Homeಕರ್ನಾಟಕಮಡಿಕೇರಿ: ಕೇಸರಿ ಶಾಲು ಧರಿಸಲು ಬಜರಂಗದಳ ನಾಯಕರಿಂದ ಪ್ರಚೋದನೆ; ವಿಡಿಯೊ ವೈರಲ್‌‌

ಮಡಿಕೇರಿ: ಕೇಸರಿ ಶಾಲು ಧರಿಸಲು ಬಜರಂಗದಳ ನಾಯಕರಿಂದ ಪ್ರಚೋದನೆ; ವಿಡಿಯೊ ವೈರಲ್‌‌

- Advertisement -
- Advertisement -

ಮಡಿಕೇರಿಯ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳನ್ನು ವಿಎಚ್‌ಪಿ, ಬಜರಂಗ ದಳದ ಮುಖಂಡರು ಪ್ರಚೋದಿಸುತ್ತಿದ್ದಾರೆಂಬ ವಿಡಿಯೊ ಲಭ್ಯವಾಗಿದೆ.

ಸಂಘ ಪರಿವಾರದ ಮುಖಂಡರು ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತ, “ನೀವು ಕೇಸರಿ ಶಾಲು ಧರಿಸಿ ಹೋಗಿರಿ. ನಿಮ್ಮೊಂದಿಗೆ ವಿಶ್ವ ಹಿಂದೂ ಪರಿಷತ್‌, ಬಜರಂಗ ದಳ ಇರುತ್ತದೆ” ಎಂದು ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

“ಹೋಮ್‌ ಮಿನಿಸ್ಟರ್‌ ಹಾಗೂ ಮುಖ್ಯಮಂತ್ರಿಯವರೇ ಆದೇಶ ಹೊರಡಿಸಿದ ಮೇಲೆ ಅವರು ಮಾಡುವುದು ತಪ್ಪು. ಕಾನೂನು ಪ್ರಕಾರ ಆಗಲಿ. ಕಾನೂನು ಧಿಕ್ಕರಿಸಿ ಮಾಡೋಕಾಗಲ್ಲ. ಇದು ಪಾಕಿಸ್ತಾನ ಅಲ್ಲ. ನೀವು ಎಲ್ಲಿಯವರೆಗೆ ಗಟ್ಟಿಯಾಗಿ ನಿಲ್ಲುತ್ತೀರೋ ಅಲ್ಲಿಯವರೆಗೆ ನಾವು ಗಟ್ಟಿಯಾಗಿ ನಿಲ್ಲುತ್ತೇವೆ. ವಿಶ್ವ ಹಿಂದೂ ಪರಿಷತ್ ಭಜರಂಗದ ಸಂಪೂರ್ಣ ಬೆಂಬಲ ಇದೆ” ಎಂದು ಮುಖಂಡರೊಬ್ಬರು ಹೇಳುತ್ತಾರೆ.

“ಕಾಲೇಜು ಒಳಗೆ ಬರುತ್ತೇವೆ. ಹೊರಗಡೆಯಿಂದ ನೀವು ಸಪೋರ್ಟ್ ಮಾಡಬೇಕು” ಎಂದು ವಿದ್ಯಾರ್ಥಿಯೊಬ್ಬರು ಮನವಿ ಮಾಡಿದಾಗ, “ನಾವು ಹೊರಗಡೆಯಿಂದ ಮಾಡುತ್ತೇವೆ” ಎನ್ನುತ್ತಾರೆ.

ಎಬಿವಿಪಿ ಲೀಡರ್‌ ಯಾರೆಂದು ಚರ್ಚೆಯಾಗುತ್ತದೆ. “ಎಬಿವಿಪಿ ಕಾರ್ಯದರ್ಶಿ ಬಂದಿಲ್ಲ” ಎಂದು ಒಬ್ಬರು ಹೇಳುತ್ತಾರೆ. “ತೊಂದರೆ ಇಲ್ಲ, ತೊಂದರೆ ಇಲ್ಲ” ಎಂಬ ಪ್ರತಿಕ್ರಿಯೆ ಬರುತ್ತದೆ. ಮಾತು ಮುಂದುವರಿಸುವ ಮುಖಂಡ, “ನೀವು ಹುಡುಗಿಯರನ್ನೂ ಕರೆದುಕೊಳ್ಳಿ. ಅವರು ಕೂಡ ಕೇಸರಿ ಶಾಲು ಹಾಕಲಿ” ಎಂದು ಸೂಚಿಸುತ್ತಾರೆ.


ಇದನ್ನೂ ಓದಿರಿ: ಗುಜರಾತ್: ಮದುವೆಯಲ್ಲಿ ಸಾಂಪ್ರದಾಯಿಕ ಪೇಟ ಧರಿಸಿದ ದಲಿತರ ಮೇಲೆ ಸವರ್ಣೀಯರಿಂದ ಹಲ್ಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...