Homeರಾಜಕೀಯಸತ್ತಮೇಲೂ ಬಿಡದೆ ಕಾಡುವ ಜಾತಿಕ್ರೌರ್ಯ: ಮನುಸಂಗಡ ಚಿತ್ರ ತೆರೆದಿಡುವ ಸತ್ಯ

ಸತ್ತಮೇಲೂ ಬಿಡದೆ ಕಾಡುವ ಜಾತಿಕ್ರೌರ್ಯ: ಮನುಸಂಗಡ ಚಿತ್ರ ತೆರೆದಿಡುವ ಸತ್ಯ

- Advertisement -
- Advertisement -

ಜಾತಿಗೊಂದು, ಧರ್ಮಕ್ಕೊಂದು ಸ್ಮಶಾನ ಇಲ್ಲಿವೆ. ಸತ್ತಮೇಲೆಯೂ ಸಾಮಾಜಿಕ ಅಂತರಗಳನ್ನು ಕಾಪಾಡಲಾಗುತ್ತದೆ. ಇವೆಲ್ಲದರ ನಡುವೆ ದಲಿತ (ಎಲ್ಲ ಕೆಳಜಾತಿಗಳು ಸೇರಿ) ಸಮುದಾಯದ ವ್ಯಕ್ತಿಗಳು ಸತ್ತಾಗ ಅವರ ಅಂತ್ಯಕ್ರಿಯೆ ನೆರವೇರಿಸಲು ಹಲವೆಡೆ ಅವರಿಗೆ ಸ್ಮಶಾನಗಳಿಲ್ಲ. ಅವರ ಸಮುದಾಯದವರೇ ಯಾರಾದರೂ ದೊಡ್ಡಮನಸು ಮಾಡಿ ತಮ್ಮ ಜಮೀನುಗಳಲ್ಲಿ ಅಂತ್ಯಕ್ರಿಯೆ ಮಾಡಲು ಅವಕಾಶ ನೀಡಬೇಕು. ಇದು ಹೇಗೋ ದೊರಕುತ್ತದೆ ಎಂದುಕೊಂಡರೂ ಊರೊಟ್ಟಿನ ಮಂದಿ ಬಳಸುವ ಸಾಮಾನ್ಯ ರಸ್ತೆಯಲ್ಲಿ ಅಂತ್ಯಕ್ರಿಯೆ ಯಾತ್ರೆಗೆ ಅವಕಾಶ ನಿರಾಕರಿಸುವ ರೂಢಿ ಹಲವೆಡೆ ಇಂದಿಗೂ ಇದೆ.

ತಮಿಳು ಚಲನಚಿತ್ರ “ಮನುಸಂಗಡ” ಇದೇ ವಿಷಯವನ್ನು ನಮ್ಮ ಮುಂದೆ ಇಡುತ್ತದೆ. ಇದು ಕಾಲ್ಪನಿಕ ಚಿತ್ರಕಥೆಯಲ್ಲ. ನಡೆದ, ನಡೆಯುತ್ತಿರುವ ಘಟನಾವಳಿಗಳನ್ನು ಆಧರಿಸಿದ್ದು. ಆದ್ದರಿಂದಲೇ ಇದು ಸಂಪೂರ್ಣವಾಗಿ ಸಿನೆಮ್ಯಾಟಿಕ್ ಭಾಷೆಯಲ್ಲಿ ಇಲ್ಲ. ಇದನ್ನು ಡಾಕ್ಯುಮೆಂಟರಿ ಮಾದರಿಯಲ್ಲಿಯೂ ಹೇಳಲಾಗಿದೆ. ಆದ್ದರಿಂದಲೇ ಇದರ ಕ್ಯಾಮೆರಾ ಭಾಷೆಯೂ ವಿಭಿನ್ನವಾಗಿದೆ ಮತ್ತು ಅಷ್ಟೇ ಸಶಕ್ತವಾಗಿದೆ. ದಲಿತರ ನೋವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ.

ಈ ಕಥನ ತಮಿಳುನಾಡಿನ ಹಳ್ಳಿಯೊಂದರಲ್ಲಿ ನಡೆಯುತ್ತದೆ. ಇದು ಇತರ ಯಾವುದೇ ರಾಜ್ಯದಲ್ಲಿಯೂ ನಡೆಯಬಹುದು. ಸ್ಥಳ ಇಲ್ಲಿ ನೆಪ ಅಷ್ಟೆ. ಚೆನ್ನೈ ಮಹಾನಗರದ ಕಾರ್ಖಾನೆಯೊಂದರಲ್ಲಿ ದುಡಿಯುವ ಯುವಕ ಕೊಲ್ಲಪ್ಪನ್. ಈತನ ತಂದೆ ಮರಣ ಹೊಂದಿದ ಸುದ್ದಿ ಬರುತ್ತದೆ. ಈತ ಗ್ರಾಮಕ್ಕೆ ಬರುತ್ತಾನೆ. ತಾಯಿಯ, ಸಂಬಂಧಿಕರ ದುಃಖ ಕಟ್ಟೆಯೊಡೆದಿರುತ್ತದೆ. ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆಯುವಾಗಲೇ ಊರೊಟ್ಟಿನ ರಸ್ತೆ (ಸಾಮಾನ್ಯ ರಸ್ತೆ)ಯಲ್ಲಿ ಶವ ತೆಗೆದುಕೊಂಡು ಹೋಗಲು ಮೇಲ್ಜಾತಿಯವರು ಬಿಡುವುದಿಲ್ಲ ಎಂಬ ವಿಷಯ ಚರ್ಚೆಯಾಗುತ್ತದೆ.

ಪೊಲೀಸ್ ಸ್ಟೇಷನ್, ಕಂದಾಯಾಧಿಕಾರಿ ಕಚೇರಿಗಳಿಗೆ ಅಲೆದರೂ ರಕ್ಷಣೆ ಭರವಸೆ ದೊರೆಯುವುದಿಲ್ಲ. ಹೈಕೋರ್ಟಿನಲ್ಲಿ ರಿಟ್ ಪಿಟಿಷನ್ ಹಾಕಲಾಗುತ್ತದೆ. ಆಗ ಸರ್ಕಾರಿ ವಕೀಲರು ಹೇಳುವುದು “ಗ್ರಾಮದ ಸಾಮಾನ್ಯ ರಸ್ತೆಯಲ್ಲಿ ದಲಿತ ಸಮುದಾಯದ ವ್ಯಕ್ತಿಯ ಶವ ತೆಗೆದುಕೊಂಡು ಹೋದರೆ ಕಾನೂನು ಸುವ್ಯವಸ್ಥೆ ಕೈಮೀರಿ ಹೋಗಬಹುದು” ಇದು ನ್ಯಾಯಾಧೀಶರಿಗೆ ಅಚ್ಚರಿ ಉಂಟು ಮಾಡುತ್ತದೆ. ಅರ್ಜಿದಾರ ಕೊಲ್ಲಪ್ಪನ್ ತಂದೆಯ ಅಂತ್ಯಕ್ರಿಯೆ ಯಾತ್ರೆಯನ್ನು ಸಾಮಾನ್ಯ ರಸ್ತೆಯಲ್ಲಿ ತೆಗೆದುಕೊಂಡು ಹೋಗಲು, ಅಂತ್ಯಕ್ರಿಯೆ ಯಾವುದೇ ಸಮಸ್ಯೆಗಳಿಲ್ಲದಂತೆ ನಡೆಯಲು ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಡಳಿತ, ಪೊಲೀಸರಿಗೆ ಸೂಚಿಸುತ್ತದೆ.

ಪ್ರಾಯೋಗಿಕವಾಗಿ ಹೈಕೋರ್ಟ್ ಆದೇಶ ಪ್ರಹಶನದಂತೆ ಆಗಿಬಿಡುತ್ತದೆ. ಕಂದಾಯಾಧಿಕಾರಿ, ಪೊಲೀಸ್ ಉನ್ನತಾಧಿಕಾರಿಗಳು ಮೇಲ್ಜಾತಿಯ ವಕ್ತಾರರಾಗುತ್ತಾರೆ. “ಸಾಮಾನ್ಯ ರಸ್ತೆಯಲ್ಲಿ ಶವ ತೆಗೆದುಕೊಂಡು ಹೋಗುವುದು ಬೇಡ. ಪರ್ಯಾಯ ಮಾರ್ಗದಲ್ಲಿ ತೆಗದುಕೊಂಡು ಹೋಗಿ” ಎನ್ನುತ್ತಾರೆ. ಪರ್ಯಾಯ ಮಾರ್ಗವೇ ಇಲ್ಲ. ಕಲ್ಲು-ಮುಳ್ಳು-ಪೊದೆಗಳ ಹಾದಿ ಅದು. ಒಂದುವೇಳೆ ಪರ್ಯಾಯ ಹಾದಿಯಿದ್ದರೂ ಅದನ್ನು ಬಳಸುವ ಅನಿವಾರ್ಯತೆ ಏಕೆ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಪೊಲೀಸರೇ ಬಲವಂತವಾಗಿ ಅಂತ್ಯಕ್ರಿಯೆ ನಡೆಸಲು ಮುಂದಾಗುತ್ತಾರೆ.

ಈ ಸಂದರ್ಭದಲ್ಲಿ ಕೊಲ್ಲಪ್ಪನ್ ಸಾಮಾನ್ಯ ಹಾದಿ ಶುರುವಾಗುವಲ್ಲಿ ಒಬ್ಬಂಟಿಯಾಗಿ ಬಂದು ನಿಂತು “ನಿಮ್ಮ ಮನೆಗಳ ಸತ್ತ ನಾಯಿ, ದನ ಸಾಮಾನ್ಯ ರಸ್ತೆಯಲ್ಲಿ ಹೋಗಬಹುದು, ನಮಗ್ಯಾಕೆ ಅವಕಾಶ ನಿರಾಕರಿಸುತ್ತೀರಿ. ನಿಮ್ಮಲ್ಲಿ ಸಾವು ಉಂಟಾದಾಗ ಹೂಳಲು, ಸುಡಲು ನಮ್ಮ ನೆರವು ಬೇಕು. ಆದರೆ ನಮ್ಮ ಶವವನ್ನು ಕೊಂಡೊಯ್ಯಲು ಏಕೆ ನಿರಾಕರಿಸುತ್ತೀರಿ ಎಂದು ಕೇಳುವುದು ಪರಿಣಾಮಕಾರಿ. ಮೇಲ್ಜಾತಿಗಳ ಸಮುದಾಯದಲ್ಲಿ ಸಾವು ಉಂಟಾದಾಗ ಈ ಸುದ್ದಿ ಸಾರಲು ದಲಿತರು ಬೇಕು; ಶವದ ಮೆರವಣಿಗೆಯಲ್ಲಿ ಮುಂದೆ ಸಾಗುತ್ತಾ ತಮಟೆ ಬಡಿಯಲು ಬೇಕು. ಆದರೆ ಈ ಸಮುದಾಯದಲ್ಲಿ ಸಾವು ಉಂಟಾದಾಗ ಅದೇರಸ್ತೆಯಲ್ಲಿ ಸಾಗಲು ಬಿಡುವುದಿಲ್ಲ. ಇದೊಂದು ಕ್ರೂರ ವಿಪರ್ಯಾಸ.

ಕೊಲ್ಲಪ್ಪನ್ ಗೆಳತಿ ಮಹಾನಗರದ ನಿವಾಸಿ. ಈಕೆಗೆ ಹಳ್ಳಿಯ ಬಗ್ಗೆ ರೋಮ್ಯಾಂಟಿಕ್ ಕಲ್ಪನೆಗಳಿವೆ. “ಇಲ್ಲಿ ಇಂಥ ಸಾಮಾಜಿಕ ವಾತಾವರಣ ಇರಬಹುದೆಂದು ನನಗೆ ಗೊತ್ತಿರಲಿಲ್ಲ” ಎನ್ನುತ್ತಾಳೆ. ಅದಕ್ಕೆ ಕೊಲ್ಲಪ್ಪನ್ ಕೊಡುವ ಉತ್ತರ “ಇಲ್ಲಿ ಎಲ್ಲ ಜಾತಿ-ಸಮುದಾಯಗಳವರು ಸಾಮರಸ್ಯದಿಂದ ಜೀವನ ನಡೆಸುತ್ತಾರೆ ಎಂದು ಭಾವಿಸಿದ್ದೆಯಾ” ಬಹುತೇಕ ಗ್ರಾಮಗಳಲ್ಲಿ ಎಲ್ಲ ಜಾತಿಗಳ ಸಾಮರಸ್ಯದ ಬದುಕು ಎಂಬುದೊಂದು ಇನ್ನೂ ರಮ್ಯ ಕಲ್ಪನೆ. ಸಾಮರಸ್ಯವೆಂದರೆ ಇಲ್ಲಿ ಮೇಲ್ಜಾತಿಗಳು ನಡೆಸಿಕೊಂಡು ಬಂದಂಥ ಆಚರಣೆಗಳನ್ನು ಪ್ರಶ್ನೆ ಮಾಡದಿರುವುದು, ತುಳಿಯುತ್ತಲೇ ಇರುವುದನ್ನು ಸಹಿಸಿಕೊಳ್ಳುವುದು.

ಆಸ್ಮೃಶ್ಯತೆ ಎನ್ನುವುದು ಹೇಗೆಲ್ಲ ಆಚರಣೆಯಲ್ಲಿದೆ ಎಂಬುದನ್ನು ನೇರವಾಗಿಯೇ ಹೇಳುವ “ಮನುಸಂಗಡ” ಒಂದು ಡಾಕ್ಯುಮೆಂಟರಿ ಹಂತದಲ್ಲಿಯೇ ನಿಂತು ಬಿಡಬಹುದಾಗಿತ್ತು. ಆದರೆ ನಿರ್ದೇಶಕ ಅಂಶನ್ ಕುಮಾರ್ ಪರಿಶ್ರಮ(ಚಿತ್ರಕಥೆಯೂ ಇವರದೇ) ಇದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಸಿನೆಮ್ಯಾಟಿಕ್ ಪರಿಭಾಷೆಗಳನ್ನೂ ಸಮರ್ಥವಾಗಿ ಬಳಸಿ ಕಥೆ ಹೇಳಲಾಗಿದೆ.

ಪಿ.ಎಸ್ ದರನ್ ಮಾಡಿರುವ ಸಿನೆಮಾಟೋಗ್ರಫಿ ವಿಭಿನ್ನವಾಗಿದೆ. ಈ ಥರದ ಕ್ಯಾಮೆರಾ ಪರಿಭಾಷೆ, ಭಾರತೀಯ ಸಿನೆಮಾಗಳ ಸಂದರ್ಭದಲ್ಲಿ ಬಹಳ ಅಪರೂಪ. ಸಾಕಷ್ಟು ಸನ್ನಿವೇಶಗಳಲ್ಲಿ ಹ್ಯಾಂಡಿ ಕ್ಯಾಮೆರಾ ಬಳಸಲಾಗಿದೆ. ಆದರೆ ಎಲ್ಲಿಯೂ ಕಥೆಯ ನಿರೂಪಣೆಗೆ ಕ್ಯಾಮೆರಾ ತೊಡಕಾಗದೇ ಮತ್ತಷ್ಟು ಪರಿಣಾಮಕಾರಿಯಾಗಿ ಹೇಳುವಲ್ಲಿ ಸಹಕಾರಿಯಾಗಿದೆ. ಸಿನೆಮಾಕ್ಕೆ ನೀಡಿರುವ ಹಿನ್ನೆಲೆ ಸಂಗೀತ ಕಥೆಯ ಸನ್ನಿವೇಶ, ಬೆಳವಣಿಗೆಯಲ್ಲಿ ಮಿಳಿತವಾಗಿದೆ. ಧನಶೇಖರ್ ನಿರ್ವಹಿಸಿರುವ ಸಂಕಲನ ಕಾರ್ಯ ಅತ್ಯುತ್ತಮ.

ಚಿತ್ರದಲ್ಲಿ ಇರುವ ಕಲಾವಿದರಾದ ರಾಜೀವ್ ಆನಂದ್, ಶೀಲಾ ರಾಜಕುಮಾರ್, ಮಣಿಮೇಘಲೈ, ವಿದುರ್ ರಾಜರಾಜನ್, ಆನಂದ್ ಸಂಪತ್, ಸೇತು ದರ್ವೀನ್, ಎ.ಎಸ್. ಶಶಿಕುಮಾರ್ ಅಭಿನಯ ಮನಮುಟ್ಟುತ್ತದೆ. ಗ್ರಾಮ ನಿವಾಸಿಗಳನ್ನು ಪಾತ್ರಧಾರಿಗಳಾಗಿರುವಂತೆ ಸಿನಿಮಾ ಸಂಯೋಜಿಸಿರುವುದು ವಿಶೇಷ.

ತಮಿಳುನಾಡಿನಲ್ಲಿ 2018ರ ಅಕ್ಟೋಬರ್ ನಲ್ಲಿ “ಮನುಸಂಗಡ” ತೆರೆಕಂಡಿದೆ. ಸಾಕಷ್ಟು ಅಂತರಾಷ್ಟ್ರೀಯ ಸಿನೆಮೋತ್ಸವಗಳಲ್ಲಿ ಪ್ರದರ್ಶಿತಗೊಂಡು ಪ್ರಶಸ್ತಿಗಳನ್ನೂ ಗಳಿಸಿದೆ. ಭಾರತೀಯ ಸಾಮಾಜಿಕ ಕಥನವನ್ನು ಬಹು ಪರಿಣಾಮಕಾರಿಯಾಗಿ ದೃಶ್ಯರೂಪದಲ್ಲಿ ಕಟ್ಟಿಕೊಟ್ಟಿರುವ ಈ ಸಿನೆಮಾ “ನೆಟ್ ಫ್ಲಿಕ್ಸ್” ನಲ್ಲಿಯೂ ಲಭ್ಯವಿದೆ.

ಪೊಲೀಸರು ಕೊಲ್ಲಪ್ಪನ್ ಮತ್ತವರ ಕುಟುಂಬದವರು, ಸಂಬಂಧಿಕರನ್ನು ಬಂಧಿಸಿ ಕರೆದೊಯ್ಯುತ್ತಾರೆ. ಇವರೆಲ್ಲ ಪೊಲೀಸ್ ವ್ಯಾನಿನಲ್ಲಿದ್ದೂ ಸಾಕಷ್ಟು ಪೊಲೀಸ್ ಸಿಬ್ಬಂದಿ ಇದ್ದರೂ ಹಳ್ಳಿಯ ಮೇಲ್ಞಾತಿಯವರು ದಾಳಿ ಮಾಡುತ್ತಾರೆ. ಕಲ್ಲುಗಳೂ ಸೇರಿದಂತೆ ಸಿಕ್ಕಸಿಕ್ಕ ವಸ್ತುಗಳನ್ನು ವ್ಯಾನಿನತ್ತ ತೂರುತ್ತಾರೆ, ನಿಂದಿಸುತ್ತಾರೆ. ಇವೆಲ್ಲವೂ ಇಲ್ಲಿ ಹಲವೊಮ್ಮೆ ಕಾನೂನು ಸುವ್ಯವಸ್ಥೆ ಎಂಬುದು ಅಣಕ ಎಂಬುದನ್ನು ಹೇಳುತ್ತದೆ.

ಭಾರತೀಯರಲ್ಲಿ ಅಂತ್ಯಕ್ರಿಯೆ ವಿಧಿವಿಧಾನಗಳನ್ನು ಸೂಕ್ತವಾಗಿ ನಡೆಸಬೇಕು ಎಂಬ ನಂಬಿಕೆಯಿದೆ. ಇದಕ್ಕೆ ಚ್ಯುತಿ ಬಂದರೆ ಆ ನೋವು ದೀರ್ಘಕಾಲ ಉಳಿಯುತ್ತದೆ. ಮಣ್ಣು ಮಾಡಿದ ನಂತರ ನಡೆಸುವ ವಿಧಿವಿಧಾನಗಳಿರುತ್ತವೆ. ಸತ್ತವರ ಸಮಾಧಿ ಮುಂದೆ ಅವುಗಳನ್ನು ನಡೆಸಲಾಗುತ್ತದೆ. ಆದರೆ ಸತ್ತವರ ಸಮಾಧಿ ಯಾವುದು, ಎಲ್ಲಿದೆ ಎಂದು ತಿಳಿಯದಿದ್ದರೆ ….

ಇದನ್ನೂ ಓದಿ: ಆರ್ಟಿಕಲ್ 15: ಭಾರತದ ಜಾತಿವ್ಯವಸ್ಥೆಯ ಕರಾಳ ಮುಖಗಳ ಸಮರ್ಥ ಅನಾವರಣ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...