- Advertisement -
- Advertisement -
ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಿ ರಾಜ್ಯಪಾಲರ ಪಾತ್ರದ ಕುರಿತು ಸಂಪೂರ್ಣ ಸ್ಪಷ್ಟತೆ ಕಂಡುಕೊಳ್ಳಲು ಕಾಂಗ್ರೆಸ್ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದೆ.
ಕಾಂಗ್ರೆಸ್ ಮುಖಂಡ ಸಾಕೇತ್ ಗೋಖಲೆ ರಾಜ್ಯಪಾಲರ ಭವನಕ್ಕೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದು ನವೆಂಬರ್ 22 ಮತ್ತು 23ರಂದು ರಾಜ್ಯಪಾಲರ ಅಧಿಕೃತ ಕಚೇರಿ ನಿವಾಸಕ್ಕೆ ಚಲನವಲನದ ಕುರಿತು ಮಾಹಿತಿ ಬಯಸಿದ್ದಾರೆ.
ರಾಜ್ಯಪಾಲರ ಭೇಟಿ ಮಾಡಲು ಪೂರ್ವಾನುಮತಿ ಪಡೆದವರು ಹೆಸರು, ಭೇಟಿ ಮಾಡಿದವರ ಸಹಿಯುಳ್ಳ ಲಾಗ್ ಬುಕ್, ರಾಜ್ಯಪಾಲರ ಅಧಿಕೃತ ಕಚೇರಿ ನಿವಾಸಕ್ಕೆ ಬಂದು ಹೋಗಿರುವ ವಾಹನಗಳು ಮತ್ತು ಅವುಗಳ ಸಂಖ್ಯೆ ನೀಡುವಂತೆ ಕೇಳಲಾಗಿದೆ.
ಅಷ್ಟೇ ಅಲ್ಲ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಯನ್ನು ವಾಪಸ್ ಪಡೆಯಲು ನಡೆಸಿರುವ ಪತ್ರ ವ್ಯವಹಾರಗಳು ಮತ್ತು ಕರೆ ವಿವರಗಳನ್ನು ಮಾಹಿತಿ ಹಕ್ಕಿನಡಿ ಕೇಳಿದೆ.