Homeಕರ್ನಾಟಕಮಂಗಳೂರು ಮಹಾನಗರ ಪಾಲಿಕೆ ಗದ್ದುಗೆಗಾಗಿ ಸಮಬಲದ ಗುದ್ದಾಟ!

ಮಂಗಳೂರು ಮಹಾನಗರ ಪಾಲಿಕೆ ಗದ್ದುಗೆಗಾಗಿ ಸಮಬಲದ ಗುದ್ದಾಟ!

- Advertisement -
- Advertisement -

| ಶುದ್ದೋದನ |

ಕರಾವಳಿಯ ಅವಳಿ ಜಿಲ್ಲೆಯಲ್ಲೀಗ ಪ್ರಳಯಾಂತಕ ಮಳೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯದೇ ಸುದ್ದಿ-ಸದ್ದು. ನವೆಂಬರ್ 12ರಂದು ನಡೆಯಲಿರುವ ಕಾರ್ಪೊರೇಷನ್ ಕದನಾಂಗಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಾಮುಖಿ ನಿಂತು ಸೆಡ್ಡುಹೊಡೆಯುತ್ತಿವೆ ಅಸೆಂಬ್ಲಿ ಮತ್ತು ಪಾರ್ಲಿಮೆಂಟ್ ಚುನಾವಣೆಯಲ್ಲಿ ಧರ್ಮ ಸೂಕ್ಷ್ಮದ ದಾಳಗಳುರುಳಿಸಿ ದಿಗ್ವಿಜಯ ಸಾಧಿಸಿರುವ ಕೇಸರಿ ಕೋಟೆಯಲ್ಲೀಗ ಮೊದಲಿನ ಖದರು ಉಳಿದಿಲ್ಲ.

ಜನರ ಹತಾಶೆ, ಮಂಗಳೂರು ಮಹಾನಗರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಬಲದ ಸೆಣಸಾಟ ನಡೆಯುವುದು ಖಾತ್ರಿಪಡಿಸಿದೆ! ಇತ್ತೀಚಿನ ವರ್ಷದಲ್ಲಿ ಕಾರ್ಪೊರೇಷನ್ ಏರಿಯಾದಲ್ಲಿ ಕೇಸರಿ ಪರಿವಾರದ ಕರಾಮತ್ತು ಜೋರಾಗಿದ್ದರೂ ಕಾಂಗ್ರೆಸ್ ತೀರ ದುರ್ಬಲವಾಗೇನೂ ಇಲ್ಲ. ವಾರ್ಡ್‍ಗಳ ಮೀಸಲಾತಿ ಬದಲಾಗಿರೋದ್ರಿಂದ ಹೊಸ ಮುಖಗಳು ಸ್ಪರ್ಧೆಗೆ ಇಳಿಯಬೇಕಾಗಿದೆ. ಇದು ಕಾಂಗ್ರೆಸ್‍ಗೆ ಆಡಳಿತ ವಿರೋಧಿ ಅಲೆ ದೊಡ್ಡಮಟ್ಟದಲ್ಲಿ ಬಾಧಿಸದಂತೆ ತಡೆಯಲಿದೆ. ಕಳೆದೈದು ವರ್ಷದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅಭಿವೃದ್ಧಿ ಕೆಲಸಗಳು ಸಾಕಷ್ಟು ಆಗಿವೆ. ಹಾಗಾಗಿ ಮತದಾರರಿಗೆ ಕಾಂಗ್ರೆಸ್ ಮೇಲೆ ಅಂಥ ತಿರಸ್ಕಾರವೇನಿದ್ದಂತೆ ಕಾಣಿಸುತ್ತಿಲ್ಲ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎರಡೂ ವಿಧಾನಸಭಾ ಕ್ಷೇತ್ರಗಳು ಬಿಜೆಪಿ ತೆಕ್ಕೆಯಲ್ಲಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 38 ವಾರ್ಡುಗಳಿದ್ದರೆ, ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 22 ವಾರ್ಡುಗಳು ಬರುತ್ತವೆ. ಇಲ್ಲೆಲ್ಲ ಬಿಜೆಪಿ ಪರಿವಾರದ ಬೇರುಗಳು ತೀರಾ ಆಳಕ್ಕೆ ಇಳಿದಿರುವುದರಿಂದ ಪಾಲಿಕೆ ಪಾರುಪತ್ಯ ವಶವಾಗಲಿದೆಯೆಂಬ ಲೆಕ್ಕಾಚಾರ ಸ್ಥಳೀಯ ಸಂಸದನೂ ರಾಜ್ಯ ಬಿಜೆಪಿ ಅಧ್ಯಕ್ಷನೂ ಆಗಿರುವ ನಳಿನ್‍ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ ಮತ್ತು ಶಾಸಕ ಭರತ್ ಶೆಟ್ಟಿ ಬಳಗ ಹಾಕಿಕುಂತಿದೆ!

ಆದರೆ ರಾಜಕೀಯ ಸಮೀಕರಣದ ವಾಸ್ತವ ಅಷ್ಟು ಸರಳವಾಗಿಲ್ಲ. ಎತ್ತಿಂದೆತ್ತ ಕಳೆದು ಕೂಡಿಸಿ ತಾಳೆ ನೋಡಿದರೂ ಮೂರ್ನಾಲ್ಕು ಸೀಟುಗಳ ಅಂತರದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಗದ್ದುಗೆಯೇರಲಿದೆ ಎಂಬ ಅಂದಾಜು ಸಿಗುತ್ತದೆ. 1984ರಲ್ಲಿ ಮನಪಾ ಅಸ್ತಿತ್ವಕ್ಕೆ ಬಂದನಂತರ ಒಂದೇ ಒಂದು ಬಾರಿ (2007ರಲ್ಲಿ) ಮಾತ್ರ ಬಿಜೆಪಿ ಅಧಿಕಾರ ಪಡೆದಿತ್ತು. ಪಾಲಿಕೆ ಸರಹದ್ದಿನ ಶಾಸಕ-ಸಂಸದ ಸ್ಥಾನ ಕೈಲಿದ್ದರೂ ಬಿಜೆಪಿಗೆ ಪಾಲಿಕೆ ಆಡಳಿತ ದಕ್ಕಿಸಿಕೊಳ್ಳಲಾಗಿರಲಿಲ್ಲ. ಆಗೆಲ್ಲ ಕಾಂಗ್ರೆಸ್‍ನಲ್ಲಿ ಮಾಜಿ ಕೇಂದ್ರಮಂತ್ರಿ ಜನಾರ್ದನ ಪೂಜಾರಿ, ಮಾಜಿ ಸಿಎಂ ವೀರಪ್ಪ ಮೊಯ್ಲಿ ಮತ್ತು ಎಐಸಿಸಿ ಮಾಜಿ ಜನರಲ್ ಸೆಕ್ರೆಟರಿ ಆಸ್ಕರ್ ಫರ್ನಾಂಡಿಸ್‍ರ ಮೇಲಾಟದ ಯಜಮಾನಿಕೆ ನಡೆಯುತಿತ್ತು. ತಂತಮ್ಮ ಹಿಂಬಾಲಕರಿಗೆ ಸೀಟು ಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದ್ದರು. ಆದರೆ ಪೂಜಾರಿ ಮಾತೇ ಮೇಯರ್ ಆಯ್ಕೆಯಲ್ಲಿ ಅಂತಿಮ ಆಗುತ್ತಿತ್ತು.

ಮನಪಾದ ಮೂರು ದಶಕದ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿ ಕಾಂಗ್ರೆಸ್‍ನ ತ್ರಿಮೂರ್ತಿ ಹಳಬರು ಮೂಲೆಗುಂಪಾಗಿದ್ದಾರೆ. ಅವರ ಜಾಗದಲ್ಲಿ ಹೊಸ ಮೂರು ಮುಖಂಡರು ಬಂದು ಕೂತಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನೂ ಎಮ್ಮೆಲ್ಸಿಯೂ ಆಗಿರುವ ಹರೀಶ್‍ಕುಮಾರ್, ಮಾಜಿ ಮಂತ್ರಿ ಯು.ಟಿ.ಖಾದರ್ ಮತ್ತು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಕಾಂಗ್ರೆಸ್ ಕಾರ್ಪೊರೇಟರ್ ಟಿಕೆಟ್ ಹಂಚಿಕೆ ಹಾಗೂ ರಣತಂತ್ರ ಹೆಣೆಯುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮಾಜಿ ಮಂತ್ರಿ ರಮಾನಾಥ ರೈ ಮಾತು ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ತಂತಮ್ಮ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಮಾಜಿ ಶಾಸಕರಾದ ಜಿ.ಅರ್.ಲೋಬೋ ಮತ್ತು ಮೊಹಿಯುದ್ದೀನ್ ಬಾವಾ ಆಟ ಆಡುತ್ತಿದ್ದಾರೆ. ಮೊದಲು ಕಾಂಗ್ರೆಸ್‍ನಲ್ಲಿದ್ದ ಗುಂಪುಗಾರಿಕೆ ಈಗ ಬಿಜೆಪಿ ಪಾಳೆಯದಲ್ಲೂ ಶುರುವಾಗಿದೆ.

ಗುರು ಕಲ್ಲಡ್ಕ ಭಟ್ಟರಿಗೇ ಸೆಡ್ಡು ಹೊಡೆದು ರಾಜ್ಯ ಬಿಜೆಪಿ ಅಧ್ಯಕ್ಷತೆ ಪಡೆದಿರುವ ನಳಿನ್‍ಕುಮಾರ್ ಆ ಪಕ್ಷದ ಪಾಲಿಕೆ ಅಭ್ಯರ್ಥಿ ಆಯ್ಕೆಯಲ್ಲಿ ಪ್ರಶ್ನಾತೀತ ನಾಯಕಾಗ್ರೇಸ! ಈ ನಳಿನ್ ಗ್ಯಾಂಗಲ್ಲಿ ಶಾಸಕ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಮತ್ತು ವಿನಾಯಕ ಬಾಳಿಗಾ ಎಂಬ ಆರ್‍ಟಿಐ ಕಾರ್ಯಕರ್ತನ ಮರ್ಡರ್ ಕೇಸ್ ಆಪಾದಿತ ನರೇಶ್ ಶೆಣೈ ಇದ್ದಾರೆ. ಸಮಾನಾಂತರವಾಗಿ ಕಲ್ಲಡ್ಕ ಭಟ್ಟರ ಬೆಟಾಲಿಯನ್ ನಿಂತಿದೆ. ರಾಜ್ಯ ಬಿಜೆಪಿಯ ಸೂತ್ರಧಾರ ಬಿ.ಎಲ್.ಸಂತೋಷ್ ಮತ್ತು ಕಲ್ಲಡ್ಕ ಭಟ್ಟರ ಸಂಬಂಧ ಅಷ್ಟಕಷ್ಟೇ. ಸಂತೋಷನ ಕೀಲುಗೊಂಬೆ ನಳಿನ್. ಹೀಗಾಗಿ ನಳಿನ್ ಹೇಳಿದವರಿಗೇ ಪಾಲಿಕೆಗೆ ಸ್ಪರ್ಧಿಸುವ ಬಿಜೆಪಿ ಟಿಕೆಟ್ ಗ್ಯಾರಂಟಿ. ಭಟ್ಟರೇನೂ ಖಾಲಿ ಕೈಲಿ ಕೂರುವುದಿಲ್ಲ. ಕೆಲವು ಸೀಟುಗಳಾದರೂ ತಮ್ಮ ಶಿಷ್ಯಸಂಕುಲಕ್ಕೆ ಕೊಡಿಸುತ್ತಾರೆ. ಈ ಶೀತಲ ಸಮರ ಬಿಜೆಪಿಗೆ ದೊಡ್ಡ ಹಾನಿ ಮಾಡಲಿದೆ.

ಚುನಾವಣೆ ಗೆಲ್ಲಲು ಜನಹಿತ ಕಾರ್ಯಕ್ರಮಗಳ್ಯಾವುದೂ ಇಲ್ಲದ ಕೇಸರಿ ಪಡೆ ಬಗ್ಗೆ ಮಂಗಳೂರಲ್ಲಿ ಒಂದು ಜೋಕ್ ಚಾಲ್ತಿಯಲ್ಲಿದೆ. ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಬಿಜೆಪಿಯನ್ನ ಬಚಾವ್ ಮಾಡಿದ “ಭಾವಿ-ಭಾರತರತ್ನ” ಸಾವರ್ಕರ್ ಪ್ರತಿಮೆ ಮಂಗಳೂರಿನ ನೆಹರು ಮೈದಾನದಲ್ಲಿ ಸ್ಥಾಪಿಸುತ್ತೇವೆಂದು ಹೇಳಿ ಮತದಾರರ ಮಂಗ ಮಾಡಲು ನಳಿನ್ ತಂಡ ತಯಾರಿ ನಡೆಸಿದೆಯಂತೆ! ಮತ್ತೊಂದೆಡೆ ಮಂಗಳೂರಿನ ಓಎನ್‍ಜಿಸಿ-ಸೆಜ್‍ನ ಉತ್ತರ ಭಾರತೀಯ ಕಾರ್ಮಿಕ ನಡುವೆ ಬಾಂಗ್ಲಾ ಉಗ್ರರು ನುಸುಳಿದ್ದಾರೆಂಬ ಧರ್ಮಾಂಧ ಎನ್‍ಆರ್‍ಸಿ ಕಾರ್ಪೊರೇಷನ್ ಇಲೆಕ್ಷನ್ ಈಶ್ಯೂ ಮಾಡಲು ಬಿಜೆಪಿ ಚಿಂತಕರ ಚಾವಡಿ ಯೋಜಿಸುತ್ತಿದೆ. ಒಟ್ಟಿನಲ್ಲಿ ಮಂಗಳೂರು ಪಾಲಿಕೆ ಪೀಠಕ್ಕಾಗಿ ಬಿಜೆಪಿ “ಧರ್ಮ” ತಡಕಾಡುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...