Homeಮುಖಪುಟಮೋದಿ-ಶಾಗೆ ಕೇಜ್ರಿವಾಲ್ ಈ ಬಾರಿ ಎಂದಿಗಿಂತಲೂ ಹೆಚ್ಚು ಅಪಾಯಕಾರಿ...

ಮೋದಿ-ಶಾಗೆ ಕೇಜ್ರಿವಾಲ್ ಈ ಬಾರಿ ಎಂದಿಗಿಂತಲೂ ಹೆಚ್ಚು ಅಪಾಯಕಾರಿ…

- Advertisement -
- Advertisement -

– ಅಶುತೋಷ್

ಅನುವಾದ: ನಿಖಿಲ್ ಕೋಲ್ಪೆ

ಕೃಪೆ: NDTV

ಅರವಿಂದ ಕೇಜ್ರಿವಾಲ್ ಅವರು ನರೇಂದ್ರ ಮೋದಿ ಮತ್ತು ಅಮಿತ್ ಶಾಗೆ ಕಬ್ಬಿಣದ ಕಡಲೆಯಾಗಿದ್ದಾರೆ. ಹಿಂದೂತ್ವ ಅಜೆಂಡಾದ ಹಿಂಸಾತ್ಮಕ ಪ್ರತಿಪಾದನೆಯ ಬಳಿಕವೂ ಮೋದಿ ಮ್ಯಾಜಿಕ್ ಕಳೆಗುಂದುತ್ತಿದೆ ಎಂಬುದನ್ನು ದಿಲ್ಲಿಗಾಗಿ ನಡೆಯುತ್ತಿರುವ ಕದನ ಇನ್ನಷ್ಟು ಸ್ಪಷ್ಟವಾಗಿ ತೋರಿಸಿಕೊಡಲಿದೆ.

ಕೇಜ್ರಿವಾಲ್ ಐದು ವರ್ಷಗಳ ಹಿಂದೆ ಇದ್ದಂತಹ ವರ್ಚಸ್ಸನ್ನು ಈಗಲೂ ಉಳಿಸಿಕೊಂಡಿದ್ದಾರೆಂದು ಹೇಳುವಂತಿಲ್ಲ. ಆಗ ಅವರು ರಾಜಕೀಯವಾಗಿ ಎಳಸಾಗಿದ್ದರು. ಆದರೆ, ಎಳಸಾಗಿದ್ದರು, ದಪ್ಪ ಚರ್ಮದ ರಾಜಕಾರಣಿ ಆಗಿಲ್ಲದಿದ್ದರಿಂದಲೇ ಜನರು ಅವರನ್ನು ನಂಬಿದ್ದರು. ಅವರು ರಾಜಕೀಯವನ್ನು ಪ್ರವೇಶಿಸಿಯೂ, ರಾಜಕೀಯ ಮಾಡದೆ, ರಾಜಕೀಯವನ್ನು ಬದಲಿಸಲು ಬಯಸುವ ವ್ಯಕ್ತಿಯಾಗಿ ಜನರು ಅವರನ್ನು ಕಂಡಿದ್ದರು. ಕಳೆದ ಐದು ವರ್ಷಗಳಲ್ಲಿ ಅವರು ಆದರ್ಶವಾದಿಯಿಂದ, ಅರಾಜಕತಾವಾದಿಯಾಗಿ, ಇದೀಗ ವಾಸ್ತವವಾದಿ ರಾಜಕಾರಣಿಯಾಗಿ ರೂಪಾಂತರಗೊಂಡಿದ್ದಾರೆ.

ಯಾರಾದರೂ ಕೇಜ್ರಿವಾಲ್ ಅವರು ತನ್ನ ವರ್ಚಸ್ಸನ್ನು, ಮತದಾರರ ಆಕರ್ಷಣೆಯನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ ಎಂದು ಭಾವಿಸಿದರೆ ಅವರು ಮೂರ್ಖರ ಲೋಕದಲ್ಲಿದ್ದಾರೆ ಎಂದರ್ಥ. ಅವರು ಅಖಿಲ ಭಾರತ ಮಟ್ಟದಲ್ಲಿ ಮತದಾರರನ್ನು ಓಲೈಸಲು ಸಾಧ್ಯವಾಗದೇ ಇರಬಹುದು ಆದರೆ, ದಿಲ್ಲಿಯ ಮಟ್ಟಿಗೆ ಅವರೇ ನಂಬರ್ ವನ್. ಅವರ ನಾಯಕತ್ವದಲ್ಲಿ ಕಳೆದ ಎರಡು ವರ್ಷಗಳಲ್ಲಿ ಸ್ಪರ್ಧಿಸಿದ ಯಾವುದೇ ರೀತಿಯ ಚುನಾವಣೆಯಲ್ಲಿ ಆಪ್ ಮಹಾನ್ ಸಾಧನೆ ಮಾಡಿಲ್ಲ ಎಂಬುದು ಅಲ್ಲಗೆಳೆಯಲಾಗದ ಸತ್ಯ.

ಅವರ ಪಕ್ಷಕ್ಕೆ ಹರ್ಯಾಣ, ಜಾರ್ಖಂಡ್, ಮಧ್ಯಪ್ರದೇಶ, ಛತ್ತೀಸ್‌ಘಡ್ ಮತ್ತು ರಾಜಸ್ಥಾನದ ಚುನಾವಣೆಯಲ್ಲಿ ಒಂದು ಶೇಕಡಾ ಮತವನ್ನೂ ಗಳಿಸಲು ಸಾಧ್ಯವಾಗಿಲ್ಲ. ಅವರ ಪಕ್ಷವು ದಿಲ್ಲಿಯಲ್ಲಿ ಸಂಸದೀಯ ಚುನಾವಣೆಯ ವೇಳೆಯೂ ದಯನೀಯವಾಗಿ ಸೋತಿತ್ತು ಮತ್ತು ಗಳಿಸಿದ ಮತಗಳ ಲೆಕ್ಕದಲ್ಲೂ ಅದು ಮೂರನೇ ಸ್ಥಾನದಲ್ಲಿತ್ತು. ಕಾಂಗ್ರೆಸ್ ಕೂಡಾ ಅದಕ್ಕಿಂತ ಹೆಚ್ಚು ಮತಗಳನ್ನು ಗಳಿಸಿತ್ತು. ಆಪ್ 2017ರಲ್ಲಿ ನಡೆದ ದಿಲ್ಲಿ ಮುನಿಸಿಪಲ್ ಚುನಾವಣೆಗಳಲ್ಲೂ ಕೆಟ್ಟದಾಗಿ ಸೋತಿತ್ತು. ಆದರೆ, ದಿಲ್ಲಿ ವಿಧಾನಸಭಾ ಚುನಾವಣೆಯ ವಿಷಯ ಬೇರೆಯೇ ತರದ ಆಟ.

ಆಪ್ ಭವಿಷ್ಯ ನಿರ್ಧರಿಸಲಿರುವ ಮೂರು ವಿಷಯಗಳು:

ಮೊದಲನೆಯದು, ದಿಲ್ಲಿಯಲ್ಲಿ ಮೋದಿಯಂತೆಯೇ ಕೇಜ್ರಿವಾಲ್‌ರಿಗೂ ಯಾರೂ ಎದುರಾಳಿಗಳಿಲ್ಲ. 2019ರ ಸಂಸದೀಯ ಚುನಾವಣೆಗಳ ವೇಳೆ ಮೋದಿ ಉಳಿದವರಿಗಿಂತ ಸ್ವಲ್ಪ ಎತ್ತರವಾಗಿಯೇ ಕಾಣುತ್ತಿದ್ದರು. ದಿಲ್ಲಿಯಲ್ಲಿ ಬಿಜೆಪಿ ನಾಯಕತ್ವರಹಿತವಾಗಿದೆ. ಮನೋಜ್ ತಿವಾರಿ, ವಿಜಯ್ ಗೋಯಲ್, ಹರ್ಷವರ್ಧನ್ ಮತ್ತಿತರರು ಕೇಜ್ರಿವಾಲ್‌ರಿಗೆ ಸರಿಸಾಟಿಯೇ ಅಲ್ಲ. ಅವರಿಗೆ ವರ್ಚಸ್ಸು ಅಥವಾ ಸಾಮಾಜಿಕ ನೆಲೆಯೇ ಇಲ್ಲ. ದಿಲ್ಲಿಯಲ್ಲಿ ಮೇಲು ಮತ್ತು ಮಧ್ಯಮ ವರ್ಗದವರು ಕೇಜ್ರಿವಾಲ್ ಬಗ್ಗೆ ಭ್ರಮನಿರಸನಗೊಂಡಿರಬಹುದು. ಆದರೆ, ಅವರು ಕೆಳಮಧ್ಯಮ ಮತ್ತು ಬಡಜನರು ಮತ್ತು ಆ ನಡುವೆ ಬದುಕುವ ಜನರ ಕಣ್ಮಣಿಯಾಗಿಯೇ ಉಳಿದಿದ್ದಾರೆ. ಬಿಜೆಪಿ ನಾಯಕರಿಗೆ ವ್ಯತಿರಿಕ್ತವಾಗಿ ಅವರು ಯಾವತ್ತೂ ಕಾಲಿಗೆ ಚಕ್ರ ಕಟ್ಟಿಕೊಂಡಿರುವ ವ್ಯಕ್ತಿ. 2017ರ ಎಪ್ರಿಲ್‌ನಲ್ಲಿ ನಡೆದ ದಿಲ್ಲಿ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಸೋತ ಬಳಿಕ ಅವರು ದಿಲ್ಲಿಯ ಮೂಲೆ ಮೂಲೆಯನ್ನೂ ತಿರುಗಿ ಪ್ರತಿದಿನವೆಂಬತೆ ಚಿಕ್ಕ ದೊಡ್ಡ ಸಭೆಗಳಲ್ಲಿ ಮಾತನಾಡುತ್ತಲೇ ಇದ್ದಾರೆ. ಅವರೀಗ ತನ್ನ ಮಾಂತ್ರಿಕ ಸ್ಪರ್ಶವನ್ನು ಮರಳಿ ಪಡೆದಂತಿದೆ.

ಎರಡನೆಯದಾಗಿ, ದಿಲ್ಲಿಯಲ್ಲಿ ಕಾಂಗ್ರೆಸ್ ಮರಣಶಯ್ಯೆಯಲ್ಲಿದೆ. ಸಂಸದೀಯ ಚುನಾವಣೆಯ ವೇಳೆ ಅದು ಕಳೆದುಕೊಂಡದ್ದನ್ನು ಮರಳಿಪಡೆಯುತ್ತಿರುವಂತೆ ಕಂಡುಬಂದಿತ್ತು. ಸಂಸದೀಯ ಚುನಾವಣೆಯ ವೇಳೆ ಅದು 22 ಶೇಕಡಾ ಮತಗಳನ್ನು ಗಳಿಸಿ, ಅಚ್ಚರಿ ಹುಟ್ಟಿಸುವ ರೀತಿಯಲ್ಲಿ ಬಿಜೆಪಿಯ ಬೆನ್ನಲ್ಲಿ ಎರಡನೇ ಸ್ಥಾನ ಗಳಿಸಿತ್ತು. ಅಲ್ಪಸಂಖ್ಯಾತರ ವಿಚಾರಗಳ ಕುರಿತು ಆಪ್ ಪಕ್ಷದ ಅಸ್ಪಷ್ಟ ನಿಲುವಿನಿಂದಾಗಿ ಮುಸ್ಲಿಮರು ಆಪ್ ಕೈಬಿಟ್ಟು ಕಾಂಗ್ರೆಸ್ ಕೈ ಹಿಡಿದಂತೆ ಕಂಡುಬರುತ್ತಿತ್ತು. ಆದರೆ, ಸಂಸದೀಯ ಚುನಾವಣೆಯ ಬಳಿಕ ಕಾಂಗ್ರೆಸ್ ತನ್ನ ಮಾಮೂಲಿ ಗುಂಪು ಒಳಜಗಳಕ್ಕೆ ಮರಳಿತ್ತು. ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸಾವು ಮತ್ತು ಪಕ್ಷಾಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ಕಾಂಗ್ರೆಸ್ ಪಕ್ಷವನ್ನು ಕೆಟ್ಟದಾಗಿ ಬಾಧಿಸಿದೆ. ನಾಯಕರಿಲ್ಲದೇ ಪಕ್ಷವು ತಿಂಗಳುಗಳ ಕಾಲ ನಾವಿಕನಿಲ್ಲದ ನಾವೆಯಂತೆ ತಿರುಗುತ್ತಿತ್ತು. ಆಪ್ ಮತ್ತು ಕಾಂಗ್ರೆಸ್ ದಿಲ್ಲಿಯಲ್ಲಿ ಹೊಂದಿರುವುದು ಒಂದೇ ಸಾಮಾಜಿಕ ನೆಲೆಗಟ್ಟನ್ನು. ಕಾಂಗ್ರೆಸ್ ಎದ್ದರೆ ಆಪ್ ಮುಳುಗುತ್ತದೆ. ಕಂಗೆಟ್ಟ ಕಾಂಗ್ರೆಸ್ ಆಪ್ ಪಕ್ಷಕ್ಕೆ ಮತ್ತು ಕೇಜ್ರಿವಾಲ್‌ಗೆ ವರ. ಈಗ ಬಿಜೆಪಿ ವಿರುದ್ಧ ಮತಗಳು ವಿಭಜನೆಯಾಗುವ ಯಾವುದೇ ಸಾಧ್ಯತೆಯಿಲ್ಲ.

ಮೂರನೆಯದಾಗಿ ಎಲ್ಲಾ ದೌರ್ಬಲ್ಯಗಳ ಹೊರತಾಗಿ ಆಪ್ ಸರಕಾರ ತನ್ನ ಭರವಸೆಗಳಿಗಾಗಿ ಕೆಲಸ ಮಾಡುತ್ತಾ, ಅವುಗಳನ್ನು ಈಡೇರಿಸುತ್ತಿರುವಂತೆ ಕಾಣುತ್ತಿದೆ. ಈ ಚುನಾವಣೆಗೆ ಮುಂಚಿತವಾಗಿ ಆಪ್ ಸರಕಾರವು ಜನರಿಗೆ ಉಚಿತವಾದ ಕೊಡುಗೆಗಳನ್ನು ನೀಡುತ್ತಿದೆ. ಇವುಗಳಲ್ಲಿ ಆಪ್ ಸರಕಾರದ ಪರವಾಗಿ ವಾಲುತ್ತಿರುವುದು ಬಡವರಿಗೆ ಉಚಿತ ವಿದ್ಯುತ್ ಮತ್ತು ಅರ್ಧ ದರದಲ್ಲಿ ನೀರು ನೀಡಿದೆ. ಇದು ದಿಲ್ಲಿಯ 80 ಶೇಕಡಾ ಜನರಿಗೆ ಅನುಕೂಲವಾಗುತ್ತಿದೆ. ಈ ಸತ್ಯದ ಬಗ್ಗೆ ಜನರು ಕುರುಡಾಗಿಲ್ಲ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಈತ ಮಾಡಿದ ಸಾಧನೆ ವಿರೋಧಿಗಳ ಬಾಯಿಯನ್ನೂ ಮುಚ್ಚಿಸಿದೆ. ಸರಕಾರಿ ಶಾಲೆಗಳು ಹೇಗೆ ಪರಿವರ್ತನೆ ಹೊಂದಿವೆ ಎಂಬದೇ ಮತದಾರರ ಯೋಚನೆಯ ದಿಕ್ಕು ಬದಲಿಸಿದೆ!

ಇಲ್ಲಿ ನಾಲ್ಕನೇ ಅಂಶವೊಂದಿದೆ. ಅದೆಂದರೆ, ಕೇಜ್ರಿವಾಲ್ ಮೌನ. 2015ರ ಭಾರೀ ಗೆಲುವಿನ ನಂತರ ಈ ಕೇಜ್ರಿವಾಲ್ ಆಕ್ರಮಣಕಾರಿಯಾಗಿ ಮೋದಿಯನ್ನು ಎದುರಿಸಿದ್ದರು. ಅದನ್ನು ಮೋದಿ ನೆಗೆಟಿವಾಗಿ ಬಳಸಿದ್ದರು. ಆದರೆ, ಈ ಬಾರಿ ಅವರ ಮೌನ ಮೋದಿಗೆ ಯಾವುದೇ ಅಸ್ತ್ರ ಒದಗಿಸುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಕೇಜ್ರಿವಾಲ್ ಈ ಚುನಾವಣೆಯಲ್ಲಿ ಬಿಜೆಪಿಗೆ ಕಬ್ಬಿಣದ ಕಡಲೆಯಾಗಿದ್ದಾರೆ ಮತ್ತು ಹಿಂದೆಂದಿಗಿಂತಲೂ ಹೆಚ್ಚು ಅಪಾಯಕಾರಿಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...