ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳನ್ನು ವಿಎಚ್ಪಿ, ಬಜರಂಗ ದಳದ ಮುಖಂಡರು ಪ್ರಚೋದಿಸುತ್ತಿದ್ದಾರೆಂಬ ವಿಡಿಯೊ ಲಭ್ಯವಾಗಿದೆ.
ಸಂಘ ಪರಿವಾರದ ಮುಖಂಡರು ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತ, “ನೀವು ಕೇಸರಿ ಶಾಲು ಧರಿಸಿ ಹೋಗಿರಿ. ನಿಮ್ಮೊಂದಿಗೆ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಇರುತ್ತದೆ” ಎಂದು ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು.
“ಹೋಮ್ ಮಿನಿಸ್ಟರ್ ಹಾಗೂ ಮುಖ್ಯಮಂತ್ರಿಯವರೇ ಆದೇಶ ಹೊರಡಿಸಿದ ಮೇಲೆ ಅವರು ಮಾಡುವುದು ತಪ್ಪು. ಕಾನೂನು ಪ್ರಕಾರ ಆಗಲಿ. ಕಾನೂನು ಧಿಕ್ಕರಿಸಿ ಮಾಡೋಕಾಗಲ್ಲ. ಇದು ಪಾಕಿಸ್ತಾನ ಅಲ್ಲ. ನೀವು ಎಲ್ಲಿಯವರೆಗೆ ಗಟ್ಟಿಯಾಗಿ ನಿಲ್ಲುತ್ತೀರೋ ಅಲ್ಲಿಯವರೆಗೆ ನಾವು ಗಟ್ಟಿಯಾಗಿ ನಿಲ್ಲುತ್ತೇವೆ. ವಿಶ್ವ ಹಿಂದೂ ಪರಿಷತ್ ಭಜರಂಗದ ಸಂಪೂರ್ಣ ಬೆಂಬಲ ಇದೆ” ಎಂದು ಮುಖಂಡರೊಬ್ಬರು ಹೇಳುತ್ತಾರೆ.
“ಕಾಲೇಜು ಒಳಗೆ ಬರುತ್ತೇವೆ. ಹೊರಗಡೆಯಿಂದ ನೀವು ಸಪೋರ್ಟ್ ಮಾಡಬೇಕು” ಎಂದು ವಿದ್ಯಾರ್ಥಿಯೊಬ್ಬರು ಮನವಿ ಮಾಡಿದಾಗ, “ನಾವು ಹೊರಗಡೆಯಿಂದ ಮಾಡುತ್ತೇವೆ” ಎನ್ನುತ್ತಾರೆ.
ಎಬಿವಿಪಿ ಲೀಡರ್ ಯಾರೆಂದು ಚರ್ಚೆಯಾಗುತ್ತದೆ. “ಎಬಿವಿಪಿ ಕಾರ್ಯದರ್ಶಿ ಬಂದಿಲ್ಲ” ಎಂದು ಒಬ್ಬರು ಹೇಳುತ್ತಾರೆ. “ತೊಂದರೆ ಇಲ್ಲ, ತೊಂದರೆ ಇಲ್ಲ” ಎಂಬ ಪ್ರತಿಕ್ರಿಯೆ ಬರುತ್ತದೆ. ಮಾತು ಮುಂದುವರಿಸುವ ಮುಖಂಡ, “ನೀವು ಹುಡುಗಿಯರನ್ನೂ ಕರೆದುಕೊಳ್ಳಿ. ಅವರು ಕೂಡ ಕೇಸರಿ ಶಾಲು ಹಾಕಲಿ” ಎಂದು ಸೂಚಿಸುತ್ತಾರೆ.
ಕೇಸರಿ ಶಾಲು ಧರಿಸಿ ಕಾಲೇಜಿಗೆ ಹೋಗುವಂತೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳನ್ನು ಹಿಂದುತ್ವ ಮುಖಂಡರು ಪ್ರಚೋದಿಸುತ್ತಿರುವ ವಿಡಿಯೊ ಲಭ್ಯವಾಗಿದೆ.#NaanuGauri #HijabRow #RSSTerrorists #KarnatakaHijabRow #saffronTerror pic.twitter.com/zL1eiNMQxr
— Naanu Gauri (@naanugauri) February 9, 2022
ಇದನ್ನೂ ಓದಿರಿ: ಗುಜರಾತ್: ಮದುವೆಯಲ್ಲಿ ಸಾಂಪ್ರದಾಯಿಕ ಪೇಟ ಧರಿಸಿದ ದಲಿತರ ಮೇಲೆ ಸವರ್ಣೀಯರಿಂದ ಹಲ್ಲೆ