Homeಮುಖಪುಟಕಿರುತೆರೆ ತರ ತರ; ಕೂಸೆ ಮುನಿಸಾಮಿ ವೀರಪ್ಪನ್ ಮತ್ತು ಮೂರು ಷೋಗಳು

ಕಿರುತೆರೆ ತರ ತರ; ಕೂಸೆ ಮುನಿಸಾಮಿ ವೀರಪ್ಪನ್ ಮತ್ತು ಮೂರು ಷೋಗಳು

- Advertisement -
- Advertisement -

1. ಕೂಸೆ ಮುನಿಸಾಮಿ ವೀರಪ್ಪನ್

ಕೆಲವು ತಿಂಗಳ ಹಿಂದೆ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡಿದ್ದ ’ದ ಹಂಟ್ ಫಾರ್ ವೀರಪ್ಪನ್’ ಎಂಬ ಸಾಕ್ಷ್ಯಚಿತ್ರ ಬಿಸಿಬಿಸಿ ಚರ್ಚೆಯನ್ನು ಹುಟ್ಟುಹಾಕಿತ್ತು. ’ವರ್ಕ್‌ಶಾಪ್’ ಎಂಬ ಹೆಸರಿನಲ್ಲಿ ಎಸ್‌ಟಿಎಫ್ ಪೊಲೀಸರು, ಅದರಲ್ಲಿಯೂ ಶಂಕರ ಬಿದರಿ ತಂಡ ನಡೆಸಿದ ದೌರ್ಜನ್ಯಗಳ ಬಗ್ಗೆ ಅದರ ಭಾಗವಾಗಿಯೇ ಇದ್ದ ಪೊಲೀಸ್ ಅಧಿಕಾರಿಯೊಬ್ಬರು ನಿವೇದಿಸಿಕೊಂಡಿದ್ದರು. ಆದರೆ ವೀರಪ್ಪನ್ ಒಬ್ಬ ಕಾಡುಗಳ್ಳನಾಗಿ-ಹಂತಕನಾಗಿ ರೂಪುಗೊಂಡಿದ್ದಕ್ಕೆ ಕಾರಣಗಳೇನು ಎಂಬುದರ ಬಗ್ಗೆ ಅದು ಅಷ್ಟು ಮಾತಾಡಿರಲಿಲ್ಲ. ನಾಲ್ಕು ಎಪಿಸೋಡ್ ಇದ್ದ ಈ ಸಾಕ್ಷ್ಯಚಿತ್ರ ಹಲವು ಮುಖ್ಯ ಸಂಗತಿಗಳನ್ನು ಬಿಟ್ಟಿತ್ತು.

ಈ ಕೊರತೆಯನ್ನು ತುಸು ನೀಗಿಸುವ ನಿಟ್ಟಿನಲ್ಲಿ ಈಗ ಝೀ5 ಎಂಬ ಒಟಿಟಿ ವಾಹಿನಿಯಲ್ಲಿ ’ಕೂಸೆ ಮುನಿಸಾಮಿ ವೀರಪ್ಪನ್’ ಎಂಬ ಆರು ಎಪಿಸೋಡ್‌ಗಳ ಸಾಕ್ಷ್ಯಚಿತ್ರ ಬಿಡುಗಡೆಯಾಗಿದೆ. ಇದು ಮೊದಲಭಾಗ ಮಾತ್ರವಾಗಿದ್ದು ಸೀಸನ್-2 ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ನಕ್ಕೀರನ್ ಪತ್ರಿಕೆಯ ಸಂಪಾದಕ ಗೋಪಾಲ್ ಮತ್ತು ತಂಡ ಚಿತ್ರೀಕರಿಸಿದ್ದ ವೀರಪ್ಪನ್‌ನ ವಿಡಿಯೋ ಫುಟೇಜ್‌ಗಳನ್ನು ಯಥೇಚ್ಛವಾಗಿ ಬಳಸಿ ನಿರ್ಮಿಸಿರುವ ಈ ಡಾಕ್ಯುಮೆಂಟರಿ ವೀರಪ್ಪನ್‌ನನ್ನೇ ಮುಖ್ಯ ನಿರೂಪಕನನ್ನಾಗಿ ಕೇಂದ್ರೀಕರಿಸುತ್ತದೆ. ನಾಲ್ಕನೇ ಎಪಿಸೋಡ್ ಪೊಲೀಸರ ಚಿತ್ರಹಿಂಸೆಯ ಭಯಾನಕತೆಯನ್ನು ಚಿತ್ರಿಸಿದರೆ, ಐದನೇ ಎಪಿಸೋಡ್‌ನಲ್ಲಿ ವೀರಪ್ಪನ್ ನಡೆಸುವ ಮೈಂಡ್‌ಲೆಸ್ ಕಿಲ್ಲಿಂಗ್‌ನ ಚಿತ್ರಣ ವಿವರವಾಗಿದೆ. ಒಟ್ಟಿನಲ್ಲಿ ಪೊಲೀಸರ ಮತ್ತು ವೀರಪ್ಪನ್ ದೌರ್ಜನ್ಯದ ನಡುವೆ ಸ್ಪರ್ಧೆ ಇತ್ತೇನೋ ಎಂಬಂತೆ ಭಾಸವಾಗುವಂತೆ ಈ ಸೀರೀಸ್ ಮಾಡುತ್ತದೆ. ಉಳಿದ ಎಲ್ಲಾ ಚಿತ್ರಗಳಿಗೆ ಹೋಲಿಸಿದರೆ ವೀರಪ್ಪನ್ ಮತ್ತು ಸುತ್ತಮುತ್ತಲಿನ ಘಟನೆಗಳ ಬಗ್ಗೆ ತುಸು ಹೆಚ್ಚು ವಿವರಗಳನ್ನು ಈ ಸಾಕ್ಷ್ಯಚಿತ್ರ ಕಟ್ಟಿಕೊಡುತ್ತದೆ.

2. ಲೀವ್ ದ ವರ್ಲ್ಡ್ ಬಿಹೈಂಡ್

ಸ್ಯಾಮ್ ಎಸ್ಮಾಯಿಲ್ ನಿರ್ದೇಶನದ, ಜೂಲಿಯಾ ರಾಬರ್ಟ್ಸ್, ಮಾಹರ್ಶಾಲಾ ಅಲಿ, ಈಥನ್ ಹಾಕ್ ಮತ್ತು ಮೈಹಾ ಲಾ ಹೆರಾಲ್ಡ್ ಮುಖ್ಯಭೂಮಿಕೆಯಲ್ಲಿರುವ 141 ನಿಮಿಷಗಳ ಚಲನಚಿತ್ರ ’ಲೀವ್ ದ ವರ್ಲ್ಡ್ ಬಿಹೈಂಡ್’ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಅಮೆರಿಕನ್ ಅಪೋಕ್ಯಾಲಿಪ್ಟಿಕ್ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವಾದ ’ಲೀವ್ ದ ವರ್ಲ್ಡ್ ಬಿಹೈಂಡ್’ಅನ್ನು ರುಮಾನ್ ಆಲಮ್ ಅವರ 2020ರ ಅದೇ ಹೆಸರಿನ ಕಾದಂಬರಿಯಿಂದ ಅಳವಡಿಸಿಕೊಳ್ಳಲಾಗಿದೆ.

ಟೆಕ್ನಾಲಾಜಿಕಲ್ ವಾರ್‌ಫೇರ್‌ನಿಂದ ಆಗುವ ಬ್ಲಾಕ್‌ಔಟ್‌ನಿಂದ ಉಂಟಾಗುವ ಅಲ್ಲೋಲಕಲ್ಲೋಲವನ್ನು, ಐಲ್ಯಾಂಡ್ ಒಂದರಲ್ಲಿ ವೀಕೆಂಡ್ ರಜೆ ಕಳೆಯಲು ಬಂದಿರುವ ಫ್ಯಾಮಿಲಿಯ ದೃಷ್ಟಿಕೋನದಲ್ಲಿ ಈ ಸಿನಿಮಾ ಚಿತ್ರಿಸುತ್ತದೆ. ತುರ್ತು ಸನ್ನಿವೇಶಗಳಲ್ಲಿ ತಂತ್ರಜ್ಞಾನನ ಮೇಲೆ ವಿಪರೀತ ಅವಲಂಬಿಸಿರುವ ಆಧುನಿಕ ಮನುಷ್ಯನ ಅಸಹಾಯಕತೆಯನ್ನು ಕೂಡ ಚಿತ್ರಿಸುವ ಈ ಸಿನಿಮಾ, ಒಂದು ಡಿಸ್ಟೋಪಿಯನ್ ಚಿತ್ರಣವನ್ನು ಕಣ್ಣಮುಂದೆ ತರುತ್ತದೆ. ಜಿಪಿಎಸ್ ಫೇಲ್ ಆದರೆ, ವಿಮಾನಗಳು, ಡ್ರೈವರ್‌ಲೆಸ್ ಕಾರುಗಳು ಹೇಗೆ ಕೆಟಾಸ್ಟ್ರೋಫಿಕ್ ಆಗಬಲ್ಲವು ಎಂಬ ಕರಾಳ ಭವಿಷ್ಯವನ್ನು ಚಿತ್ರಿಸುವುದರ ಜೊತೆಗೆ, ಬಿಳಿಯರ ಜನಾಂಗೀಯ ದ್ವೇಷ, ಜಗತ್ತು ಮುಳುಗುತ್ತಿರುವ ಸನ್ನಿವೇಶದಲ್ಲಿಯೂ ಕಪ್ಪು ಜನರನ್ನು ತುಚ್ಛವಾಗಿ ಕಾಣುವ, ಸಹಜೀವನಕ್ಕೆ ಮುಂದಾಗದ ಬಿಳಿ ಜನರ ಒಣಪ್ರತಿಷ್ಠೆಯನ್ನು ಈ ಸಿನಿಮಾ ಹಿಡಿದಿಡಲು ಪ್ರಯತ್ನಿಸುತ್ತದೆ. ಈ ವಾರ್‌ಫೇರ್ ಹೊರಗಿನವರಿಂದ ಆಗಿರದೆ, ರಾಜಕೀಯ ಲಾಭಕ್ಕಾಗಿ ತಮ್ಮದೇ ದೇಶದ ಸಂಪ್ರದಾಯವಾದಿ ಪಕ್ಷ ನಡೆಸಿರಬಹುದಾದ ಯುದ್ಧ ಇದಾಗಿರಬಹುದು ಎಂದು ಪಾತ್ರವೊಂದು ಹೇಳುವುದು ಗಮನ ಸೆಳೆಯುತ್ತದೆ.

ಇದನ್ನೂ ಓದಿ: ಬಿಳಿಯರ ಪಾಪನಿವೇದನೆಯ ’ಕಿಲ್ಲರ್ಸ್ ಆಫ್ ದ ಫ್ಲವರ್ ಮೂನ್’

 

3. ಟ್ರೆವರ್ ನೋವ: ವೇರ್ ವಾಸ್ ಐ

ಟ್ರೆವರ್ ನೋವ ಸೌಥ್ ಆಫ್ರಿಕಾದ ಕಾಮಿಡಿಯನ್. ಸ್ಟಾಂಡ್ ಅಪ್ ಕಾಮಿಡಿ ಶೋಗಳಿಗೆ ಹೆಸರುವಾಸಿಯಾದ ಟ್ರೆವರ್, ಅಮೆರಿಕದ ಡೆಟ್ರಾಯ್ಟ್ ನಗರದ ತುಂಬಿದ ಸಭಾಂಗಣದಲ್ಲಿ ನಡೆಸಿಕೊಟ್ಟ ಸ್ಟಾಂಡ್ ಅಪ್ ಕಾಮಿಡಿ ಶೋ ಈಗ ನೆಟ್‌ಫ್ಲಿಕ್ಸ್‌ನಲ್ಲಿ ’ಟ್ರೆವರ್ ನೋವ: ವೇರ್ ವಾಸ್ ಐ’ ಹೆಸರಿನಲ್ಲಿ ಪ್ರಸಾರವಾಗುತ್ತಿದೆ.

ತಮ್ಮ ಬರ್ಲಿನ್ ಪ್ರವಾಸದಲ್ಲಿ ನಡೆಸಿಕೊಟ್ಟ ಶೋ ಬಗೆಗಿನ ಅನುಭವದೊಂದಿಗೆ ಶುರುವಾಗುವ ಈ ಕಾರ್ಯಕ್ರಮ ನಾಜಿಗಳನ್ನು, ನಾಜಿಗಳ ರಾಷ್ಟ್ರಗೀತೆಯನ್ನು ವ್ಯಂಗ್ಯ ಮಾಡುವುದಲ್ಲದೆ, ರಾಷ್ಟ್ರಗೀತೆಯ ಸಾಹಿತ್ಯ ಬದಲಿಸಿ, ಮ್ಯೂಸಿಕ್ ಮತ್ತು ಟ್ಯೂನ್‌ಅನ್ನು ಹಾಗೆಯೇ ಉಳಿಸಿಕೊಂಡ ಪೋಸ್ಟ್ ವಾರ್ ಜರ್ಮನಿಯ ನಡೆ ಎಷ್ಟು ವಿಚಿತ್ರವಾದದ್ದು ಮತ್ತು ಉಪಯೋಗವಿಲ್ಲದ್ದು ಎಂದು ಹಾಸ್ಯ ಶೈಲಿಯಲ್ಲಿ, ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಮೂಲಕ ಟ್ರೆವರ್ ಮಾತನಾಡುತ್ತಾರೆ. ಸುಮಾರು 70 ನಿಮಿಷಗಳ ಈ ಶೋನಲ್ಲಿ ಜನಾಂಗೀಯ ತಾರತಮ್ಯ, ಲಿಂಗ ತಾರತಮ್ಯ, ಹುಸಿ ನ್ಯಾಷನಲಿಸಂ ಎಲ್ಲವೂ ಹಾದುಹೋಗುತ್ತವೆ.

2016ರಲ್ಲಿ ಟ್ರೆವರ್ ಬರೆದಿದ್ದ ’ಬಾರ್ನ್ ಇನ್ ಕ್ರೈಮ್’ (ಸ್ಟೋರೀಸ್ ಫ್ರಮ್ ಚೈಲ್ಡ್‌ಹುಡ್) ಎಂಬ ಆತ್ಮಕತೆಗಳ ಪುಸ್ತಕ ಜನಪ್ರಿಯತೆ ಪಡೆದಿತ್ತು.

4. ಚಿತ್ತ

ಅರುಣ್ ಕುಮಾರ್ ನಿರ್ದೇಶನದ ತಮಿಳು ನಟ ಸಿದ್ಧಾರ್ಥ ನಟಿಸಿರುವ ಚಿತ್ತ (ಚಿಕ್ಕಪ್ಪ) ಮೊದಲು ಥಿಯೇಟರ್‌ಗಳಲ್ಲಿ ತೆರೆಕಂಡು, ಈಗ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ. ಇದು ಮೂಲ ತಮಿಳು ಚಿತ್ರವಾದರೂ, ಕನ್ನಡ, ತೆಲುಗು, ಹಿಂದಿ ಮುಂತಾದ ಭಾಷೆಗಳಲ್ಲಿ ಸಿನಿಮಾದ ಡಬ್ ಅವತರಣಿಕೆ ಕೂಡ ಇದೆ.

ಸುಂದರಿ ಮತ್ತು ಆಕೆಯ ಚಿಕ್ಕಪ್ಪ ಈಶ್ವರನ್ (ಸಿದ್ಧಾರ್ಥ) ನಡುವಿನ ಭಾವನಾತ್ಮಕ ಸಂಬಂಧ ಸುತ್ತ ಸುತ್ತುವ ಚಿತ್ರ, ಮಕ್ಕಳನ್ನು ಅಬ್ಯೂಸ್ ಮಾಡುವ ಥ್ರಿಲ್ಲರ್ ಕಥೆಯಾಗಿ ಬದಲಾಗುತ್ತದೆ. ಈ ಥ್ರಿಲ್ಲರ್ ಸಿನಿಮಾದಲ್ಲಿ, ಕಾಣೆಯಾಗುವ ಸುಂದರಿಯನ್ನು ಈಶು ಹುಡುಕುವ ಕಥೆ ’ಹೀರೋಯಿಕ್’ ಮಾದರಿಯಲ್ಲಿ ಮೂಡಿಬಂದಿದ್ದರೂ, ಆ ಹೀರೋಯಿಸಂಗೆ ಚಿಕಿತ್ಸೆಯಾಗಿ ಸಕ್ತಿ (ನಿಮಿಶಾ ಸಜಯನ್) ಪಾತ್ರ ಕಾಡುತ್ತದೆ. ಪೌರಕಾರ್ಮಿಕಳ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಕ್ತಿ ಈಶುವಿನ ಪ್ರಿಯತಮೆ. ಸಣ್ಣವಯಸ್ಸಿನಲ್ಲಿಯೇ ಸಂಬಂಧಿಕನೊಬ್ಬನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವವಳು. ಅತ್ತ ಅಣ್ಣನ ಮಗಳ ವಿರುದ್ಧ ದೌರ್ಜನ್ಯ ಎಸಗಿದ ವ್ಯಕ್ತಿಯನ್ನು ಕೊಲ್ಲಲು ಮುಂದಾಗುವ ಈಶು, ಸಕ್ತಿಯ ಜತೆಗೆ ಆಗಿರುವ ದೌರ್ಜನ್ಯವನ್ನು ತಿಳಿದುಕೊಳ್ಳುವ, ಅದಕ್ಕೆ ಕೊನೆ ಪಕ್ಷ ಸಂತೈಸುವುದಕ್ಕೂ ಸಂಯಮ ಇಲ್ಲದವನು. ಒಂದು ಪುರುಷಾಧಿಕಾರದ ದೌರ್ಜನ್ಯವನ್ನು ಅದೇ ಪುರುಷ ಅಹಂಕಾರದಿಂದ ಮೆಟ್ಟಬಹುದೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವಂತೆ, ಸಕ್ತಿಯ ಪಾತ್ರ ಚಿಕ್ಕ ಅವಧಿಗೆ ಬಂದರೂ ಪ್ರೇರೇಪಿಸುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...