Homeಕರ್ನಾಟಕಸುಳ್ಳು ಜಾತಿ ಪ್ರಮಾಣ ಪತ್ರ: ಶಿಕ್ಷಿಸಲು ಪ್ರತ್ಯೇಕ ಕಾಯ್ದೆಯಾಗಲಿ

ಸುಳ್ಳು ಜಾತಿ ಪ್ರಮಾಣ ಪತ್ರ: ಶಿಕ್ಷಿಸಲು ಪ್ರತ್ಯೇಕ ಕಾಯ್ದೆಯಾಗಲಿ

- Advertisement -
- Advertisement -

ಶಾಸಕ ರೇಣುಕಾಚಾರ್ಯ ಮಗಳು ಹಾಗೂ ಅವರ ತಮ್ಮನ ಮಕ್ಕಳು ಬೇಡ ಜಂಗಮ ಎಂದು ಸುಳ್ಳು ಜಾತಿ ದಾಖಲಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಮೂಲಕ ಸಂವಿಧಾನಬದ್ಧ ಸಾಮಾಜಿಕ ನ್ಯಾಯವನ್ನು ಜಾರಿಗೊಳಿಸಿ ಖಾತ್ರಿಪಡಿಸಿಕೊಳ್ಳಬೇಕಾದ ಶಾಸಕರೇ ಅನ್ಯಾಯಕ್ಕಿಳಿದಿರುವುದು ಹಾಗೂ ಕಾನೂನು ವಿರೋಧಿ ಕಾರ್ಯವೆಸಗಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕೃತ್ಯ ಅಪರಾಧವೆಂಬುದರಲ್ಲಿ ಎರಡು ಮಾತಿಲ್ಲ.

ಶಾಸಕರು ಆ ಜಾತಿಪ್ರಮಾಣ ಪತ್ರದಿಂದ ಯಾವುದೇ ಸವಲತ್ತು ಪಡೆದಿಲ್ಲವೆಂದು ಸಮಜಾಯಿಷಿ ನೀಡಿದ್ದರೂ ಅಕ್ರಮವೆಸಗಿರುವುದಂತು ಸಾಬೀತಾಗಿದೆ. ಸಾಮಾನ್ಯ ಜನತೆಗೆ ಸಾವಿರ ದಾಖಲೆ ಕೇಳುವ ತಾಲ್ಲೂಕು ಆಡಳಿತ ಅಧಿಕಾರಿ ಶಾಸಕರ ಕುಟುಂಬಕ್ಕೆ ಸುಳ್ಳು ಜಾತಿಪ್ರಮಾಣ ಪತ್ರ ನೀಡಿರುವುದು ಶಿಕ್ಷಾರ್ಹ ಅಪರಾಧವಾಗಿದೆ.

ಎಸ್ಸಿ, ಎಸ್ಟಿ ಮತ್ತು ಒಬಿಸಿಗಳ ಜಾತಿಯನ್ನು ಹೇಳಿಕೊಂಡು ಸುಳ್ಳು ಜಾತಿಪ್ರಮಾಣ ಪತ್ರ ಪಡೆಯುವುದು ಇದೇ ಮೊದಲಲ್ಲ. ಸ್ವತಂತ್ರ ಭಾರತದ ಆರಂಭಿಕ ಕಾಲದಿಂದಲೂ ಈ ಹಾವಳಿ ಹೆಚ್ಚುತ್ತಲೇ ಬಂದಿದೆ. 2018ರಲ್ಲಿ ಇಂತಹುದೇ ಕೃತ್ಯವೆಸಗಿದ ನಾಲ್ವರನ್ನು ಕರ್ನಾಟಕ ಸರ್ಕಾರ ಅಮಾನತು ಮಾಡಿತ್ತು. ಆದರೆ ಈ ಅಪರಾಧಕ್ಕೆ ಸರಿಯಾದ ಕಾನೂನಿನ ನಿರ್ಬಂಧ ಇಲ್ಲದಿರುವ ಕಾರಣ ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ. ಎಲ್ಲರಿಗೂ ಎದ್ದು ಕಾಣುವ ಶಾಸಕನ ಮಗಳೇ ಈ ಕೆಲಸ ಮಾಡಿರುವಾಗ ಕಾನೂನು ಅದೆಷ್ಟು ಸಡಿಲವಾಗಿದೆ ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ.

2015ರಲ್ಲಿ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗ ಸುಳ್ಳು ಜಾತಿಪ್ರಮಾಣ ಪತ್ರದ ಬಗೆಗಿನ 6 ಲಕ್ಷ ದೂರುಗಳನ್ನು ಸ್ವೀಕರಿಸಿತ್ತು. ಹಿಂದೆ ಸುಪ್ರೀಂಕೋರ್ಟ್‌ನಲ್ಲಿ 50 ಸಾವಿರ ಪ್ರಕರಣಗಳ ಬಗ್ಗೆ ಪ್ರಸ್ತಾಪವಾಗಿತ್ತು. ರಾಜ್ಯಸಭೆಯಲ್ಲಿಯೂ ಇಂತಹುದೇ 1000 ಪ್ರಕರಣಗಳು ಸದ್ದು ಮಾಡಿದ್ದವು. 2020ರಲ್ಲಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯವು ಸುಮಾರು 591 ಸುಳ್ಳು ಜಾತಿಪ್ರಮಾಣ ಪತ್ರಗಳ ಬಗ್ಗೆ ದೂರುಗಳನ್ನು ಪಡೆದಿತ್ತು.

ಅಷ್ಟೂ ಪ್ರಕರಣಗಳಲ್ಲಿ ಮೇಲ್ಜಾತಿಗಳವರು ಪರಿಶಿಷ್ಟರ ಹಾಗೂ ಹಿಂದುಳಿದ ಜಾತಿಗಳ ಪ್ರಮಾಣಪತ್ರ ಪಡೆದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಉದ್ಯೋಗವನ್ನು ಪಡೆದಿದ್ದರು. ಆಶ್ಚರ್ಯವೆಂದರೆ ಅವರಲ್ಲಿನ ಹೆಚ್ಚಿನವರು ಶಿಕ್ಷಣ ಹಾಗೂ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಿಗಳಾಗಿದ್ದರು. ಜೊತೆಗೆ ವಿದ್ಯಾರ್ಥಿವೇತನ ಹಾಗೂ ದಲಿತರ, ಹಿಂದುಳಿದ ಜಾತಿಗಳ ಭೂಮಿ ಪಡೆಯಲೂ ಬಳಸಿಕೊಂಡಿದ್ದರು. ಈ ಪ್ರಕರಣ ವಿಚಾರಣೆಗೆ ಬರುವಷ್ಟರಲ್ಲಿ 12 ಉದ್ಯೋಗಿಗಳು ನಿವೃತ್ತಿಯನ್ನೂ ಹೊಂದಿದ್ದರು. ಹಲವರ ಮೇಲೆ ಪ್ರಕರಣ ದಾಖಲಿಸಲಾಯಿತಾದರೂ ಯಾರನ್ನೂ ಸೇವೆಯಿಂದ ವಜಾಗೊಳಿಸಿದ್ದು ಕಂಡುಬರಲಿಲ್ಲ. ಸಂಬಂಧಪಟ್ಟ ತಹಸಿಲ್ದಾರ್ ಹಾಗೂ ಉದ್ಯೋಗಿಗಳ ನಡುವಿನ ಒಳಒಪ್ಪಂದಗಳು ಹಾಗೂ ಸರ್ಕಾರದ ಬೇಜವಾಬ್ದಾರಿತನದಿಂದ ನ್ಯಾಯ ನೇಣಿಗೇರಿತು.

ಇಂದು ರಾಷ್ಟ್ರೀಯ ಹಾಗೂ ರಾಜ್ಯ ಪರಿಶಿಷ್ಟರ ಆಯೋಗಗಳು, ವಿವಿಧ ರಾಜ್ಯಗಳ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮುಂದೆ ರಾಶಿಗಟ್ಟಲೆ ಸುಳ್ಳು ಜಾತಿಪ್ರಮಾಣ ಪತ್ರ ಪಡೆದ ಪ್ರಕರಣಗಳು ಬಿದ್ದಿವೆ. ಭಾರತದಾದ್ಯಂತ ಇಂತಹ ಕೋಟಿಗಟ್ಟಲೆ ಪ್ರಕರಣಗಳು ಕಂಡುಬರುತ್ತಿವೆ. ಆದರೆ ಸರ್ಕಾರ ಇದಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ.

ಶಾಸಕನೇ ಇಂತಹ ಕೆಲಸ ಮಾಡಿರುವುದು ಸರ್ಕಾರದ ಮೇಲಿನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ತನ್ನ ಘನತೆಯನ್ನು ಉಳಿಸಿಕೊಳ್ಳಲು ಸರ್ಕಾರ ಈ ಕೂಡಲೇ ಶಾಸಕರನ್ನು ಹಾಗೂ ಸಂಬಂಧಪಟ್ಟ ತಹಸೀಲ್ದಾರರನ್ನು ಅಮಾನತುಗೊಳಿಸಬೇಕಿದೆ. ಬಹುಮುಖ್ಯವಾಗಿ ಇದೇ ಜನವರಿಯಲ್ಲಿ ಕರ್ನಾಟಕ ಹೈಕೋರ್ಟ್ ಅಟ್ರಾಸಿಟಿ ಕಾಯ್ದೆಯನ್ವಯ ಶಿಕ್ಷೆ ನೀಡಲು ಸಾಧ್ಯಲ್ಲವೆಂದು ತೀರ್ಪಿತ್ತಿರುವುದರಿಂದ ಅಟ್ರಾಸಿಟಿ ಕಾಯ್ದೆಯನ್ನು ತಿದ್ದುಪಡಿ ಮಾಡಲು ಒಕ್ಕೂಟ ಸರ್ಕಾರಕ್ಕೆ ಮನವಿ ಸಲ್ಲಿಸಿ ತಿದ್ದುಪಡಿಯಾಗುವವರೆಗೆ ಸುಳ್ಳು ಜಾತಿಪ್ರಮಾಣ ಪತ್ರದ ಅನ್ಯಾಯ ತಡೆಯಲು ಈ ಕೂಡಲೇ ಸುಗ್ರೀವಾಜ್ಞೆಯ ಮೂಲಕ ಕಾಯ್ದೆಯೊಂದನ್ನು ಜಾರಿಗೊಳಿಸಬೇಕಿದೆ. ಬಡವರ ತಟ್ಟೆಗೂ ಕೈ ಹಾಕುವ ಮೋಸಗಾರರಿಗೆ ತಕ್ಕ ಶಿಕ್ಷೆ ವಿಧಿಸಬೇಕಿದೆ.

ಸಿದ್ಧಾರ್ಥ ಎಂ.
ಸಾಮಾಜಿಕ ಕಾರ್ಯಕರ್ತರು


ಇದನ್ನೂ ಓದಿ: ನಕಲಿ ಜಾತಿ ಸರ್ಟಿಫಿಕೇಟ್‌: ಬಿಜೆಪಿ ಶಾಸಕ ರೇಣುಕಾಚಾರ್ಯ ಸಹೋದರನ ವಿರುದ್ಧ ಎಫ್‌ಐಆ‌‌ರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ತಾಯಿ ಲಿಂಗಾಯತ ಆಗಿದ್ದರೂ ಮಕ್ಕಳು ದಲಿತ ಗಂಡನಿಗೆ ಹುಟ್ಟಿದ್ದರೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದ್ದರೆ ಸಿಂಧುತ್ವಕ್ಕೆ ಅಡ್ಡಿಯಿಲ್ಲ ಎಂದೆನಿಸುತ್ತದೆ. ನನ್ನ ಅಭಿಪ್ರಾಯ.

  2. ತಾಯಿ ಲಿಂಗಾಯತ ಆಗಿದ್ದರೂ ಮಕ್ಕಳು ದಲಿತ ಗಂಡನಿಗೆ ಹುಟ್ಟಿದ್ದರೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದ್ದರೆ ಸಿಂಧುತ್ವಕ್ಕೆ ಅಡ್ಡಿಯಿಲ್ಲ ಎಂದೆನಿಸುತ್ತದೆ. ಇದು ನನ್ನ ಅಭಿಪ್ರಾಯ. ಕಾನೂನು ಏನು ಹೇಳುತ್ತೋ ಗೊತ್ತಿಲ್ಲ.

  3. ಈ ದೇಶದ ಸಂವಿಧಾನದ ಮೂಲವೇ  ಬ್ರಿಟಿಷ್ ರ Govt. of India Act 1935. ಅದರ ಪೂರ್ವದ 1921 ರ ಹೈದರಾಬಾದ್ ನಿಜಾಮರ Depressed Class ಪಟ್ಟಿಯಲ್ಲಿ Jangam ಬರುತ್ತದೆ. 1936 ರ ಭಂಡಾರ ಜಿಲ್ಲೆಗೆ ಸಂಬಂಧಿಸಿದಂತೆ Schedule Caste ಪಟ್ಟಿಯಲ್ಲೂ ಜಂಗಮ ಜಾತಿ ಇರುತ್ತದೆ. ಮರಾಠರ ಆಳ್ವಿಕೆಯಲ್ಲಿ ಮುಂಬೈ ಕರ್ನಾಟಕದ ಪ್ರದೇಶಗಳೂ ಸೇರಿದಂತೆ ಜಂಗಮ ಜಾತಿಯು Beggers ಪಟ್ಟಿಯಲ್ಲಿ, ಮೈಸೂರು ಸಂಸ್ಥಾನದಲ್ಲಿ Inferior Religious Mendicants ಪಟ್ಟಿಯಲ್ಲೂ ಜಂಗಮ ಜಾತಿ ಗುರ್ತಿಸಲ್ಪಟ್ಟಿದೆ. ಜಂಗಮರು ಯಾರು ಎಂಬುದು ಬ್ರಿಟಿಷ್ ಚಿಂತಕ C.P. Brown ಇವರ ಗ್ರಂಥದಲ್ಲಿ ವಿವರಿಸಲ್ಪಟ್ಟಿದೆ. ಇದೆಲ್ಲವೂ ಸ್ವತಂತ್ರ ಪೂರ್ವ ದಾಖಲೆಗಳು. ಇವು ಪ್ರಮಾಣೀಕೃತ ಎಂದು ಮಾನ್ಯ ಸರ್ವೋಚ್ಚ ನ್ಯಾಯಾಲಯ ಹಲವು ತೀರ್ಪುಗಳಲ್ಲಿ ವಿವರಿಸಿದೆ. “Pre-independent Documents are more reliable and they have got Probative Value”  ಎಂದಿದೆ. ಸರ್ಕಾರದ ಈವರೆಗಿನ ಎಲ್ಲ ಸುತ್ತೋಲೆಗಳು ವೀರಶೈವ ಜಂಗಮರೇ ಬೇಡಜಂಗಮರು ಎನ್ನುತ್ತವೆ. ಸೂರ್ಯನಾಥ ಕಾಮತರ ಅಧ್ಯಯನ ವರದಿ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷ್ಯವಾಗಿದೆ.

    ಜಂಗಮರು ಬೇಡಜಂಗಮರಲ್ಲದಿದ್ದರೆ, ಜಂಗಮ ಜಾತಿಯನ್ನು ಕೇಂದ್ರದ OBC ಮತ್ತು ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿಕೊಡಲು ಸಂವಿಧಾನದ ಸದಾಶಯ ಜಾರಿ ವಿರೋಧಿಗಳು ಕ್ರಮವಹಿಸಬೇಕು.

    Article 147 ಅನುಸಾರ ಪ್ರಸ್ತುತ ಸಂವಿಧಾನದ ಜಾರಿಯ ತೊಂದರೆಯಲ್ಲಿ , ಅನುಸರಿಸಲು ದಾರಿ ತೋರಿದೆ. ಅದನ್ನು ಗ್ರಹಿಸಿ.

    ಜಂಗಮ ತನ್ನ ಹಕ್ಕುಗಳಿಂದ ವಂಚಿತನಾಗಿದ್ದು, ಯಾರ ಹಕ್ಕನ್ನೂ ಕಸಿಯುವ ಪ್ರಶ್ನೆ ಉದ್ಭವಿಸಿಯೇ ಇಲ್ಲ.

    ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದಲ್ಲಿ, ಕೇಂದ್ರವು ರಾಜ್ಯಕ್ಕೆ ಪ್ರತಿಕ್ರಿಯಿಸಲು ನಿರ್ದೇಶನ ನೀಡಿದರೂ, 6-7 ತಿಂಗಳಿನಿಂದ ರಾಜ್ಯ ಕೇಂದ್ರಕ್ಕೇ ಪ್ರತಿಕ್ರಿಯಿಸಿಲ್ಲ. ಇನ್ನು ಸಾಮಾನ್ಯರಿಗೆ ಏನು ಉತ್ತರ ಕೊಡುತ್ತಾರೆ..!?

    ಪರಿಶಿಷ್ಟ ಜಾತಿ ಪಟ್ಟಿ ಅನುಸೂಚಿತ ಜಾತಿಗಳ ಪಟ್ಟಿ ಮಾತ್ರವಾಗಿದ್ದು, ಅದಕ್ಕೆ ವಿಪರೀತ ಅರ್ಥವನ್ನು ಮಾನ್ಯ ಸಂವಿಧಾನ ಕೊಟ್ಟಿರುವುದಿಲ್ಲ.

    ಜಂಗಮರು, ಬೇಡಜಂಗಮರಲ್ಲ ಎಂದು ಮಾನ್ಯ ಸುಪ್ರೀಂ ಮುಂದೆ ಹೋಗಿ ವಾದ ಮಂಡಿಸಿದರೆ, ಸುಲಭದಲ್ಲಿ ಸಮಸ್ಯೆ ಪರಿಹಾರವಾಗಬಹುದಲ್ಲವೇ..!?

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...