Homeಅಂಕಣಗಳುಡೊಳ್ಳಿನ ಪದಗಳ `ಹುಡುಗಿಯರ’ ಹಾಡಿಕೆಗೆ ಘನತೆ ತಂದ ಸುಮಿತ್ರ ಮುಗಳಿಹಾಳ

ಡೊಳ್ಳಿನ ಪದಗಳ `ಹುಡುಗಿಯರ’ ಹಾಡಿಕೆಗೆ ಘನತೆ ತಂದ ಸುಮಿತ್ರ ಮುಗಳಿಹಾಳ

- Advertisement -
- Advertisement -

ಬಿ.ಎ, ಬಿ.ಎಡ್ ಮಾಡಿಯೂ ಶಿಕ್ಷಕಿ ಆಗಬೇಕೆನ್ನುವ ಕನಸಿಗಿಂತ ಪಿ.ಎಸ್.ಐ ಆಗಬೇಕೆಂದು ಹುಡುಗಿ ಕನಸು ಕಟ್ಟುತ್ತಾಳೆ. ಅದಕ್ಕಾಗಿ ಕೋಚಿಂಗ್ ಹೋಗುತ್ತಾಳೆ. ಕಷ್ಟಪಟ್ಟು ಓದುತ್ತಾಳೆ. ತುಂಬಾ ಕಡಿಮೆ ಅಂತರದಲ್ಲಿ ಆಯ್ಕೆ ತಪ್ಪಿಹೋಗುತ್ತದೆ. ಎರಡು ಮೂರು ಬಾರಿ ಹೀಗೆಯೇ ಆಗುತ್ತದೆ. ಕೊನೆಗೆ ಈ ಹುಡುಗಿ ಸರಕಾರಿ ನೌಕರಿಗೆ ಹೋಗಬಾರದೆಂದು ನಿರ್ಧರಿಸುತ್ತಾಳೆ.

ಈ ಹುಡುಗಿ ಆ ಹೊತ್ತಿಗಾಗಲೆ ಡೊಳ್ಳಿನ ಹಾಡಿಕೆಯಲ್ಲಿ ಉತ್ತರ ಕರ್ನಾಟಕದಲ್ಲಿ ಜನಪ್ರಿಯಳಾಗಿದ್ದಳು. ಹಾಗಾಗಿ ತನ್ನ ಡೊಳ್ಳಿನ ಹಾಡಿಕೆ ಮೇಳಕ್ಕೆ ಮತ್ತಷ್ಟು ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾಳೆ. ಇದೀಗ ಹದಿನೈದಕ್ಕಿಂತ ಹೆಚ್ಚಿನ ಡೊಳ್ಳಿನ ಮೇಳಗಳಿಗೆ ಗುರುವಾಗಿದ್ದಾರೆ. ಈತನಕ ನಾಲ್ಕೈದು ಸಾವಿರಕ್ಕೂ ಹೆಚ್ಚು ಹಾಡಿಕೆ ಪ್ರದರ್ಶನ ಕೊಟ್ಟಿದ್ದಾರೆ. ಕನಿಷ್ಠ ತಿಂಗಳಿಗೆ ಒಂದು ಲಕ್ಷದಷ್ಟು ಆದಾಯವಿದೆ.

ಯೂಟೂಬಲ್ಲಿ ಒಂದೊಂದು ಹಾಡಿಗೆ ನಾಲ್ಕೈದು ಲಕ್ಷ ವೀಕ್ಷಣೆಗಳಿವೆ. ಒಟ್ಟಾರೆ ಇವರ ಹಾಡಿಕೆಗೆ ಮೂರು ಕೋಟಿಗಿಂತ ಹೆಚ್ಚು ವೀಕ್ಷಣೆಗಳಾಗಿವೆ. ಅಂತೆಯೇ ನೂರಾರು ಹುಡುಗಿಯರು ಡೊಳ್ಳಿನ ಹಾಡಿಕೆಗೆ ಬರಲು ಪ್ರೇರಣೆಯಾಗಿದ್ದಾರೆ. ವಾಗ್ವಾದಕ್ಕೆ ನಿಂತರೆ ಗಂಡಸರ ಮೇಳಗಳು ಬೆದರುತ್ತವೆ. ಆ ಹುಡುಗಿಯೇ ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕಿನ ಮುಗಳಿಹಾಳದ ಹಾಲುಮತದ ಯಲ್ಲಪ್ಪ-ಯಲ್ಲವ್ವರ ನಾಲ್ಕನೆ ಮಗಳು ಸುಮಿತ್ರ.

ಕುರುಬ ಸಮುದಾಯದ ಹಾಲುಮತದ ಪ್ರಸಾರಕ್ಕಾಗಿ ಹುಟ್ಟಿಕೊಂಡ ಡೊಳ್ಳಿನ ಹಾಡುಗಳು ಜನಪದ ಗೀತ ಸಂಪ್ರದಾಯದಲ್ಲಿ ವಿಶಿಷ್ಟವಾಗಿವೆ. ಉತ್ತರ ಕರ್ನಾಟಕದಿಂದ ಮಹಾರಾಷ್ಟ್ರದವರೆಗಿನ ಹಳ್ಳಿಗಳಲ್ಲಿ ಡೊಳ್ಳಿನ ಹಾಡುಗಳಿಗೆ ಪ್ರಮುಖ ಸ್ಥಾನವಿದೆ. ಡೊಳ್ಳಿನ ಹಾಡುಗಳನ್ನು ಬರೆಯುವ ನೂರಾರು ಕವಿಗಳಿದ್ದಾರೆ.

ಕಳೆದ ಒಂದೆರಡು ದಶಕದಿಂದ ಗಂಡಸರ ಪಾರಮ್ಯವೇ ಆಗಿದ್ದ ಡೊಳ್ಳಿನ ಹಾಡಿಕೆಗೆ ಮಹಿಳೆಯರ ಪ್ರವೇಶವಾಗಿದೆ. ಎಂಬತ್ತರ ದಶಕದಲ್ಲಿ ಬಾಗಲಕೋಟೆ ಜಿಲ್ಲೆಯ ಯಲ್ಲಟ್ಟಿಯ ಅಂಧ ಅಜ್ಜಿ ನೀಲವ್ವ ಬಿರಡಿ ಡೊಳ್ಳಿನ ಹಾಡುಗಳನ್ನು ಹಾಡುತ್ತಿದ್ದರು. ಇದರ ಪ್ರಭಾವ ಎಂಬಂತೆ ಮಣ್ಣೂರಿನ ರೇಣುಕಾ ಮತ್ತು ಅಕ್ಷತಾ ಹಾಡಿಕೆಗೆ ಬಂದರು. ಇಲ್ಲಿಂದ ಹುಡುಗಿಯರು ಡೊಳ್ಳಿನ ಹಾಡಿಕೆಗೆ ಬರುವಿಕೆ ಶುರುವಾಯಿತು. ಈಗ ಆರೇಳು ವರ್ಷದ ಮಕ್ಕಳಿಂದಿಡಿದು ಇಪ್ಪತ್ತೈದರ ವಯೋಮಾನದ ಹುಡುಗಿಯರತನಕ ಐವತ್ತಕ್ಕೂ ಹೆಚ್ಚು ಹುಡುಗಿಯರು ಡೊಳ್ಳಿನ ಪದಗಳನ್ನು ಹಾಡುತ್ತಿದ್ದಾರೆ. ಇದೊಂದು ಹೊಸ ಟ್ರೆಂಡ್ ಆಗಿ ಬದಲಾಗಿದೆ.

ಸುಮಿತ್ರ ಮುಗಳಿಹಾಳ ಡೊಳ್ಳಿನ ಹಾಡಿಕೆಗೆ ಬರುವ ಮುನ್ನ ರೇಣುಕಾ ಮೀನಾಕ್ಷಿ ಮೊದಲಾದವರು ಮೇಷ್ಟ್ರುಗಳು ಬರೆದ ಹಾಡುಗಳನ್ನು ಹಾಡುತ್ತಿದ್ದರಷ್ಟೆ. ವಾಗ್ವಾದ ಚರ್ಚೆ ಬಂದಾಗ ಪದಕಟ್ಟಿದ ಮೇಷ್ಟ್ರು ಚರ್ಚೆ ಸಂವಾದ ಮಾಡುತ್ತಿದ್ದರೆ ವಿನಃ ಹಾಡಿದ ಹುಡುಗಿಯರು ಚರ್ಚೆಸುತ್ತಿರಲಿಲ್ಲ. ಸುಮಿತ್ರ ಹಾಡುತ್ತಾ ಹಾಡುತ್ತಾ, ಹಾಡಿನ ಸಾಹಿತ್ಯಕ್ಕೆ ಪೂರಕವಾದ ಹಾಲುಮತ ಪುರಾಣ ಮತ್ತು ಸಂಶೋಧನೆಗಳನ್ನು ಓದಲು ತೊಡಗುತ್ತಾಳೆ. ಹಾಗಾಗಿ ರಾಮಾಯಣ, ಮಹಾಭಾರತ, ಹಾಲುಮತ ಪುರಾಣ, ಕುರುಬ ಸಮುದಾಯದ ಅಧ್ಯಯನ, ವಚನಕಾರರ, ದಾಸರ, ತತ್ವಪದಕಾರರ ಪುಸ್ತಕಗಳ ಸಂಗ್ರಹ ಸುಮಿತ್ರಾ ಅವರಲ್ಲಿದೆ.

ಪ್ರತಿಬಾರಿ ಹೊಸ ಪದ ಕಟ್ಟುವಾಗ ಹಾಲುಮತದ ಪುರಾಣ ಮುಂತಾದ ಪುಸ್ತಕಗಳನ್ನು ಅಧ್ಯಯನ ಮಾಡುತ್ತಾರೆ. ಹೀಗೆ ಸಾಹಿತ್ಯದ ಓದಿನಿಂದ ಸ್ವತಃ ಡೊಳ್ಳಿನ ಪದಗಳನ್ನು ರಚಿಸುತ್ತಾಳೆ. ಹೀಗಾಗಿ ತಾನೇ ಸ್ವತಃ ರಚಿಸಿದ ಹಾಡನ್ನು ಹಾಡುತ್ತಿದ್ದರಿಂದ ಯಾರೇ ವಾಗ್ವಾದ ಮಾಡಿದರೂ ಅದಕ್ಕೆ ಸುಮಿತ್ರಾಳೇ ಉತ್ತರ ಕೊಡತೊಡಗುತ್ತಾಳೆ. ಸುಮಿತ್ರ ಅವರ ಈ ವಾಗ್ವಾದದ ಮಾದರಿಯ ಪ್ರಭಾವ ಈಗಿನ ಹುಡುಗಿಯರಲ್ಲಿ ಕಾಣುತ್ತಿದೆ.

“ಅಜ್ಜನು ಡೊಳ್ಳಿನ ಪದಗಳನ್ನು ಹಾಡತಿದ್ರು. ಕೌಜಲಗಿ ನಿಂಗಮ್ಮ ನಮ್ಮಜ್ಜನ್ನ ಕರಕೊಂಡು ಹಾಡತಿದ್ದರಂತೆ, ಹಂಗಾಗಿ ನಮ್ಮ ಅಪ್ಪ ಡೊಳ್ಳಿನ ಪದ ಹಾಡಾಕ ಹತ್ತಿದ್ರು. ಹಿಂಗಾಗಿ ಮೊದಲಿನಿಂದ್ಲೂ ಮನಿಯಾಗ ಹಾಡಿಕಿ ಸಂಪ್ರದಾಯವಿತ್ತು. ನಾನು ಸಣ್ಣಾಕಿ ಇದ್ದಾಗ ಹಾಡಿಕೆ ಕೇಳೋದು ನೋಡೋದು ಮಾಡತಿದ್ದೆ. ನಾನು ಹಾಡ್ತೀನಿ ಅಂದ್ರ, ಸಮಾಜದಲ್ಲಿ ಹಂಗ್ ಅಂತಾರ ಹಿಂಗ್ ಅಂತಾರ ಗಂಡಸರ ಮಧ್ಯೆ ನಿಂತು ಹಾಡಬಾರದು ಅನ್ತಿದ್ರು. ಒಟ್ಟ ಡೊಳ್ಳಿನ ಪದದ ಸಪ್ಪಳ ಕೇಳತಂದ್ರ ರಾತ್ರೆಲ್ಲ ನಿದ್ದೆ ಅತ್ತಾಂಗಿಲ್ಲರೀ..ಅದು ಬಂದ್ ಆಗೋಮಟ ಮನಿಯಾಗ ಎದ್ದ ಕುಂದರತಿದ್ದೆ. ದಾಟಿಗಳು ತಲೀಯಾಗ ಉಳೀತಿತ್ತು.

ನೀ ಹಿಂಗ್ ಹಾಡವ್ವಾ, ಹಿಂಗ್ ದಾಟಿ ಬರಕೋ ಅಂತ ಯಾರೂ ಕಲಿಸಿಲ್ಲ. ಅವ್ವ ಸಣ್ಣಾಕಿದ್ದಾಗ ರಾಮಾಯಣ ಮಹಾಭಾರತದ ಕತಿ ಹೇಳತಿದ್ಲು ಅದು ನನ್ನ ತಲಿಯಾಗಿತ್ತು. ನಾನು ಹಾಡೋದಕ್ಕ ಕಾಕಾಗಳು ವಿರೋಧಿಸಿದ್ರು, ಊರಾಗ ವಿರೋಧಿಸಿದ್ರು, ಬಾಳಂದ್ರ ಬಾಳ ಕಾಡಿದ್ರು. ಅದನ್ನ ಹೇಳಿದ್ರ ಕಣ್ಣಾಗ ನೀರು ಬರ್ತಾವ. ಹೆಣ್ಣ ಆದರೂ ಒಂದು ಗಂಡಿನ ರೂಪದಲ್ಲಿ ತೋರಿಸಬೇಕಪಾ ಅಂತೇಳಿ ಎಲ್ಲರ ವಿರೋಧ ಮೀರಿ ಇಲ್ಲಿಗೆ ಬಂದು ನಿಂತೀನಿ” ಎಂದು ಸುಮಿತ್ರ ಹಾಡಿಕೆ ಪಯಣ ನೆನೆಯುತ್ತಾರೆ.

ಮಾಳಿಂಗರಾಯನ ಇತಿಹಾಸದಲ್ಲಿ ಎದುರುಬದುರು ಹಾಡುವಾಗ ಗಂಡಿನವರು ಮಾಳಿಂಗರಾಯನ ಪವಾಡ ಹೇಳಿದರೆ, ಇವರು ಮಾಳಿಂಗರಾಯನ ತಾಯಿಯ ಬಗ್ಗೆ ಹೇಳುತ್ತಾರೆ. ಗಂಡಿನ ಪಾರ್ಟಿ ಮಾಳಿಂಗರಾಯ ನನ ಅಪ್ಪ ಹುಲಿಹಾಲ ತಂದು ಬೀರಪ್ಪನಿಗೆ ಉಣಿಸ್ಯಾನೋ ಅಂತ ಹೇಳಿದ್ರೆ, ಮಾಳಿಂಗರಾಯ ಹುಲಿಹಾಲ ಉಣಿಸಬೇಕಾದ್ರೆ ತಾಯಿ ಹಡದಾಳ, ಉಲುಜಂತಿ ಗ್ರಾಮದಲ್ಲಿ ತಾಯಿ ಕನ್ನವ್ವನ ಆಶೀರ್ವಾದ ತಗಂಡು ಹುಲಿಹಾಲ ತರೋಕ ಹೋಗ್ಯಾನ’ ಅಂತ ಹೇಳತಾ, ಮಾಳಿಂಗರಾಯ ಹೆಚ್ಚು ಎನ್ನುವಾಗಲೂ ಮಾಳಿಂಗರಾಯನ ತಾಯಿಯನ್ನು ಇವರು ಎತ್ತಿ ಹಿಡಿಯುತ್ತಾರೆ. ಇಷ್ಟರಮಟ್ಟಿಗೆ ಒಂದು ಜನಪದ ಪಠ್ಯದ ಹಾಡಿಕೆಗೆ ಹೆಣ್ಣಿನ ಕಣ್ಣೋಟ ಸಾಧ್ಯವಾಗಿದೆ.

ಸುಮಿತ್ರಾರ ಹಾಡುಗಳಲ್ಲಿ ಹೆಣ್ಣು ಗಂಡು ಹೇಳಿದಂಗೆ ಕೇಳಿಕೊಂಡು ಚೆಂದನ ಸಂಸಾರ ಮಾಡಬೇಕು ಎನ್ನುವಂತಹ ಯಥಾಸ್ಥಿತಿಯ ಆಶಯವೂ ಇದೆ. ಆದರೆ ಎದುರು ಗಂಡಿನ ಮೇಳ ಹೆಣ್ಣನ್ನು ಕುಹಕ ಮಾಡಿದಾಗ ನಡೆಯುವ ಬಿರುಸಿನ ಚರ್ಚೆಯಲ್ಲಿ ಸುಮಿತ್ರಾ ಹೆಣ್ಣಿಲ್ಲದೆ ಕೇವಲ ಗಂಡಿಗೆ ಅಸ್ತಿತ್ವವಿಲ್ಲ ಎನ್ನುವುದನ್ನು ತುಂಬಾ ಖಡಕ್ ಆಗಿ ನಿರೂಪಿಸುತ್ತಾರೆ.

ಡೊಳ್ಳಿನ ಹಾಡಿನ ಏರುಧ್ವನಿಯಲ್ಲಿ ಹೆಣ್ಣಿನ ಕೋಮಲ ಧ್ವನಿ ಸಪ್ಪೆಯೆನಿಸುತ್ತದೆ. ಹಾಗಾಗಿ ಸುಮಿತ್ರಾರ ಧ್ವನಿ ಗಂಡಿನಂತೆ ಬಿರುಸು. ಸ್ಟೇಜಿನ ದೇಹಭಾಷೆಯೂ ಗಂಡನ್ನು ಮೀರಿಸುವಂಥದ್ದು. ಹೀಗೆ ಡೊಳ್ಳಿನ ಹಾಡಿನ ನುಡಿಗಟ್ಟನ್ನು ಬದಲಿಸುತ್ತಿರುವ ಸುಮಿತ್ರಾರ ಹಾಡಿಕೆ ಪಯಣಕ್ಕೆ ಡೊಳ್ಳಿನ ಪದದ ಕವಿ ಕೇದಾರ ಕೆಂಪಟ್ಟಿ ಮಾಸ್ತರರ ಮಾರ್ಗದರ್ಶನವಿದೆ. ತನ್ನ ಮೂರುಜನ ಅಕ್ಕಂದಿರಾದ ರೇಣುಕಾ, ಸರೋಜಿನಿ, ಉದ್ದವ್ವರನ್ನು ಮದುವೆ ಮಾಡಿಕೊಟ್ಟು ಮನೆ ಜವಾಬ್ದಾರಿ ಹೊರಲು ಗಂಡು ಮಗನಿರಬೇಕು ಎನ್ನುವ ನಂಬಿಕೆಯನ್ನು ಸುಮಿತ್ರ ಬದಲಿಸಿದ್ದಾರೆ. ಸುಮಿತ್ರಾ ಅವರ ಹಾಡಿಕೆ ಪಯಣ ಮತ್ತಷ್ಟು ಜನರನ್ನು ತಲುಪಲಿ ಎಂದು ಪತ್ರಿಕೆ ಶುಭ ಹಾರೈಸುತ್ತದೆ.

ಸುಮಿತ್ರಾ ಮುಗಳಿಹಾಳ ಎಂದು ಟೈಪಿಸಿದರೆ, ಯೂಟೂಬಿನಲ್ಲಿ ನೂರಾರು ವೀಡಿಯೋಗಳು ನೋಡಲು ಸಿಗುತ್ತವೆ.

ಅರುಣ್ ಜೋಳದಕೂಡ್ಲಿಗಿ


ಓದಿ:

ನಮ್ಮ ನಡುವಿನ ಮಂದಣ್ಣ – ಪರಿಸರ ಪ್ರೇಮಿ ಮಳಿಮಠದ ಪಂಪಯ್ಯ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...