ದೆಹಲಿ ಗಲಭೆ ನಡೆಯಲು ಪ್ರಮುಖ ಕಾರಣಕರ್ತ ಎಂಬ ಆರೋಪ ಹೊತ್ತಿರುವ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಸಾಮಾಜಿಕ ಜಾಲತಾಣದಲ್ಲಿ ‘ಹಿಂದೂ ಎಕೋ ಸಿಸ್ಟಮ್’ ಗೂಗಲ್ ಫಾರ್ಮ್ ಒಂದನ್ನು ಪ್ರಸಾರ ಮಾಡುತ್ತಿದ್ದು, ಹಲವಾರು ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈಗಾಗಲೆ 18,000 ಜನರು ಇದಕ್ಕೆ ಸೈನ್ ಅಪ್ ಆಗಿದ್ದಾರೆ ಮತ್ತು ಎರಡು ದಿನಗಳ ನಂತರ ಅವರನ್ನು ಎಸ್ಎಂಎಸ್ ಮತ್ತು ಇಮೇಲ್ ಮೂಲಕ ಸಂಪರ್ಕಿಸಲಾಗುವುದು ಕಪಿಲ್ ಮಿಶ್ರಾ ಹೇಳಿದ್ದಾರೆ. ಫಾರ್ಮ್ ಬಿಡುಗಡೆಯಾದ ಮೂರು ಗಂಟೆಗಳಲ್ಲಿ 5,000 ಜನರು ತಂಡವನ್ನು ಸೇರಿದ್ದಾರೆ ಎಂದು ಅವರು ಈ ಹಿಂದೆ ಹೇಳಿದ್ದರು.
ಈ ವಿವಾದಿತ ಗೂಗಲ್ ಫಾರ್ಮ್ನಲ್ಲಿರುವ ಒಂದು ಪ್ರಶ್ನೆ, “ಗೋರಕ್ಷ, ಗೋ ಸೇವಾ, ಲವ್ ಜಿಹಾದ್ ಹೋರಾಟ, ಘರ್ ವಾಪಸಿ, ಹಲಾಲ್, ಮಂದಿರ ನಿರ್ಮಲ್, ಹಿಂದೂ ಏಕ್ತಾ, ಸಾಮಾನ್ಯ ಸೇವೆ ಇವುಗಳಲ್ಲಿ ನೀವು ಯಾವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದೀರಿ” ಎಂದು ಅದು ಕೇಳುತ್ತದೆ.
ಇದನ್ನೂ ಓದಿ: ದೆಹಲಿ ಗಲಭೆ: ಬಿಜೆಪಿ ನಾಯಕರ ವಿರುದ್ಧದ ದೂರುಗಳಿಗೆ ಕ್ರಮವಿಲ್ಲ- ಎನ್ಡಿಟಿವಿ ತನಿಖಾ ವರದಿ
ಫಾರ್ಮ್ ಪೂರ್ತಿಗೊಳಿಸುವವರು ಪೂರ್ಣ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ವೃತ್ತಿಯಂತಹ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ಫಾರ್ಮ್ನ ಕೊನೆಯ ವಿಭಾದಲ್ಲಿ; “ಹೌದು ಕ್ಲಿಕ್ ಮಾಡುವ ಮೂಲಕ, ‘ಹಿಂದೂ ಎಕೋ ಸಿಸ್ಟಮ್’ ತಂಡವನ್ನು ಸೇರಲು ಬದ್ಧನಾಗಿರುತ್ತೇನೆ” ಎಂಬ ಘೋಷಣೆಯಿದೆ.
ಕಪಿಲ್ ಮಿಶ್ರ ಅವರ ಈ ಉಪಕ್ರಮದ ಬಗ್ಗೆ ಪಕ್ಷಕ್ಕೆ ಯಾವುದೆ ಅರಿವಿಲ್ಲ ಎಂದು ದೆಹಲಿ ಬಿಜೆಪಿ ಮಾಧ್ಯಮ ಸೆಲ್ ಮುಖ್ಯಸ್ಥ ನವೀನ್ ಕುಮಾರ್ ಹೇಳಿದ್ದಾರೆಂದು ದಿ ಪ್ರಿಂಟ್ ವರದಿ ಮಾಡಿದೆ.
ಫೆಬ್ರವರಿ ತಿಂಗಳಲ್ಲಿ ಈಶಾನ್ಯ ದೆಹಲಿಯ ಜಾಫ್ರಾಬಾದ್ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯ ಪರವಾಗಿ ನಡೆದ ರ್ಯಾಲಿಯಲ್ಲಿ ಕಪಿಲ್ ಮಿಶ್ರಾ “ಗೋಲಿ ಮಾರೊ ಸಾಲೋ ಕೋ’’ ಎಂಬ ದ್ವೇಷ ಪೂರಿತ ಘೋಷಣೆಯನ್ನು ಕೂಗಿದ್ದರು. ಇದಾಗಿ ಕೆಲವೇ ದಿನದಲ್ಲಿ ಗಲಭೆ ಭುಗಿಲೆದ್ದು 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
ಹಿಂದೂ ಎಕೊ ಸಿಸ್ಟಮ್ ತಂಡದ ಜವಾಬ್ದಾರಿಗಳು ಸ್ಪಷ್ಟವಾಗಿಲ್ಲವಾದರೂ, “ಪ್ರತಿಯೊಬ್ಬ ಸದಸ್ಯರು ಧರ್ಮದ ಹೆಸರಿನಲ್ಲಿ ನೇರವಾಗಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ನ್ಯಾಯಾಲಯಗಳಲ್ಲಿ ಕೆಲಸ ಮಾಡುತ್ತಾರೆ” ಎಂದು ಕಪಿಲ್ ಮಿಶ್ರಾ ಹೇಳಿದ್ದಾರೆ.
ಇದನ್ನು ಓದಿ: ಬಿಜೆಪಿ ಕೌನ್ಸಿಲರ್ ದೆಹಲಿ ಗಲಭೆಯನ್ನು ಮುನ್ನೆಡೆಸಿದ್ದರು: ಪ್ರತ್ಯಕ್ಷದರ್ಶಿಯ ದೂರು
ದೆಹಲಿ ಗಲಭೆ ನಡೆಯಲು ಪ್ರಮುಖ ಕಾರಣಕರ್ತ ಎನ್ನಲಾಗುತ್ತಿರುವ ಆರೋಪ ಹೊತ್ತಿರುವ ಕಪಿಲ್ ಮಿಶ್ರ ಅವರ ಈ ಉಪಕ್ರಮವನ್ನು ಹಲವಾರು ಜನರು ಟೀಕಿಸಿದ್ದಾರೆ. ಪ್ರಸಿದ್ದ ಕವಿ ಗೀತರಚನೆಕಾರ ಹುಸೈನ್ ಹೈದರಿ, “ದೇಶದಲ್ಲಿ ನಿರುದ್ಯೋಗ ಕಡಿಮೆ ಮಾಡಲು ಇಲ್ಲಿ ಹಲವಾರು ಉದ್ಯೋಗಗಳು ಸೃಷ್ಟಿಯಾಗಿವೆ, ದಯವಿಟ್ಟು ಅರ್ಜಿ ಸಲ್ಲಿಸಿ” ಎಂದು ವ್ಯಂಗ್ಯವಾಡಿದ್ದಾರೆ.
Lacs of jobs created here to reduce unemployment in the country, please apply. ??? pic.twitter.com/k0dt0FXTNW
— Hussain Haidry (@hussainhaidry) November 16, 2020
ಪತ್ರಕರ್ತೆ ಝೋಯಾ ರಸೂಲ್, “ದೆಹಲಿ ಹತ್ಯಾಕಾಂಡಗಳನ್ನು ನಡೆಸಲು ಕಪಿಲ್ ಮಿಶ್ರಾ ತನ್ನ ವಾಟ್ಸಾಪ್ ಗುಂಪುಗಳನ್ನು ನವೀಕರಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸಮಯದಲ್ಲಿ ಪ್ರತಿಯೊಬ್ಬರು ವಿಶೇಷ ಹಿಂಸಾತ್ಮಕ ಕಾರಣಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಖಂಡಿತ ಇದು ಕಾನೂನುಬದ್ಧವಾಗಿದೆ” ಎಂದು ಹೇಳಿದ್ದಾರೆ.
Kapil Mishra is seeking to upgrade his whatsapp groups which came handy to carry out Delhi pogroms. This time one gets to choose from specialised violent causes. Of course this is all legal. pic.twitter.com/6sOZwqgQlP
— Zoya Rasul (@zoyarasul) November 16, 2020
ಇದನ್ನೂ ಓದಿ: ದೆಹಲಿ ಗಲಭೆ ಚಾರ್ಜ್ಶೀಟ್ನಲ್ಲಿ ಬಿಜೆಪಿ ನಾಯಕರ ದ್ವೇಷ ಭಾಷಣಗಳು ನಾಪತ್ತೆ!
“ಅವರು ಗುಂಪು ಹತ್ಯೆ ನಡೆಸುವ ಪಡೆಯನ್ನು ‘ನೇಮಿಸಿಕೊಳ್ಳುತ್ತಿದ್ದಾರೆ’ ಅಷ್ಟೇ” ಎಂದು ಕಿರಣ್ ಎಂಬುವವರು ಅಭಿಪ್ರಾಯ ಪಟ್ಟಿದ್ದಾರೆ.
Dude. They are 'recruiting' willing foot soldiers to create a lynch mob. That's ???
— Kiran/کرن/किरण (@Chivas_Desi) November 17, 2020
ಕಪಿಲ್ ಮಿಶ್ರಾ ಎಲ್ಲಾ ಮುಖವಾಡವನ್ನು ಕೈಬಿಟ್ಟು, ನಾಜಿ ನೇಮಕಾತಿ ಮಾಡುತ್ತಿದ್ದಾರೆ ಎಂದು ಅನುರಾಧ ಅವರು ಹೇಳಿದ್ದಾರೆ.
Kapil Mishra is beckoning a “Hindu Ecosystem” team, something that we know will be abusive and violent. Yes, they will be abusive to you for calling them that. Nazi recruitment is here, all masks dropped.
थू, Kapil Mishra, थू! pic.twitter.com/k8FinKtnx9
— Anuradha Exwaized (@anuradhaxyz) November 16, 2020
ಇದನ್ನೂ ಓದಿ: ಸಿಎಎ ವಿರೋಧಿಗಳ ಬೇಟೆ: ದೆಹಲಿ ಗಲಭೆಗೆ ಉಮರ್ ಖಾಲಿದ್ರನ್ನು ಸಿಲುಕಿಸಿದ್ದು ಹೇಗೆ?