಿದೆ.

ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ಪತ್ರಿಕಾಗೋಷ್ಟಿ ನಡೆಸಿದ ಸಮಿತಿಯ ರಾಘವ್ ಚಾಡ್ಡಾ ಫೇಸ್‌ಬುಕ್‌ಅನ್ನು ಸಹ ಆರೋಪಿಯಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದ್ದಾರೆ.  ಫೇಸ್‌ಬುಕ್ ಇಂತಹ ಸಂದೇಶಗಳ ವಿರುದ್ಧದ ದೂರುಗಳನ್ನು ಸ್ವೀಕರಿಸುವ ಬದಲು ದೋಷಾರೋಪಣೆ ಮಾಡುವ ವಸ್ತು ಎಂದು ತಿಳಿಸುತ್ತದೆ ಎಂದು ಶಾಸಕ ರಾಘವ್ ಚಾಡ್ಡಾ ತಿಳಿಸಿದ್ದಾರೆ.


ಇದನ್ನೂ ಓದಿ:BJP ಗೆಲುವಿಗೆ ಫೇಸ್‌ಬುಕ್ ಕೆಲಸ: ತನಿಖೆಗೆ ರಾಹುಲ್ ಗಾಂಧಿ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತವು ‘ಪೊಲೀಸ್ ರಾಜ್’ ಅಲ್ಲ: ಜಮ್ಮು ಕಾಶ್ಮೀರ ಹೈಕೋರ್ಟ್

0
ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ 26 ವರ್ಷದ ಯುವಕನ ಬಂಧನವನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ರದ್ದುಗೊಳಿಸಿದ್ದು, 'ಭಾರತವು ಪೊಲೀಸ್ ರಾಜ್' ಅಲ್ಲ ಎಂದಿದೆ. ನ್ಯಾಯಮೂರ್ತಿ ರಾಹುಲ್ ಭಾರ್ತಿ ಅವರು ಮಾರ್ಚ್ 22 ರಂದು ನೀಡಿದ್ದ...