Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆ’ಲಂಕೇಶ್ ಮೋಹಕ ರೂಪಕಗಳ ನಡುವೆ’: ಪುಸ್ತಕ ಪರಿಚಯ...

’ಲಂಕೇಶ್ ಮೋಹಕ ರೂಪಕಗಳ ನಡುವೆ’: ಪುಸ್ತಕ ಪರಿಚಯ…

- Advertisement -
- Advertisement -

| ಬಿ.ಚಂದ್ರೇಗೌಡ |

ಲಂಕೇಶ್ ಏನೆಂದು ಇಡಿಯಾಗಿ ಗ್ರಹಿಸಿ ಆಗಾಗ್ಗೆ ಮನಸ್ತಾಪದೊಂದಿಗೆ ಬದುಕಿದವರು ಶೂದ್ರ ಶ್ರೀನಿವಾಸ್. ಆದ್ದರಿಂದಲೇ ಅವರ ಬದುಕಿನ ಬಹುಭಾಗ ಲಂಕೇಶ್ ಮೋಹಕ ರೂಪಕಗಳಲ್ಲಿ ದಾಖಲಾಗಿರುವುದು. ಹಾಗೆ ನೋಡಿದರೆ ಲಂಕೇಶ್ ಎಂಬ ದೈತ್ಯ ಪ್ರತಿಭೆಯ ಒಡನಾಟವಿದ್ದವರೆಲ್ಲಾ, ಒಂದೊಂದು ಕೃತಿಯನ್ನ ಹೊರತಂದರೆ ಮಾತ್ರ ಲಂಕೇಶ್ ಇಡಿಯಾಗಿ ಸಿಕ್ಕಬಲ್ಲರು ಅನ್ನಿಸುತ್ತೆ.

ಶೂದ್ರ ಶ್ರೀನಿವಾಸ್ ಕಳೆದ ಅರ್ಧ ಶತಮಾನದಿಂದ ಕನ್ನಡದ ಸಾಂಸ್ಕೃತಿಕ ಲೋಕದ ಸಂಚಾಲಕರಂತಿದ್ದವರು. ಶೂದ್ರ ಪತ್ರಿಕೆ ನಡೆಸುತ್ತಲೇ ಪತ್ರಿಕೆಯನ್ನು ಬಗಲಚೀಲದಲ್ಲಿ ತುಂಬಿಕೊಂಡು ಚಂದಾದಾರರನ್ನ ಮಾಡುತ್ತ ಪತ್ರಿಕೆಯಲ್ಲಿ ಸಾಹಿತಿಗಳ ಸಂವಾದ ಏರ್ಪಡಿಸುತ್ತಾ, ಎಲ್ಲಾ ಒಳ್ಳೆಯ ಬರಹಗಾರರ ನಡುವೆ ಕೊಂಡಿಯಂತಿದ್ದವರು. ಅವರ ನಿರಂತರವಾದ ಚಟುವಟಿಕೆಯ ಕೇಂದ್ರಬಿಂದು ಲಂಕೇಶರಾಗಿದ್ದರು. ವಿದ್ಯಾರ್ಥಿ ದಿಸೆಯಲ್ಲೇ ಲಂಕೇಶರ ಆಪ್ತ ಶಿಷ್ಯರಾದ ಶೂದ್ರಶ್ರೀ ಲಂಕೇಶರ ಕಡೇ ಗಳಿಗೆಯವರೆಗೂ ಜೊತೆಯಲ್ಲಿದ್ದವರು. ಆ ಕಾರಣವಾಗಿ ಅವರು ಬರೆದಿರುವ “ಲಂಕೇಶ್ ಮೋಹಕ ರೂಪಕಗಳ ನಡುವೆ” ಎಂಬ ಕೃತಿ. ಲಂಕೇಶರ ಬಗೆಗೆ ಪೂರ್ವಾಗ್ರಹ ಪೀಡಿತರಾಗಿ ದೂರ ಇದ್ದವರೆಲ್ಲಾ ಓದಿ ತಮ್ಮ ಅಭಿಪ್ರಾಯಗಳ ತಿದ್ದಿಕೊಂಡು ಚಿಂತಿಸುವ ಕೃತಿಯಾಗಿದೆ. ನಾಲ್ಕೈದು ದಶಕಗಳ ಕರ್ನಾಟಕದ ಸಾಂಸ್ಕೃತಿಕ ಲೋಕದ ಘಟನೆಗಳ ಸರಮಾಲೆಯೇ ಈ ಕೃತಿಯಲ್ಲಿ ದಟೈಸಿದೆ. ಲಂಕೇಶರ ಬಗ್ಗೆ ಈಚೆಗೆ ಒಂದೆರಡು ಕೃತಿ ಮತ್ತು ಕತೆಗಳೂ ಬಂದಿವೆ. ಈ ಬರಹಗಾರರ ಮೂಲವೆಲ್ಲಾ ಒಂದೇ ಎಂಬುದನ್ನ ನೋಡಿದಾಗ ತರಡಿಲ್ಲದ ನರಿಗಳು ಸಿಂಹ ತೀರಿಕೊಂಡ ನಂತರ ಊಳಿಟ್ಟಂತಿದೆ.

ಅವುಗಳೆಲ್ಲಾ ಶೂದ್ರಶ್ರೀಯವರ ಈ ಪುಸ್ತಕವನ್ನ ಓದಿ ತಮ್ಮ ಪೂರ್ವಗ್ರಹಗಳನ್ನ ತಿದ್ದಿಕೊಳ್ಳುವುದು ಅವುಗಳ ಆರೋಗ್ಯಕ್ಕೆ ಒಳ್ಳೆಯದು. ಮುಖ್ಯವಾಗಿ ಲಂಕೇಶರು ಬದುಕಿದ್ದಾಗ ಅವರ ಮೇಲೆ ಸ್ಪೆಷಲ್ ಸಂಚಿಕೆಗಳೇ ಬಂದವು. ಟೀಕೆಗಳು ನಿರಂತರವಾಗಿದ್ದವು ಅವುಗಳನ್ನೆಲ್ಲಾ ತಡೆದುಕೊಳ್ಳುವ ಶಕ್ತಿ ಲಂಕೇಶ್ ಪ್ರತಿಭೆಗಿತ್ತು.

ನನಗನ್ನಿಸಿದಂತೆ ಶೂದ್ರ ಶ್ರೀನಿವಾಸರಷ್ಟು ಲಂಕೇಶ್ ಸಮೀಪ ಹೋದವರ್ಯಾರು ಇಲ್ಲ. ಅವರೆಲ್ಲಾ ಕಷ್ಟಕಾಲದಲ್ಲಿ ಅವರ ಜೊತೆಯಿದ್ದವರು. ಅವರು ರೂಪಿಸುವ ಕಾರ್ಯಕ್ರಮಗಳ ರೂವಾರಿಯಾಗಿದ್ದರು. ಲಂಕೇಶ್ ತೀರಿಕೊಂಡ ನಂತರ ಶೂದ್ರಶ್ರೀ ಕತೆಯೇನು ಎಂದು ನಾವೆಲ್ಲಾ ನಗುತ್ತಿದ್ದೆವು. ಆದರೆ ಲಂಕೇಶ್ ಶೂದ್ರಶ್ರೀಗೆ ಸಂಜೆ ತಲುಪಬಹುದಾದ ನಿಲ್ದಾಣವಾಗಿದ್ದರು. ಉಳಿದಂತೆ ಅವರು ಹಗಲು ಸಂಚಾರಿಯಾಗಿ ತಮ್ಮ ಲೋಕವನ್ನ ವಿಸ್ತರಿಸಿಕೊಂಡಿದ್ದರು. ಆದ್ದರಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಒಂದು ಭಾಗವೇ ಆಗಿದ್ದರು.

ಶೂದ್ರಶ್ರೀ ಲಂಕೇಶ್‍ರಿಗೆ ಎಷ್ಟು ಆಪ್ತರೆಂಬುದು ನಮಗೆ ಗೊತ್ತಿರಲಿಲ್ಲ. ಅವರು ತಮ್ಮ ಕೃತಿಯೊಂದನ್ನ ಶೂದ್ರಶ್ರೀಗೆ ಅರ್ಪಿಸಿದಾಗ “ಏನ್ಸಾರ್ ಒಳ್ಳೆ ಪುಸ್ತಕ ತಗಂಡೋಗಿ ಶೂದ್ರನಿಗೆ ಅರ್ಪಿಸಿದ್ದೀರಲ್ಲಾ” ಎಂದಾಗ “ಆತ ತನ್ನ ಜೀವಕ್ಕೆ ನೆರವಾದವನು” ಎಂದು ನಮ್ಮ ಬಾಯಿ ಮುಚ್ಚಿಸಿದ್ದರು. ಮುಂದೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ, ಆ ಹಣವನ್ನ ಯಾರಿಗೆ ಕೊಡುವುದೆಂದು ಅವರು ಯೋಚಿಸುತ್ತಿದ್ದಾಗ ನಾನು “ಶಿವಮೊಗ್ಗದ ಶಾರದಾ ಅಂಧವಿಕಾಸ ಕೇಂದ್ರಕ್ಕೆ ಕೊಡಿ ಸಾರ್” ಎಂದೆ. ಯೋಚಿಸಿದ ಅವರು “ಬೇಡಿ, ಶೂದ್ರನಿಗೆ ಕೊಡ್ತೀನಿ” ಎಂದರು. ಶೂದ್ರಶ್ರೀ ಅರ್ಥಪೂರ್ಣವಾಗಿ ಸಾಹಿತ್ಯದ ಗೋಷ್ಠಿಯನ್ನೇರ್ಪಡಿಸಿ ಆ ದುಡ್ಡನ್ನು ಖರ್ಚು ಮಾಡಬಹುದೆಂದು ಅವರ ತೀರ್ಮಾನ. ನಮಗಂತೂ ಶೂದ್ರಶ್ರೀ ಲಂಕೇಶರಿಗೆ ಎಷ್ಟು ಆಪ್ತನೆಂಬುದರ ಅರಿವಾಯ್ತು. ನಮ್ಮಲ್ಲಿರುವ ಹೊಟ್ಟೆಕಿಚ್ಚನ್ನು ಗ್ರಹಿಸಿ ಲಂಕೇಶ್ ಶಮನ ಮಾಡುತ್ತಿದ್ದರು. ತೀರ ಕಿಡಿಗೇಡಿಗಳಾಗಿದ್ದರೆ ಅವರವರಿಗೇ ಹಚ್ಚಿಬಿಡುತ್ತಿದ್ದರು!

ಶೂದ್ರಶ್ರೀ ಲಂಕೇಶರನ್ನ ಆರಾಧಿಸಿದರೂ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ತಿರುಗಿ ಬೀಳುವ ವ್ಯಕ್ತಿಯಾಗಿದ್ದರು. ಒಮ್ಮೆ ಬಸವನಗುಡಿಯ ಪತ್ರಿಕಾಲಯದಲ್ಲಿ ಪತ್ರಿಕೆ ಮೀಟಿಂಗ್ ನಡೆಯುವಾಗ ಮಲಯಾಳಿ ಲೇಖಕರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಚರ್ಚೆಯಲ್ಲಿ ಲಂಕೇಶ್ ರೇಗಿದ್ದಕ್ಕೆ ಶೂದ್ರಶ್ರೀ ನಿರ್ಗಮಿಸುತ್ತ ಎಲ್ಲರನ್ನ ಬೈದು ಹೋದರು. ನಾನು ಇನ್ನಿವರ ಸಂಬಂಧ ಮುಗಿಯಿತು ಎಂದುಕೊಂಡರೆ, ಅದೇವಾರ ಶೂದ್ರಶ್ರೀ ಲಂಕೇಶರ ಎದುರು ಕೂತು ಹರಟೆ ಹೊಡೆಯುತ್ತಿದ್ದರು.

ಇಂತಹ ನೂರಾರು ಮನಸ್ತಾಪಗಳು ನಡೆದಿವೆ. ಅದಕ್ಕೆ ಕಾರಣಗಳನ್ನ ಪತ್ರ ಮುಖೇನ ತಿಳಿಸುತ್ತಿದ್ದ ಶೂದ್ರಶ್ರೀ. ಇಷ್ಟೊತ್ತಿಗೆ ಮೇಷ್ಟ್ರು ಓದಿಕೊಂಡಿರಬಹುದು ಎಂದು ಆಫೀಸಿಗೋಗಿ ಇಣುಕಿದರೆ, ಬಾ ಎಂದು ಲಂಕೇಶ್ ಹಸುವಿನ ಕರು ಕರೆದಂತೆ ಕರೆಯುತ್ತಿದ್ದರು. ಡಿ.ಆರ್ ನಾಗರಾಜು ಬರೆದ ಕೃತಿಯೊಂದನ್ನು ಲಂಕೇಶ್ ಕಟುವಾಗಿ ವಿಮರ್ಶೆ ಮಾಡಿದಾಗ ಅದಕ್ಕೆ ನಾಗರಾಜ್ ಶೂದ್ರರಲ್ಲಿ ಉತ್ತರ ಕೊಟ್ಟರು. ಆಗ ನಾಗರಾಜ್ ಪರವಿದ್ದ ಶೂದ್ರಶ್ರೀ ಲಂಕೇಶ್‍ರಿಂದ ದೂರವಿದ್ದರು. ಆಗೊಮ್ಮೆ ಡಿ.ಆರ್. ನಾಗರಾಜ್ ಹಠಾತ್ತನೆ ಕಾಣಿಸಿಕೊಂಡು “ಈ ಲಂಕೇಶ್ ಬಿಟ್ಟಿರಕ್ಕಾಗಲ್ಲ ಗೌಡ್ರೆ” ಎಂದುಕೊಂಡು ಒಳ ಬಂದರು. ಆಗ ಲಂಕೇಶ್ “ಎಲ್ಲಿ ಅವುನು” ಎಂದರು. “ಬರಲಿಲ್ಲ ಸಾರ್ ಇಪ್ಪತ್ತೆರಡು ದಿನ ಆಯ್ತು ಮೇಷ್ಟ್ರು ನೋಡಿ ಅಂತ ಡಲ್ಲಾಗಿದ್ದ” ಎಂದು ನಕ್ಕರು. “ನೋಡು ದಿನವೂ ಎಣಿಸ್ಸವುನೇ” ಎಂದು ಲಂಕೇಶ್ ನಕ್ಕರು. ಇಂತೆಲ್ಲಾ ಸನ್ನಿವೇಶಗಳು ಶೂದ್ರಶ್ರೀ ಬರೆದ “ಲಂಕೇಶರ ಮೋಹಕ ರೂಪದಲ್ಲಿ” ದಟೈಸಿವೆ.

ಲಂಕೇಶರಿಂದ ಟೀಕಿಸಿಕೊಂಡವರು ಅವಮಾನಗೊಂಡವರು ಮತ್ತೆ ಅವರ ಬಳಿ ಸುಳಿಯದಂತೆ ಹೊರಟುಹೋಗುತ್ತಿದ್ದರೆ, ಲಂಕೇಶರ ಆ ಕ್ಷಣದ ಸಿಟ್ಟು ಗ್ರಹಿಸಿದವರು ಅವರ ಸಂಬಂಧವನ್ನ ಕಳೆದುಕೊಳ್ಳದೆ ಬಾಳಿಕೆ ಬಂದರು. ಲಂಕೇಶ್ ಏನೆಂದು ಇತಿಯಾಗಿ ಗ್ರಹಿಸಿ ಆಗಾಗ್ಗೆ ಮನಸ್ತಾಪದೊಂದಿಗೆ ಬದುಕಿದವರು ಶೂದ್ರ ಶ್ರೀನಿವಾಸ್. ಆದ್ದರಿಂದಲೇ ಅವರ ಬದುಕಿನ ಬಹುಭಾಗ ಲಂಕೇಶ್ ಮೋಹಕ ರೂಪಕಗಳಲ್ಲಿ ದಾಖಲಾಗಿರುವುದು.

ಹಾಗೆ ನೋಡಿದರೆ ಲಂಕೇಶ್ ಎಂಬ ದೈತ್ಯ ಪ್ರತಿಭೆಯ ಒಡನಾಟವಿದ್ದವರೆಲ್ಲಾ, ಒಂದೊಂದು ಕೃತಿಯನ್ನ ಹೊರತಂದರೆ ಮಾತ್ರ ಲಂಕೇಶ್ ಇಡಿಯಾಗಿ ಸಿಕ್ಕಬಲ್ಲರು ಅನ್ನಿಸುತ್ತೆ. ಈ ಕೃತಿಯನ್ನ ಓದಿ ಮುಗಿಸಿದಾಗ ಗಾಢವಿಷಾದವೊಂದು ನಮ್ಮನ್ನು ಮುತ್ತುತ್ತದೆ. ಏಕೆಂದರೆ ಅವರ ಎದುರು ಕೂತು ಉಗ್ರ ಪ್ರಾಮಾಣಿಕರಂತೆ ಮಾತನಾಡುತ್ತ ಬರೆದವರೆಲ್ಲಾ ನೈತಿಕವಾಗಿ ಹಾಳಾಗಿಹೋದರು, ಮತಾಂಧರಾದರು, ಶಾಸ್ತ್ರ ಹೇಳುವವರಾದರು, ದೇವಿ ಆರಾಧಕರಾದರು. ಲಂಕೇಶರಿಂದ ಏನನ್ನ ಪಡೆಯದ ಪ್ರಾಮಾಣಿಕರು ತೊಂದರೆಯಲ್ಲಿದ್ದಾರೆ. ಬೀದಿಯಲ್ಲಿದ್ದಾರೆ.

ಶೂದ್ರ ಶ್ರೀನಿವಾಸರು, ಲಂಕೇಶರು ಕಟ್ಟಿದ ಸಾಮ್ರಾಜ್ಯದ ಒಂದು ಭಾಗವಾದ ಮನೆ, ತೋಟ, ತೋಟದ ಮನೆ, ಅಲ್ಲಿ ನಡೆದ ಅವರ ಮತ್ತು ಪತ್ರಿಕೆಯ ಹುಟ್ಟುಹಬ್ಬ, ಯಕ್ಷಗಾನ, ತಾಳಮದ್ದಳೆ, ಉತ್ತರ ಕರ್ನಾಟಕದ ಸಂಗ್ಯಾಬಾಳ್ಯಾ ನಾಟಕ, ಸುಭದ್ರಮ್ಮನವರ ಸಂಗೀತ ಇವನ್ನೆಲ್ಲಾ ಕಣ್ತುಂಬಿಕೊಂಡು ಪರಭಾರೆಯಾದ ಆ ಜಾಗದಲ್ಲಿ ಲಂಕೇಶರ ಸಮಾಧಿ ಸ್ಥಿತಿ ನೋಡಿ ಆರ್ದತೆಯಿಂದ ದಾಖಲಿಸಿದ್ದಾರೆ. ಆದರೇನು ಮಾಡುವುದು ಲಂಕೇಶರು ತಮ್ಮ ಜೀವನ ಚರಿತ್ರೆ ಹುಳಿಮಾವಿನ ಮರದಲ್ಲಿ ತಮ್ಮ ಮಗನನ್ನ “ಮುಗ್ಧ” ಎಂದು ದಾಖಲಿಸಿದ್ದಾರೆ. ಈ ಮುಗ್ಧನಿಗೆ ಲಂಕೇಶ್ ಏನು ಎಂಬುದೇ ತಿಳಿದಿರಲಿಲ್ಲ. ಅದಕ್ಕಾಗಿ ಸಿನಿಮಾ ತೆಗೆಯಲು ಹೊರಟಾಗ ಅವನಿಗೆ ಕಾಣಿಸಿದ್ದು ತೋಟ ಮತ್ತು ಮನೆ. ಅವನ್ನು ಕೊಳ್ಳುವವರು ಕೇಳಿದ ರೇಟಿಗೆ ಕೊಟ್ಟ ಮುಗ್ದ ಹುಡುಗ.

ಹಾಗೆಯೇ ಲಂಕೇಶ್, ಲವ್ಲಿ ಲವ್ಲಿ ಎಂದುಕೊಂಡು ತನ್ನ ಅಭಿರುಚಿಗೆ ತಕ್ಕಂತೆ ಮನೆಕಟ್ಟಿಸಿ ಅದಕ್ಕೆ ‘ನವಿಲು’ ಎಂದು ಹೆಸರಿಟ್ಟು, ಆಪ್ತ ಗೆಳೆಯರನ್ನ ಕರೆದು ಔತಣಕೊಟ್ಟ ಮನೆ ಇಂದು ಅವರದ್ದಾಗಿ ಉಳಿದಿಲ್ಲ. ಅಲ್ಲದೆ, ಕರ್ನಾಟಕದ ಜನ ಪತ್ರಿಕೆ ಕೊಂಡು ಓದಿದ ಫಲವಾಗಿ ಮತ್ತು ಕೊಟ್ಟಷ್ಟು ಸಂಭಾವನೆ ಪಡೆದ ಲೇಖಕರ ಉದಾರ ಮನಸ್ಸಿನ ಫಲವಾಗಿ, ರೂಪುಗೊಂಡಿದ್ದ ಮನೆ ಮಠ ತೋಟ ಇದ್ಯಾವುದೂ ಇಂದು ಉಳಿದಿಲ್ಲ. ಇದಕ್ಕಿಂತ ಭೀಕರ ಸಂಗತಿ ಯಾವುದೆಂದರೆ, ಅವರ ಸಮಾಧಿಯ ಸ್ಥಿತಿ. ಎಂದಾದರು ಕಾಣೆಯಾಗಲು ಕಾಯುತ್ತಿರುವ ಈ ಸಮಾಧಿಯನ್ನು ಲಂಕೇಶರ ಊರಾದ ಕೊನವಳ್ಳಿಯ ಜನ, ನಾವೇ ತಂದು ಮರು ಸಮಾಧಿ ಮಾಡುತ್ತೇವೆಂದು ಹೋರಾಡಿದ್ದರು. ಅವರಿಗೆ ಲಂಕೇಶರಿಂದ ಏನೂ ಆಗಿರಲಿಲ್ಲ. ಆದರೂ ಅವರ ಉತ್ಸಾಹ ಕಂಡು ಆಶ್ಚರ್ಯಪಡುವಂತಾಯ್ತು.

ತುಂಬ ಲವಲವಿಕೆಯಿಂದ ಓದಿಸುತ್ತಾ ಹೋದ ಶೂದ್ರಶ್ರೀಯವರ “ಲಂಕೇಶ್ ಮೋಹಕ ರೂಪಕಗಳ ನಡುವೆ” ಕೃತಿ ಗಾಢ ವಿಷಾದದೊಂದಿಗೆ ಮುಗಿಯುತ್ತದೆ. ನಮ್ಮ ನಡುವೆ ಆಗಿಹೋದ ಇತಿಹಾಸವೊಂದನ್ನ ಶೂದ್ರಶ್ರೀ ಪ್ರಾಮಾಣಿಕವಾಗಿ ಒಂಥರದ ಭಾವುಕತೆಯಲ್ಲಿ ನಿರೂಪಿಸಿದ್ದಾರೆ. ತುಂಬ ವಸ್ತುನಿಷ್ಠವಾದ ರಾಜೇಂದ್ರ ಚೆನ್ನಿಯವರ ಮುನ್ನುಡಿ ಕೃತಿ ವಜೆಯನ್ನ ಹೆಚ್ಚಿಸಿದೆ. ಶೂದ್ರ ಶ್ರೀನಿವಾಸರ ಈವರೆಗಿನ ಬರವಣಿಗೆಗೆ ಈ ರೂಪಕ ಮೆರಗು ಕೊಟ್ಟಂತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...