ಮಣಿಪುರದ ಕುಕಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರದ ವಿಡಿಯೋವೊಂದು ಗುರುವಾರ ವೈರಲ್ ಆಗಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅಲ್ಲಿಯವರೆಗೂ ಮೌನವಾಗಿದ್ದ ಪ್ರಧಾನಿ ಮೋದಿ ಮಣಿಪುರದ ಬಗ್ಗೆ ತುಟಿ ಬಿಚ್ಚಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಆ ಹೀನ ಪ್ರಕರಣದ ಆರೋಪಿ ಮುಸ್ಲಿಂ ಎಂದು ಸುದ್ದಿ ಸಂಸ್ಥೆ ANI ಸುಳ್ಳು ಸುದ್ದಿ ಪ್ರಕಟಿಸಿ ನಂತರ ಡಿಲೀಟ್ ಮಾಡಿದ ಘಟನೆ ನಡೆದಿದ್ದು, ಅದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ.
ಗುರುವಾರ ರಾತ್ರಿ 9.27ರ ಸಮಯದಲ್ಲಿ, “ಮಣಿಪುರ ವೈರಲ್ ವಿಡಿಯೋ ಪ್ರಕರಣ| ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಂಗ್ಲೀಪಾಕ್ (PREPAK) ಪರ ಕಾರ್ಯಕರ್ತನಾದ ಇಂಫಾಲ್ ಪೂರ್ವದ ಎಂ.ಡಿ ಇಬುಂಗೋ ಅಲಿಯಾಸ್ ಅಬ್ದುಲ್ ಹಿಲಿಮ್ (38) ನನ್ನು ಇಂಫಾಲ್ ಪೂರ್ವ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ತೌಬಲ್ ಜಿಲ್ಲೆಯ ನಾಂಗ್ಪೋಕ್ ಸೆಕ್ಮೈ ಪಿಎಸ್ ಅಡಿಯಲ್ಲಿ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರದ ಘೋರ ಅಪರಾಧದ ಒಟ್ಟು ಮೂವರು ಪ್ರಮುಖ ಆರೋಪಿಗಳನ್ನು ಇಂದು ಬಂಧಿಸಲಾಗಿದೆ: ಮಣಿಪುರ ಪೊಲೀಸರು” ಎಂದು ANI ಟ್ವೀಟ್ ಮಾಡಿತ್ತು.
Hello @smitaprakash, @ANI first tweeted this and later delete the tweet. Was it because this was an unrelated case?
According to @manipur_police, Four main accused were arrested by Thoubal District police. And the other person arrested by Imphal East district police was for… pic.twitter.com/0SeH6DXHbR— Mohammed Zubair (@zoo_bear) July 20, 2023
ಇದನ್ನೇ ಆಧರಿಸಿ NDTV ಸೇರಿದಂತೆ ಹಲವು ಮುಖ್ಯವಾಹಿನಿ ಮಾಧ್ಯಮಗಳು ಟ್ವೀಟ್ ಮತ್ತು ಸುದ್ದಿ ವರದಿ ಮಾಡಿದ್ದವು. ಅದರ ಬೆನ್ನಲೇ ಬಲಪಂಥೀಯರು ಮತ್ತು ಬಿಜೆಪಿ ಐಟಿ ಸೆಲ್ ಸಾಮೂಹಿಕ ಅತ್ಯಾಚಾರದ ಆರೋಪಿ ಮುಸ್ಲಿಂ ಎಂದು ಷರಾ ಬರೆದಿದ್ದರು. ತಾಜಿಂದರ್ ಪಾಲ್ ಬಗ್ಗಾ ಮತ್ತು ರಿಷಿ ಬಾಗೀ ಎಂಬ ಬಿಜೆಪಿ ಮುಖಂಡರು ಅಬ್ದುಲ್ ಖಾನ್ ಆರೋಪಿ ಎಂದು ಟ್ವೀಟ್ ಮಾಡಿದರು. ಆ ಮೂಲಕ ಸುಳ್ಳು ಸುದ್ದಿಯನ್ನು ವೈರಲ್ ಮಾಡಿದರು. ಆದರೆ ಸ್ವಲ್ಪ ಹೊತ್ತಿನಲ್ಲೇ ANI ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿತು.
ವಾಸ್ತವವೇನು?
ಮಣಿಪುರ ಪೊಲೀಸರ ಪ್ರಕಾರ ಬೆತ್ತಲೆ ಮೆರವಣಿಗೆ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತೌಬಲ್ ಜಿಲ್ಲೆಯ 4 ಆರೋಪಿಗಳನ್ನು ಬಂಧಿಸಲಾಗಿದೆ. ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ PREPAK ಪರ ಕಾರ್ಯಕರ್ತನಾದ ಅಬ್ದುಲ್ ಹಿಲಿಮ್ ಎಂಬುವವರನ್ನು ಬಂಧಿಸಿದ್ದಾರೆ. ಆದರೆ ಸಂಬಂಧವಿಲ್ಲದ ಆ ಪ್ರಕರಣದ ಆರೋಪಿಯನ್ನು ಬೆತ್ತಲೆ ಮೆರವಣಿಗೆ ವಿಡಿಯೋಗೆ ತಳುಕು ಹಾಕಿ ANI ಟ್ವೀಟ್ ಮಾಡಿತ್ತು. ನಂತರ ತಪ್ಪಿನ ಅರಿವಾಗಿ ಡಿಲೀಟ್ ಮಾಡಿದೆ. ಆದರೆ ಅಷ್ಟರಲ್ಲಿ ಹಲವು ಸುದ್ದಿಸಂಸ್ಥೆಗಳು ಅದನ್ನೇ ನಿಜವೆಂದು ನಂಬಿ ಪ್ರಸಾರ ಮಾಡಿವೆ. ಬಿಜೆಪಿ ಐಡಿ ಸೆಲ್ ಕಾರ್ಯಕರ್ತರು ಮುಸ್ಲಿಂ ದ್ವೇಷ ಕಾರಿಕೊಂಡಿದ್ದಾರೆ.
ಕ್ಷಮೆಯಾಚಿಸಿದ ANI
ಸ್ಟೋರಿ ಹಿಂತೆಗೆದುಕೊಳ್ಳುವಿಕೆ ಮತ್ತು ಕ್ಷಮೆಯಾಚನೆಯ ಕುರಿತು ಟಿಪ್ಪಣಿ: ನಿನ್ನೆ ಸಂಜೆ, ಮಣಿಪುರ ಪೊಲೀಸರು ಕೈಗೊಂಡ ಬಂಧನಗಳ ಬಗ್ಗೆ ANI ಯಿಂದ ಟ್ವೀಟ್ ಅನ್ನು ಪೋಸ್ಟ್ ಮಾಡಲಾಗಿದೆ. ಇದು ವೈರಲ್ ವೀಡಿಯೊದಲ್ಲಿ ತೋರಿಸಿರುವ ಘಟನೆಗಳಿಗೆ ಸಂಬಂಧಿಸಿದಂತೆ ಮಣಿಪುರ ಪೊಲೀಸರು ಮಾಡಿದ ಇತರ ಬಂಧನಗಳಿಗೆ ಸಂಬಂಧಿಸಿದಂತೆ ಹಿಂದಿನ ಟ್ವೀಟ್ನೊಂದಿಗೆ ಗೊಂದಲಕ್ಕೊಳಗಾದ ಕಾರಣ ಪೋಸ್ಟ್ ಮಾಡಿದ ಟ್ವೀಟ್ಗಳ ತಪ್ಪಾದ ಓದುವಿಕೆಯನ್ನು ಆಧರಿಸಿದೆ. ಸ್ವಲ್ಪ ಸಮಯದ ನಂತರ, ಕೆಲವೇ ನಿಮಿಷಗಳಲ್ಲಿ, ದೋಷವನ್ನು ಅರಿತುಕೊಂಡ ತಕ್ಷಣ ಟ್ವೀಟ್ ಅನ್ನು ತಕ್ಷಣವೇ ಅಳಿಸಲಾಗಿದೆ ಮತ್ತು ಸರಿಪಡಿಸಿದ ಆವೃತ್ತಿಯನ್ನು ತಕ್ಷಣವೇ ಪ್ರಕಟಿಸಲಾಗಿದೆ. ಈ ತಪ್ಪಿಗೆ ವಿಷಾದಿಸುತ್ತೇವೆ ಎಂದು ANI ಶುಕ್ರವಾರ ಬೆಳಿಗ್ಗೆ 10.29 ರ ಸಮಯದಲ್ಲಿ ಮತ್ತೊಂದು ಟ್ವೀಟ್ ಮಾಡಿದೆ.
ಈ ಕುರಿತು ಸರಣಿ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿರುವ ಆಲ್ಟ್ನ್ಯೂಸ್ ಸಹಸಂಸ್ಥಾಪಕ ಮೊಹಮ್ಮದ್ ಜುಬೇರ್, “ದಕ್ಷಿಣ ಏಷ್ಯಾದ ಅತಿ ದೊಡ್ಡ ಮಾಧ್ಯಮ ಸಂಸ್ಥೆ ಎಂದು ಹೇಳಿಕೊಳ್ಳುವ ANI ತಪ್ಪಾಗಿ ಟ್ವೀಟ್ ಮಾಡಿದೆ. ಬಿಜೆಪಿ ಐಟಿ ಸೆಲ್ ಟ್ರೋಲ್ಗಳು ಈ ಪ್ರಕರಣಕ್ಕೆ ಮುಸ್ಲಿಂ ಕೋಮುವಾದಿ ಆಯಾಮ ನೀಡಿದವು. NDTV, PuthiyathalaimuraiTV ಥರಹದ ದೊಡ್ಡ ಫಾಲೋವಿಂಗ್ ಇರುವ ಮಾಧ್ಯಮಗಳು ಅದನ್ನೆ ಪ್ರಸಾರ ಮಾಡಿದವು. ಕೊನೆಯದಾಗಿ ANI 12 ಗಂಟೆಗಳ ನಂತರ ಸ್ಪಷ್ಟೀಕರಣ ನೀಡಿದೆ. ಅವರು ತಮ್ಮ ತಪ್ಪಿನ ಅರಿವಾದ ತಕ್ಷಣವೇ ಸ್ಪಷ್ಟೀಕರಣ ನೀಡಿದ್ದರೆ ಸುಳ್ಳು ಸುದ್ದಿ ಹರಡುವುದನ್ನು ತಪ್ಪಿಸಬಹುದಿತ್ತು” ಎಂದಿದ್ದಾರೆ.
Any shame @Reuters for your partner ANI or now habituated to global shaming https://t.co/E2OSu8hknF
— Swati Chaturvedi (@bainjal) July 21, 2023
ಪತ್ರಕರ್ತೆ ಸ್ವಾತಿ ಚತುರ್ವೇದಿ ಪ್ರತಿಕ್ರಿಯಿಸಿ, “ANI ಪದೇ ಪದೇ ಫೇಕ್ ನ್ಯೂಸ್ ಹರಡುವ ಮೂಲಕ ಜಾಗತಿಕ ಮಟ್ಟದಲ್ಲಿ ಕುಖ್ಯಾತಿಗೊಳಗಾಗುತ್ತಿದೆ. Reuters ನಂತರ ಪ್ರತಿಷ್ಠತಿ ಸುದ್ದಿ ಸಂಸ್ಥೆಗಳು ANI ಜೊತೆ ಸಹಭಾಗಿಗಳಾಗುವುದಕ್ಕೆ ನಾಚಿಕೆಯಾಗುವುದಿಲ್ಲವೇ?” ಎಂದುಪ್ರಶ್ನಿಸಿದ್ದಾರೆ.
ಇದನ್ನೂ ಓದಿ; ಮಣಿಪುರದ ಬೆಂಕಿ ಆರುವುದೆಂದು?