Homeಮುಖಪುಟಅಬಕಾರಿ ಶುಂಕ: ಮೋದಿ ಸರ್ಕಾರದಿಂದ 4 ಲಕ್ಷ ಕೋಟಿ ಬೃಹತ್ ದೇಶದ್ರೋಹಿ ಭ್ರಷ್ಟಾಚಾರ?

ಅಬಕಾರಿ ಶುಂಕ: ಮೋದಿ ಸರ್ಕಾರದಿಂದ 4 ಲಕ್ಷ ಕೋಟಿ ಬೃಹತ್ ದೇಶದ್ರೋಹಿ ಭ್ರಷ್ಟಾಚಾರ?

ಇಡೀ ದೇಶಕ್ಕೆ ವ್ಯಾಕ್ಸಿನ್ ಮತ್ತು ಪಡಿತರ ನೀಡಲು ಬೇಕಿರುವ ಹಣದ ಮೂರು ಪಟ್ಟನ್ನು ಒಂದೇ ವರ್ಷದಲ್ಲಿ ಪೆಟ್ರೋಲ್ ತೆರಿಗೆಯ ಮೂಲಕ ಸಂಗ್ರಹಿಸಲಾಗಿದೆ ಎಂದ ಮೇಲೆ... ಈಗಲಾದರೂ ಪೆಟ್ರೋಲ್ ಬೆಲೆ ಕಡಿಮೆ ಮಾಡಬಹುದಲ್ಲವೇ?

- Advertisement -
- Advertisement -

2020-21ರ ಸಾಲಿನ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಮತ್ತು ಸೆಸ್‌ನಿಂದಾಗಿ 3.4 ಲಕ್ಷ ಕೋಟಿ ರೂಗಳನ್ನು ಗಳಿಸಿದ್ದು, ಅದರ ಬಹುಪಾಲು ಹಣವನ್ನು ಉಚಿತ ಲಸಿಕೆ ಮತ್ತು ಬಡವರಿಗೆ ಉಚಿತ ಪಡಿತರ ನೀಡಲು ಬಳಸಲಾಗಿದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದರು. ಇದು ಸುಳ್ಳು ಲೆಕ್ಕ ಎಂದು ಕನ್ನಡ ಖ್ಯಾತ ಚಿಂತಕ ಶಿವಸುಂದರ್ ತಮ್ಮ ಜಸ್ಟ್ ಆಸ್ಕಿಂಗ್ ಲೇಖನದಲ್ಲಿ ನಿರೂಪಿಸಿದ್ದಾರೆ. ಅದನ್ನು ನಾನುಗೌರಿ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.

“ಪೆಟ್ರೋಲ್ ಬೆಲೆ ಏರಿಸಿ ಸಂಗ್ರಹಿಸಿದ 3.4 ಲಕ್ಷ ಕೋಟಿಗೆ ಸುಳ್ಳು ಲೆಕ್ಕ ಕೊಡುತ್ತಿರುವ ಮೋದಿ ಸರ್ಕಾರ..”

ಮೋದಿ ಸರ್ಕಾರದ ಹೊಸ ಪೆಟ್ರೋಲಿಯಂ ಮಂತ್ರಿ ಹರದೀಪ್ ಪುರಿ ಯವರು 2020-21 ನೇ ಸಾಲಿನಲೀ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿ ಜನರಿಂದ ಹೆಚ್ಚುವರಿಯಾಗಿ 3.4 ಲಕ್ಷ ಕೋಟಿ ರೂ. ಗಳನ್ನೂ ಸಂಗ್ರಹಿಸಲಾಗಿದೆ ಎಂದು ಮೊನ್ನೆ ಒಪ್ಪಿಕೊಂಡಿದ್ದಾರೆ.

ಆದರೆ ಅದರ ದೊಡ್ಡ ಭಾಗವನ್ನು ಜನರಿಗೆ ಉಚಿತ ವ್ಯಾಕ್ಸಿನ್ ಕೊಡಲು ಹಾಗು 2020 ರ ಏಪ್ರಿಲ್- ನವಂಬರ್ ಹಾಗು 2021 ರ ಮೇ-ಜೂನ್, ಒಟ್ಟು ಹತ್ತು ತಿಂಗಳ ಕಾಲ 80 ಕೋಟಿ ಜನರಿಗೆ ಉಚಿತ ಪಡಿತರ ನೀಡಲು ವ್ಯಯ ಮಾಡಲಾಗಿದೆ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ…

ಇದನ್ನೂ ಓದಿ : ಪೆಟ್ರೋಲಿಯಂ ಸೆಸ್‌ನ 3.4 ಲಕ್ಷ ಕೋಟಿ ರೂಗಳನ್ನು ಉಚಿತ ಲಸಿಕೆ, ಪಡಿತರಕ್ಕಾಗಿ ಬಳಸಲಾಗಿದೆ: ಸಚಿವ ಹರ್ದೀಪ್ ಪುರಿ

ಈ ಹೇಳಿಕೆಯ ಮೂಲಕ ಮೋದಿ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಬಂದಿದೆ… :

ಮೊದಲಿಗೆ- ವ್ಯಾಕ್ಸಿನ್ ಉಚಿತವಾಗೇನೂ ಕೊಡುತ್ತಿಲ್ಲ..

ಮೋದಿ ಸರ್ಕಾರವು ಬಡ-ಮಧ್ಯಮ ವರ್ಗದ ಜನರಿಂದ ಸುಲಿದ ತೆರಿಗೆಯಿಂದ ಜನರಿಗೆ ವ್ಯಾಕ್ಸಿನ್-ಪಡಿತರ ಕೊಡುತ್ತಿದೆಯೇ ವಿನಾ, ಶ್ರೀಮಂತರಿಗೆ ತೆರಿಗೆ ಹಾಕುವ ಮೂಲಕವೋ, ಅಥವಾ ಸರ್ಕಾರದ ದುಂದು ವೆಚ್ಚಗಳನ್ನೋ ಕಡಿಮೆ ಮಾಡುವುದರಿಂದಲ್ಲ.

ಅರ್ಥಾತ್ ಸರ್ಕಾರ ಬಡವರಿಗೆ ಅವರಿಂದ ಸಂಗ್ರಹಿಸಿದ ಹಣದಿಂದಲೇ ವ್ಯಾಕ್ಸಿನ್- ಪಡಿತರ ಕೊಡುತ್ತಿದೆಯೇ ವಿನಾ ಉಚಿತವಾಗಿಯಲ್ಲ… ಆದ್ದರಿಂದ ಮೊದಲು ಉಚಿತ ವ್ಯಾಕ್ಸಿನ್, ಉಚಿತ ಪಡಿತರ ಎನ್ನುವ ಜನವಂಚಕ ಪ್ರಚಾರವನ್ನು ನಿಲ್ಲಿಸಬೇಕು…

ಎರಡನೆಯದಾಗಿ- ಉಳಿದ ಮೂರು ಕೋಟಿಗೆ ಲೆಕ್ಕವೆಲ್ಲಿ?
ಸರ್ಕಾರದ ಅಧಿಕೃತ ಹೇಳಿಕೆಯ ಪ್ರಕಾರ ಜುಲೈ 29 ರವರೆಗೆ ಕೇವಲ 45 ಕೋಟಿ ವ್ಯಾಕ್ಸಿನ್ ಗಳನ್ನೂ ಜನರಿಗೆ ನೀಡಿದೆ.

ಅದರ ಒಟ್ಟಾರೆ ಸರಾಸರಿ ಬೆಲೆ ವ್ಯಾಕ್ಸಿನ್ ಒಂದಕ್ಕೆ 500 ರೂ. ಎಂದಿಟ್ಟುಕೊಂಡರೂ ಈವರೆಗೆ ಸರ್ಕಾರ ಈ ಬಾಬತ್ತಿನಲ್ಲಿ ವೆಚ್ಚ ಮಾಡಿರುವುದು ಕೇವಲ 23,000 ಕೋಟಿ ರೂ. ಮಾತ್ರ ಎಂದಾಯಿತು!

ಅಂದರೆ ಪೆಟ್ರೋಲ್ ಬೆಲೆ ಏರಿಕೆಯಿಂದ ಸಂಗ್ರಹಿಸಿದ 3.4 ಲಕ್ಷ ಕೋಟಿಯ ಶೇ. 6.7 ಭಾಗ ಮಾತ್ರ… ಉಳಿದದ್ದೇನಾಯ್ತು?

ವ್ಯಾಕ್ಸಿನ್ ಗಾಗಿ ಎಂದೇ 2021ರ ಬಜೆಟ್ಟಿನಲ್ಲಿ ಪೆಟ್ರೋಲ್ ತೆರಿಗೆಯನ್ನು ಹೊರತುಪಡಿಸಿ 66,000 ಕೋಟಿಗಳನ್ನು ಎತ್ತಿಡಲಾಗಿತ್ತು…

ಪೆಟ್ರೋಲ್ ಬೆಲೆ ಏರಿಕೆಯಿಂದ ಸಂಗ್ರಹಿಸಿದ ಹಣದಲ್ಲಿ ವ್ಯಾಕ್ಸಿನ್ ಕೊಡುತ್ತಿರುವುದಾದರೆ, ಅದಕ್ಕೆ ಮುಂಚೆಯೇ ಬಜೆಟ್ನಲ್ಲಿ ಎತ್ತಿಟ್ಟಿದ್ದ ವ್ಯಾಕ್ಸಿನ್ ಹಣದ ಲೆಕ್ಕವೇನು?

– 2020 ಮತ್ತು 2021 ರಲ್ಲಿ ಒಟ್ಟು ಹತ್ತು ತಿಂಗಳ ಕಾಲ 80 ಕೋಟಿ ಜನರಿಗೆ ಉಚಿತ ಪಡಿತರ ನೀಡಲು ಆದ ಖರ್ಚೆಷ್ಟು? 1.2 ಲಕ್ಷ ಕೋಟಿ ರೂಪಾಯಿಗಳು.

ಆದರೆ ಇದೆಲ್ಲವೂ ವಿಶೇಷ ಅಥವಾ ಹೆಚ್ಚುವರಿ ವೆಚ್ಚವಲ್ಲ.

2013 ರಲ್ಲಿ ಆಹಾರ ಭದ್ರತಾ ಕಾಯಿದೆ ಜಾರಿಯಾದ ಮೇಲೆ ಈ ದೇಶದ 83 ಕೋಟಿ ಜನರಿಗೆ ಪ್ರತಿವರ್ಷ ರಿಯಾಯತಿ ದರದಲ್ಲಿ ಆಹಾರ ಪಡಿತರವನ್ನು ಒದಗಿಸಲು ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ಪ್ರತಿವರ್ಷ ಕೇಂದ್ರ ಬಜೆಟ್ಟಿನಿಂದ ಹಣವನ್ನು ಒದಗಿಸಲಾಗುತ್ತದೆ. ಅದರ ಭಾಗವಾಗಿಯೇ 2020ರಲ್ಲೇ ಈ ಬಾಬತ್ತಿಗೆ ಕೇಂದ್ರ ಬಜೆಟ್ಟಿನಲ್ಲಿ 1.15 ಲಕ್ಷ ಕೋಟಿ ಎತ್ತಿಡಲಾಗಿತ್ತು.!

ಹೀಗಾಗಿ ಈ ಬಾರಿ ಕೋವಿಡ್ ನಿಂದಾಗಿ ಬಜೆಟ್ಟಿನಲ್ಲಿ ಎತ್ತಿಟ್ಟ ಹಣದ ಜೊತೆಗೆ ಸರ್ಕಾರಕ್ಕೆ ಹೆಚ್ಚೆಂದರೆ 15,000 ಕೋಟಿ ಖರ್ಚಾಗಿರಬಹುದು ..

ಅಂದರೆ … ವ್ಯಾಕ್ಸಿನ್ ಗಾಗಿ 25,000 ಕೋಟಿ

ಪಡಿತರಕ್ಕಾಗಿ 15,000 ಕೋಟಿ

ಒಟ್ಟು 40,000 ಕೋಟಿ …

ಪೆಟ್ರೋಲ್ ತೆರಿಗೆಯಿಂದ ಸಂಗ್ರಹಿಸಿದ 3.4 ಲಕ್ಷ ಕೋಟಿ ಯಲ್ಲಿ 40,000 ಕೋಟಿ ಕಳೆದರೆ ಉಳಿದ 3 ಲಕ್ಷ ಕೋಟಿ ಗಳ ಲೆಕ್ಕ???

– ಇನ್ನು ಭಾರತದ ಎಲ್ಲಾ ಜನರಿಗೆ ಬೇಕಿರುವ, ಮುಂದಿನ ವರ್ಷದ ಕೊನೆಯ ವೇಳೆಗೆ ಹಾಕಬಹುದಾದ, 200 ಕೋಟಿ ವ್ಯಾಕ್ಸಿನ್ ಗಳಿಗೆ ವೆಚ್ಚವಾಗುವುದು 1 ಲಕ್ಷ ಕೋಟಿ …

ಅದನ್ನೂ ಈಗಲೇ ಸೇರಿಸಿಬಿಟ್ಟರೂ ಸರ್ಕಾರಕ್ಕೆ ಒಟ್ಟಾರೆ ಯಾಗಿ ಮುಂದಿನ ಎರಡು ವರ್ಷಗಳಿಗೆ ಕೋವಿಡ್ ಹೆಚ್ಚುವರಿಯಾಗಿ ವೆಚ್ಚವಾಗುವುದು 1.15 ಲಕ್ಷ ಕೋಟಿ ಮಾತ್ರ..

ಕಳೆದ ಒಂದು ವರ್ಷದಲ್ಲಿ ಜನರಿಂದ ಸುಲಿದಿರುವ 3.4 ಲಕ್ಷ ಕೋಟಿಯಲ್ಲಿ 1.15 ಲಕ್ಷ ಕೋಟಿ ತೆಗೆದರೂ ಸರ್ಕಾರ ಕೋವಿಡ್ ಹೆಸರಲ್ಲಿ 2.25 ಲಕ್ಷ ಕೋಟಿ ರೂ. ಗಳು ಲೆಕ್ಕ ಕೊಡದ ಸುಲಿಗೆ ಎಂದಾಯಿತು..ಅಲ್ಲವೇ?

ಮೂರನೆಯದಾಗಿ: ಈಗಲಾದರೂ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆಯಾಗಬೇಕಲ್ಲವೇ?

ಏನಿಲ್ಲವೆಂದರೂ ಇಡೀ ದೇಶಕ್ಕೆ ವ್ಯಾಕ್ಸಿನ್ ಹಾಕಲು ಬೇಕಿರುವ ಹಣದ ಮೂರು ಪಟ್ಟು… ಹಾಗು ಪಡಿತರಕ್ಕೆ ಬೇಕಿರುವ ಮೂರು ಪಟ್ಟು ಹಣವನ್ನು ಒಂದೇ ವರ್ಷದಲ್ಲಿ ಪೆಟ್ರೋಲ್ ತೆರಿಗೆಯ ಮೂಲಕ ಸಂಗ್ರಹಿಸಲಾಗಿದೆ ಎಂದ ಮೇಲೆ… ಈಗಲಾದರೂ ಪೆಟ್ರೋಲ್ ಬೆಲೆ ಕಡಿಮೆ ಮಾಡಬಹುದಲ್ಲವೇ?

ಆದ್ದರಿಂದ… ಜನರ ಬಲಗೈಯನಲ್ಲಿರುವುದನ್ನು ಕಸಿದೂ ಎಡಗೈಗೆ ಕೊಟ್ಟು ಉಚಿತವಾಗಿ ಕೊಡಲಾಗುತ್ತಿದೆ ಎಂದು ಪ್ರಚಾರ ಮಾಡಿಕೊಳ್ಳುವುದು ಐಪಿಸ್ ಸೆಕ್ಷನ್ 415-420 ರ ಕಲಮುಗಳಡಿ ಮೋಸ, ವಂಚನೆ ಎಂಬ ಅಪರಾಧವಲ್ಲವೇ?

ವ್ಯಾಕ್ಸಿನ್ ಹೆಸರಿನಲ್ಲಿ ಅಗತ್ಯಕ್ಕಿಂತ ಮೂರು ಪಟ್ಟು ಹಣವನ್ನು ಸಂಗ್ರಹಿಸಿ ತಪ್ಪು ಲೆಕ್ಕವನ್ನು ನೀಡುವುದು ದೇಶದ್ರೋಹವಲ್ಲವೇ? ಸರ್ಕಾರಿ ಅಧಿಕಾರದ ದುರುಪಯೋಗವಲ್ಲವೇ?

ಕೋವಿಡ್ ಸಂಕಷ್ಟದಲ್ಲಿಯೂ ಬಡ-ಮಧ್ಯಮ ವರ್ಗದವರಿಂದ ಸುಲಿದ 3.4+0.60= 4ಲಕ್ಷ ಕೋಟಿ ಗುಳುಂ ಮಾಡಿರುವುದು ಭ್ರಷ್ಟಾಚಾರವಲ್ಲವೇ?

– ಶಿವಸುಂದರ್


ಇದನ್ನೂ ಓದಿ; ಪೆಗಾಸಸ್ ಹಗರಣ: ಗುರುವಾರ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...