Homeಅಂತರಾಷ್ಟ್ರೀಯಇಂದಿನ ಭಾರತ -ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಹೀಗಾದರೆ ಹೇಗೆ..? 

ಇಂದಿನ ಭಾರತ -ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಹೀಗಾದರೆ ಹೇಗೆ..? 

- Advertisement -
- Advertisement -

| ಅನಿಲ್ ಕುಮಾರ್ ಗುನ್ನಾಪುರ್ |

ಇಂದು ಭಾರತ ಪಾಕಿಸ್ತಾನ ನಡುವಿನ ವಿಶ್ವಕಪ್ ಕ್ರಿಕೆಟ್ ನ ಲೀಗ್ ಹಂತದ ಪಂದ್ಯವಿದೆ. ಕೋಟ್ಯಾಂತರ ಅಭಿಮಾನಿಗಳು ಈ ರಸದೌತಣವನ್ನು ಸವಿಯಲು ಕಾತುರರಾಗಿದ್ದಾರೆ. ಮಳೆ ಬರದಿದ್ದರೆ ಅತ್ಯುತ್ತಮ ಪಂದ್ಯವಾಗಲಿದೆ. ಆದರೆ ಇದೇ ಸಂದರ್ಭದಲ್ಲಿ ಕೆಲ ಮಾಧ್ಯಮಗಳು ಇದನ್ನು ಭಾರತ ಪಾಕ್ ನಡುವಿನ ಯುದ್ಧವೆಂಬಂತೆ ಬಿಂಬಿಸುತ್ತಿವೆ. ಪಾಕಿಸ್ತಾನ ಹಲವು ವಿಚಾರಗಳಲ್ಲಿ ತಪ್ಪು ಮಾಡಿದೆ. ಅದಕ್ಕಾಗಿ ಕಾನೂನು ಮತ್ತು ರಾಜತಾಂತ್ರಿಕ ರೀತಿಯ ಕ್ರಮಗಳಿಗೆ ಮುಂದಾಗಬೇಕೆ ಹೊರತು ಕ್ರೀಡಿಯಲ್ಲಿ ಯುದ್ದ ತರುವುದು ಸರಿಯಲ್ಲ. ಕ್ರೀಡೆ ಜಗತ್ತಿನ ಜನರ ಮನಸ್ಸುಗಳನ್ನು ಬೆಸೆಯುವ ಉದ್ದೇಶ ಹೊಂದಿದೆ. ಅದು ಸಾಧ್ಯವಾಗಲಿ ಎಂದು ಸರಿಯಾಗಿ ಎರಡು ವರ್ಷಗಳ ಹಿಂದೆ ಅನಿಲ್ ಕುಮಾರ್ ಗುನ್ನಾಪುರ್ ಬರೆದಿದ್ದ ಹೃದಯಸ್ಪರ್ಶಿ ಬರಹವನ್ನು ಇಲ್ಲಿ ಮತ್ತೆ ಪ್ರಕಟಿಸುತ್ತಿದ್ದೇವೆ.

ಇಂದಿನ ಭಾರತ -ಪಾಕಿಸ್ತಾನ ಕ್ರಿಕೆಟ್ ಫೈನಲ್  ಪಂದ್ಯದಲ್ಲಿ ಹೀಗಾದರೆ ಹೇಗೆ..? 

ಯಾವುದಾದರೂ ಒಂದು ತಂಡ ಗೆಲ್ಲಲು ಕೊನೆ ಎಸೆತಕ್ಕೆ ಎರಡು ರನ್ ಬೇಕಿದೆ… ಬ್ಯಾಟಿಂಗ್ ಮಾಡಲು ನಿಂತವನಿಗೆ “ಶತಕ” ಗಳಿಸಲು ನಾಲ್ಕು ರನ್ ಬೇಕಿದೆ. ಇನ್ನೇನು ಬೌಂಡರಿ ಹೋಯಿತು ಎನ್ನುವಷ್ಟರಲ್ಲಿ ಎರಡು ರನ್ ಓಡಿ ಗೆಲುವಿನ ನಗೆ ಬೀರಿದ ತಂಡದ ಖುಷಿ ಒಂದು ಕಡೆಯಾದರೆ “ಗೆಲುವಿಗೆ ಕಾರಣನಾದ ಬ್ಯಾಟ್ಸ್ ಮನ್” ಎರಡೇ ರನ್ ಗಳಿಂದ ಶತಕ ತಪ್ಪಿಸುಕೊಳ್ಳುತ್ತಾನೆಂದು ಅಭಿಮಾನಿಗಳು ಕೈಕೈ ಹಿಚಿಕೊಳ್ಳುತ್ತಿರುವ ಸಂದರ್ಭದಲ್ಲಿ…. ಒಂದು ಅಚ್ಚರಿ ನಡೆದೇ ಬಿಡುತ್ತದೆ.

ಆ ಫೀಲ್ಡರ್….  ಈಗಾಗಲೇ ಎರಡು ರನ್ ಓಡಿ ಗೆಲುವಿನ ಸಂಭ್ರಮದಲ್ಲಿ ತೇಲುತ್ತಿದ್ದವರಿಗೆ…. ಒಂದು ಟ್ವಿಸ್ಟ್ ಕೊಟ್ಟು ಇಡೀ ಅಭಿಮಾನಿಗಳ ಮನದಲ್ಲಿ ಮತ್ತೊಂದು ಕೋಲಾಹಲ ಎಬ್ಬಿಸಿ ಬಿಡುತ್ತಾನೆ. ಸಲೀಸಾಗಿ ತನ್ನ ಸೇರುತ್ತಿದ್ದ ಬಾಲ್ ನ್ನು ಬೇಕೆಂತಲೇ ಬೌಂಡರಿಗೆ ಬಿಟ್ಟು ಬಿಡುತ್ತಾನೆ.

ಮತ್ತೆರೆಡು ರನ್ ಪಡೆದ ಬ್ಯಾಟ್ಸ್ ಮನ್  “ಶತಕ” ಭಾರಿಸಿ ಕುಣಿದಾಡುತ್ತಾನೆ. ನಂತರ “ಮ್ಯಾನ್ ಆಪ್ ದಿ ಮ್ಯಾಚ್” ಪಡೆದು ಅಭಿಪ್ರಾಯ ಹಂಚಿಕೊಳ್ಳುವಾಗ ಹೇಳುತ್ತಾನೆ.  ನಮ್ಮ ಮನೆಯಲ್ಲಿ ನನ್ನ ತಂದೆ ತಿನ್ನಲು ಹಣ್ಣು ಹಂಪಲು ತಂದಾಗ ನನ್ನ ಸಹೋದರ  ತನ್ನ ಪಾಲನ್ನೂ ನನಗೆ ಕೊಟ್ಟು ಖುಷಿ ಗೊಳಿಸುತ್ತಿದ್ದ… ಆದರಿಂದು ನಮ್ಮಣ್ಣ ನಾನು ಕಾರಣಾಂತರಗಳಿಂದ  ದೂರಾಗಿದ್ದೇವೆ. ಹೌದು. ಇಂದಲ್ಲಾ ನಾಳೆ ನಾವು ಒಂದಾಗುತ್ತೇವೆ. ನಮ್ಮ ನಡುವೆ ಮತ್ತಷ್ಟೂ ಕಂದಕ ಸೃಷ್ಟಿಮಾಡಿ ಬೇಳೆ ಬೇಯಿಸಿಕೊಳ್ಳಲು ಬರುವವರಿಗೆ ನಾವು ಎಂದಿಗೂ ಅವಕಾಶ ಕೊಡುವುದಿಲ್ಲ. ನಮಗೆ ಶಾಂತಿ ಬೇಕಿದೆ. ನೆಮ್ಮದಿ ಬೇಕಿದೆ. ಇವತ್ತು ನನ್ನ ಸಹೋದರನನ್ನು ನೆನಪಿಸಿದ ನಿಮ್ಮ ತಂಡಕ್ಕೆ ನನ್ನ ಅನಂತ ಧನ್ಯವಾದಗಳು.

ನಂತರ.. ಬೌಂಡರಿಗೆ ಬಾಲ್ ಬಿಟ್ಟ ಆಟಗಾರ ತನ್ನ  ಅಭಿಪ್ರಾಯ  ಹೇಳುತ್ತಾನೆ.

ನಾನು ಕೈಯಿಂದ ಬಾಲ್ ಬಿಟ್ಟು ಆಟದ ದೃಷ್ಟಿಯಿಂದ ತಪ್ಪು ಮಾಡಿರಬಹುದು. ಆದರೆ, ನೀವು ಆಗಲೇ ಗೆದ್ದಿದ್ದೀರಿ ನಮಗೆ ಉಳಿದಿರುವುದು ನಿಮ್ಮ ಹೃದಯ ಗೆಲ್ಲುವುದೊಂದೇ ಮಾರ್ಗ… ಕೋಟ್ಯಾಂತರ ಮನಸ್ಸುಗಳನ್ನು ಬೆಸೆಯಬಹುದಾದ ಶಕ್ತಿ ನನ್ನ ಬಳಿ ಬರುತ್ತಿದ್ದ ಪುಟ್ಟ ಬಾಲ್ ಗೆ ಇದೆ ಎಂಬುದು ಆ ಕ್ಷಣ ಹೊಳೆಯಿತು.

ಹೀಗಾಗಿ ನಾವು ಆಡುತ್ತಿರುವುದು ಆಟವೇ ಹೊರತು, ಯುದ್ದವಲ್ಲ ಎಂಬುದು ನಾನು  ತೋರಿಸಬೇಕಿತ್ತು. ನಾನು ಮಾಡಿದ್ದು ತಪ್ಪೇನಿಸಿದರೆ ನಮ್ಮ ತಂಡದವರ ನನಗೆ ಯಾವ ಶಿಕ್ಷೆ ವಿಧಿಸಿದರು ನಾನು ಅಭಿಮಾನದಿಂದ ಸ್ವೀಕರಿಸುತ್ತೇನೆ. ಮತ್ತೂ  ಆ ಸಹೋದರರಿಬ್ಬರೂ ಆದಷ್ಟು ಬೇಗ ಒಂದಾಗಲಿ ಎಂದು ಹಾರೈಸುತ್ತೇನೆ.

ಅಲ್ಲಿಗೆ ಎರಡು ತಂಡದ ಅಭಿಮಾನಿಗಳ ಮನದಲ್ಲಿ ಪುಟ್ಟದೊಂದು ಸ್ನೇಹದ ಸೇತುವೆ ತೆರೆದು ಕೊಂಡಿತು. ಅಭಿಮಾನಿಗಳ ಕಣ್ಣುಗಳು ಒದ್ದೆಯಾಗಿದ್ದವು. ಒಂದು ಕೊನೆ ಎಸೆತ ಇಡೀ ಮನಸ್ಸನ್ನು ಗೆಲ್ಲುವ, ಎರಡು ದೇಶಗಳ ಸಂಬಂಧಗಳನ್ನು ಬೆಸೆಯುವ ಶಕ್ತಿ ಹೊಂದಿದೆ ಎಂಬುದು ಎಲ್ಲರಿಗೂ ತಿಳಿಯಿತು.

ಆಗ ಗೆಲುವಿನ ನಗೆ ಬೀರಿದ್ದು ಎರಡು ದೇಶದ ಅಭಿಮಾನಿಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಾಝಾದಲ್ಲಿ ಕದನ ವಿರಾಮ : ಎರಡು ವರ್ಷಗಳ ಬಳಿಕ ಬೆಥ್ಲೆಹೆಮ್‌ನಲ್ಲಿ ಮರುಕಳಿಸಿದ ಕ್ರಿಸ್‌ಮಸ್ ಸಂಭ್ರಮ

ಗಾಝಾದಲ್ಲಿ ಕದನ ವಿರಾಮ ಜಾರಿಯಾಗಿರುವ ಹಿನ್ನೆಲೆ, ಎರಡು ವರ್ಷಗಳ ನಂತರ ಈ ಬಾರಿ ಯೇಸು ಕ್ರಿಸ್ತನ ಜನ್ಮಸ್ಥಳ ಜೆರುಸಲೇಂನ ಬೆಥ್ಲೆಹೆಮ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮಾಚರಣೆ ಮರುಕಳಿಸಿದೆ. ಶನಿವಾರ (ಡಿಸೆಂಬರ್ 6) ಬೆಥ್ಲೆಹೆಮ್‌ನ ಮ್ಯಾಂಗರ್ ಸ್ಕ್ವೇರ್‌ನಲ್ಲಿರುವ ಚರ್ಚ್...

ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟು : ಜೆಪಿಸಿ ವಿಚಾರಣೆ ಕೋರಿ ಪ್ರಧಾನಿಗೆ ಪತ್ರ ಬರೆದ ಸಂಸದ ಜಾನ್ ಬ್ರಿಟ್ಟಾಸ್

ಇಂಡಿಗೋ ವಿಮಾನಗಳ ಹಾರಾಟ ವ್ಯತ್ಯಯದಿಂದ ಉಂಟಾದ ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟಿನ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವಿಚಾರಣೆ ಅಥವಾ ನ್ಯಾಯಾಂಗ ತನಿಖೆ ಮಾಡಿಸುವಂತೆ ಕೋರಿ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಪ್ರಧಾನಿ...

ಒಳಮೀಸಲಾತಿ : ಶೇ.17ರ ಪ್ರಮಾಣದಲ್ಲೇ ಮುಂದುವರಿಯಲು ಸರ್ಕಾರ ತೀರ್ಮಾನ?

ಒಳಮೀಸಲಾತಿಗೆ ಸಂಬಂಧಿಸಿದಂತೆ ಉಂಟಾಗಿರುವ ಕಗ್ಗಂಟನ್ನು ಎದುರಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಶೇಕಡ 17ರ ಮೀಸಲಾತಿ ಪ್ರಮಾಣದಲ್ಲೇ ಮುಂದುವರಿಯಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ಶನಿವಾರ ಸಂಜೆ (ಡಿಸೆಂಬರ್ 6) ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ...

ಗೋವಾ ನೈಟ್ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು

ಉತ್ತರ ಗೋವಾದ ನೈಟ್‌ ಕ್ಲಬ್‌ವೊಂದರಲ್ಲಿ ಶನಿವಾರ (ಡಿಸೆಂಬರ್ 6) ತಡರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಾವಿಗೀಡಾದವರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆ ಸಿಬ್ಬಂದಿಯಾಗಿದ್ದು,...

ಮೈಸೂರು| ಒಳಮೀಸಲಾತಿ ಹೋರಾಟ ಹತ್ತಿಕ್ಕಲು ನಿಷೇಧಾಜ್ಞೆ ಹೇರಿದ ಕಾಂಗ್ರೆಸ್ ಸರ್ಕಾರ

ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿಗೆ ಆಗ್ರಹಿಸಿ 'ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ' ನಡೆಸುತ್ತಿದ್ದ ಹೋರಾಟಕ್ಕೆ ಜಿಲ್ಲಾ ಪೊಲೀಸರು ಅನುಮತಿ ನಿರಾಕರಿಸಿದ್ದು, ಸಿದ್ದರಾಮನಹುಂಡಿಯಿಂದ ಮೈಸೂರಿಗೆ ಇಂದು ಪಾದಯಾತ್ರೆ ಆರಂಭಿಸಿದ ಹೋರಾಟಗಾರರನ್ನು...

‘ನಕಲಿ ಬ್ಯಾಂಕ್ ಗ್ಯಾರಂಟಿ’ ಪ್ರಕರಣ : ರಿಲಯನ್ಸ್ ಪವರ್, ಇತರ ಸಂಸ್ಥೆಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಇಡಿ

ರಿಲಯನ್ಸ್ ಪವರ್ ಕಂಪನಿಯು ಭಾರತೀಯ ಸೌರಶಕ್ತಿ ನಿಗಮಕ್ಕೆ (ಎಸ್‌ಇಸಿಐ) ಟೆಂಡರ್ ಪಡೆಯಲು ಸಲ್ಲಿಸಿದ 68 ಕೋಟಿ ರೂಪಾಯಿಗಳ ನಕಲಿ ಬ್ಯಾಂಕ್ ಗ್ಯಾರಂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಪವರ್ ಲಿಮಿಟೆಡ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನ...

ಉತ್ತರ ಪ್ರದೇಶ| ಬಾಬರಿ ಮಸೀದಿ ಮೇಲಿನ ದಾಳಿಗೆ 33 ವರ್ಷ; ಅಯೋಧ್ಯೆ-ವಾರಣಾಸಿಯಲ್ಲಿ ಬಿಗಿ ಭದ್ರತೆ

ಬಾಬರಿ ಮಸೀದಿ ಧ್ವಂಸವಾಗಿ 33ನೇ ವರ್ಷ ತುಂಬುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಮತ್ತು ಉತ್ತರ ಪ್ರದೇಶದ ಇತರ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಜಾಗರೂಕರಾಗಿದ್ದು, ಎಲ್ಲಾ ಮಾರ್ಗಗಳಲ್ಲಿ ವಾಹನಗಳ ಸಂಪೂರ್ಣ ತಪಾಸಣೆ ನಡೆಸುತ್ತಿವೆ. ಈ ಕುರಿತು...

ನ್ಯಾಷನಲ್ ಹೆರಾಲ್ಡ್‌ಗೆ ದೇಣಿಗೆ: ‘ಡಿಕೆ’ ಸಹೋದರರಿಗೆ ಇಡಿ-ದೆಹಲಿ ಪೊಲೀಸರಿಂದ ಸಮನ್ಸ್

ನ್ಯಾಷನಲ್ ಹೆರಾಲ್ಡ್ ಮತ್ತು ಯಂಗ್ ಇಂಡಿಯಾ ಸಂಸ್ಥೆಗಳಿಗೆ ನೀಡಿದ ದೇಣಿಗೆಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೈಗೊಂಡಿರುವ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯವು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು...

ಇಂಡಿಗೋ ಹಾರಾಟದಲ್ಲಿ ಐದನೇ ದಿನವೂ ವ್ಯತ್ಯಯ: ವಿಮಾನ ದರಕ್ಕೆ ತಾತ್ಕಾಲಿಕ ಮಿತಿ ವಿಧಿಸಿದ ಕೇಂದ್ರ

ಇಂಡಿಗೋದ ದೇಶೀಯ ಕಾರ್ಯಾಚರಣೆಗಳು ಸತತ ಐದನೇ ದಿನವೂ ಅಸ್ತವ್ಯಸ್ತಗೊಂಡಿದ್ದರಿಂದ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಶನಿವಾರ (ಡಿಸೆಂಬರ್ 6) ವಿಮಾನ ಟಿಕೆಟ್ ದರಗಳ ಮೇಲೆ ತಾತ್ಕಾಲಿಕ ಮಿತಿಯನ್ನು ವಿಧಿಸಿದೆ. ನಿಗದಿತ ಮಾನದಂಡಗಳ ಯಾವುದೇ...

ಪಶ್ಚಿಮ ಬಂಗಾಳ| ಎಸ್‌ಐಆರ್‌ನಲ್ಲಿ ಹೆಸರು ನೋಂದಾಯಿಸಲು ನಿರಾಕರಿಸಿದ 79 ಬುಡಕಟ್ಟು ಜನಾಂಗಗಳು

ಪಶ್ಚಿಮ ಬಂಗಾಳದ ಬಂಕುರಾದ ಮುಚಿಕಟಾ ಮತ್ತು ವೆದುವಾಶೋಲ್ ಗ್ರಾಮಗಳ ಬುಡಕಟ್ಟು ಜನಾಂಗದವರು 'ಸಮಾಜ್ವಾದ್ ಅಂತರ-ರಾಜ್ಯ ಮಾಝಿ ಸರ್ಕಾರ್'ಗೆ ನಿಷ್ಠೆಯನ್ನು ಉಲ್ಲೇಖಿಸಿ, ಚುನಾವಣಾ ಆಯೋಗ್ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ...