ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ರಸಗೊಬ್ಬರ ಪಡೆಯಲು ಸರತಿ ಸಾಲಿನಲ್ಲಿ ನಿಂತ ರೈತರ ಮೇಲೆ ಪೊಲೀಸರು ಅಮಾನುಷವಾಗಿ ಲಾಠಿ ಚಾರ್ಜ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಿಗರು ವಿಡಿಯೋವನ್ನು ಹಂಚಿಕೊಂಡು ಬಿಜೆಪಿ ಸರ್ಕಾರಗಳ ವಿರುದ್ಧ ಕಿಡಿಕಾರಿದ್ದಾರೆ.
ಕೆಲದಿನಗಳಿಂದ ಮಧ್ಯಪ್ರದೇಶ ಹಲವು ನಗರಗಳಲ್ಲಿ ರಸಗೊಬ್ಬರದ ಕೊರತೆ ಕಂಡುಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರ DAP ಗೊಬ್ಬರ ಸರಬರಾಜು ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿತ್ತು. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಹ ಟ್ವೀಟ್ ಮಾಡಿ ನಾವು ಸಬ್ಸಿಡಿ ದರದಲ್ಲಿ ರೈತರಿಗೆ ರಸಗೊಬ್ಬರ ನೀಡುತ್ತಿದ್ದೇವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರದ ಬೆಲೆ ಹೆಚ್ಚಿದ್ದರೂ ಕಡಿಮೆ ಬೆಲೆ ರೈತರಿಗೆ ಒದಗಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು.
देश के किसानों के हित में DAP खाद पर सब्सिडी को 1212 रूपए से बढ़ाकर 1662 रूपए प्रति बोरी किया गया।
अंतरराष्ट्रीय मूल्यों में अत्यधिक वृद्धि होने के बावजूद भी किसानों को DAP की एक बोरी 1,200 रुपये में ही मिलेगी।
प्रधानमंत्री श्री @narendramodi जी का हार्दिक आभार। pic.twitter.com/QIZFVlgVUM
— Narendra Singh Tomar (@nstomar) October 13, 2021
ಕೃಷಿ ಸಚಿವರ ಸ್ವಂತ ಜಿಲ್ಲೆ ಮೊರೆನಾದಲ್ಲಿಯೇ ರೈತರ ಮೇಲೆ ಲಾಠಿ ಚಾರ್ಜ್ ನಡೆದಿದೆ. ಮಂಗಳವಾರ ಮಧ್ಯಾಹ್ನ ಮೊರೆನಾ ಜಿಲ್ಲೆಯ ಕೈಲಾರಸ್ ಪಟ್ಟಣದಲ್ಲಿ ಸಹಕಾರಿ ಸಂಘದ ಹೊರಗೆ ಜಮಾಯಿಸಿದ ರೈತರು ಒಬ್ಬರನ್ನೊಬ್ಬರು ತಳ್ಳುವ ರೀತಿ ರೈತರು ಸರತಿ ಸಾಲಿನಲ್ಲಿ ನಿಂತಿದ್ದರು. ಸಹಕಾರಿ ಸಂಘದ ಹೊರಗೆ ಕಾಲ್ತುಳಿತದಂತಹ ಪರಿಸ್ಥಿತಿ ಇತ್ತು. ಜನಜಂಗುಳಿಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಪೊಲೀಸರನ್ನು ಒತ್ತಾಯಿಸಿತು. ಹಾಗಾಗಿ ಪೊಲೀಸರು ಮನಬಂದತೆ ಲಾಠಿ ಬೀಸಿದ್ದಾರೆ ಎಂದು ವರದಿಗಳು ತಿಳಿಸಿವೆ.
वो बेचारे अन्नदाता खाद्य मांगने आये थे,
मप्र सरकार ने उन्हें लाठियों से नबाजा,तस्वीरें मध्यप्रदेश के मुरैना की है । pic.twitter.com/BtmZcnIAmJ
— Srinivas BV (@srinivasiyc) October 13, 2021
ಘಟನೆಯನ್ನು ಖಂಡಿಸಿರುವ ಕಿಸಾನ್ ಏಕ್ತಾ ಮೋರ್ಚಾ, “ಸಚಿವರು ಟ್ವಿಟರ್ನಲ್ಲಿ ರಸಗೊಬ್ಬರ ಚೀಲಗಳನ್ನು ವಿತರಿಸಬಹುದೆನೋ. ಏಕೆಂದರೆ ಗೊಬ್ಬರ ಪಡೆಯಲು ಸರತಿ ಸಾಲಿನಲ್ಲಿ ನಿಂತ ರೈತ ದೊಣ್ಣೆಗಳಿಂದ ಏಟು ಪಡೆಯುತ್ತಿದ್ದಾರೆ” ಎಂದು ಕಿಡಿಕಾರಿದೆ.
मंत्री जी ये बोरियां शायद ट्विटर पर ही बाटेंगे।
क्योंकि किसानों को बाजार में खाद मिलने की जगह लाठियां मिल रही है। https://t.co/XKCAKR5LXH pic.twitter.com/CTjeu1Y7Oh
— Kisan Ekta Morcha (@Kisanektamorcha) October 13, 2021
ಮಧ್ಯಪ್ರದೇಶದಲ್ಲಿ ರಸಗೊಬ್ಬರ ಕೇಳಿದ ರೈತರಿಗೆ ಲಾಠೀಚಾರ್ಜ್ ಮಾಡಲಾಗುತ್ತಿದೆ. ಬಿಜೆಪಿಯು ಸಂಪೂರ್ಣ ರೈತ ವಿರೋಧಿಯಾಗಿದೆ. ದೇಶದ ಅನ್ನದಾತ ಸ್ವತಂತ್ರ ಭಾರತದಲ್ಲಿ ಎಂದಿಗೂ ಇಂತಹ ಕ್ರೌರ್ಯವನ್ನು ಎದುರಿಸಿಲ್ಲ ಎಂದು ಹಲವು ಕಾಂಗ್ರೆಸ್ ಮುಖಂಡರು ಟ್ವೀಟ್ ಮಾಡಿದ್ದಾರೆ.
ಮಧ್ಯ ಪ್ರದೇಶದ ಮೊರೆನಾದಲ್ಲಿ ರಸಗೊಬ್ಬರ ಕೊರತೆಯನ್ನು ಎದುರಿಸುತ್ತಿರುವ ಹಸಿದ ಮತ್ತು ಬಾಯಾರಿದ ರೈತರನ್ನು ಪೊಲೀಸರು ಕ್ರೂರವಾಗಿ ಥಳಿಸಿದರು. ಬೆಳಿಗ್ಗೆಯಿಂದ ಹಸಿದ ಮತ್ತು ಬಾಯಾರಿದ ರೈತರ ಮೇಲೆ ಪೊಲೀಸರು ಲಾಠಿ ಮಳೆಗೈದರು ಎಂದು ರಾಜ ಎಂಬ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರೈತರ ಹತ್ಯಾಕಾಂಡಕ್ಕೆ ಪ್ರತಿರೋಧ: ಅ.18ಕ್ಕೆ ರೈಲ್ ರೋಕೋ, 26ಕ್ಕೆ ಲಕ್ನೋದಲ್ಲಿ ಮಹಾಪಂಚಾಯತ್