Homeಮುಖಪುಟಜ್ಯೋತಿರಾಧಿತ್ಯ ಸಿಂಧಿಯಾರನ್ನು ಮರಳಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದು ಶ್ರೇಯವೇ?

ಜ್ಯೋತಿರಾಧಿತ್ಯ ಸಿಂಧಿಯಾರನ್ನು ಮರಳಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದು ಶ್ರೇಯವೇ?

- Advertisement -
- Advertisement -

ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಮೂಲಕ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ಮತ್ತೆ ಕಾಂಗ್ರೆಸ್‌ಗೆ ಮರಳುವ ಸುದ್ಧಿ ಈಗ ಓಪನ್ ಸೀಕ್ರೆಟ್.

ಆದರೆ ಕಾಂಗ್ರೆಸ್ ಯಾವ ಕಾರಣಕ್ಕೂ ಸಿಂಧಿಯಾರನ್ನು ಮರಳಿ ಮನೆ ಸೇರಿಸದಿರುವುದು ಕಾಂಗ್ರೆಸ್ ಪಾಲಿಗೆ ಒಳಿತು.

ಕಮಲ್ ನಾಥ್ ಬಹಳ ಸಜ್ಜನ ರಾಜಕಾರಣಿಯೆಂದೇನೂ ನಾನು ಹೇಳಲಾರೆ. ಆದರೆ ಕಳೆದ ಅಸೆಂಬ್ಲಿ ಚುನಾವಣೆಯ ಬಳಿಕ ಕಮಲ್‌ನಾಥ್‌ಗೆ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಹುದ್ದೆ ನೀಡಿದ್ದು ಅವರ ಸೀನಿಯಾರಿಟಿಯ ದೃಷ್ಟಿಯಿಂದ ಮತ್ತು ಪಕ್ಷಕ್ಕೆ ಅವರು ನೀಡಿದ ಸೇವೆಯ ದೃಷ್ಟಿಯಿಂದ ಅತ್ಯಂತ ಸೂಕ್ತ ಆಯ್ಕೆಯಾಗಿತ್ತು. ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಅತೀ ಮುಖ್ಯ ಕಾರಣವೇ ತನಗೆ ಮುಖ್ಯಮಂತ್ರಿ ಪಟ್ಟ ನೀಡದಿದ್ದುದು.

ಕಮಲ್‌ನಾಥ್ ಜ್ಯೋತಿರಾಧಿತ್ಯರ ಅಪ್ಪ ಮಾಧವ್ ರಾವ್ ಅವರ ಸಮಕಾಲೀನ ನಾಯಕ. ಅವರು ರಾಜಕೀಯ ಬದುಕಿನ ಅರ್ಧದಷ್ಟು ರಾಜಕೀಯ ಅನುಭವವೂ ಜ್ಯೋತಿರಾಧಿತ್ಯರಿಗಿಲ್ಲ. ಕಾಂಗ್ರೆಸ್ ದೇಶದೆಲ್ಲೆಡೆ ಸೋತು ನಿರಾಶೆಯ ಛಾಯೆಯಲ್ಲಿದ್ದಾಗ ಮಧ್ಯಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಅಧಿಕಾರ ಹಿಡಿದುದು ಕಾಂಗ್ರೆಸ್ ಪಾಲಿಗೆ ಕತ್ತಲ ಕಾಲದ ಕೋಲ್ಮಿಂಚಾಗಿತ್ತೆಂದರೂ ಸರಿಯೇ. ಅಷ್ಟು ಕಷ್ಟಪಟ್ಟು ಬಿಜೆಪಿಯನ್ನು ಉರುಳಿಸಿ ಅಧಿಕಾರ ಹಿಡಿದಿರುವಾಗ ತನ್ನ ಅಧಿಕಾರ ದಾಹಕ್ಕಾಗಿ ಸರಕಾರವನ್ನು ಉರುಳಿಸಿದ್ದು ಅಕ್ಷಮ್ಯ. ಬಿಜೆಪಿ ಅನೈತಿಕ ಮಾರ್ಗದಲ್ಲಿ  ಅಧಿಕಾರಕ್ಕೇರಲು ಬಾಗಿಲು ತೆರೆದುಕೊಟ್ಟದ್ದೇ ಜ್ಯೋತಿರಾಧಿತ್ಯ.

ಇದೊಂದು ಅವಧಿಗೆ ಕಮಲ್‌ನಾಥ್‌ರಿಗೆ ಒಳ್ಳೆಯ ಆಡಳಿತ ನೀಡಲು ಅವಕಾಶ ಮಾಡಿಕೊಟ್ಟಿದ್ದರೆ ಜ್ಯೋತಿರಾಧಿತ್ಯ ಕಳೆದುಕೊಳ್ಳುವುದೇನೂ‌ ಇರಲಿಲ್ಲ.  ನಾಳೆ ಇನ್ನೊಮ್ಮೆ  ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್‌ನ ಸಹಜ ಆಯ್ಕೆ ಜ್ಯೋತಿರಾಧಿತ್ಯ ಎಂಬ ಬಗ್ಗೆ ಖುದ್ದು ಜ್ಯೋತಿರಾಧಿತ್ಯರಿಗೂ ಗೊತ್ತಿತ್ತು. ಅದಾಗ್ಯೂ ದಿಡೀರ್ ಮುಖ್ಯಮಂತ್ರಿಯಾಗಬೇಕೆಂಬ ದುರಾಶೆಗೆ ಪಕ್ಷದ ಬಿಡಿ ಸ್ವತಃ ತನ್ನ ಭವಿಷ್ಯದ ಬಗ್ಗೆಯೂ ಯೋಚಿಸದ ಜ್ಯೋತಿರಾಧಿತ್ಯರನ್ನು ಕಾಂಗ್ರೆಸ್ ಮತ್ತೆ ಯಾವ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳದಿರುವುದು ಕಾಂಗ್ರೆಸ್ ಪಾಲಿಗೆ ಅತ್ಯಂತ ಕ್ಷೇಮಕರ.

ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣವಿರಬಹುದು, ಆದರೆ ಜ್ಯೋತಿರಾಧಿತ್ಯ ಮತ್ತೆ ಮಾತೃಪಕ್ಷಕ್ಕೆ ಮರಳುವ ಬಗ್ಗೆ ಯೋಚಿಸಲು ಅದೊಂದೇ ಕಾರಣ ಖಂಡಿತಾ ಅಲ್ಲ. ಬಿಜೆಪಿ ಕೊರೋನಾದ ವಿಷಮಕಾಲದಲ್ಲಿ ಮಾಡಿದ ಚೀಪ್  ಪಾಲಿಟಿಕ್ಸ್‌‌ನಿಂದಾಗಿ ಮತ್ತು ಈಗಿನದು ಜನತೆಯ ಆಯ್ಕೆಯ ಸರಕಾರವಲ್ಲದಿರುವುದರಿಂದ ಅದು ಮುಂದಿನ ಅವಧಿಗೆ ಈಗ ಪಡೆದ ಅಧಿಕಾರ ಉಳಿಸಿಕೊಳ್ಳುವುದು ಬಹಳ ಕಷ್ಟ.

ಈಗಿಂದೀಗಲೇ ಕಾಂಗ್ರೆಸ್ ಸೇರಿದರೆ ಮುಂದೆ ತನ್ನ ಸ್ಥಾನವನ್ನು ಭದ್ರಗೊಳಿಸಬಹುದೆಂಬ ದೂರಾಲೋಚನೆಯೇ ಜ್ಯೋತಿರಾಧಿತ್ಯರನ್ನು ಇಂತಹ ನಿರ್ಧಾರಕ್ಕಿಳಿಸಿದೆ. ಅವರನ್ನು ಮತ್ತೆ ಸೇರಿಸಿಕೊಳ್ಳುವುದರಿಂದ ನಿಷ್ಟಾವಂತ ಕಾಂಗ್ರೆಸಿಗರಿಗೆ ಅನ್ಯಾಯ ಮಾಡಿದಂತಾಗಬಹುದು. ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿದರೂ ಅನ್ಯಾಯವಾಗಿ ಅವರು ಕೈ ತಪ್ಪಿಸಿದ ಅಧಿಕಾರ ಮತ್ತೆ ದಕ್ಕದು. ಅವರು ತನ್ನೊಂದಿಗೆ ಬಿಜೆಪಿಗೆ ಕೊಂಡೊಯ್ದ ಎಲ್ಲಾ ಶಾಸಕರೂ ಮತ್ತೆ ಕಾಂಗ್ರೆಸ್‌ಗೆ ಮರಳುವ ಸಾಧ್ಯತೆ ತೀರಾ ಕಡಿಮೆ. ಜ್ಯೋತಿರಾಧಿತ್ಯ ಕಾಂಗ್ರೆಸ್ ತೊರೆದಿದ್ದೂ ಅಧಿಕಾರ ಮೋಹದಿಂದ, ಮತ್ತೆ ಮರಳುತ್ತಿರುವುದೂ ಭವಿಷ್ಯದ ಅಧಿಕಾರ ಮೋಹಕ್ಕಾಗಿಯಷ್ಟೆ.

ನಾಳೆ ಅವರು ಮತ್ತೆ ಇನ್ನೇನಾದರೂ ಕಾರಣ ಮುಂದಿಟ್ಟು ಪಕ್ಷವನ್ನು ಬ್ಲ್ಯಾಕ್ ಮೇಲ್ ಮಾಡಲಾರರು ಎನ್ನಲು ಯಾವ ಖಚಿತತೆಯೂ ಇಲ್ಲ.

ಕಳೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಲಕ್ಷಕ್ಕೂ ಅಧಿಕ ಮತಗಳಿಂದ ಜ್ಯೋತಿರಾಧಿತ್ಯ ಸೋತಿರುವುದು ಅವರು ತನ್ನ ಕ್ಷೇತ್ರದಲ್ಲೇ ಹಿಂದಿನಷ್ಟು ಪ್ರಭಾವಿಯಾಗುಳಿದಿಲ್ಲ ಎನ್ನುವುದನ್ನು ತೋರಿಸುತ್ತದೆ. ರಾಜ ಕುಟುಂಬ ಎನ್ನುವ ಕಾರಣಕ್ಕೆ ಅವರಿಗೆ ಮಣೆ ಹಾಕುವುದು ಪ್ರಜಾಪ್ರಭುತ್ವ ಕಾಲದ ಅತ್ಯಂತ ಅಸಹ್ಯ ನಡೆಯಾಗಬಹುದು.

ಜ್ಯೋತಿರಾಧಿತ್ಯ  ಮಾಧವ ರಾವ್ ಸಿಂಧಿಯಾ ಅವರ ಮಗನಲ್ಲದಿರುತ್ತಿದ್ದರೆ ಅವರು ರಾಜಕೀಯದಲ್ಲಿ ಏನೂ‌ ಆಗಿರುತ್ತಿರಲಿಲ್ಲ. ಅಷ್ಟಕ್ಕೂ ಅವರು ಇತರ ನಾಯಕರಂತೆ ಪಕ್ಷಕ್ಕಾಗಿ ದುಡಿದು ಮೇಲೇರಿದವರಲ್ಲ. ಅವರಪ್ಪನ ದಿಡೀರ್ ಸಾವು ಅವರನ್ನು ಉತ್ತರಾಧಿಕಾರಿಯಾಗಿಸಿತ್ತು. ರಾಹುಲ್ ಗಾಂಧಿಯವರು ಜ್ಯೋತಿರಾಧಿತ್ಯರನ್ನು ತನ್ನ ಆಪ್ತ ಬಳಗದಲ್ಲಿಟ್ಟುಕೊಂಡಿದ್ದರೂ ಅವರು ಪಕ್ಷದ ನಾಯಕತ್ವಕ್ಕೆ ನಿಷ್ಟೆ ತೋರಿಸದೇ ಬಿಜೆಪಿಗೆ ಹಾರಿ ಇತರ್ಯಾವುದೇ ನಾಯಕರು ಪಕ್ಷ ತೊರೆದು ಮಾಡಿರುವುದಕ್ಕಿಂತ ಅತೀ ಹೆಚ್ಚು ಹಾನಿಯನ್ನೂ ಪಕ್ಷಕ್ಕೆ ಮಾಡಿದರು.

ಜ್ಯೋತಿರಾಧಿತ್ಯ ಮರುಸೇರ್ಪಡೆಯಿಂದ ಸದ್ಯಕ್ಕೆ ಬಿಜೆಪಿಗೆ ಟಾಂಗ್ ಕೊಡಲು ಕಾಂಗ್ರೆಸ್‌ಗೆ ಅಸ್ತ್ರ‌ ಸಿಗಬಹುದೇ ಹೊರತು ಹೆಚ್ಚಿನ ಲಾಭವೇನೂ ಆಗದು. ಮತ್ತು ಅದೊಂದು ಕಾಂಗ್ರೆಸ್‌ನೊಳಗೆ ಕೆಟ್ಟ ಬೆಳವಣಿಗೆಗೆ ನಾಂದಿಯಾಗಬಹುದು..


ಇದನ್ನೂ ಓದಿ: ಮತ್ತೆ ವಿಚಾರಣೆಗೆ ಹಾಜರಾಗುವಂತೆ ಅರ್ನಾಬ್‌ಗೆ ನೋಟಿಸ್‌ ನೀಡಿದ ಮುಂಬೈ ಪೊಲೀಸ್‌ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...