Homeಕರ್ನಾಟಕಸಂವಿಧಾನಕ್ಕೆ ಅಗೌರವ ತೋರುವ ಧಾರ್ಮಿಕ ಸ್ವಾತಂತ್ರ ಹಕ್ಕು ಸಂರಕ್ಷಣಾ ವಿಧೇಯಕ

ಸಂವಿಧಾನಕ್ಕೆ ಅಗೌರವ ತೋರುವ ಧಾರ್ಮಿಕ ಸ್ವಾತಂತ್ರ ಹಕ್ಕು ಸಂರಕ್ಷಣಾ ವಿಧೇಯಕ

- Advertisement -
- Advertisement -

ಕರ್ನಾಟಕ ಧಾರ್ಮಿಕ ಸ್ವಾತಂತ್ರ ಹಕ್ಕು ಸಂರಕ್ಷಣಾ ವಿಧೇಯಕ, 2021 (ಕರ್ನಾಟಕ ಪ್ರೊಟೆಕ್ಷನ್ ಆಫ್ ರೈಟ್ ಟು ಫ್ರೀಡಮ್ ಆಫ್ ರಿಲಿಜನ್ ಬಿಲ್, 2021) ಎಂಬ ಈ ಹೆಸರೇ ವಿಪರ್ಯಾಸದಿಂದ ಕೂಡಿದೆ ಹಾಗೂ ಇದು ಸಂವಿಧಾನ ವಿರೋಧಿ ಪರಿಣಾಮಗಳನ್ನು ಬೀರುವ ಅಂಶಗಳಿಂದ ತುಂಬಿದೆ. ಈ ಮಸೂದೆ ಧಾರ್ಮಿಕ ಸ್ವಾತಂತ್ರವನ್ನು ರಕ್ಷಿಸಲು ಇರುವುದಲ್ಲ, ಅದರ ಬದಲಾಗಿ ಭಾರತದ ಸಂವಿಧಾನವನ್ನು ರಚಿಸಿದವರು ಊಹಿಸಿಕೊಳ್ಳದಂತಹ ರೀತಿಯಲ್ಲಿ ಧಾರ್ಮಿಕ ಸ್ವಾತಂತ್ರವನ್ನು ಹತ್ತಿಕ್ಕುವ ರೀತಿಯಲ್ಲಿ ಇದೆ. ಈ ಮಸೂದೆಯು ’ತಪ್ಪು ನಿರೂಪಣೆ, ಬಲವಂತದಿಂದ, ಮೋಸದಿಂದ, ಅನುಚಿತ ಪ್ರಭಾವ ಬಳಸಿ, ಆಮಿಷದಿಂದ ಮತ್ತು ಮದುವೆಯ ಭರವಸೆ ನೀಡಿ, ಯಾವುದೇ ವಂಚನೆಯ ವಿಧಾನಗಳು ಮೂಲಕ’ ಆಗುವ ಮತಾಂತರಗಳನ್ನು ಅಪರಾಧೀಕರಣಗೊಳಿಸುವ ಕೆಲಸ ಮಾಡುತ್ತದೆ.

ಬಲವಂತದಿಂದ, ಆಮಿಷದಿಂದ ಅಥವಾ ಮೋಸದಿಂದ ಮಾಡುವ ಮತಾಂತರವನ್ನು ನಿಷೇಧಿಸುವುದರಲ್ಲಿ ಇರುವ ಸಮಸ್ಯೆಯಾದರೂ ಏನು ಎಂದು ಯಾವುದೇ ಓದುಗ ಕೇಳಬಹುದು; ಅದನ್ನು ತಿಳಿಯಲು ಈ ಮಸೂದೆಯ ವಿವರಗಳನ್ನು ಕೂಲಂಕಷವಾಗಿ ನೋಡಬೇಕಿದೆ. ಇದನ್ನು ನೋಡಲು ನಾವು ಮಸೂದೆಯ ಇಂಗ್ಲಿಷ್ ಕರಡಿನಲ್ಲಿ ಇರುವ ಅಲ್ಯೂರ್‌ಮೆಂಟ್ ಎಂಬುದರ ಅರ್ಥ ತಿಳಿದುಕೊಳ್ಳುವ. ಕನ್ನಡದ ಕರಡಿನಲ್ಲಿ ಇದನ್ನು ಆಮಿಷ ಎಂದು ಕರೆಯಲಾಗಿದೆ. ಅತ್ಯಂತ ಸಮಸ್ಯಾತ್ಮಕ ವ್ಯಾಖ್ಯಾನಗಳನ್ನು ಒಳಗೊಂಡಿರುವ ಈ ಶಾಸನದಲ್ಲಿ ಎಲ್ಲಕ್ಕಿಂತ ಹೆಚ್ಚು ಸಮಸ್ಯೆ ಇರುವುದು ಈ ಪದದ ವ್ಯಾಖ್ಯಾನದಲ್ಲಿ.

ಅಲ್ಯೂರ್‌ಮೆಂಟ್ ಅಥವಾ ಆಮಿಷ ಎಂಬುದನ್ನು ತುಂಬಾ ವಿಶಾಲಾರ್ಥದಲ್ಲಿ ’ನಗದು ರೂಪದಲ್ಲಾಗಲಿ ಅಥವಾ ವಸ್ತುವಿನ ರೂಪದಲ್ಲಾಗಲಿ ನೀಡುವ ಯಾವುದೇ ಉಡುಗೊರೆ’ ಹಾಗೂ ಅದರೊಂದಿಗೆ ’ಉದ್ಯೋಗ ಅಥವಾ ಉಚಿತ ಶಿಕ್ಷಣ’ ಎಂಬುದನ್ನು ವ್ಯಾಖ್ಯಾನದಲ್ಲಿ ಸೇರಿಸಲಾಗಿದೆ. ಹಾಗಾಗಿ ಶಾಲೆಗಳನ್ನು ಅಥವಾ ಆಸ್ಪತ್ರೆಗಳನ್ನು ನಡೆಸುವ ಲೋಕೋಪಕಾರಿ ಕೆಲಸಗಳನ್ನು, ಮತಾಂತರದ ಉದ್ದೇಶದಿಂದ ಮಾಡಲಾಗುವ ಕಾನೂನುಬಾಹಿರ ಚಟುವಟಿಕೆಗಳು ಎಂದು ಹೇಳಿ ಎಷ್ಟು ಸುಲಭವಾಗಿ ಮಸಿ ಬಳಿಯಬಹುದೆಂದು ಅತ್ಯಂತ ಸುಲಭವಾಗಿ ಕಾಣಬಹುದಾಗಿದೆ. ಈ ಆಮಿಷದ ವ್ಯಾಖ್ಯಾನವು, ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕ್ರಿಶ್ಚಿಯನ್ನರು ನಡೆಸುವ ಶಾಲೆಗಳಿಗೆ ಬಲವಂತದಿಂದ ನುಗ್ಗಿ ಕ್ರಿಸ್‌ಮಸ್ ಆಚರಣೆಗಳನ್ನು ನಿಲಿಸುವಂತಹ ಬಲಪಂಥೀಯರು ನಡೆಸುವ ಆಘಾತಕಾರಿ ಘಟನೆಗಳನ್ನು ನ್ಯಾಯಬದ್ಧಗೊಳಿಸುವ ಕೆಲಸ ಮಾಡುತ್ತದೆ. ನಿನ್ನೆಯವರೆಗೆ, ಈ ವಿಜಿಲಾಂಟೆ (ಕಾನೂನನ್ನು ಕೈಗೆತ್ತಿಕೊಳ್ಳುವ ಕಾನೂನುಬಾಹಿರ) ಗುಂಪುಗಳು ಮಾಡುತ್ತಿದ್ದ ಆಧಾರವಿಲ್ಲದ ಹುಚ್ಚಾಟದ ಆರೋಪಗಳನ್ನು ಇಂದು ಈ ಕಾಯಿದೆಯ ಅಡಿಯಲ್ಲಿ ಕಾನೂನುಸಮ್ಮತಗೊಳಿಸಲಾಗುತ್ತಿದೆ ಹಾಗೂ ’ಮತಾಂತರವನ್ನು ಮಾಡಿದ ಅಥವಾ ಅದಕ್ಕೆ ನೆರವು ನೀಡಿದ ಅಥವಾ ಅದಕ್ಕೆ ದುಷ್ಪ್ರೇರಣೆ ನೀಡಿದ ವ್ಯಕ್ತಿಯ’ ಮೇಲೆ ಸಾಕ್ಷ್ಯದ ಹೊರೆಯನ್ನು ಹೇರುತ್ತದೆ. ಸರಳವಾಗಿ ಹೇಳಬೇಕೆಂದರೆ, ಒಬ್ಬ ವ್ಯಕ್ತಿ ಯಾವುದೇ ಒಂದು ಶಾಲೆಗೆ ನುಗ್ಗಿ ಅಲ್ಲಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿದರೆ ಅವನನ್ನು ನಂಬಲೇಬೇಕು ಹಾಗೂ ಪೊಲೀಸರು ಎಫ್‌ಐಆರ್ ದರ್ಜು ಮಾಡಲೇಬೇಕು. ವಿಚಾರಣೆಯ ಸಮಯದಲ್ಲಿ ಯಾರ ವಿರುದ್ಧ ಆಮಿಷ ಒಡ್ಡಿ ಮತಾಂತರ ಮಾಡಿದ್ದಾರೆ ಎಂಬ ಆರೋಪ ಇದೆಯೋ, ಆ ವ್ಯಕ್ತಿಯೇ ತಾನು ಮತಾಂತರ ಮಾಡಿಲ್ಲ ಎಂದು ಸಾಬೀತುಪಡಿಸಬೇಕು. ’ರುಜುವಾತಿನ ಭಾರ’ವನ್ನು ಈ ರೀತಿ ತಿರುಚಿಸಿರುವುದು, ’ತಪ್ಪಿತಸ್ಥ ಎಂದು ಸಾಬೀತಾಗುವವರೆಗೆ ನಿರ್ದೋಷಿ’ ಎಂಬ ಕ್ರಿಮಿನಲ್ ಲಾನ ಮೂಲ ತತ್ವಕ್ಕೆ ವಿರುದ್ಧವಾಗಿದೆ. ’ಆಮಿಷ’ದ ವಿಶಾಲ ವ್ಯಾಖ್ಯಾನ ಮತ್ತು ಅದರೊಂದಿಗೆ ರುಜುವಾತಿನ ಹೊರೆಯನ್ನು ರಿವರ್ಸ್ ಮಾಡಿರುವುದು, ಇವೆರಡೂ ಜೊತೆಗೂಡುವುದರಿಂದ ಆಗುವುದೇನೆಂದರೆ, ಆಸ್ಪತ್ರೆ, ಶಾಲೆ ನಡೆಸುವ, ಸಮಾಜ ಸೇವೆ ಸಲ್ಲಿಸುವ ಪ್ರತಿಯೊಂದು ಕ್ರಿಶ್ಚಿಯನ್ ಸಂಸ್ಥೆಯೂ ಸುಳ್ಳು ಆರೋಪಗಳಿಗೆ ಮತ್ತು ಅದರಿಂದ ಕಿರುಕುಳಕ್ಕೆ ಬಲಿಯಾಗುವ ಸಾಧ್ಯತೆಗಳಿಗೆ ಒಡ್ಡಿಕೊಳ್ಳುವಂತಾಗಿದೆ.

ಈ ಮಸೂದೆಯು, ಮಹಿಳೆಯರನ್ನು ಮತ್ತು ಪರಿಶಿಷ್ಟ ಜಾತಿ/ಪಂಗಡದ ವ್ಯಕ್ತಿಗಳನ್ನು ಅವಮಾನಿಸುತ್ತದೆ. ಹೇಗೆ ಎಂದರೆ, ಒಂದು ವೇಳೆ ಮತಾಂತರಕ್ಕೆ ಒಳಗಾದವರು ’ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಪ್ರಾಪ್ತ ವಯಸ್ಕ ಅಥವಾ ಅಸ್ವಸ್ಥಚಿತ್ತ ವ್ಯಕ್ತಿ’ಯ ಮತಾಂತರಕ್ಕೆ ಹೆಚ್ಚಿನ ಶಿಕ್ಷೆ ಇರುವುದು ಎಂದು ಈ ಮಸೂದೆ ಹೇಳುತ್ತದೆ. ಈ ಮಸೂದೆಯನ್ನು ರಚಿಸಿದವರ ಪ್ರಕಾರ, ಮಹಿಳೆಯರು ಮತ್ತು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದವರಿಗೆ ತಮ್ಮದೇ ಆದ ಸ್ವಂತ ಬುದ್ಧಿ ಇರುವುದಿಲ್ಲ ಹಾಗೂ ಅಸ್ವಸ್ಥಚಿತ್ತ ಮತ್ತು ಅಪ್ರಾಪ್ತರೊಂದಿಗೆ ಸಮೀಕರಿಸಲಾಗಿದೆ.

ಈ ಮಸೂದೆಯು ’ಆಮಿಷ, ಬಲವಂತ ಮತ್ತು ಮೋಸ’ದಿಂದ ಮಾಡಲಾಗುವ ಮತಾಂತರವನ್ನಷ್ಟೇ ಗುರಿ ಮಾಡಿಲ್ಲ, ಅದರೊಂದಿಗೆ ಮತಾಂತರವನ್ನೇ ನಿಯಂತ್ರಿಸುವುದಕ್ಕೆ ಮುಂದಾಗಿದೆ. ಸೆಕ್ಷನ್ 8ರ ಅಡಿಯಲ್ಲಿ, ಮತಾಂತರ ಮಾಡಿಕೊಳ್ಳುವ ಇಚ್ಛೆಯನ್ನು ಹೊಂದಿದ ವ್ಯಕ್ತಿ ಮತ್ತು ಮತಾಂತರವನ್ನು ಮಾಡುವ ವ್ಯಕ್ತಿಗಳಿಬ್ಬರೂ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಮೂವತ್ತು ದಿನ ಮುಂಗಡವಾಗಿ ಒಂದು ಅರ್ಜಿಯನ್ನು ಸಲ್ಲಿಸಬೇಕು. ಆಗ ಜಿಲ್ಲಾ ಮ್ಯಾಜಿಸ್ಟ್ರೇಟ್ ತಹಸೀಲ್ದಾರರ ಕಚೇರಿಯ ನೋಟಿಸ್ ಬೋರ್ಡಿನಲ್ಲಿ ಮುಂದೆ ಆಗುವ ಮತಾಂತರದ ಬಗ್ಗೆ ನೋಟಿಸ್ ಹಾಕಿ, ’ಆಕ್ಷೇಪಣೆ’ಗಳನ್ನು ಆಹ್ವಾನಿಸುತ್ತಾನೆ. ಹಾಗೂ ತದನಂತರ ಸಮಾಜ ಕಲ್ಯಾಣ ಅಧಿಕಾರಿಯ ಮೂಲಕ ಪ್ರಸ್ತಾಪಿತ ಮತಾಂತರದ ನೈಜ ಆಶಯ, ಉದ್ದೇಶ ಮತ್ತು ಕಾರಣದ ಬಗ್ಗೆ ವಿಚಾರಣೆ ನಡೆಸಬೇಕಾಗುತ್ತದೆ. ಈ ವಿಚಾರಣೆಯ ಆಧಾರದ ಮೇಲೆ ಮಸೂದೆಯ ಅಧಿನಿಯಮಗಳ ಅಡಿ ಅಪರಾಧ ಎಂದು ಕಂಡುಬಂದರೆ ಪ್ರಕರಣ ಪೊಲೀಸರಿಗೆ ವಹಿಸಿ, ಅವರು ಕ್ರಮ ಕೈಗೊಳ್ಳುತ್ತಾರೆ.

ಮತಾಂತರಕ್ಕೆ ನೋಟಿಸನ್ನು ನೀಡುವುದು ಅಗತ್ಯ ಎಂಬ ಕ್ರಮವೇ ಸಂವಿಧಾನಬದ್ಧ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ; ಅದನ್ನು ಪುಟ್ಟಸ್ವಾಮಿ ವರ್ಸಸ್ ಯುನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಮ್ ಕೋರ್ಟಿನ ಒಂಬತ್ತು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದರು. ಆಗ ಸರ್ವೋಚ್ಚ ನ್ಯಾಯಾಲಯವು, ’ಖಾಸಗಿತನ ಎಂಬುದು ಒಬ್ಬ ವ್ಯಕ್ತಿಯ ಪವಿತ್ರತೆಯ ಸರ್ವೋಚ್ಚ ಅಭಿವ್ಯಕ್ತಿಯಾಗಿದೆ. ಇದೊಂದು ಸಂವಿಧಾನಾತ್ಮಕ ಮೌಲ್ಯವಾಗಿದ್ದು, ಇದು ಮೂಲಭೂತ ಹಕ್ಕುಗಳ ಇಡೀ ಸಮುಚ್ಛಯಕ್ಕೆ ಅನ್ವಯವಾಗುತ್ತದೆ ಹಾಗೂ ಒಬ್ಬ ವ್ಯಕ್ತಿಯ ಆಯ್ಕೆ ಮತ್ತು ಸ್ವಯಂ ನಿರ್ಧಾರದ ಒಂದು ವಲಯವನ್ನು ರಕ್ಷಿಸುತ್ತದೆ.’.

ಸರ್ವೋಚ್ಯ ನ್ಯಾಯಾಲಯ ಮುಂದೆ ಹೇಳುತ್ತ, ಇದನ್ನು ಆರ್ಟಿಕಲ್ 21ರ ಜೊತೆಗೆ ಓದಿದರೆ, ಸ್ವಾತಂತ್ರ್ಯವು ಒಬ್ಬ ವ್ಯಕ್ತಿಗೆ ಏನು ಮತ್ತು ಹೇಗೆ ತಿನ್ನಬೇಕೆಂಬ, ಯಾವ ರೀತಿಯಲ್ಲಿ ಬಟ್ಟೆ
ಧರಿಸಬೇಕೆಂಬ, ತಾನು ಒಪ್ಪಿಕೊಳ್ಳುವ ನಂಬಿಕೆ ಯಾವುದಿರಬೇಕೆಂಬ ಹಾಗೂ ಮನಸ್ಸಿನ ಖಾಸಗಿತನದ ಒಳಗೆ, ಸ್ವಾಯತ್ತತೆ ಹಾಗೂ ಸ್ವಯಂ ನಿರ್ಧಾರ ಬಯಸುವ ಆಯ್ಕೆಗಳನ್ನು ಸೇರಿಸಿ ಇನ್ನೂ ಹಲವಾರು ವಿಷಯಗಳನ್ನು ಒಳಗೊಂಡಂತೆ ಜೀವನದ ಹಲವು ಮುಖಗಳ ಆಯ್ಕೆಯ ಆದ್ಯತೆಗಳನ್ನು ಸಬಲೀಕರಿಸುತ್ತದೆ.

2018 ರಲ್ಲಿ ಶಫಿನ್ ಜಹಾನ್ ವರ್ಸಸ್ ಅಶೋಕನ್ ಕೆ.ಎಂ. ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು, ನಂಬಿಕೆಯ(ಧರ್ಮದ) ವಿಷಯಗಳು ತನ್ನ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನಷ್ಟೇ ಸಹಜವಾಗಿ ಅಂತರ್ಗತವಾದದ್ದು (ಇಂಟ್ರಿನ್ಸಿಕ್) ಎಂದು ಹೇಳಿದೆ ಹಾಗೂ “ಸಂವಿಧಾನವು ವ್ಯಕ್ತಿಗಳಿಗೆ ತಮ್ಮ ಸಂತೋಷದ ಹುಡುಕಾಟಕ್ಕೆ ಕೇಂದ್ರವಾಗಿರುವ ವಿಷಯಗಳಲ್ಲಿ ನಿರ್ಣಯ ತೆಗೆದುಕೊಳ್ಳುವುದನ್ನು ಖಾತ್ರಿಪಡಿಸುತ್ತದೆ. ನಂಬಿಕೆ ಮತ್ತು ಧರ್ಮದ ವಿಷಯಗಳಲ್ಲಿ, ಇವುಗಳಲ್ಲಿ ನಂಬಿಕೆಯಿಟ್ಟುಕೊಳ್ಳಬೇಕೋ ಬೇಡವೋ ಎಂಬುದನ್ನೂ ಒಳಗೊಂಡಂತೆ ಈ ವಿಷಯಗಳು ಸಂವಿಧಾನಾತ್ಮಕ ಸ್ವಾತಂತ್ರದ ಕೇಂದ್ರದಲ್ಲಿವೆ” ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತು.

ಮತಾಂತರದ ವಿಷಯವು ವೈಯಕ್ತಿಕ ನಂಬಿಕೆ, ದೃಢತೆ ಹಾಗೂ ಆತ್ಮಸಾಕ್ಷಿಯ ವಿಷಯವಾಗಿದೆ ಹಾಗೂ ಮತಾಂತರ ಹೊಂದಲು ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸುವ ಈ ಕ್ರಿಯೆ, ಆರ್ಟಿಕಲ್ 25ರಲ್ಲಿರುವ ತನ್ನ ಧರ್ಮವನ್ನು ಮುಕ್ತವಾಗಿ ಆಚರಿಸುವ, ಪ್ರತಿಪಾದಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ನಿರಾಕರಿಸುತ್ತದೆ.

ಈ ಮಸೂದೆಯು ಲವ್ ಮ್ಯಾರೇಜ್, ಪ್ರೀತಿಸಿ ಮದುವೆಯಾಗುವುದನ್ನು ಕೂಡ ನಿರ್ದಿಷ್ಟವಾಗಿ ಗುರಿ ಮಾಡುತ್ತದೆ ಅದರಲ್ಲೂ ವಿಶೇಷವಾಗಿ ಅವು ಅಂತರ್‌ಧರ್ಮೀಯ ವಿವಾಹಗಳಾಗಿದ್ದರೆ, ಅವನ್ನು ’ಮದುವೆಯ ಭರವಸೆ’ಯ ಕಾರಣದಿಂದ ಅಪರಾಧೀಕರಣಗೊಳಿಸುವ ಕೆಲಸ ಮಾಡುತ್ತದೆ. ಈ ಮಸೂದೆಯು ಬಲವಂತದ, ಮೋಸದಿಂದ ಆದ ಮತಾಂತರಗಳನ್ನಷ್ಟೇ ಅಪರಾಧೀಕರಿಸುವುದಿಲ್ಲ, ಅದರೊಂದಿಗೆ ’ಮದುವೆಯ ಭರವಸೆ’ಯೊಂದಿಗೆ ಆದ ಮತಾಂತರವನ್ನೂ ಅಪರಾಧೀಕರಿಸುತ್ತದೆ, ಇದು ಸಂವಿಧಾನದ ಮೂಲ ಆಶಯವನ್ನು ಉಲ್ಲಂಘಿಸುತ್ತದೆ; ಅದ್ಯಾವುಂದರೆ ತನಗಿಷ್ಟವಾದ ವ್ಯಕ್ತಿಯನ್ನು ಮದುವೆಯಾಗುವ ಹಕ್ಕು ಹಾಗೂ ತನಗಿಷ್ಟವಾದ ಧರ್ಮದ ಹಕ್ಕು. ಇವೆರಡೂ ಸಂವಿಧಾನವು ರಕ್ಷಣೆ ನೀಡಿರುವ ವೈಯಕ್ತಿಕ ಆಯ್ಕೆಗಳಾಗಿವೆ ಹಾಗೂ ಅಂತರ್‌ಧರ್ಮೀಯ ವಿವಾಹಗಳನ್ನು ಅಪರಾಧೀಕರಣಗೊಳಿಸುವ ಯಾವ ಹಕ್ಕೂ ಸರಕಾರಕ್ಕೆ ಇಲ್ಲ.

ವೈಯಕ್ತಿಕ ಹಕ್ಕಿಗೆ ಈ ಮಸೂದೆಯಲ್ಲಿರುವ ಇನ್ನೊಂದು ದೊಡ್ಡ ಪೆಟ್ಟು ಯಾವುದೆಂದರೆ, ಮೇಲೆ ಚರ್ಚಿಸಿದಂತಹ ಸಂದರ್ಭಗಳಲ್ಲಿ ’ಪೋಷಕರಿಗೆ, ಸಹೋದರರಿಗೆ, ಸಹೋದರಿಯರಿಗೆ ಅಥವಾ
ಸಹೋದ್ಯೋಗಿಗೆ’ ಆಗುತ್ತಿರುವ ಮತಾಂತರ ಕಾನೂನುಬಾಹಿರ ಎಂದು ದೂರು ನೀಡುವ ಅವಕಾಶ ನೀಡಿರುವುದು. ಈ ’ಕಾನೂನುಬಾಹಿರ ಮತಾಂತರ’ವು ವಿವಾಹದ ಮೊದಲು ಅಥವಾ
ನಂತರ ಆಗುವ ಮತಾಂತರ ಆಗಿರುವುದರಿಂದ ಇದರ ಪರಿಣಾಮವಾಗಿ ಕುಟುಂಬಕ್ಕೆ ಮತ್ತು ವಿಜಿಲಾಂಟೆ ಗುಂಪುಗಳಿಗೆ ಎಫ್‌ಐಆರ್ ದಾಖಲಿಸುವದನ್ನು ಸಬಲೀಕರಿಸುವ ಕೆಲಸ ಮಾಡಿದೆಯಷ್ಟೆ.

ಇದು ವೈಯಕ್ತಿಕ ಆಯ್ಕೆಯ ಪವಿತ್ರತೆಯ ಸಂವಿಧಾನಾತ್ಮಕ ಮಾನ್ಯತೆಯ ಉಲ್ಲಂಘನೆಯಾಗಿದೆ. ಶಫಿನ್ ಜಹಾನ್ ವರ್ಸಸ್ ಅಶೋಕನ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ’ಸಾಮಾಜಿಕ ಅನುಮೋದನೆ’ಯನ್ನು ಮೀರಿ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನೇ ಎತ್ತಿಹಿಡಿಯಿತು. ಯಾವುದೇ ಸರಕಾರ ಅಥವಾ ಕಾನೂನು ಒಬ್ಬ ವ್ಯಕ್ತಿಯ ಸಂಗಾತಿಯ ಆಯ್ಕೆಯನ್ನು ನಿರ್ದೇಶಿಸಲು ಸಾಧ್ಯವಿಲ್ಲ ಏಕೆಂದರೆ ಅದುವೆ ಸಂವಿಧಾನದ ಅಡಿಯಲ್ಲಿ ಬರುವ ವೈಯಕ್ತಿಕ ಸ್ವಾತಂತ್ರ್ಯದ ಹೂರಣವಾಗಿದೆ. ವೈಯಕ್ತಿಕ ಆಯ್ಕೆಗಳನ್ನು ಬಲವಾಗಿ ಪ್ರತಿಪಾದಿಸುತ್ತ ಜೆ. ಚಂದ್ರಚೂಡ್ ಅವರು ’ನಮ್ಮ ಆಯ್ಕೆಗಳನ್ನು ಗೌರವಿಸಲಾಗುತ್ತದೆ ಏಕೆಂದರೆ ಅವುಗಳು ನಮ್ಮವು. ನಿಕಟವಾದ ವೈಯಕ್ತಿಕ ನಿರ್ಣಯಗಳನ್ನು ಮಾನ್ಯ ಮಾಡಲು ಸಾಮಾಜಿಕ ಅನುಮೋದನೆಯು ಆಧಾರವಲ್ಲ. ನಿಜವಾಗಿಯೂ, ಅಸಮ್ಮತಿ ಸೂಚಿಸುವ ಪ್ರೇಕ್ಷಕರಿಂದ ವೈಯಕ್ತಿಕ ಸ್ವಾತಂತ್ರ್ಯವನ್ನು ಸಂವಿಧಾನವು ರಕ್ಷಿಸುತ್ತದೆ” ಎಂದಿದ್ದರು.

’ಸಾರ್ವಜನಿಕ ಸುವ್ಯವಸ್ಥೆ’ಯನ್ನು ಕಾಪಾಡಲು ಈ ಕಾನೂನಿನ ಅವಶ್ಯಕತೆ ಇದೆ ಎಂಬುದಕ್ಕೆ ಸರಕಾರದ ಬಳಿ ಯಾವ ಪುರಾವೆಗಳೂ ಇಲ್ಲ. ಈ ಕಾನೂನಿನ ಹಿಂದಿರುವ ತರ್ಕ ’ಸಾರ್ವಜನಿಕ ಸುವ್ಯವಸ್ಥೆ’ಯನ್ನು ಕಾಪಾಡುವುದು ಆಗಿರದೇ ಅದರ ಬದಲಿಗೆ ಅಲ್ಪಸಂಖ್ಯಾತ ಸಮುದಾಯಗಳು ತಮ್ಮ ಧಾರ್ಮಿಕ ನಂಬಿಕೆಗೆ ಇರುವ ಹಕ್ಕನ್ನು ಮತ್ತು ಸ್ವತಂತ್ರ ವ್ಯಕ್ತಿಗಳಿಗೆ ಇರುವ ಪ್ರೀತಿಸುವ ಹಕ್ಕನ್ನು ಗುರಿ ಮಾಡಿ ಈ ಮಸೂದೆಯನ್ನು ತರಲಾಗಿದೆ. ಧಾರ್ಮಿಕ ಸ್ವಾತಂತ್ರ್ಯ ಮತ್ತು ಪ್ರೀತಿಸುವ ಸ್ವಾತಂತ್ರ್ಯಕ್ಕಿರುವ ಸಂವಿಧಾನಾತ್ಮಕ ಭರವಸೆಯ ಪವಿತ್ರತೆಯಲ್ಲಿ ನಂಬಿಕೆ ಇರುವ ಎಲ್ಲರೂ ಈ ಮಸೂದೆಗೆ ಪ್ರತಿರೋಧ ತೋರಬೇಕಿದೆ.

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಆಲ್ಟರ್‌ನೇಟಿವ್ ಲಾ ಫೋರಂನ ಸ್ಥಾಪಕ ಸದಸ್ಯರು. ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಕಾನೂನು ಹೋರಾಟಗಳ ಹಿಂದಿರುವ ವ್ಯಕ್ತಿ. ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಕೋಮುಸಂಘರ್ಷಗಳ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನು ನೆರವು ಒದಗಿಸುತ್ತಾ ಬಂದಿದ್ದಾರೆ.


ಇದನ್ನೂ ಓದಿ: ಮತಾಂಧ ಸರ್ವಾಧಿಕಾರದತ್ತ ಕರ್ನಾಟಕ: ವಿಧಾನಸಭೆಯ ಮುಂದೆ ‘ಧಾರ್ಮಿಕ ಬಂದೀಖಾನೆಯ ವಿಧೇಯಕ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...