Homeಕರ್ನಾಟಕ🛑 Live Updates: ಚಕ್ರತೀರ್ಥ ಸಮಿತಿಯ ಅಧ್ವಾನಗಳು: ‘ಭಕ್ತಿಪಂಥ’ ಪಾಠದಲ್ಲಿ ಶರೀಫ, ಕನಕ-ಪುರಂದರದಾಸರ ವ್ಯಕ್ತಿ ಚಿತ್ರಣ...

🛑 Live Updates: ಚಕ್ರತೀರ್ಥ ಸಮಿತಿಯ ಅಧ್ವಾನಗಳು: ‘ಭಕ್ತಿಪಂಥ’ ಪಾಠದಲ್ಲಿ ಶರೀಫ, ಕನಕ-ಪುರಂದರದಾಸರ ವ್ಯಕ್ತಿ ಚಿತ್ರಣ ತೆರವು

ಪಠ್ಯ ಪುಸ್ತಕ ಪರಿಶೀಲನೆ ವಿವಾದಕ್ಕೆ ಸಂಬಂಧಿಸಿದ ವಿವರಗಳು ಅಪ್‌ಡೇಟ್‌ ಆಗಲಿವೆ. ಈ ಲಿಂಕ್‌ ಆಗಾಗ್ಗೆ ರೀಫ್ರೆಶ್ ಮಾಡಿರಿ.

- Advertisement -
- Advertisement -

(ಬಲ ಪಂಥೀಯ ಬರಹಗಾರ ರೋಹಿತ್‌ ಚಕ್ರತೀರ್ಥ ನೇತೃತ್ವದಲ್ಲಿ ಪರಿಶೀಲಿಸಲಾಗಿರುವ ಪಠ್ಯಪುಸ್ತಕಗಳಲ್ಲಿ ಆಗಿರುವ ತಪ್ಪುಗಳು ಒಂದೆರಡಲ್ಲ. ಆದರೆ ಇದೇ ಪಠ್ಯಪುಸ್ತಕವನ್ನು ಮಕ್ಕಳಿಗೆ ಓದಿಸಲು ಸರ್ಕಾರ ನಿರ್ಧಾರ ಮಾಡಿದಂತಿದೆ. ನಾಡಿನ ಮಕ್ಕಳು ಇಷ್ಟೊಂದು ತಪ್ಪುಗಳಿರುವ ಪಠ್ಯಪುಸ್ಕಕಗಳನ್ನೂ ಓದಬೇಕೆ? ಬೇಡವೇ? ನೀವೇ ನಿರ್ಧರಿಸಬೇಕಿದೆ. ಅದಕ್ಕೆ ಸಂಬಂಧಿಸಿದ ವಿವರಗಳನ್ನು ಇಲ್ಲಿ ಅಪ್‌ಲೋಡ್‌ ಮಾಡಲಾಗುವುದು. ಓದುಗರು ರೀಫ್ರೆಶ್ ಮಾಡುತ್ತಿರಿ.) 


‘ಭಕ್ತಿಪಂಥ’ ಪಾಠದಲ್ಲಿ ಶಿಶುನಾಳ ಶರೀಫ, ಕನಕ, ಪುರಂದರದಾಸರ ವ್ಯಕ್ತಿ ಚಿತ್ರಣ ತೆರವು

ಕನ್ನಡ ನೆಲದಲ್ಲಿ ನಡೆದ ಭಕ್ತಿ ಪಂಥ ಚಳವಳಿಯಲ್ಲಿ ದಾಸವರೇಣ್ಯರ ಕೊಡುಗೆಯನ್ನೂ ಯಾರೂ ಅಲ್ಲಗಳೆಯಲಾರರು. ಆದರೆ ಚಕ್ರತೀರ್ಥ ಪುಸ್ತಕ ಪರಿಶೀಲನಾ ಸಮಿತಿಯು 9ನೇ ತರಗತಿ ಸಮಾಜ ವಿಜ್ಞಾನ ಭಾಗ-2ರಲ್ಲಿ ನೀಡಿರುವ ‘ಭಕ್ತಪಂಥ’ ಪಾಠದಲ್ಲಿ ದಾಸವರೇಣ್ಯರ ವ್ಯಕ್ತಿಚಿತ್ರಣವನ್ನು ಕಿತ್ತು ಬಿಸಾಡಿದೆ.

ಬರಗೂರು ರಾಮಚಂದ್ರಪ್ಪನವರ ಸರ್ವಾಧ್ಯಕ್ಷತೆಯಲ್ಲಿ ರಚಿತವಾದ ಪಠ್ಯಪುಸ್ತಕದಲ್ಲಿ ಕನಕದಾಸರು, ಪುರಂದರದಾಸರು ಹಾಗೂ ಶಿಶುನಾಳ ಷರೀಫರ ವ್ಯಕ್ತಿಚಿತ್ರಣವನ್ನು ಪರಿಚಯಿಸಲಾಗಿತ್ತು. ಸಮಾಜದ ಮೇಲೆ ಅವರು ಬೀರಿದ ಪ್ರಭಾವವನ್ನು ತಿಳಿಸಲಾಗಿತ್ತು. ಆದರೆ ಈ ವಿವರಗಳನ್ನು ತೆರವು ಮಾಡಿರುವ ಚಕ್ರತೀರ್ಥ ಸಮಿತಿಯು, ಕರ್ನಾಟಕದಲ್ಲಿ ಭಕ್ತಿಪಂಥ ಚಳಿವಳಿಕಾರರ ಇತಿಹಾಸವನ್ನು ಎರಡು ವಾಕ್ಯಗಳಿಗೆ ಸೀಮಿತ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪಾಠದಲ್ಲಿ ಆರಂಭದಲ್ಲಿ- ‘ಈ ಅಧ್ಯಾಯದಲ್ಲಿ ಕೆಳಗಿನ ಅಂಶಗಳನ್ನು ತಿಳಿಯುತ್ತೇವೆ’ ಎಂದು ಪ್ರಸ್ತಾಪಿಸುತ್ತಾ “ರಮಾನಂದ, ಚೈತನ್ಯ, ಗುರುನಾನಕ್‌ರ ಬಗ್ಗೆ, ಕರ್ನಾಟಕದಲ್ಲಿ ಭಕ್ತಿ ಪಂಥ, ಭಕ್ತಿ ಪಂಥದ ಪರಿಣಾಮಗಳು, ಭಕ್ತಿಪಂಥದ ಪ್ರಮುಖ ಅಂಶಗಳು” ಈ ವಿಚಾರಗಳನ್ನು ತಿಳಿಯುತ್ತೇವೆ ಎಂದು ಸೂಚಿಸಲಾಗಿದೆ. ಆದರೆ ಬರಗೂರರ ಸಮಿತಿ ರೂಪಿಸದ ಪಠ್ಯದಲ್ಲಿಯೇ ಈ ಅಂಶಗಳನ್ನು ನಮೂದಿಸಲಾಗಿತ್ತು. ಅವುಗಳನ್ನು ಯಥಾವತ್ತು ಉಳಿಸಿಕೊಂಡಿರುವ ಚಕ್ರತೀರ್ಥ ಸಮಿತಿ, ಕರ್ನಾಟಕದ ಭಕ್ತಿಪಂಥ ಚಳವಳಿಯ ಬಗ್ಗೆ ವಿವರಣೆಯನ್ನೇ ನೀಡಿಲ್ಲ! ‘ಸೂಫಿಸಂ’ ಬಗ್ಗೆ ಒಂದು ಪ್ಯಾರಾ ಪಾಠವಿದ್ದರೂ ಅದು ಕರ್ನಾಟಕ್ಕಷ್ಟೇ ಸೀಮಿತವಾಗಿ ನಿಲ್ಲುವುದಿಲ್ಲ.

ಅಸ್ಸಾಮಿನ ಭಕ್ತಿಪಂಥ ಚಳವಳಿಕಾರರಾದ ಶಂಕರದೇವ ಹಾಗೂ ಮಾಧವದೇವ ಅವರ ಕುರಿತು ಹೊಸದಾಗಿ ಸೇರಿಸಲಾಗಿದೆ. ದಾಸವರೇಣ್ಯರ ವಿವರ ಕೈಬಿಡಲಾಗಿದೆ. ಅಲ್ಲದೆ ಗುರುನಾನಕರ್‌ರ ಪಾಠದಲ್ಲೂ ಕತ್ತರಿ ಪ್ರಯೋಗ ನಡೆದಿದೆ.

ಅಸ್ಸಾಮಿನ ಭಕ್ತಿಪಂಥ ಚಳವಳಿಕಾರರಾದ ಶಂಕರದೇವ ಹಾಗೂ ಮಾಧವದೇವ ಅವರ ಕುರಿತು ರೋಹಿತ್ ಚಕ್ರತೀರ್ಥ ಸಮಿತಿ ಹೊಸದಾಗಿ ಸೇರಿಸಿದೆ.

ಮೀರಾಬಾಯಿಯವರ ಕುರಿತು ಇರುವ ಭಾಗದಲ್ಲಿಯೇ ಕರ್ನಾಟಕದಲ್ಲಿ ಭಕ್ತಿಪಂಥ ಚಳವಳಿ ಬೀರಿದ ಪ್ರಭಾವದ ಕುರಿತು ಎರಡು ವಾಕ್ಯಗಳನ್ನು ತುರುಕಲಾಗಿದೆ. “ಪುರಂದರದಾಸರು ಮತ್ತು ಕನಕದಾಸರು ಕರ್ನಾಟಕದ ಭಕ್ತಿ ಚಳವಳಿಯ ಪ್ರಮುಖರಾಗಿದ್ದರು. ಪುರಂದರದಾಸರು ‘ಕೀರ್ತನೆ’ಗಳನ್ನು ರಚಿಸಿದರೆ, ಕನಕದಾಸರು, ‘ಮೋಹನ ತರಂಗಿಣಿ’ ಎಂಬ ಕಾವ್ಯವನ್ನು ಮತ್ತು ಕೀರ್ತನೆಗಳನ್ನು ಕನ್ನಡದಲ್ಲಿ ರಚನೆ ಮಾಡಿದರು”- ಇದಿಷ್ಟೇ ಮಾಹಿತಿ!

ಶಿಶುನಾಳ ಶರೀಫರು, ಕನಕ ಹಾಗೂ ಪುರಂದರದಾಸರ ವ್ಯಕ್ತಿ ಚಿತ್ರಣವನ್ನು ಬರಗೂರು ನೇತೃತ್ವದ ಸಮಿತಿ ನೀಡಿತ್ತು.


‘ಅಕ್ಷರದವ್ವ’ ಸಾವಿತ್ರಿಬಾಯಿ ಫುಲೆಯವರಿಗೆ, ‘ಏಕವಚನ’ ಬಳಕೆ

ಬರಗೂರು ರಾಮಚಂದ್ರಪ್ಪ ಅವರ ಸಮಿತಿಯು ಏಳನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿ ಪೂರಕ ಪಠ್ಯವಾಗಿ ಎಚ್.ಎಸ್.ಅನುಪಮ ಅವರು ಬರೆದಿರುವ ‘ಸಾವಿತ್ರಿಬಾಯಿ ಫುಲೆ’ ಪಾಠವನ್ನು ಅಳವಡಿಸಿತ್ತು. ಆದರೆ ಚಕ್ರತೀರ್ಥ ಸಮಿತಿಯು ಎಚ್‌.ಎಸ್.ಅನುಪಮಾ ಅವರ ಪಾಠವನ್ನು ತೆಗೆದುಹಾಕಿ ಕಾರ್ಕಳದ ರಮಾನಂದ ಆಚಾರ್ಯ ಎಂಬವರು ಬರೆದಿರುವ ‘ಸಾಮಾಜಿಕ ಚಳವಳಿಯ ಮೊದಲ ಶಿಕ್ಷಕಿ’ ಪಾಠವನ್ನು ಅಳವಡಿಸಿದೆ. ‘ಅಕ್ಷರದವ್ವ ಸಾವಿತ್ರಿಬಾಯಿ ಫುಲೆ’ಯವರ ಕುರಿತ ಈ ಪಾಠದಲ್ಲಿ ‘ಏಕವಚನ’ಗಳನ್ನು ಬಳಸಲಾಗಿದೆ.

“ನಿರಕ್ಷರಿಯಾಗಿದ್ದ ಸಾವಿತ್ರಿಬಾಯಿ ಆಗಲೇ ಪಣತೊಟ್ಟಳು, ಏನೇ ಆಗಲಿ ನಾನು ಉಚ್ಚ ಶಿಕ್ಷಣ ಪಡೆದೇ ಪಡೆಯುವೆ. ತಾನೂ ಶಿಕ್ಷಣ ಪಡೆಯುವುದಷ್ಟೇ ಅಲ್ಲ, ಎಲ್ಲಾ ಮಹಿಳೆಯರೂ ಶಿಕ್ಷತರಾಗಬೇಕೆಂಬ ಕನಸು ಕಂಡು, ಅದನ್ನು ಸಾಕಾರಗೊಳಿಸಿದಳು”- ಹೀಗೆ ‘ಅವಳು’, ‘ಇವಳು’ಗಳು ಪಠ್ಯದಲ್ಲಿ ಹೇರಳವಾಗಿ ಬಳಕೆಯಾಗಿವೆ.

‘ಜ್ಯೋತಿ ಬಾ ಫುಲೆಯೊಂದಿಗೆ ಅವಳ ವಿವಾಹ’, ‘ಆಚೆ ಮನನೊಂದಳು’, ‘ಸಂಘರ್ಷಕ್ಕೆ ಅಣಿಯಾದಳು’, ‘ಅವಳು ಪಾಠ ಕಲಿತು’, ‘ಅಧ್ಯಾಪಕಿಯಾದಳು’, ‘ತನ್ನ ಕಾರ್ಯದಲ್ಲಿ ಮುಂದುವರಿದಳು’, ‘ಪ್ರೇರೇಪಿಸಿದಳು’, ‘ಆಶ್ರಯವಿತ್ತಳು’, ‘ಮೇಲ್ಪಂಕ್ತಿ ಹಾಕಿಕೊಟ್ಟಳು’, ‘ಮನವೊಲಿಸಿದಳು’, ‘ಬೆಳಕಾದಳು’, ‘ತೊಡಗಿದ್ದಳು’, ‘ನಿಧನ ಹೊಂದಿದಳು’- ಹೀಗೆ ಪದಗಳನ್ನು ಬಳಸಿರುವುದನ್ನು ಕಾಣಬಹುದು.


ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪಾಠದಲ್ಲಿ ಕತ್ತರಿ

ಆರನೇ ತರಗತಿ ಸಮಾಜ ವಿಜ್ಞಾನ ಭಾಗ ಒಂದರಲ್ಲಿ ‘ನಮ್ಮ ಕರ್ನಾಟಕ’ ಪಾಠದಲ್ಲಿ ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕುರಿತು ಇದ್ದ ವಿವರಗಳಿಗೆ ಚಕ್ರತೀರ್ಥ ಸಮಿತಿ ಕತ್ತರಿ ಪ್ರಯೋಗ ಮಾಡಿದೆ.

“ಸ್ವಾತಂತ್ರ್ಯ ಪೂರ್ವದಿಂದಲೂ ಸರ್ಕಾರವು ಪ್ರಾಥಮಿಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಅನೇಕ ಧಾರ್ಮಿಕ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ಸಿದ್ಧಗಂಗಾ ಮಠವು ಶ್ರೀ ಶಿವಕುಮಾರಸ್ವಾಮಿಗಳ ನೇತೃತ್ವದಲ್ಲಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅಕ್ಷರ ಮತ್ತು ಅನ್ನ ದಾಸೋಹದ ಕಾರ್ಯ ನಡೆಸುತ್ತಿದೆ. ರಾಮನಗರ ಜಿಲ್ಲೆಯಲ್ಲಿ ಜನಿಸಿದ ಶ್ರೀ ಬಾಲಗಂಗಾಧರ ಸ್ವಾಮೀಜಿಯವರ ನೃತೃತ್ವದಲ್ಲಿ ಬೆಳೆದ ಆದಿಚುಂನಗಿರಿ ಮಠದ ಶೈಕ್ಷಣಿಕ ಸೇವೆಯು ಅಪೂರ್ವವಾಗಿದ್ದು. ಮೂಲಶಿಕ್ಷಣ, ವೃತ್ತಿ ಶಿಕ್ಷಣದ ಕಾಲೇಜುಗಳನ್ನು ನಡೆಸುತ್ತಿದೆ. ಚಿತ್ರದುರ್ಗದ ಮುರುಘರಾಜೇಂದ್ರ ಮಠ ಮತ್ತು ಸಿರಿಗೆರೆ ತರಳಬಾಲು ಮಠಗಳ ಶೈಕ್ಷಣಿಕ ಸೇವೆಯೂ ಗಮನಾರ್ಹ” ಎಂದು ಹಳೆಯ ಪಠ್ಯದಲ್ಲಿ ವಿವರವಿತ್ತು.

‘ನಮ್ಮ ಹೆಮ್ಮೆಯ ರಾಜ್ಯ- ಕರ್ನಾಟಕ’ ಎಂಬ ಶೀರ್ಷಿಕೆಯಲ್ಲಿ ಪಾಠವನ್ನು ಪರಿಷ್ಕರಣೆ ಮಾಡಿರುವ ಚಕ್ರತೀರ್ಥ ಸಮಿತಿ ಈ ಹಿಂದೆ ಇದ್ದ ವಿವರಗಳಿಗೆ ಕತ್ತರಿ ಹಾಕಿದೆ.

“ಅನೇಕ ಧಾರ್ಮಿಕ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ಸಿದ್ಧಗಂಗಾ ಮಠ ಹಾಗೂ ಆದಿಚುಂಚನಗಿರಿ ಮಠ, ಮರುಘರಾಜೇಂದ್ರ ಮಠ ಮತ್ತು ಸಿರಿಗೆರೆ ತರಳಬಾಳು ಮಠಗಳ ಶೈಕ್ಷಣಿಕ ಸೇವೆಯು ಗಮನಾರ್ಹ” ಎಂದು ಬರೆಯಲಾಗಿದೆ. ನಾಲ್ಕೈದು ಸಾಲುಗಳ ವಿವರಗಳನ್ನು ಎರಡು ವಾಕ್ಯಗಳಿಗೆ ಇಳಿಸಲಾಗಿದೆ.


ಆರನೇ ತರಗತಿ ಸಮಾಜ ವಿಜ್ಞಾನ ಭಾಗ-1ರಲ್ಲಿ ‘ಮೈಸೂರು ವಿಭಾಗ’ ಪಾಠದಲ್ಲಿ ಟಿಪ್ಪು ಸುಲ್ತಾನ್‌ ಭಾವಚಿತ್ರವನ್ನು ತೆರವು ಮಾಡಲಾಗಿದೆ. ಅದರ ಬದಲಿಗೆ ವಿಶ್ವೇಶ್ವರಯ್ಯನವರ ಫೋಟೋ ಬಳಸಲಾಗಿದೆ. ಇದೇ ಪಠ್ಯಪುಸ್ತಕದಲ್ಲಿ ‘ನಮ್ಮ ಹೆಮ್ಮೆಯ ರಾಜ್ಯ- ಕರ್ನಾಟಕ ಪಾಠದಲ್ಲಿಯೂ ಬಳಸಲಾಗಿದೆ. ಟಿಪ್ಪು ಫೋಟೋ ತೆಗೆದು ಅನಗತ್ಯವಾಗಿ ಮತ್ತೊಮ್ಮೆ ಸರ್‌.ಎಂ.ವಿಶ್ವೇಶ್ವರಯ್ಯನವರ ಫೋಟೋ ಹಾಕಲಾಗಿದೆ. ಬರಗೂರರ ಸಮಿತಿ ರಚಿಸಿದ ಪಾಠದಲ್ಲಿ ಒಂದು ಕಡೆ ಮಾತ್ರ ವಿಶ್ವೇಶ್ವರಯ್ಯನವರ ಫೋಟೋ ಬಳಸಲಾಗಿತ್ತು.

ಸಮಾಜ ವಿಜ್ಞಾನ ಆರನೇ ತರಗತಿ ಪಠ್ಯಪುಸ್ತಕದಲ್ಲಿ ದೇವನೂರ ಮಹಾದೇವ ಅವರ ಫೋಟೋವನ್ನು ತೆಗೆದು, ವಿಜ್ಞಾನಿ ರಾಜರಾಮಣ್ಣ ಅವರ ಫೋಟೋವನ್ನು ಹಾಕಲಾಗಿದೆ. ಹೊಸಧರ್ಮಗಳ ಉದಯ ಪಾಠವನ್ನು ಕೈಬಿಡಲಾಗಿದೆ. ಈ ಪಾಠವು ಜೈನ ಮತ್ತು ಬೌದ್ಧಧರ್ಮಗಳ ವಿವರಣೆ ನೀಡಿದ್ದವು.

ಮಧ್ವಾಚಾರ್ಯರ ಜಾತಿ ಪ್ರಸ್ತಾಪ

‘ಭಾರತೀಯ ವೈಚಾರಿಕೆ ಹಾಗೂ ಭಕ್ತಿಪಂಥ’ ಎಂಬ ಪಾಠದಲ್ಲಿ ಧಾರ್ಮಿಕ- ಸಾಮಾಜಿಕ ಸುಧಾರಕರ ಪರಿಚಯ ಮಾಡಿಕೊಡಲಾಗಿದೆ. ಶಂಕರಾಚಾರ್ಯರು, ರಾಮಾನುಜಚಾರ್ಯರು, ಮಧ್ವಾಚಾರ್ಯರು, ಬಸವಣ್ಣ ಮೊದಲಾದವರ ಪರಿಚಯ ಮಾಡಿಕೊಡುವಾಗ ಪ್ರಸ್ತಾಪವಾಗದ ಜಾತಿ, ‘ಮಧ್ವಾಚಾರ್ಯ’ರ ವಿಚಾರ ಬಂದಾಗ ಪ್ರಸ್ತಾಪವಾಗಿದೆ. “ತುಳು ಬ್ರಾಹ್ಮಣರಾದ ಮಧ್ಯಗೇಹ ಭಟ್ಟ ಹಾಗೂ ವೇದವತಿ ಇವರ ತಂದೆ ತಾಯಿ. ಇವರು ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು” ಎಂಬ ಅಂಶವನ್ನು ಚಕ್ರತೀರ್ಥ ಸಮಿತಿ ಸೇರಿಸಿದೆ. ಹಳೆಯ ಪಠ್ಯದಲ್ಲಿ ಜಾತಿಯ ಪ್ರಸ್ತಾಪವಿರಲಿಲ್ಲ.

ಕನ್ನಡ ರಾಜ್ಯೋತ್ಸವ ಕುರಿತು ‘ಮೆರವಣಿಗೆ’ ಪಾಠ ತೆರವು

ಆರನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿ ‘ಮೆರವಣಿಗೆ’ ಎಂಬ ಪಾಠವಿತ್ತು. ಅದು ‘ಕನ್ನಡ ರಾಜ್ಯೊತ್ಸವಕ್ಕೆ ಸಂಬಂಧಿಸಿತ್ತು. ಆ ಪಾಠವನ್ನು ತೆಗೆದ ರೋಹಿತ್‌ ಚಕ್ರತೀರ್ಥ ಸಮಿತಿ ‘ಸಿದ್ಧಾರೂಢ ಜಾತ್ರೆ’ಯ ಕುರಿತ ಪಾಠ ಇರಿಸಿದೆ. ಒಂದು ಧರ್ಮದ ಬಗ್ಗೆ ಮುಸ್ಲಿಂ ಹುಡುಗಿಗೆ ಬೋಧನೆ ಮಾಡುವುದನ್ನೂ ಇಲ್ಲಿ ಕಾಣಬಹುದು. ‘ಕನ್ನಡ ಅಸ್ಮಿತೆ ವರ್ಸಸ್‌ ಧರ್ಮ ರಾಜಕಾರಣ’ವನ್ನು ಇಲ್ಲಿ ಮುನ್ನೆಲೆಗೆ ತರಲಾಗಿದೆ ಎಂಬ ಗುಮಾನಿ ಹುಟ್ಟುತ್ತದೆ. (‘ಮೆರವಣಿಗೆ’ ಪಾಠದ ಕುರಿತ ಹೆಚ್ಚಿನ ವಿವರ ‘ಇಲ್ಲಿ’ ಓದಿರಿ)

(ಮುಂದುವರಿಯಲಿದೆ… ಮತ್ತಷ್ಟು ವಿವರಗಳು ಅಪ್‌ಲೋಡ್‌ ಆಗಲಿವೆ…)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...