Homeಕರ್ನಾಟಕಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಸಿಗಲಿ: ನೆಟ್ಟಿಗರಿಂದ ಸ್ವಾರಸ್ಯಕರ ಮತ್ತು ಮಹತ್ವದ ಚರ್ಚೆ

ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ಸಿಗಲಿ: ನೆಟ್ಟಿಗರಿಂದ ಸ್ವಾರಸ್ಯಕರ ಮತ್ತು ಮಹತ್ವದ ಚರ್ಚೆ

- Advertisement -
- Advertisement -

ಇಂದು ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿರುವ ಟ್ವಿಟ್ಟರ್ ಟ್ರೆಂಡಿಂಗ್ #KarnatakaJobsForKannadigas ಇದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವರು ಚರ್ಚಿಸಿದ್ದರು. ಬಹುತೇಕರು ಅದನ್ನು ಬೆಂಬಲಿಸಿದ್ದರೂ, ಕೆಲವು ಎಚ್ಚರಿಕೆಯ ಮಾತುಗಳನ್ನೂ ಹೇಳಿದ್ದಾರೆ. ಕೆಲವರು ಇದು ಪ್ರಾಕ್ಟಿಕಲ್ ಅಲ್ಲ ಎಂದಿದ್ದಾರೆ. ಕನ್ನಡಿಗರಿಗೆ ಉದ್ಯೋಗ ನಷ್ಟ ಆಗುತ್ತಿರುವುದು ಎಲ್ಲಿ ಎಂಬ ಕುರಿತು ಉದಾಹರಣೆಗಳ ಮೂಲಕ ಚರ್ಚೆ ನಡೆದಿದೆ.

ಪತ್ರಕರ್ತರಾದ ನವೀನ್ ಸೂರಿಂಜೆ ಈ ರೀತಿ ಹೇಳುತ್ತಾರೆ.

ಕರಾವಳಿಯಲ್ಲಿ ಸ್ಥಾಪನೆಯಾದ ವಿಜಯಾ ಬ್ಯಾಂಕನ್ನು ಇನ್ನಿಲ್ಲದಂತೆ ಮಾಡಿದ ಬ್ಯಾಂಕ್ ವಿಲೀನ‌ ಪ್ರಕ್ರಿಯೆಯ ವಿರುದ್ದ ಮಾಡಿದ ಹೋರಾಟವೇನೋ ವ್ಯರ್ಥವಾಯ್ತು. ವಿಜಯಾ ಬ್ಯಾಂಕ್ ಇದ್ದಾಗಲೇ ಸ್ವಲ್ಪಅಸ್ಥೆ ವಹಿಸಿದ್ದರೆ ಬ್ಯಾಂಕ್ ಉಳಿಯುತ್ತಿತ್ತೇನೋ ! ಮೂಲ್ಕಿ ಸುಂದರರಾಮ ಶೆಟ್ಟರಿಂದ ವೈಭವದ ದಿನಗಳನ್ನು ಕಂಡ ವಿಜಯಾ ಬ್ಯಾಂಕಿನಲ್ಲಿ ಎಷ್ಟೊಂದು ಜನ ಪರಿಚಿತರು ಇದ್ದರು. ಮೂಲ್ಕಿಯವರೇಆಗಿದ್ದಕ್ಕೋ ಏನೋ… ನನ್ನಪ್ಪನ ಗೆಳೆಯರಲ್ಲಿ ಬಹುತೇಕರು ವಿಜಯಾ ಬ್ಯಾಂಕ್ ಸಿಬ್ಬಂದಿಗಳು. ನನ್ನ ತಲೆಮಾರಿನ ಯಾರೂ ಕೂಡಾ ನಾನು ವಿಜಯಾ ಬ್ಯಾಂಕ್ ಉದ್ಯೋಗಿ ಎಂದು ಹೇಳಿಕೊಂಡಿದ್ದನ್ನು ನಾನುಕೇಳಿಲ್ಲ. ಆಗಲೇ ನಮಗೆ ಅಪಾಯ ಅರಿವಾಗಬೇಕಿತ್ತು.
ನನ್ನೂರಲ್ಲಿ ಹುಟ್ಟಿದ ಬ್ಯಾಂಕ್ ನಲ್ಲಿ ನನ್ನೂರಿನ ಯುವಕರಿಗೆ ಕೆಲಸ ವಂಚಿಸಿ, ಪರ ಬಾಷಿಕರಿಗೆ ಉದ್ಯೋಗ ನೀಡಿದಾಗಲೇ ವಿಜಯಾ ಬ್ಯಾಂಕ್ ಅವನತಿ ಪರ್ವ ಪ್ರಾರಂಭವಾಗಿತ್ತು. ಇವತ್ತು ವಿಜಯಾ ಬ್ಯಾಂಕ್ಉದ್ಯೋಗಿಗಳೆಲ್ಲರೂ ಕನ್ನಡಿಗರಾಗಿದ್ದರೆ ವಿಲೀನ ಪ್ರಕ್ರಿಯೆಗೆ ಉದ್ಯೋಗಿಗಳ ಪ್ರತಿಕ್ರಿಯೆ ಹೇಗಿರುತ್ತಿತ್ತು ?
ವಿಜಯಾ ಬ್ಯಾಂಕನ್ನೇನೋ ಕಳೆದುಕೊಂಡೆವು. ಕನ್ನಡಿಗರ ಉಳಿದ ಬ್ಯಾಂಕುಗಳನ್ನಾದರೂ ರಕ್ಷಿಸಬೇಕಿದೆ. ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಪ್ರಾತಿನಿದ್ಯ ಸಿಗಬೇಕಿದೆ. ಕನ್ನಡದಲ್ಲೂ ಬ್ಯಾಂಕಿಂಗ್ ಪರೀಕ್ಷೆಗೆಅವಕಾಶ ನೀಡಬೇಕಿದೆ.
ಸದ್ಯ, ಕನ್ನಡಿಗರೆಲ್ಲರೂ ಕರ್ನಾಟಕ ರಣಧೀರ ಪಡೆ ಹಮ್ಮಿಕೊಂಡಿರುವ ಕನ್ನಡಿಗರಿಗೆ ಉದ್ಯೋಗ ಚಳುವಳಿಯಲ್ಲಿ ಭಾಗಿಯಾಗಬೇಕಿದೆ.

ಎಂ.ಎಸ್.ಶ್ರೀ ಹರ್ಷ ಎನ್ನುವವರು ಇದಕ್ಕೆ ಸಹಮತ ಹೊಂದಿಲ್ಲ.

ಇದು ಪ್ರಾಕ್ಟಿಕಲ್ ಅಲ್ಲ. ಅಭಿವೃದ್ಧಿ ಆದ ಕಡೆ ವಲಸೆ ಆಗಿಯೇ ಆಗುತ್ತದೆ. ಇಂತಹ ಹೋರಾಟಗಳಿಂದ ಏನೂ ಪ್ರಯೋಜನವಿಲ್ಲ. ನನ್ನ ಮಾತಿನಲ್ಲಿ ನಂಬುಗೆ ಇಲ್ಲದಿದ್ದರೆ ಪ್ರಯತ್ನ ಮಾಡಿ ನೋಡಿ.

#ಅಭಿವೃದ್ಧಿ ಯ ವಿರುದ್ಧ ದನಿ ಎತ್ತದ ಇಂತಹ ಹೋರಾಟಗಳು ಕ್ಷಣಿಕ ಆರಾಮು ನೀಡುವ ಪೇನ್ ಕಿಲ್ಲರ್ ಗಳು ಅಷ್ಟೆ.

This is an #impractical movement ..

 

ಮಂಗಳೂರಿನ ಹೋರಾಟಗಾರ ಮುನೀರ್ ಕಾಟಿಪಳ್ಳ ಇದನ್ನು ಬೆಂಬಲಿಸುತ್ತಾರಾದರೂ, ಕೆಲವು ಎಚ್ಚರಿಕೆಯ ಮಾತುಗಳನ್ನೂ ಹೇಳುತ್ತಾರೆ.

ಉದ್ಯೋಗ ಸೃಷ್ಟಿಯ ಆಮಿಷವನ್ನು ಒಡ್ಡಿ ತುಳುನಾಡಿನ ಚಿನ್ನದಂತಹ ಭೂಮಿ, ನೇತ್ರಾವತಿಯ ಅಮೃತದಂತಹ ನೀರನ್ನು ಪಡೆದು ಸ್ಥಾಪನೆಯಾದ mrpl ಉದ್ಯೋಗ ಸೃಷ್ಟಿಸಿದ್ದು ಅಷ್ಟರಲ್ಲೇ ಇದೆ. ನಾಲ್ಕುಸಾವಿರ ಎಕರೆ ಭೂಮಿ, ಲಕ್ಷಾಂತರ ಕೋಟಿ ಹಣ ಹೂಡಿಯೂ ಸೃಷ್ಟಿಯಾಗಿರುವ ಉದ್ಯೋಗ ಎರಡು ಸಾವಿರಕ್ಕೂ ಕಡಿಮೆ. ಆ ಎರಡು ಸಾವಿರದಲ್ಲಿ ಕನ್ನಡಿಗರ ಸಂಖ್ಯೆ ಶೇಕಡಾ 25 ರಷ್ಟೂ ಇಲ್ಲ. ತುಳುವರನ್ನುಹುಡುಕಬೇಕಷ್ಟೆ. ಉದ್ಯೋಗ ಸಿಕ್ಕವರಲ್ಲಿ ಬಹುತೇಕರು ಭೂಮಿ ಕೊಟ್ಟ ಕಾರಣಕ್ಕೆ ಪ್ರತಿಯಾಗಿ ಪಡೆದುಕೊಂಡದ್ದೇ ಹೆಚ್ಚು. ಅಂತಹ mrpl ತಿಂಗಳ ಹಿಂದೆ 150 ಅಪ್ರೆಂಟಿಸ್ ಗಳನ್ನು ನೇಮಕಾತಿಮಾಡಿಕೊಂಡಿತು. ಆ 150 ರಲ್ಲಿ ತುಳುವರು ಬಿಡಿ, ಕನ್ನಡಿಗರು ಒಬ್ಬರೂ ಇಲ್ಲವಂತೆ. ಇದು ಅತ್ಯಂತ ಕಳವಳಕಾರಿ ಸಂಗತಿ.

ಈ ಅನ್ಯಾಯ, ತಾರತಮ್ಯ ಕೊನೆಯಾಗಲೇ ಬೇಕು. ನಮ್ಮ ನೆಲ, ಜಲವನ್ನು ಬಳಸಿ ಸ್ಥಾಪನೆಯಾಗುವ ಕೈಗಾರಿಕೆ, ಉದ್ದಿಮೆ, ವ್ಯವಹಾರಗಳು ಉದ್ಯೋಗವನ್ನು ಸೃಷ್ಟಿಸಬೇಕು, ಸ್ಥಳೀಯರಿಗೆ ಅದರಲ್ಲಿಆದ್ಯತೆಯಲ್ಲಿ ಉದ್ಯೋಗ ಸಿಗಲೇಬೇಕು. ಅದಿಲ್ಲದಿದ್ದರೆ ಎದ್ದು ಹೊರ ನಡೆಯಿರಿ ಅನ್ನಬೇಕು.

(ಕರ್ನಾಟಕ ರಣಧೀರ ಪಡೆ ಹಮ್ಮಿಕೊಂಡಿರುವ ಕನ್ನಡಿಗರಿಗೆ ಉದ್ಯೋಗ ಕೊಡಿ ಟ್ವಿಟ್ಟರ್, ಫೇಸ್ ಬುಕ್ ಅಭಿಯಾನಕ್ಕೆ ನನ್ನ ಬೆಂಬಲ ಇದೆ. ಆದರೆ ಇದು ಅಂದಾಭಿಮಾನವೋ, ಪರ ರಾಜ್ಯದವರ ಕುರಿತುಅಸಹನೆಯೋ ಆಗಬಾರದು. ಹೊರ ರಾಜ್ಯದವರೂ ಇರಲಿ. ಕನ್ನಡಿಗರಿಗೆ, ಸ್ಥಳೀಯರಿಗೆ ಆದ್ಯತೆಯಲ್ಲಿ ಅವಕಾಶ ಸಿಗಲಿ ಎಂಬುದು ನನ್ನ ನಿಲುವು. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಇಡೀದೇಶದಲ್ಲಿ ಉದ್ಯೋಗ ಸೃಷ್ಟಿಸುವ ಕೆಲಸ ಸರಕಾರದ ಆದ್ಯತೆ ಆಗಬೇಕು. ಗುತ್ತಿಗೆ, ಹೊರಗುತ್ತಿಗೆ ಪದ್ದತಿ ರದ್ದಾಗಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ, ಉದ್ಯೋಗ ಭದ್ರತೆಯ ಕಾನೂನುಗಳುಜಾರಿಯಾಗಬೇಕು. ಒಟ್ಟಾರೆ ಹೋರಾಟ ನಿರುದ್ಯೋಗ, ಅರೆ ಉದ್ಯೋಗದ ವಿರುದ್ದ, ಸ್ಥಳೀಯರಿಗೆ ಆದ್ಯತೆ ಎಂದಾಗಬೇಕು)

#ಕರ್ನಾಟಕದ_ಉದ್ಯೋಗ_ಕನ್ನಡಿಗರಿಗೆ_ಸಿಗಲಿ
#karnatakaJobsForKannadigas

 

ಪ್ರದೀಪ್ ತೊರೆನೂರು ಎನ್ನುವವರೂ ಸಹಾ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಬೆಂಗ್ಳೂರಿನಲ್ಲಿ ಒಂದು ಸುತ್ತು ತಿರುಗಾಡುತ್ತಾ ನೋಡಿದರೆ ಹಲವಾರು ಉದ್ಯಮಗಳು ಹಾಗೂ ಕೆಲಸ ಮಾಡುವ ಜನ ಕನ್ನಡೇತರರು ಕಾಣಿಸುತ್ತಾರೆ … ಮತ್ತೊಂದೆಡೆ ಹಲವಾರು ಕನ್ನಡಿಗರು ಕೆಲಸ ಸಿಗದೆ ಒದ್ದಾಡುತ್ತಿದ್ದಾರೆ …

ಸ್ವತಂತ್ರ ನಂತರ ಕೇವಲ ಕೇಂದ್ರ ಸರ್ಕಾರ ಕಚೇರಿ ಹೆಚ್ ಎ ಎಲ್ , ಬೆಮ್‌ಲ್ , ಮುಂತಾದ ಕಡೆ ತಮ್ಮ ಬೇರು ಗಟ್ಟಿ ಮಾಡಿಕೊಂಡು ಅನ್ಯ ಭಾಷಿಕರು ಕರ್ನಾಟಕದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು , ಅದುಕ್ರಮೇಣ ಮಾಹಿತಿ ತಂತ್ರಜಾನ ಕಾರ್ಖಾನೆಗಳಲ್ಲಿ ಅನ್ಯ ರಾಜ್ಯದವರು ತಮ್ಮ ಹಿಡಿತ ಇಟ್ಟುಕೊಂಡು ಕನ್ನಡಿಗರು ಏನೇ ಓದಿ , ಒಳ್ಳೆಯ ಅನುಭವ ಇದ್ದರೂ ಅವರನ್ನು ಕಡೆಗಣಿಸಿದರು ..

ಈ ದೊಡ್ಡ ಮಟ್ಟದ ಕಾರ್ಖನಗಳಲ್ಲಿ ಇದ್ದ ಅನ್ಯ ಭಾಷಿಕರ ಜನ ಇವತ್ತು ನನಗೆ ಆಟೋ ಗಳಲ್ಲಿ , ಮಾಲ್ ಗಳಲ್ಲಿ , ಚಿಕ್ಕ ಚಿಕ್ಕ ಉದ್ಯಮಗಳಲ್ಲಿ ನಿಧಾನವಾಗಿ ತಮ್ಮ ಬೇರು ಗಟ್ಟಿ ಮಾಡಿಕೊಳ್ಳುತಿರುವುದುಕನ್ನಡಿಗರಿಗೆ ಮುಂದಿನ ದಿನಗಳಲ್ಲಿ ಕೆಲಸ ಸಿಗುವ ಅವಕಾಶಗಳು ಕಡಿಮೆಯಾಗಳಿದ್ದು, ಬೆಂಗಳೂರು ನಿಧಾನವಾಗಿ ಅನ್ಯ ರಾಜ್ಯದವರ ತೆಕ್ಕೆಗೆ ಬೀಳುವುದು ಶತ ಸಿದ್ದ !

ಮೊದಲನೆಯದಾಗಿ ಕರ್ನಾಟಕ ಸರ್ಕಾರ ರಾಜ್ಯದ ಒಟ್ಟೂ ನಿರುದ್ಯೋಗಿಗಳ ಅಂಕಿ ಅಂಶ ಬಗ್ಗೆ ಜನರಿಗೆ ತಿಳಿಸಬೇಕು ! ಪ್ರತಿಯೊಂದು ಉದ್ಯಮದಲ್ಲಿ ಸ್ಥಳೀಯರು ಇರುವ ಅಂಕಿ ಅಂಶ ಬಯಲಾಗಬೇಕು ! ಇಂದು ಕಸದ ಕಾಂಟ್ರ್ಯಾಕ್ಟ್ ಗಳಿಂದ ಯಾವ ಯಾವ ಕಾಂಟ್ರ್ಯಾಕ್ಟ್ ಗಳು ಕನ್ನಡಿಗರಿಗೆ ಸಿಕ್ಕಿದೆ , ಅನ್ಯ ಭಾಷಿಕರಿಗೆ ಸಿಕ್ಕಿದೆ ಎಂಬ ಬಗ್ಗೆ ಮಾಹಿತಿ ಕರ್ನಾಟಕ ಸರ್ಕಾರ ಬಹಿರಂಗ ಪಡಿಸಲಿ

ಇಲ್ಲಿ ಅನ್ಯಭಾಷಿಕರ ಸಂಖ್ಯೆ ಆಯಾ ರಾಜ್ಯದ ಆಧಾರದ ಮೇಲೆ ವಿಂಗಡಣೆಯಾಗಿ ಆಯಾ ರಾಜ್ಯದ ಉದ್ಯೋಗ ಸೃಷ್ಟಿಸುವಲ್ಲಿ ಆಯಾ ರಾಜ್ಯದ ವೈಪಲ್ಯ ಎತ್ತಿ ತೋರಿಸಬೇಕು !

#Nation_First ಎಂದರೆ ನಮ್ಮ ಕೆಲಸ ಉದ್ಯಮ ಹಾಗೂ ಸ್ವಾಭಿಮವನ್ನು ಅನ್ಯ ರಾಜ್ಯದವರಿಗೆ ಕೊಟ್ಟು ನಾವು ಬಿಕಾರಿ ಯಾಗುವುದಲ್ಲ , ನಾವು ನಮ್ಮ ಹಕ್ಕನ್ನು ಪಡೆದು , ಸ್ಥಳೀಯರಾಗಿ ಕೆಲಸ ಪಡೆದು ,ಒಳ್ಳೆಯ ವ್ಯಾಪಾರ ವಹಿವಾಟು ಮಾಡಿ ಭಾರತ ದೇಶದ ಅಭಿವೃದ್ದಿಗಾಗಿ ಶ್ರಮಿಸುವುದು !

ಸ್ಥಳೀಯರಿಗೆ ಕೆಲ್ಸ ಸಿಕ್ಕ ಮೆಳ್ಳೆ ಉಳಿದ ಕೆಲಸಗಳು ಅನ್ಯ ರಾಜ್ಯದವರು ಪಡೆಯಬಹುದು !

ಇದು ಆಗದೆ ಇದ್ದಲ್ಲಿ ಕನ್ನಡಿಗರು ತಮ್ಮದೇ ನಾಡಿನಲ್ಲಿ ಕೆಲಸ ಇಲ್ಲದೆ ಪರದಾಡುವ ದಿನ ಬರುವುದು ಶತಸಿದ್ದ !

#KarnatakaJobsForKannadigas
#ಕರ್ನಾಟಕದ_ಉದ್ಯೋಗ_ಕನ್ನಡಿಗರಿಗೇ_ಸಿಗಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...