Homeಮುಖಪುಟಮನುಜಮತ ಸಿನೆಮಾ ಹಬ್ಬ : ಹೊಸ ಕಾಲದ ಸಮುದಾಯ ಕಟ್ಟುವ ನಡೆ

ಮನುಜಮತ ಸಿನೆಮಾ ಹಬ್ಬ : ಹೊಸ ಕಾಲದ ಸಮುದಾಯ ಕಟ್ಟುವ ನಡೆ

- Advertisement -
- Advertisement -

| ಕೆ.ಫಣಿರಾಜ್ |

ಈ ಮನುಜಮತ ಸಿನೆಮಾ ಹಬ್ಬದ ಶುರುವಾಗಿದ್ದು, ನಡೆದುಕೊಂಡು ಬರುತ್ತಿರುವ ರೀತಿಯೇ ಸ್ವಾರಸ್ಯಕರವಾದ ಮತ್ತು ಖುಷಿ ಕೊಡುವಂಥದ್ದಾಗಿದೆ. ಮುಂದಿನ ಸಿನೆಮಾ ಹಬ್ಬ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿದ್ದು ಅದಕ್ಕೆ ಪೂರ್ವಭಾವಿಯಾಗಿ ನಾನುಗೌರಿ.ಕಾಂ ಓದುಗರಿಗಾಗಿ ಈ ಲೇಖನ. ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಮತ್ತು ಕನ್ನಡದ ಪ್ರಮುಖ ಚಿಂತಕರು ಹಾಗೂ ಈ ಬಳಗದ ಯುವ ಸದಸ್ಯರಾದ ಫಣಿರಾಜ್ ಅವರು ನಾನುಗೌರಿ.ಕಾಂ ಗಾಗಿಯೇ ಬರೆದ ಲೇಖನವಿದು.

 ವ್ಯಾಟ್ಸಪ್ ಎಂಬ ಆಧುನಿಕ ಸಂತೆಕಟ್ಟೆ: ಆಧುನಿಕ ಸಾಮಾಜಿಕ ಜಾಲತಾಣಗಳ ಪ್ರಭಾವ-ಪರಿಣಾಮಗಳ ಬಗ್ಗೆ ಒಳಿತು-ಕೆಡಕುಗಳ ಅತಿಯಲ್ಲಿ ನಿಂತು ಎಷ್ಟೂ ಚರ್ಚಿಸಬಹುದು. ದ್ವೇಷ ಹರಡುವುದಕ್ಕೆ, ಹಿಂಸೆ ಪ್ರಚೋದಿಸುವುದಕ್ಕೆ ಬಳಕೆಯಾದಷ್ಟೇ, ಮುಖಹೀನವಾದ ಸಂವಾದ ಸಖ್ಯಕ್ಕೂ ಸಾಮಾಜಿಕ ಜಾಲತಾಣಗಳು ಒದಗಿ ಬರುತ್ತಿವೆ. ತಕ್ಷಣದ ಭಾವಕ್ಕೆ ಕಾವು ಹೊತ್ತಿಸಿ ಟಪ್ಪನೇ ಕಾಮೆಂಟು ಒತ್ತುವುದಕ್ಕೆ ಪ್ರಚೋಧನೆ ನೀಡುವ ವ್ಯಾಟ್ಸಪ್, ನಿರಾಕಾರಿ ಇ-ಲೋಕದ ಸಂತೆಕಟ್ಟೆಯೇ ಸರಿ: ಹಲವು ಬಗೆಯ ಜನರ ಹಾಸ್ಯ-ಹರಟೆ-ವಾಗ್ವಾದ-ಜಿಜ್ಞಾಸೆಗಳಿಗೆ ಸುಮ್ಮನ್ನೇ ಕಿವಿಗೊಡುತ್ತ ಕೂತರೂ, ಒಂದು ಲೋಕಾನುಭವದ ಗಾಳಿ ನಮ್ಮ ಬುದ್ಧಿಭಾವಗಳನ್ನು ಹಾಯ್ದು ಹೋಗುತ್ತದೆ.

‘ಸಮನ್ವಯ-ಮನುಜಮತ’ ಎನ್ನುವ ಕನ್ನಡದ ವ್ಯಾಟ್ಸಪ್‌ ಬಳಗವನ್ನು ಹರ್ಷಕುಮಾರ್ ಕುಗ್ವೆ, ಪ್ರಶಾಂತ್ ಹುಲಕೋಡು ಹಾಗು ಕಿರಣ್‌ ಮಾರಶೆಟ್ಟಿಹಳ್ಳಿಎಂಬ ಶಿಮೊಗ್ಗಿ ಕಡೆ ಯುವಕರು ಜೂನ್ 2015ರಲ್ಲಿ ಕಟ್ಟಿದರು. ಕರ್ನಾಟಕದ ಬರಹಗಾರರು, ಕಲಾವಿದರು, ಪತ್ರಕರ್ತರು, ಚಳುವಳಿಗಾರರನ್ನು ಒಂದು ವೇದಿಕೆಯಲ್ಲಿ ಒಗ್ಗೂಡಿಸಿ ಸಮಕಾಲೀನ ಸಮಾಜದ ಬಗ್ಗೆ ಗಂಭೀರವಾದ ಚರ್ಚೆಗಳನ್ನು ನಡೆಸುವುದು ಈ ಯುವಕರ ಉದ್ದೇಶವಾಗಿತ್ತು. ಹಾಸ್ಯ-ಹರಟೆಯ ಜೊತೆಗೆ ತೀವ್ರ ಭಿನ್ನಮತಗಳ ಕಾವಿನ ಪ್ರಸ್ತುತ ವಿದ್ಯಮಾನಗಳ ಚರ್ಚೆಗೆ ಈ ಗುಂಪು ಖ್ಯಾತಿಪಡೆಯಿತು. ಹೀಗೆ ವಿಶಿಷ್ಠವಾಗಿದ್ದ ಈ ಗುಂಪು 2016ರಲ್ಲಿ ಒಂದು ಹೊಸ ಕ್ರಿಯಾಶೀಲ ತಿರುವನ್ನು ಕಂಡುಕೊಂಡಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ,ಕಾಡು ಒತ್ತುವರಿ ಮಾಡಿಕೊಂಡು ದಬ್ಬಾಳಿಕೆ ನಡೆಸುತ್ತಿದ್ದ ಅಧಿಕಾರಸ್ಥನೊಬ್ಬ ಸುಂದರ ಮಲೆಕುಡಿಯ ಎಂಬ ಆದಿವಾಸಿಯ ಕೈ ಕತ್ತರಿಸಿದ ಘಟನೆ ನಡೆಯಿತು; ಸಹಜವಾಗೇ ಈ ವಿದ್ಯಮಾನದ ಬಗ್ಗೆ ಸಮನ್ವಯ ಗುಂಪಿನಲ್ಲಿ ಕಾಳಜಿಯುತ ಚರ್ಚೆ ಶುರುವಾಗಿ, ನಮ್ಮ ಕಾಳಜಿಯು ಬರೀ ಮುಖಹೀನ ಚರ್ಚೆಯನ್ನು ಮೀರಿ ಸಕ್ರಿಯ ಸಾಮಾಜಿಕ ಕಾರ್ಯಾಚರಣೆಯಾಗಿ ವಿಸ್ತರಿಸಬೇಕು ಎನ್ನುವ ಅಭಿಪ್ರಾಯಗಳು ಬರತೊಡಗಿದವು. ಘಟನೆ ನಡೆದ ಎರಡೇ ದಿನಗಳಲ್ಲಿ ಗುಂಪಿನ ಸದಸ್ಯರು, ಸುಂದರ ಮಲೆಕುಡಿಯ ಅವರ ಬೆಂಬಲಾರ್ಥ ಹಣ ಒಗ್ಗೂಡಿಸಿ ಅವರ ಆಸ್ಪತ್ರೆ ಖರ್ಚಿಗೆ ನೆರವಾಗತೊಡಗಿದರು; ಬೆಂಗಳೂರು ಸೇರಿದಂತೆ, ಸದಸ್ಯರು ಸಂಘಟನಾತ್ಮಕ ಬಲ ಹೊಂದಿದ ಕಡೆಯಲ್ಲೆಲ್ಲಾ, ಸಾರ್ವಜನಿಕ ಪ್ರತಿಭಟನೆ ನಡೆಸಿ, ಘಟನೆಯನ್ನು ಸಾರ್ವಜನಿಕ ಪ್ರಜ್ಞೆಗೆ ತರುವಲ್ಲಿ ಯಶಸ್ವಿಯಾದರು. ಇಂತು, ಲೋಕಾಭಿರಾಮದ ವೇದಿಕೆಯಾಗಿದ್ದ ಪುಟ್ಟ ಸಾಮಾಜಿಕ ಜಾಲತಾಣ ವಲಯವು, ವಾಸ್ತವಿಕ ಲೋಕಕ್ಕೆ ಉತ್ತರದಾಯಿಯಾಗುವ ಖದರನ್ನು ಗಳಿಸಿತು.

ಸಿನೆಮ ಹಬ್ಬ ಪ್ರಯೋಗ: 2016ರ ಅಗಸ್ಟ್ ತಿಂಗಳ ಮಧ್ಯದ ಒಂದು ದಿನ ಸಂಜೆ 4 ಗಂಟೆಗೆ, ಸಮನ್ವಯ ಗುಂಪಿನಲ್ಲಿ ಸದಸ್ಯರೊಬ್ಬರು ತಾವು ಮೆಚ್ಚಿದ ಸಿನೆಮಾವೊಂದರ ಕುರಿತು ವಿಚಾರ ಹಂಚಿಕೊಂಡರು; ಆ ಸಿನೆಮಾ ಸುತ್ತ ಶುರುವಾದ ಮಾತುಕತೆಯ ಹುಮ್ಮಸ್ಸಿನಲ್ಲಿ ಸದಸ್ಯರು ತಮ್ಮ ಇಷ್ಟದ ಸಿನೆಮಾಗಳ ಬಗ್ಗೆ ಮಾತಾಡತೊಡಗಿದರು; ಒಂದು ನಿಮಿಷವೂ ಬಿಡುವಿಲ್ಲದಂತೆ ಸಿನೆಮಾ ಸರಪಳಿಯು ಮರುದಿನ ಸಂಜೆ 5 ಗಂಟೆಯವರೆಗೆ ಮುಂದುವರೆಯಿತು! ಗುಂಪಿನಲ್ಲಿ, ಜಗತ್ತಿನ ಅತ್ತ್ಯುತ್ತಮ ಸಿನೆಮಾಗಳನ್ನು ನೋಡಿ ಚರ್ಚಿಸಬಲ್ಲ ಇಷ್ಟು ಜನ ಇರುವಾಗ, ಈ ಅನುಭವ ಹಾಗು ಉತ್ಸಾಹವವನ್ನು ಯಾಕೆ ಗುಂಪಿನಾಚೆಗೂ ವಿಸ್ತರಿಸಬಾರದು ಎಂಬ ಚರ್ಚೆ ಶುರುವಾಯಿತು; ಆ ಚರ್ಚೆಯ ಫಲವಾಗಿ, ಗುಂಪಿನ ವತಿಯಿಂದ ‘ಸಮನ್ವಯ-ಮನುಜಮತ ಸಿನೆಮಾ ಹಬ್ಬ’ ಒಂದನ್ನು ನಡೆಸಲು ನಿರ್ಧರಿಸಲಾಯಿತು. ಆ ಹೊತ್ತಿಗೆ ಅದು ಗುಂಪಿನ ಸದಸ್ಯರು ಮುಖತಃ ಒಟ್ಟು ಸೇರಿ, ಗುಂಪಾಗಿ ಸಿನೆಮಾ ನೋಡಿ, ಅನುಭವ ಹಂಚಿಕೊಳ್ಳುವ ಮೂಲಕ ವಾಸ್ತವಿಕ ಲೋಕದಸಮುದಾಯವಾಗಿ ಹರಳುಗಟ್ಟಬೇಕು ಎಂಬ ಸೀಮಿತ ಉದ್ದೇಶವನ್ನು ಮಾತ್ರ ಇಟ್ಟುಕೊಳ್ಳಲಾಗಿತ್ತು.

ಹಬ್ಬದ ಪ್ರಸ್ತಾಪಕ್ಕೆ ಉತ್ಸಾಹದ ಸಹಮತ ದೊರತದ್ದೇ, ಗುಂಪಿನಲ್ಲಿದ್ದ ಶಿವಮೊಗ್ಗ ಗೆಳೆಯರು ಸಿನೆಮಾ ಹಬ್ಬ ಆಯೋಜನೆಯ ಜವಾಬ್ದಾರಿ ವಹಿಸಿಕೊಂಡು ಬಿಟ್ಟರು. 2016ರ ಅಕ್ಟೋಬರ್ ತಿಂಗಳ ಎರಡನೇ ಶನಿವಾರ-ಭಾನುವಾರ ಕುಪ್ಪ್ಳಿಯಲ್ಲಿ ನಡೆದ ಮೊದಲ ಹಬ್ಬದಲ್ಲಿ ಸಮನ್ವಯ ಗುಂಪಿನ 30 ಸದಸ್ಯರೂ, 35 ಜನ ಗುಂಪಿನಾಚೆಗಿನ ಶಿವಮೊಗ್ಗ ಜಿಲ್ಲೆಯ ನಾಗರಿಕರು (ಪ್ರದರ್ಶನ ಸಭಾಂಗಣದ ಗರಿಷ್ಠ ಮಿತಿ 60 ಆಗಿದ್ದರೂ) ನೋಂದಾಯಿಸಿಕೊಂಡರು. ಎರಡು ದಿನ ಆರು ಆಯ್ದ ಸಿನೆಮಾಗಳ ಪ್ರದರ್ಶನ ಹಾಗು ಚರ್ಚೆಯ ಜೊತೆ, ಕುಪ್ಪ್ಳಿಯ ಪ್ರಕೃತಿ ತಾಣಗಳ ಚಾರಣದ ಹಿಗ್ಗೂ ಹೆಣೆದುಕೊಂಡು ಬಿಟ್ಟಿತು. ಬೇರೆ ಬೇರೆ ಬದುಕಿನ ಹಿನ್ನೆಲೆ, ವಿಚಾರ, ವಯೋಮಾನಗಳ ಜನ ಒಟ್ಟಿಗೆಸಿನೆಮಾ ನೋಡಿ, ಪ್ರತಿ ಸಿನೆಮಾದ ನಂತರ ಮುಕ್ಕಾಲು ಗಂಟೆಯಷ್ಟು ಕಾಲ ತಮ್ಮ ಅಭಿಪ್ರಾಯ ಹಂಚಿಕೊಳ್ಳುವಂತೆ ಏರ್ಪಾಡಾಗಿದ್ದ ಕಾರ್ಯಕ್ರಮ ಯೋಜನೆ, ಭಾಗವಹಿಸಿದವರಿಗೆ ಎಷ್ಟು ಮೆಚ್ಚಿಗೆಯಾಯ್ತು ಎಂದರೆ, ಮತ್ತೊಂದು ಹಬ್ಬ ಏರ್ಪಡಿಸಿ ಎಂಬ ಸಹೃದಯ ಒತ್ತಾಯವ್ಯಕ್ತವಾಯಿತು.

ಇದಕ್ಕೆ ಸ್ಪಂದಿಸಿದ ಹಾಸನದ ಗೆಳೆಯರು ಎರಡನೇ ಹಬ್ಬವನ್ನು 2017ರ ಫೆಬ್ರವರಿಯಲ್ಲಿ ಹಾಸನದಲ್ಲಿ ಆಯೋಜಿಸಿದರು; ಕರ್ನಾಟಕದ ವಿವಿಧ ಪ್ರದೇಶದಿಂದ ಬಂದವರು ಹಾಗು ಸ್ಥಳೀಯವಾಗಿ ಭಾಗವಹಿಸಿದವರ ಒಟ್ಟು ಸಂಖ್ಯೆ ನೂರು ಮೀರದಿದ್ದರೂ, ಈ ಬಗೆಯ ಸ್ಥಳೀಯ ಸಿನೆಮಾ ಹಬ್ಬದ ಅನುಭವವು ಭಾಗವಹಿಸಿದವರಿಗೆ ತುಂಬಾ ಹಿಡಿಸಿಬಿಟ್ಟಿತು; ಸ್ಪೂರ್ತಿ ಇಮ್ಮಡಿಯಾಯಿತು; 2017ರ ಕೊನೆಯಹೊತ್ತಿಗೆ ಉಡುಪಿ ಹಾಗು ಮಂಗಳೂರಿನಲ್ಲಿ ಮತ್ತೆರಡು ’ಮನುಜಮತ ಸಿನೆಮ ಹಬ್ಬ’ಗಳು ಯಶಸ್ವಿಯಾಗಿ ನಡೆದವು. ’ಸಮನ್ವಯಮನುಜಮತ’ ಗುಂಪಿನ ಸದಸ್ಯರಾಚೆಗಿನ ನಾಗರಿಕರ ಸಖ್ಯ ಹಾಗು ಒಲವನ್ನು ಸಿನೆಮಾ ಹಬ್ಬವು ದಕ್ಕಿಸಿಕೊಂಡು, ಇನ್ನೂರು-ಇನ್ನೂರೈವತ್ತು ಜನರ ಪುಟ್ಟ ಸಮುದಾಯ ಕಟ್ಟಿಕೊಂಡು ಬಿಟ್ಟಿತು.

ಸಿನೆಮಾ ವೀಕ್ಷಣೆಯ ಒಲವಿನ ಕಾರಣವಾಗಿ, ವಾಸ್ತವಿಕ ಸನ್ನಿವೇಶದಲ್ಲಿ ಒಟ್ಟಾಗಿ ಭಾಗವಹಿಸಿ, ಜಾತಿ-ಮತ-ಲಿಂಗಗಳಾಚೆ, ಸಮಾಜದ ಒಳಿತಿನ ಪರ ಕಾಳಜಿಯುಳ್ಳ ನಾಗರಿಕರು ಒಂದು ಸಮುದಾಯವಾಗಿ ಹರಳಿಗಟ್ಟಿಕೊಳ್ಳುತ್ತಿರುವ ಬಗೆಯನ್ನು ಕಂಡಾಗ, ಸಿನೆಮಾ ಹಬ್ಬದ ಸರಣಿಯನ್ನು ಮುಂದುವರೆಸುವುದೆಂದು ನಿರ್ಧರಿಸಲಾಯಿತು. ಅಂತೆಯೇ, ಕುಪ್ಪ್ಳಿಯಲ್ಲಿ-3, ಮಂಗಳೂರಲ್ಲಿ-3, ಹಾಸನದಲ್ಲಿ-3 ಹಾಗು ಉಡುಪಿ, ಶಿವಮೊಗ್ಗ ಮತ್ತು ಮೂಡಿಗೆರೆಯಲ್ಲಿ ತಲಾ ಒಂದು- ಹೀಗೆ 12 ಸಿನೆಮಾ ಹಬ್ಬಗಳು ಆಯೋಜನೆಯಾಗಿವೆ. ಪ್ರತಿ ಹಬ್ಬದೊಂದಿಗೆ,ಬಳಗವು ವಿಸ್ತರಿಸುತ್ತಿದ್ದು, ವಿಸ್ತರಿತ ಬಳಗವನ್ನು ಒಳಗೊಂಡ, ಸಿನೆಮಾಗಳ ಬಗ್ಗೆ ಮಾತ್ರವೇ ಮಾತಾಡಿಕೊಳ್ಳಲು ಅವಕಾಶವಿರುವ ‘ಮನುಜಮತ ಸಿನಿಯಾನ’ ಎಂಬ ಸ್ವತಂತ್ರ ಗ್ರೂಪನ್ನು ಕಟ್ಟಲಾಗಿದೆ.

ಹೊಸಕಾಲದಲ್ಲಿ ಹೊಸ ಸಮುದಾಯ: ನಮ್ಮ ನಾಡಿನಲ್ಲಿ ಜಾತಿ,ಮತ, ಅಧಿಕಾರ ಬಲದಲ್ಲಿ ಸಂಖ್ಯಾ ಶಕ್ತಿ ಪ್ರದರ್ಶನದಲ್ಲಿ ವಿಕಾರ ಸಾಮಾಜಿಕ ಸಮುದಾಯಗಳನ್ನು ಕಟ್ಟಲು ಸಾಧ್ಯ; ಇಂತಹ ವಿಕಾರಗಳ ಎದಿರು ಸರ್ವರ ಒಳಿತು ಬಯಸುವ ಬದ್ಧ ವಿಚಾರಧಾರೆಯ ಚಳುವಳಿಗಾರರೂ ಅಗತ್ಯ; ಇವೆರಡರ ನಡುವೆ ವಿಶಾಲವಾಗಿರುವ ಬದುಕಿನಲ್ಲಿ, ಅಧಿಕಾರಸ್ತರ ಹಂಗು ತೊರೆಯಲಾಗದೆ, ಬದುಕು ಬಾಯಿಕಟ್ಟಿಸಿರುವ- ಆದರೆ ಅಧಿಕಾರ ವಿಕಾರಗಳನ್ನು ಸಹಿಸಿಕೊಳ್ಳದೆ ಒದ್ದಾಡುವ ಜನರೂ ಅನೇಕರಿದ್ದಾರೆ. ಅಂತಹ ಜನರ ಸಂಖ್ಯಾವಾರು ಲೆಕ್ಕಾಚಾರ ಕಷ್ಟ; ಅವರನ್ನು ಒಟ್ಟಿಗೆ ತಂದು ಸಹೃದಯಿ ಸಮುದಾಯ ನಿರ್ಮಾಣಕ್ಕೆ ನೂರಾರು ಮಾರ್ಗಗಳ ಹುಡುಕಾಟ ಅಗತ್ಯ. ಅಂತಹುಗಳಲ್ಲಿ,  ’ಮನುಜ ಮತ ಸಿನೆಮ ಹಬ್ಬ’ದ ಪ್ರಯೋಗವೂ ಒಂದಾಗಿದೆ. ಸಿನೆಮಾ ನಮ್ಮ ಸಮಾಜದಲ್ಲಿ ಮೂಡಿಸಿರುವ ಪ್ರಭಾವ ಮತ್ತು ಅದರಿಂದ ಹುಟ್ಟುವ ಬಗೆಬಗೆಯ ಭಾವಗಳ ಸುತ್ತ, 18ರಿಂದ 60 ದಾಟಿದ ಕರ್ನಾಟಕದ ಗಂಡು-ಹೆಣ್ಣೆಂಬ ಭೇದವಿಲ್ಲದೆ ನಾಗರಿಕರು ಒಟ್ಟಾಗುತ್ತಾರೆ; ಸಿನೆಮಾ ಕಲೆಯ ಮೂಲಕ ಸಾಮಾಜಿಕ ಒಳಿತು ಕೆಡುಕುಗಳ ಕುರಿತು ಚರ್ಚಿಸುತ್ತಾರೆ; ಕೊಂಚ ಕೊಂಚವೇ ಒಬ್ಬರನ್ನೊಬ್ಬರು ಅರಿಯುವ-ಸಮುದಾಯವಾಗಿ ಬೆರೆಯುವ ಅರಿವಿನ ಪುಟ್ಟ ಪಾಠಗಳನ್ನು ಸಾಧ್ಯವೆಂದು ಸಿನೆಮಾ ಹಬ್ಬ ಪ್ರಯೋಗ ಸಾಬೀತುಮಾಡುತ್ತಿದೆ.

ಇಂತಾಗಿ ’ಮನುಜಮತ ಸಿನೆಮಾ ಹಬ್ಬ’ವು ಸಾಮಾಜಿಕವಾಗಿ ಪ್ರಸ್ತುತವಾಗಿರುವ ಒಂದು ವಸ್ತುವಿನ ಸುತ್ತ ಸೃಜಿಸಿರುವ ಜಗತ್ತಿನ ಉತ್ತಮ ಸಿನೆಮಾಗಳನ್ನು ಆಯ್ದು, ಎರಡು ದಿನಗಳ ಹಬ್ಬದ ರೂಪದಲ್ಲಿಪ್ರದರ್ಶಿಸುತ್ತಿದೆ. ಅಂತಹ ಸಿನೆಮಾಗಳ ಬಗ್ಗೆ ಪ್ರದರ್ಶನದ ನಂತರ ನಡೆಯುವ ಚರ್ಚೆಯು ಒಂದು ಹಂತದಲ್ಲಿ ಸಿನೆಮಾ ಕಲೆಯ ಸೂಕ್ಷ್ಮ ಸಂವೇದನೆಗಳನ್ನೂ, ಮತ್ತೊಂದು ಹಂತದಲ್ಲಿ ಭಾಗವಹಿಸುವವರಸಾಮಾಜಿಕ ಸಂವೇದನೆಗಳನ್ನೂ ಮುಕ್ತವಾಗಿ ಸಂಕರಿಸುವ ಅವಕಾಶ ಮಾಡಿಕೊಡುತ್ತಿದೆ. ಈ ಮಾರ್ಗದಲ್ಲಿ, ಆಧುನಿಕ ಸಾಮಾಜಿಕ ಜಾಲತಾಣಗಳಲ್ಲಿ ಅರ್ಧ ಬದುಕು ಕಳೆಯುವ ನಾಗರಿಕರನ್ನು ಸಿನೆಮಾ ಕಲೆಹಾಗು ವಾಸ್ತವಿಕ ಬದುಕಿನ ಕಠಿಣ ಸವಾಲುಗಳಿಗೆ ಲಂಗರು ಹಾಕುವ ಒಂದು ಪುಟ್ಟ ಪ್ರಯೋಗವಾಗಿದೆ. ಈ ಕಾಲು ದಾರಿಯಲ್ಲಿ ನಡಿಗೆಯಲ್ಲಿ ಒಗ್ಗೂಡಲು ಬಯಸುವ ಎಲ್ಲಾ ಸಹೃದಯಿ ನಾಗರಿಕರನ್ನು’ಮನುಜಮತ ಸಿನಿಮಾ ಹಬ್ಬ’ವು ಒಳಗೊಳ್ಳಲು ಉತ್ಸುಕವಾಗಿದೆ. ಕಲೆಯ ಅರಿವು ಹಾಗು ಸಾಮಾಜಿಕ ಉತ್ತರದಾಯಿತ್ವಗಳ ಮೂಲಕ ಜಾತಿ-ಮತ-ಲಿಂಗ ಸಮಾನತೆಯನ್ನು ಗೌರವಿಸುವ ಹೊಸ ನಾಗರಿಕಸಮುದಾಯ ಹರಳುಗಟ್ಟಲಿ ಎನ್ನುವುದು ಸಿನೆಮಾ ಹಬ್ಬದ ಆಶಯ.

(ಸಿನಿಯಾನದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು 9448554534ನ್ನು ಸಂಪರ್ಕಿಸಬಹುದು.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...