ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಹಲವು ಕಡೆ ಗಣೇಶ ಮೂರ್ತಿಗಳನ್ನು ಕೆಡವಿ, ಫ್ಲೆಕ್ಸ್ ಬೋರ್ಡ್ಗಳನ್ನು ಹರಿದು ಹಾಕಿದ್ದಾರೆ. ಈ ಕುರಿತು ತನಿಖೆ ಮಾಡಿರುವ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಕುಂಬಾರಪೇಟೆ ವ್ಯಾಪ್ತಿಯಲ್ಲಿ ನಾಲ್ಕು ಗಣಪತಿ ಮೂರ್ತಿಗಳು, ಬಾಬುರಾವ್ ಬೀದಿ, ಕುಪ್ಪಶೆಟ್ಟಿ ಬಾವಿ ಬಳಿ, ಧರ್ಮರಾಯಸ್ವಾಮಿ ದೇವಸ್ಥಾನ, ಗಾಂಧಿ ಸರ್ಕಲ್ ಬಳಿ ಗಣಪತಿ ಮೂರ್ತಿಗಳನ್ನು ವಿರೂಪಗೊಳಿಸಲಾಗಿದೆ.
ಪಟ್ಟಣದ ಮಲ್ಲೇಶ್ (25), ಕಾಂತರಾಜು (30), ಗಿರೀಶ್ (24), ಪುನೀತ್ (25), ಚಂದು (21) ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಐವರು ಪಾನಮತ್ತರಾಗಿ ಈ ಕೃತ್ಯ ಎಸಗುತ್ತಿದ್ದರು ಎನ್ನಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಐವರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
Five people arrested by #Kolar police for desecrating #Ganesh idols @Malur. Mallesh,Kantharaju, Girish, Puneeth and Chandu were drunk when they carried out the act inform police. All five arrested & sent to judicial custody. Based on cctv footage they were arrested #Karnataka pic.twitter.com/mSe6IRM7Fh
— Imran Khan (@KeypadGuerilla) September 4, 2022