Homeಮುಖಪುಟಹಸಿವಿನ ಅಲೆಯಬ್ಬರಕ್ಕೆ ಪರಿಹಾರ ಹುಡುಕುತ್ತಾ : ಲಾಕ್‌ಡೌನ್‌ ಸ್ವಯಂಸೇವಕರೊಬ್ಬರ ಅನುಭವ ಬರಹ

ಹಸಿವಿನ ಅಲೆಯಬ್ಬರಕ್ಕೆ ಪರಿಹಾರ ಹುಡುಕುತ್ತಾ : ಲಾಕ್‌ಡೌನ್‌ ಸ್ವಯಂಸೇವಕರೊಬ್ಬರ ಅನುಭವ ಬರಹ

ಲಾಕ್‍ಡೌನ್‍ನಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರಿಗೆ ದುಡ್ಡು ಮತ್ತು ಆಹಾರ ಇವರೆಡನ್ನೂ ವೈರುಧ್ಯಗಳೆಂದು ನೋಡಬಾರದು. ಇಂತಹ ಸಮಯದಲ್ಲಿ ಉಚ್ಚ ನ್ಯಾಯಾಲಯವು ಸಂಕಷ್ಟಕ್ಕೆ ಈಡಾದವರಿಗೆ ಹೇಗೆ ಸಹಾಯ ಮಾಡಬೇಕೆನ್ನುವುದನ್ನು ನೋಡಬೇಕೆ ಹೊರತು ಕಡೆಗಣಿಸಬಾರದು.

- Advertisement -
- Advertisement -

ಒಂದು ವರ್ಷದ ಮಗು ಇದೆ, ಮಗುವಿಗೆ ಹಾಲು ಕೊಳ್ಳಲೂ ಹಣವಿಲ್ಲ’. ಇದನ್ನು ಹೇಳಿದ್ದು ತಮಿಳುನಾಡಿನ ತಿರುಪುರಿನಲ್ಲಿ ದಿನಗೂಲಿ ಕೆಲಸ ಮಾಡುವ ಕೃಷ್ಣ. ಝಾರ್ಖಂಡದಿಂದ ಕೆಲಸ ಅರಸುತ್ತ ಬಂದ ಕೃಷ್ಣನಿಗೆ ಲಾಕ್‍ಡೌನ್ ಆದಾಗಿನಿಂದ ಯಾವುದೇ ಕೂಲಿ ದುಡ್ಡು ಸಿಕ್ಕಿಲ್ಲ. ಬಿಹಾರದಿಂದ ಬಂದ ಪಂಪಿ ಕುಮಾರಿ ಮತ್ತು ಆಕೆಯ ಗಂಡ ಇಬ್ಬರೂ ಹರಿಯಾಣದ ಗುರುಗ್ರಾಮದಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಗಂಡ ಕಟ್ಟಡ ಕಾರ್ಮಿಕನಾಗಿ ದುಡಿದರೆ, ಈಕೆ ಒಂದು ಮೆಡಿಕಲ್ ಸರಬರಾಜು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಗೆ ಲಿವರ್ ಸಮಸ್ಯೆಯಾಗಿ ಇತ್ತೀಚಿನ ದಿನಗಳಲ್ಲಿ ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಹಾಗೂ ಗಂಡನಿಗೆ ಲಾಕ್‍ಡೌನ್ ಆದಾಗಿನಿಂದ ದಿನಗೂಲಿ ಸಿಗುತ್ತಿಲ್ಲ. ಲಾಕ್‍ಡೌನ್ ಮುಗಿಯುವವರೆಗೆ ಅವರ ಬಳಿ ಇರುವುದು ಕೇವಲ ಇನ್ನೂರು ರೂಪಾಯಿ; ಪಂಪಿ ಕುಮಾರಿಯ ಚಿಕಿತ್ಸೆಗಾಗಿ ಈಗಾಗಲೇ 10,000 ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಸುರೇಶ್ ಯಾದವ ಕೂಡ ಝಾರ್ಖಂಡನವ, ಒರಿಸ್ಸಾದ ಸುಂದರಗಢದಲ್ಲಿ ವಾಹನ ಚಾಲಕನ ಕೆಲಸ ಮಾಡುತ್ತಿದ್ದ ಸುರೇಶ ಈಗ ಕೆಲಸವಿಲ್ಲದೇ ಅಲ್ಲಿಯೇ ಸಿಕ್ಕಿಕೊಂಡಿದ್ದಾರೆ. ಮಾರ್ಚ್ 24ರಿಂದ ಆತನ ವಾಹನ ಮನೆ ಬಿಟ್ಟು ಹೊರಗೆ ಹೋಗಿಲ್ಲ ಹಾಗೂ ಈಗ ಅವನ ಬಳಿ ಇರುವುದು ಕೇವಲ 50 ರೂಪಾಯಿ. ಅಡುಗೆ ಮಾಡಲು ಅವನ ಬಳಿ ಯಾವುದೇ ಸರಂಜಾಮುಗಳಿಲ್ಲ ಹಾಗೂ ಊಟ ವಿತರಿಸುವ ಕೇಂದ್ರಗಳಿಗೆ ಹೋಗಲು ದಾರಿಗಳೂ ಇಲ್ಲ.

ಇವುಗಳು ನನಗೆ ಟಾಲ್ಸ್ಟಾಯ್‍ನ ಕಾದಂಬರಿ ಅನ್ನಾ ಕರೆನಿನಾದ ಮೊದಲ ಸಾಲುಗಳು ನೆನಪಿಸುತ್ತಿವೆ; ‘ಎಲ್ಲಾ ಸುಖಿ ಕುಟುಂಬಗಳು ಒಂದೇ ತೆರ, ಆದರೆ ದುಃಖಿ ಕುಟುಂಬಗಳ ಸಂಕಷ್ಟಗಳು ಕುಟುಂಬದಿಂದ ಕುಟುಂಬಕ್ಕೆ ವಿಭಿನ್ನವಾಗಿರುತ್ತವೆ’.

ಲಾಕ್‍ಡೌನ್ ಮತ್ತು ಅದರ ವಿಸ್ತರಣೆಯ ವಿರುದ್ಧದ ಅಸಮಾಧಾನ ಮತ್ತು ಪ್ರತಿರೋಧದ ದೃಶ್ಯಗಳು ಇತ್ತೀಚಿಗೆ ಮುಂಬಯಿ ಮತ್ತು ಸೂರತ್‍ನಲ್ಲಿ ಕಂಡುಬಂದವು. ಸಾವಿರಾರು ಜನರು ಬೀದಿಗಿಳಿದಿದ್ದರು. ಅವರ ಬೇಡಿಕೆ ಅತ್ಯಂತ ಸರಳವಾಗಿತ್ತು; ಈ ಕಠಿಣ ಲಾಕ್‍ಡೌನ್‍ನಿಂದ ಆದ ಹಾಗೂ ನಿರಂತರವಾಗಿ ಆಗುತ್ತಿರುವ ಆಘಾತ ತಪ್ಪಿಸಿಕೊಳ್ಳುವುದು ಹಾಗೂ ಮನೆಗೆ ಹೋಗಬೇಕೆನ್ನುವುದು; ಅಂದರೆ, ಮನುಷ್ಯನ ಮೂಲಭೂತ ಅವಶ್ಯಕತೆಗಳು.

ಲಾಕ್‍ಡೌನ್ ಆದಾಗಿನಿಂದ ವಾಲಂಟಿಯರ್‌ಗಳ ಗುಂಪೊಂದು (SWAN- Stranded Workers Action Network) ದೇಶಾದ್ಯಂತ ಇರುವ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ. ಸಂಕಷ್ಟದಲ್ಲಿರುವ ಕಾರ್ಮಿಕರ ಕರೆಗಳನ್ನು ಸ್ವೀಕರಿಸಿ, ಮೂಲ ಅವಶ್ಯಕತೆಗಳ ಪೂರೈಕೆಗೆ ಹಣವನ್ನು ಟ್ರಾನ್ಸ್‍ಫರ್ ಮಾಡಲಾಗುತ್ತಿದೆ ಹಾಗೂ ಸ್ಥಳೀಯ ಸಂಘಸಂಸ್ಥೆಗಳು ಮತ್ತು ಆಡಳಿತಕ್ಕೆ ಸಂಪರ್ಕಿಸಲು ಸಹಾಯ ಮಾಡುತ್ತಿದೆ. ಮಾರ್ಚ್ 27ರಿಂದ ಎಪ್ರಿಲ್ 13ರ ತನಕ ಸುಮಾರು 10,000 ಕಾರ್ಮಿಕರಿಗೆ ಸಹಾಯ ಮಾಡಲಾಗಿದೆ. ಅದರ ವಿವರವಾದ ವರದಿಯನ್ನು ಕಳುಹಿಸಿಕೊಡಬಲ್ಲೆವು. ಈ ವರದಿ ಒಂದು ಅಧ್ಯಯನವಾಗಿರದೇ, ಸ್ವಾನ್ ಎಂಬ ಈ ವೇದಿಕೆ ಮಾಡಿದ ಸಹಾಯ ಕಾರ್ಯದ ಪರಿಣಾಮವಾಗಿದೆ. ಪರಿಹಾರ ಕಾರ್ಯ ನಡೆಯುತ್ತಲೇ ಇದೆ.

ಈ ವರದಿಯು ಕಲೆಹಾಕಿರುವ ದತ್ತಾಂಶಗಳನ್ನು ನೋಡಿದರೆ – ಸ್ವಾನ್ ಇನ್ನೂ ವಿಕಾಸಗೊಳ್ಳುತ್ತಿರುವ ಕಾರಣದಿಂದ ವರದಿಗಳ ಸ್ವರೂಪ ಒಂದೇ ತೆರನಾಗಿ ಇಲ್ಲದಿದ್ದರೂ – ಅತ್ಯಂತ ಮನಕಲುಕುವ ಚಿತ್ರಣವನ್ನು ತೆರೆದಿಡುತ್ತದೆ. ಸುಮಾರು 49% ಜನರ (2707 ಕಾರ್ಮಿಕರನ್ನು ಸಂಪರ್ಕಿಸಲಾದ ಬಳಿಕ ಬಂದ ಅಂಕಿಅಂಶ) ಬಳಿ ಕೇವಲ ಒಂದು ದಿವಸಕ್ಕಾಗಿ ಆಗುವಷ್ಟು ಆಹಾರ ಧಾನ್ಯಗಳಿದ್ದವು. 96% (9302 ಕಾರ್ಮಿಕರಲ್ಲಿ) ಜನರಿಗೆ ಸರಕಾರದಿಂದ ಆಹಾರಧಾನ್ಯಗಳು ತಲುಪಿರಲಿಲ್ಲ ಹಾಗೂ 70% (2293ರಲ್ಲಿ) ಜನರು ಯಾವುದೇ ರೀತಿಯ ತಯಾರಿಸಿದ ಆಹಾರ ಪಡೆದಿಲ್ಲ. ಹಾಗೂ 44% ಕರೆಗಳು ಊಟ ಇಲ್ಲದಕ್ಕೆ ಹಾಗೂ ಹಣ ಇಲ್ಲದ್ದಕ್ಕೆ ಬಂದ ತುರ್ತು ಕರೆಗಳಾಗಿದ್ದವು. ಹಸಿವಿನ ವೇಗವು ಪರಿಹಾರದ ವೇಗಕ್ಕಿಂತ ಹೆಚ್ಚಿರುವುದು ಅತ್ಯಂತ ದುರದೃಷ್ಟಕರವಾಗಿದೆ. ಲಾಕ್‍ಡೌನ್‍ನ ಮೂರನೆಯ ವಾರದಲ್ಲಿ ತಮ್ಮ ಬಳಿ ಕೇವಲ ಒಂದು ದಿವಸಕ್ಕಾಗುವಷ್ಟು ಆಹಾರಧಾನ್ಯಗಳಿವೆ ಎಂದು ಹೇಳಿದವರ ಸಂಖ್ಯೆ ಶೇಕಡ 36ರಿಂದ 49ಕ್ಕೆ ಏರಿಕೆ ಕಂಡಿತು. ಹಾಗೂ ಸರಕಾರದಿಂದ ಆಹಾರಧಾನ್ಯಗಳನ್ನು ಪಡೆದವರ ಸಂಖ್ಯೆ 1%ದಿಂದ 4%ರಷ್ಟು ಮಾತ್ರ ಹೆಚ್ಚಳ ಕಂಡಿದೆ.

ರಾಜ್ಯ ಸರಕಾರಗಳ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಕೇಂದ್ರವು ತೆಗೆದುಕೊಂಡ ಲಾಕ್‍ಡೌನ್‍ನ ಏಕಪಕ್ಷೀಯ ನಿರ್ಧಾರವು ಅಧಿಕಾರವರ್ಗಕ್ಕೆ ಮತ್ತು ವಲಸೆ ಕಾರ್ಮಿಕರಿಗೆ ಶಾಕ್ ನೀಡಿದಂತಾಗಿದೆ.

ರಾಜ್ಯ ಸರಕಾರಗಳ ಆಡಳಿತದ ಪ್ರತಿಕ್ರಿಯೆಗಳು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಭಿನ್ನವಾಗಿವೆ. ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿರಾಜ್‍ನ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ಆಹಾರಧಾನ್ಯಗಳ ತುರ್ತುಕರೆಗಳಿಗೆ ಮಾನವೀಯತೆಯಿಂದ ಮತ್ತು ತುರ್ತಾಗಿ ಸ್ಪಂದಿಸಿದ್ದಾರೆ. (ಕರ್ನಾಟಕದಲ್ಲಿ 33% ಕಾರ್ಮಿಕರ ಬಳಿ ಕೇವಲ ಒಂದು ದಿವಸಕ್ಕಾಗುವಷ್ಟು ಆಹಾರಧಾನ್ಯಗಳಿದ್ದವು.) ಆದರೆ, ಇತರ ರಾಜ್ಯಗಳ ಅಧಿಕಾರಸ್ಥರ ಪ್ರತಿಕ್ರಿಯೆಗಳು ಅಷ್ಟು ಸರಿಯಾಗಿದ್ದಿಲ್ಲ. ವಿಶೇಷವಾಗಿ ಮಹಾರಾಷ್ಟ್ರದ ಪ್ರತಿಕ್ರಿಯೆಯು ಕೆಟ್ಟದಾಗಿತ್ತು ಎನ್ನಬಹುದು. ಎಪ್ರಿಲ್ 20ರ ತನಕ, ಮಹಾರಾಷ್ಟ್ರದಿಂದ ನಮಗೆ ಕರೆ ಮಾಡಿದ 1366 ಕಾರ್ಮಿಕರಲ್ಲಿ 73% ಕ್ಕೂ ಹೆಚ್ಚು ಜನರ ಬಳಿ ಒಂದು ದಿನಕ್ಕೆ ಸಾಕಾಗುವಷ್ಟೂ ಆಹಾರಧಾನ್ಯವಿರಲಿಲ್ಲ.

ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಈಡಾದವರ ವಲಸೆಯನ್ನು ತಡೆಗಟ್ಟಲು ಗೃಹ ಸಚಿವಾಲಯವು ಮಾರ್ಚ್ 29ರಂದು ಒಂದು ಆದೇಶ ಹೊರಡಿಸಿತು. ಅದರಲ್ಲಿ ಕಾರ್ಮಿಕರಿಗೆ ಅವರ ಮಾಲೀಕರು ಸಂಪೂರ್ಣ ವೇತನವನ್ನು ನೀಡಬೇಕೆಂದು ಹಾಗೂ ಸಿಲುಕಿಕೊಂಡಿರುವ ಕಾರ್ಮಿಕರಿಂದ ಮನೆಯ ಮಾಲೀಕರು ಬಾಡಿಗೆ ಪಡೆಯಬಾರದು ಎಂದು ಹೇಳಲಾಗಿತ್ತು. ಆದರೆ, 90% (4503 ಜನರಲ್ಲಿ) ಕಾರ್ಮಿಕರು ಲಾಕ್‍ಡೌನ್ ಸಮಯದಲ್ಲಿ ತಮಗೆ ಯಾವುದೇ ವೇತನ ನೀಡಲಾಗಿಲ್ಲ ಎಂದು ಹೇಳಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆ (2005), ಅಂತರರಾಜ್ಯ ವಲಸೆ ಕಾರ್ಮಿಕರ ಕಾಯಿದೆ (1979) ಹಾಗೂ ಬೀದಿ ವ್ಯಾಪಾರಿಗಳ ಕಾಯಿದೆ (2014) ಈ ಕಾಯಿದೆಗಳ ಅನುಗುಣವಾಗಿ ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ದಾಖಲೆ ಇಡುವುದು ಕಾನೂನಿನ ಪ್ರಕಾರ ಕಡ್ಡಾಯ. ಅದರೊಂದಿಗೆ, ಕಾರ್ಮಿಕರಿಗೆ ಸಂಪೂರ್ಣ ಮತ್ತು ಸಮಯಬದ್ಧವಾಗಿ ವೇತನ, ಸ್ಥಳಾಂತರ ಭತ್ಯೆ ಹಾಗೂ ಮನೆಗೆ ಪ್ರಯಾಣ ಮಾಡಲು ಇರುವ ಭತ್ಯೆಯನ್ನು ನೀಡುವುದನ್ನು ಕಡ್ಡಾಯಗೊಳಿಸುವ ಇತರ ಕಾಯಿದೆಗಳೂ ಇವೆ. ಹರ್ಷ್‍ಮಂದರ್ ಮತ್ತು ಅಂಜಲಿ ಭಾರದ್ವಾಜ್ ಅವರ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆಯಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ‘ಅವರಿಗೆ ಊಟ ನೀಡುತ್ತಿದ್ದರೆ, ಆಹಾರಕ್ಕಾಗಿ ಹಣವನ್ನೇಕೆ ನೀಡಬೇಕು?’ ಎಂದು ಹೇಳಿದ್ದರು. ಆದರೆ, ನಾವು ಮಾತನಾಡಿದ ಸುಮಾರು 200 ಕಾರ್ಮಿಕರಲ್ಲಿ 78%ಕ್ಕೂ ಹೆಚ್ಚು ಜನರ ಬಳಿ ಮುನ್ನೂರು ರೂಪಾಯಿಗಳಿಗಿಂತ ಕಡಿಮೆ ಹಣ ಇದೆ ಎಂದು ಹೇಳಿದ್ದಾರೆ. ಈ ಬಾಕಿ ಉಳಿದಿರುವ 300 ರೂಪಾಯಿಯಲ್ಲಿ ಅವರು ಸಾಬೂನು, ಎಣ್ಣೆ, ನೀರು, ತರಕಾರಿ, ಔಷಧಿ ಇತ್ಯಾದಿ ಕೊಳ್ಳಬೇಕು ಹಾಗೂ ತಮ್ಮ ಫೋನ್ ರಿಚಾರ್ಜ್ ಮಾಡಬೇಕು, ಮನೆ ಬಾಡಿಗೆ ಕಟ್ಟಬೇಕು ಹಾಗೂ ಮನೆಗೆ ಹಿಂತಿರುಗಬೇಕಿದೆ. ಅದಲ್ಲದೇ, 4503 ಕಾರ್ಮಿಕರಲ್ಲಿ 90% ಜನರಿಗೆ ಲಾಕ್‍ಡೌನ್‍ನಲ್ಲಿ ಯಾವುದೇ ವೇತನವನ್ನು ಪಡೆದಿಲ್ಲ. ಸುಮಾರು 10,000 ಕಾರ್ಮಿಕರ ಮಾರ್ಮಿಕ ಹೇಳಿಕೆಗಳ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಾಧೀಶರ ಪ್ರತಿಕ್ರಿಯೆಯು ಈ ಮಾನವೀಯ ಬಿಕ್ಕಟ್ಟಿನ ಹಾಗೂ ಹಣದ ಅಗತ್ಯಗಳನ್ನು ಕಡೆಗಣಿಸುತ್ತದೆ. ಲಾಕ್‍ಡೌನ್‍ನಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರಿಗೆ ದುಡ್ಡು ಮತ್ತು ಆಹಾರ ಇವರೆಡನ್ನೂ ವೈರುಧ್ಯಗಳೆಂದು ನೋಡಬಾರದು. ಇಂತಹ ಸಮಯದಲ್ಲಿ ಉಚ್ಚ ನ್ಯಾಯಾಲಯವು ಸಂಕಷ್ಟಕ್ಕೆ ಈಡಾದವರಿಗೆ ಹೇಗೆ ಸಹಾಯ ಮಾಡಬೇಕೆನ್ನುವುದನ್ನು, ಪರಿಹಾರ ನೋಡಬೇಕೆ ಹೊರತು ಕಡೆಗಣಿಸಬಾರದು.

635 ಶೈಕ್ಷಣಿಕ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರು ತುರ್ತು ಪರಿಹಾರ ಕ್ರಮಗಳ ಸೂಚಿಯೊಂದಿಗೆ ಕೇಂದ್ರ ಸರಕಾರಕ್ಕೆ ಮಾರ್ಚ್ 24ರಂದು ಮನವಿ ಮಾಡಿಕೊಂಡಿದ್ದರು. ಅದರಲ್ಲಿ ಒಂದು ಕ್ರಮ, ತಳಮಟ್ಟದಲ್ಲಿರುವ 80% ಕುಟುಂಬಗಳಿಗೆ ಕನಿಷ್ಠ ಎರಡು ತಿಂಗಳ ಮಟ್ಟಿಗೆ ಪ್ರತಿ ತಿಂಗಳು ತಲಾ 7,000 ರೂಪಾಯಿಗಳ ತುರ್ತು ಧನ ಪರಿಹಾರವನ್ನು ನೀಡಬೇಕು ಎಂಬುದು. ಇಂತಹ ಪರಿಹಾರ ಕ್ರಮದ ಅಗತ್ಯ ಇದೆ ಎಂಬುದನ್ನು ಸರಕಾರದ್ದೇ ಅಂಕಿ ಅಂಶಗಳೇ ಧೃಢಪಡಿಸುತ್ತವೆ.

ಪಿರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ(PLFS) ಪ್ರಕಾರ, ಸುಮಾರು 82% ಕುಟುಂಬಗಳ ಒಟ್ಟು ಆದಾಯ 18,000 ರೂಪಾಯಿಗಳಿಗಿಂದ ಕಡಿಮೆ; ಅಂದರೆ 7ನೇ ವೇತನ ಆಯೋಗ ನಿರ್ಧರಿಸಿದ ಕನಿಷ್ಠ ಬದುಕಿಗೆ ಅಗತ್ಯವಿರುವ ಆದಾಯಕ್ಕಿಂತ ಕಡಿಮೆ. ಹಾಗೂ 69% ಕುಟುಂಬಗಳು ದಿನಕ್ಕೆ (ಸರಾಸರಿ) 400 ರೂಪಾಯಿಗಿಂತ ಕಡಿಮೆ ಆದಾಯವನ್ನು ಹೊಂದಿದ್ದಾರೆ. ಲಾಕ್‍ಡೌನ್ ಆದಾಗಿನಿಂದ ಮೇಲಿನ ಮನವಿಯಲ್ಲಿಯ ಪರಿಹಾರ ಕ್ರಮಗಳೂ ಸಾಲುವುದಿಲ್ಲ ಅನಿಸುತ್ತದೆ. ಬೆಂಗಳೂರಿನಲ್ಲಿರುವ ಝಾರ್ಖಂಡಿನ ವಲಸೆ ಕಾರ್ಮಿಕ ನಮಮ್ನ್ನು ಸಂಪರ್ಕಿಸಿದಾಗ ಹೇಳಿದ್ದು; ತನ್ನ ಹೆಂಡತಿ ತನ್ನ ಹಸುಗೂಸಿಗೆ ಹಾಲುಣಿಸಲೂ ಆಗುತ್ತಿಲ್ಲ. ಏಕೆಂದರೆ ಕಳೆದ ಎರಡು ದಿನಗಳಿಂದ ಆಕೆ ಏನನ್ನೂ ತಿಂದಿರಲಿಲ್ಲ!

ಈ ಲೇಖನದಲ್ಲಿ ಅವರ ಗೌಪ್ಯತೆಯನ್ನು ಕಾಪಾಡಲು ಕಾರ್ಮಿಕರ ಹೆಸರುಗಳನ್ನು ಹೆಸರುಗಳನ್ನು ಬದಲಿಸಬೇಕೆ ಎಂದು ನಾವು ಚರ್ಚಿಸಿದೆವು. ಆದರೆ ಹಾಗೆ ಮಾಡಲಿಲ್ಲ. ಮೊದಲೇ ಸಮಾಜದಲ್ಲಿ ಯಾರ ಕಣ್ಣಿಗೂ ಕಾಣದಂತೆ ಇರುವ ಈ ಅನಾಮಧೇಯ ವ್ಯಕ್ತಿಗಳನ್ನು ಇನ್ನೂ ಎಷ್ಟಂತೆ ಅನಾಮಧೇಯವಾಗಿಸುವುದು? ಈ ವಿನಾಶದ ವ್ಯಾಪ್ತಿಯನ್ನು ಸರಿಪಡಿಸಲು ಇನ್ನೂ ಸಮಯವಿದೆ, ಈ ಸಂದರ್ಭವನ್ನು ನಾವು ಒಂದು ಕಲ್ಯಾಣ ರಾಜ್ಯವಾಗಿ ಮರು ಚಿಂತನೆ ಮಾಡಲು ಬಳಸಿಕೊಳ್ಳಬಹುದು ಹಾಗೂ ಎಲ್ಲರಿಗೂ ಘನತೆಯ ಮತ್ತು ಸುರಕ್ಷತೆಯ ಜೀವನವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಮುಂದುವರೆಯಬಹುದು.

ಒಂದು ತುರ್ತು ಕ್ರಮವಾಗಿ, ಈಗಾಗಲೆ ಎಫ್‍ಸಿಐ ಗೋದಾಮುಗಳಲ್ಲಿ 7 ಕೋಟಿ 80 ಲಕ್ಷ ಟನ್ನುಗಳಷ್ಟು ಆಹಾರಧಾನ್ಯಗಳು ಇರುವುದರಿಂದ, ನಾವು ಉಚಿತ ಸಾರ್ವತ್ರಿಕ ಉಚಿತ ರೇಷನ್, ಆಹಾರ ವಿತರಿಸುವ ಕೇಂದ್ರಗಳನ್ನು ಹೆಚ್ಚಿಸುವುದು ಹಾಗೂ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಕುಟುಂಬಗಳಿಗೆ ಕನಿಷ್ಠ ತಿಂಗಳಿಗೆ 7,000 ರೂಪಾಯಿಗಳನ್ನು ನೀಡಬೇಕೆಂದು ಆಗ್ರಹಿಸುತ್ತೇವೆ. ಮಹಿಳೆಯರಿಗೆ, ಅದರಲ್ಲೂ ಗರ್ಭಿಣಿಯರಿಗೆ ಪೌಷ್ಟಿಕಾಂಶಗಳ ನೀಡಬೇಕು ಹಾಗೂ ರೇಷನ್‍ನೊಂದಿಗೆ ಸ್ಯಾನಿಟರಿ ಪ್ಯಾಡ್‍ಗಳನ್ನು ಮಹಿಳೆಯರಿಗೆ ನೀಡಬೇಕು. ಈ ಕ್ರಮಗಳನ್ನು ಕೈಗೊಳ್ಳದಿದ್ದರೆ, ನಾವು ಹಸಿವು, ಅಪೌಷ್ಟಿಕತೆ, ಅಪರಾಧ ಮತ್ತು ಸಾವುಗಳ ಹಿಂದೆಂದೂ ಕಾಣ ಬಹುಆಯಾಮದ ಬಿಕ್ಕಟ್ಟನ್ನು ಕಾಣಲಿದ್ದೇವೆ.

(ಲಾಕ್‍ಡೌನ್‍ನಲ್ಲಿ ಸಿಲುಕಿಕೊಂಡವರ ನೆರವಿಗೆ ಧಾವಿಸಿದ 70ಕ್ಕೂ ಹೆಚ್ಚು ವಾಲಂಟಿಯರ್‌ಗಳಲ್ಲಿ ರಾಜೇಂದ್ರನ್ ಸಹಾ ಒಬ್ಬರು. ಅವರುಗಳೇ ಸೇರಿ ಮಾಡಿಕೊಂಡ ಗುಂಪು ಸ್ವ್ಯಾನ್. ಆ ಕೆಲಸದ ಭಾಗವಾಗಿ ತಯಾರಿಸಿದ ಈ ವರದಿಯು ಇನ್ನೊಂದು ರೂಪದಲ್ಲಿ ಬೇರೆಡೆಯೂ ಪ್ರಕಟವಾಗಿದೆ. ರಾಜೇಂದ್ರನ್ ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾರೆ.)


ಇದನ್ನೂ ಓದಿ: ಪ್ರಪಂಚವನ್ನೇ ಕಟ್ಟಿದ ಮೂಲನಿವಾಸಿಗಳ ಬದುಕು ಬೀದಿಗೆ ಬಿದ್ದಿದ್ದೇಕೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈ ವಿಶಮ ಪರಿಸ್ಥಿತಿಯಲ್ಲಿ ಬಡವರ ಕಷ್ಟಕ್ಕೆ ನೆರವಾಗಬೇಕಿರುವುದು, ಸರ್ಕಾರಗಳ ಮೊದಲ ಕರ್ತವ್ಯ ಆಗಬೇಕು.

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...