Homeಮುಖಪುಟಒಡೆದ ಮನಸ್ಸುಗಳ, ಕಂಡ ಕನುಸಗಳ ಕಟ್ಟೆ ಕಟ್ಟುತ್ತೇವ..: ಈ ತಿಂಗಳ ಸೌಹಾರ್ದ-ಸಹಬಾಳ್ವೆ ಸಮಾವೇಶಗಳು

ಒಡೆದ ಮನಸ್ಸುಗಳ, ಕಂಡ ಕನುಸಗಳ ಕಟ್ಟೆ ಕಟ್ಟುತ್ತೇವ..: ಈ ತಿಂಗಳ ಸೌಹಾರ್ದ-ಸಹಬಾಳ್ವೆ ಸಮಾವೇಶಗಳು

ಶ್ರೀರಂಗ ಪಟ್ಟಣ, ಬೆಂಗಳೂರು, ಸಿಂಧನೂರು, ಉಡುಪಿ ಮತ್ತು ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಕೂಡಿ ಬಾಳುವ ಸಂದೇಶ ಸಾರಲಾಗುತ್ತಿದೆ.

- Advertisement -
- Advertisement -

ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಕಾಣಬೇಕೆಂದು ಕನಸು ಕಂಡವರು ಮಹಾಕವಿ ಕುವೆಂಪು. ಆದರೆ ಕಳೆದ ಆರು ತಿಂಗಳಿನಲ್ಲಿ ಧರ್ಮಾಂಧರ ದ್ವೇಷ ರಾಜಕಾರಣಕ್ಕೆ ಬೆಂದು ಹೋಯಿತು ಕರ್ನಾಟಕ. ಮತೀಯ ಗೂಂಡಾಗಿರಿಗೆ ಸಿಎಂ ಬೊಮ್ಮಾಯಿಯವರೆ ಸಮರ್ಥನೆ ಕೊಟ್ಟಿದ್ದು, ಮತಾಂತರ ನಿಷೇಧ ಮಸೂದೆ ಜಾರಿ ಚರ್ಚೆ, ಹಿಜಾಬ್-ಕೇಸರಿ ಶಾಲು ವಿವಾದ, ಹರ್ಷ ಕೊಲೆ ಪ್ರಕರಣ, ಹಲಾಲ್-ಜಟ್ಕಾ ಕಟ್ ವಿವಾದ, ಮುಸ್ಲಿಂ ವ್ಯಾಪಾರಿಗಳಿಗೆ ಬಾಯ್ಕಾಟ್… ಹೀಗೆ ಸಾಲು ಸಾಲು ವಿವಾದಗಳನ್ನು ಹುಟ್ಟಿಹಾಕಲಾಯ್ತು. ಮಾಧ್ಯಮಗಳು ಅವುಗಳಿಗೆ ಮತ್ತಷ್ಟು ತುಪ್ಪ ಸುರಿದು ಶಾಂತಿ ಕದಡಿದವು. ಎಲ್ಲಾ ಧರ್ಮಗಳ ಬಹುತೇಕರಿಗೆ ಇದು ಅತಿಯಾಯಿತು ಅನ್ನಿಸುವಷ್ಟರ ಮಟ್ಟಿಗೆ ಮಿತಿ ಮೀರಿದವು.

ಇಷ್ಟೆಲ್ಲ ನಡೆಯುತ್ತಿದ್ದರೂ ರಾಜ್ಯದ ಮುಖ್ಯಮಂತ್ರಿಗಳು ಕೈಕಟ್ಟಿ ಬಾಯ್ಮುಚ್ಚಿ ತಮ್ಮ ಖುರ್ಚಿ ಉಳಿಸಿಕೊಳ್ಳುವುದಕ್ಕೆ ಹೆಣಗಾಡುತ್ತಿದ್ದರು. ಆದರೆ ರಾಜ್ಯದ ಪ್ರಜ್ಞಾವಂತರು ಮಾತ್ರ ನಮ್ಮ ಕರ್ನಾಟಕ ಹೀಗಾಗಬಾರದು ಎಂದು ಪಣತೊಟ್ಟು ಕೆಲಸ ಮಾಡಿದರು. ಪ್ರತಿ ಸಂದರ್ಭದಲ್ಲಿಯೂ ಶೋಷಿತರ – ನೊಂದ ಜನರ ಜೊತೆಗೆ ನಿಂತರು. ತಮ್ಮ ಕೈಲಾದ ಮಟ್ಟಿಗೆ ಅದನ್ನು ತಡೆಯುವ ಪ್ರಯತ್ನ ಮಾಡಿದರು. ಮತಾಂಧರಿಗೆ ಸರ್ಕಾರದ ಸಂಪೂರ್ಣ ಕೃಪಕಟಾಕ್ಷವಿದ್ದುದರಿಂದ ಅವರ ಕೈ ಮೇಲಾಯಿತು. ಆದರೆ ಏಪ್ರಿಲ್ ತಿಂಗಳಿನಿಂದ ಅದನ್ನು ತಡೆಯುವ ಮತ್ತು ಸೌಹಾರ್ದತೆ-ಸಹಬಾಳ್ವೆ ಸಾರುವ ಕಾರ್ಯಕ್ರಮಗಳು ರಾಜ್ಯದ್ಯಂತ ಜರುಗಿದವು. ಆ ಮೂಲಕ ನಮ್ಮ ಕರ್ನಾಟಕವನ್ನು ಉಳಿಸಿಕೊಳ್ಳುತ್ತೇವೆ ಎಂಬ ಸಂದೇಶ ಸಾರಲಾಯಿತು.

ಧಾರವಾಡ ಹನುಮಂತ ದೇವಾಲಯದ ಎದರು ಕಲ್ಲಂಗಡಿ ನಡೆಸುತ್ತಿದ್ದ ನಬಿ ಸಾಬ್‌ರವರ ಮೇಲೆ ದೌರ್ಜನ್ಯವೆಸಗಿದ್ದು ಬಹಳಷ್ಟು ಜನರಿಗೆ ನೋವು ತರಿಸಿತು. ಅಲ್ಲಿಂದ ಎಲ್ಲಾ ಧರ್ಮೀಯರು ಒಟ್ಟು ಸೇರಿ ನಾವೆಲ್ಲ ಒಂದೆ ಎಂದರು. ಬಹಳಷ್ಟು ಹಿಂದೂ ಕುಟುಂಬಗಳು ರಂಜಾನ್ ಮಾಸದಲ್ಲಿ ಮುಸ್ಲಿಮರಿಗೆ ಇಫ್ತಾರ್ ಆಯೋಜಿಸಿದರು. ಅದೇ ರೀತಿಯಾಗಿ ಮುಸ್ಲಿಮರು ರಾಮನವಮಿ, ಹನುಮ ಜಯಂತಿ ಮೆರವಣಿಗೆಯಲ್ಲಿ ಬಂದವರಿಗೆ ಪಾನಕ, ಜ್ಯೂಸ್ ನೀಡಿ ಸತ್ಕರಿಸಿದರು. ಯುಗಾದಿಯಂದು ಹಿರಿಯ ಸಾಹಿತಿ ದೇವನೂರು ಮಹಾದೇವರವರ ನೇತೃತ್ವದಲ್ಲಿ ಮುಸ್ಲಿಂ ಅಂಗಡಿಗಳಲ್ಲಿ ಮಾಂಸ ಖರೀದಿಸಿ ಸೌಹಾರ್ದತೆ ಮೆರಯಲಾಯಿತು. ಈಗ ಮೇ ತಿಂಗಳಿನಲ್ಲಿ ರಾಜ್ಯಾದ್ಯಂತ ಸಾಲು ಸಾಲು ಸೌಹಾರ್ದ-ಸಹಬಾಳ್ವೆಯ ಸಮಾವೇಶಗಳನ್ನು ಆಯೋಜಿಸಲಾಗಿದೆ. ಅವುಗಳ ಮಾಹಿತಿ ಇಲ್ಲಿದೆ.

ಬಹುಸಂಸ್ಕೃತಿ ಸಾಮರಸ್ಯ ಮೇಳ: ಮೇ 04, ಶ್ರೀರಂಗಪಟ್ಟಣ

ಸ್ವಾತಂತ್ರ್ಯವೀರ ಟಿಪ್ಪು ಸುಲ್ತಾನ್ ಹುತಾತ್ಮ ದಿನದ ನೆನಪಿನಲ್ಲಿ ಮಂಡ್ಯ ಜಿಲ್ಲೆಯ ರೈತ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಕಾರ್ಮಿಕ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳು ಬಹುಸಂಸ್ಕೃತಿ ಸಾಮರಸ್ಯ ಮೇಳವನ್ನು ಮೇ 04 ರಂದು ಶ್ರೀರಂಗಪಟ್ಟಣದಲ್ಲಿ ಹಮ್ಮಿಕೊಂಡಿವೆ. ಅಂದು ಸಾಮರಸ್ಯ ನಡಿಗೆ, ರಕ್ತದಾನ ಶಿಬಿರ ಮತ್ತು ಹಿರಿಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ.

ಸೌಹಾರ್ದ ಸಂಸ್ಕೃತಿ ಸಮಾವೇಶ: ಮೇ 05, ಬೆಂಗಳೂರು

ನಾವೆಲ್ಲ ಒಂದೇ ಜಾತಿ ಕುಲ, ನಾವೆಲ್ಲವೂ ಮನುಜರು ಎಂಬ ಸಂದೇಶ ಸಾರುವುದಕ್ಕಾಗಿ ಮೇ 05 ರಂದು ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಸೌಹಾರ್ದ ಸಂಸ್ಕೃತಿ ಸಮಾವೇಶ ಜರುಗಲಿದೆ. ಹಿರಿಯ ಸಾಹಿತ, ಹೋರಾಟಗಾರ ಬರಗೂರು ರಾಮಚಂದ್ರಪ್ಪ, ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟೀಸ್ ಗೋಪಾಲಗೌಡ, ಜಸ್ಟೀಸ್ ನಾಗಮೋಹನ್ ದಾಸ್, ಎನ್ ಸಂತೋಷ್ ಹೆಗ್ಡೆಯವರು ಜೊತೆ ವಿವಿಧ ಧರ್ಮಗುರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸೌಹಾರ್ದ ಕರ್ನಾಟಕ ಎಂಬ ಸಂಯುಕ್ತಾಶ್ರಯದಲ್ಲಿ ವಿವಿಧ ಸಂಘಟನೆಗಳು ಈ ಕಾರ್ಯಕ್ರಮವನ್ನು ಸಂಘಟಿಸುತ್ತಿವೆ.

ಬಹುತ್ವ ಭಾರತೀಯರ ಸಮಾವೇಶ: ಮೇ 08, ಸಿಂಧನೂರು

ಸೌಹಾರ್ದ ಸಾಮರಸ್ಯ ಭಾರತಕ್ಕಾಗಿ ಬಹುತ್ವ ಭಾರತೀಯರ ಸಮಾವೇಶ ಮೇ 08 ರಂದು ಸಿಂಧನೂರಿನ ಎಪಿಎಂಸಿ ಮೈದಾನದಲ್ಲಿ ಜರುಗಲಿದೆ. ಬೆಳಿಗ್ಗೆ 11 ರಿಂದ ಸಂಜೆ 05ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಬಸವಪ್ರಭು, ಉಪನ್ಯಾಸಕರು, ಬೀದರ್, ಶಿವಸುಂದರ್, ಚಿಂತಕರು, ಹೋರಾಟಗಾರರಾದ ಆರ್ ಮಾನಸಯ್ಯ, ಸಾಮಾಜಿಕ ಕಾರ್ಯಕರ್ತರಾದ ಲಬೀದ್ ಶಫಿ, ಸಾವಿತ್ರಿ ಮುಜುಂದಾರ್, ನ್ಯಾಯವಾದಿಗಳು, ಕೊಪ್ಪಳ, ಬರಹಗಾರರಾದ ಕೆ.‍‍ಷರೀಪ, ದಲಿತ ನಾಯಕರಾದ ಮಾರಸಂದ್ರ ಮುನಿಯಪ್ಪ, ಬಾಲಸ್ವಾಮಿ, ಕೊಡ್ಲಿ ಮತ್ತು ಹೋರಾಟಗಾರರಾದ ಡಿ.ಎಚ್ ಪೂಜಾರ್ ಭಾಗವಹಿಸಲಿದ್ದಾರೆ. ಭಾಗವಹಿಸಲು ಇಚ್ಚಿಸುವವರು ಹೆಚ್ಚಿನ ಮಾಹಿತಿಗೆ 9880152070 ಈ ಮೊಬೈಲ್ ನಂಬರ್ ಅನ್ನು ಸಂಪರ್ಕಿಸಬಹುದು.

ರಾಜ್ಯ ಮಟ್ಟದ ಸಾಮರಸ್ಯ ನಡಿಗೆ- ಸಹಬಾಳ್ವೆ ಸಮಾವೇಶ: ಮೇ 14, ಉಡುಪಿ

ಯಾವ ಉಡುಪಿಯಲ್ಲಿ ಹಿಜಾಬ್ ಅನ್ನು ವಿವಾದದ ವಸ್ತುವನ್ನಾಗಿ ಮಾಡಲಾಯಿತೊ, ಎಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿ ಬ್ಯಾನರ್ ಹಾಕಲಾಯಿತೊ ಅದೇ ಉಡುಪಿಯಲ್ಲಿ ಮೇ 14 ರಂದು ರಾಜ್ಯದ ನೂರಾರು ಸಂಘಟನೆಗಳು ಸೇರಿ ರಾಜ್ಯ ಮಟ್ಟದ ಸಾಮರಸ್ಯ ನಡಿಗೆ- ಸಹಬಾಳ್ವೆ ಸಮಾವೇಶವನ್ನು ಹಮ್ಮಿಕೊಂಡಿವೆ.

ರಾಜ್ಯ ಹಾಗೂ ದೇಶದಲ್ಲಿ ನಿತ್ಯವೂ ಘಟಿಸುತ್ತಿರುವ ಮತೀಯವಾದಿ ಸಂಗತಿಗಳನ್ನು ಖಂಡಿಸಿ, ದೇಶದ ಜಾತ್ಯತೀತತೆ, ಸಮಗ್ರತೆ, ವೈವಿಧ್ಯತೆ ಹಾಗೂ ಕೋಮು ಸಾಮರಸ್ಯವನ್ನು ಸಾರಲು ಈ ಸಮಾವೇಶ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ನಾಡಿನ ಜನರನ್ನು ಆಹ್ವಾನಿಸುವ ಹಾಗೂ ಸಾಮರಸ್ಯ, ಸಹಬಾಳ್ವೆಯ ಸೊಬಗನ್ನು ಉದ್ದೀಪಿಸುವ ನಿಟ್ಟಿನಲ್ಲಿ ಹಲವು ಚಿಂತಕರು, ಹಿರಿಯ, ಕಿರಿಯ ಬರಹಗಾರರು, ಹೋರಾಟಗಾರರು, ರಂಗಕರ್ಮಿಗಳು, ಚಿತ್ರಕರ್ಮಿಗಳು, ಪತ್ರಕರ್ತರು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಲವಾರು ಜನರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

ಯೋಗೇಂದ್ರ ಯಾದವ್, ಸಸಿಕಾಂತ್ ಸೆಂಥಿಲ್ ಸೇರಿ ವಿವಿಧ ಧರ್ಮದ ಧರ್ಮಗುರುಗಳು, ಹೋರಾಟಗಾರರು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ಸಾಮರಸ್ಯ ಸಂದೇಶ ಅಭಿಯಾನ: ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್‌‌ಗಳು ವೈರಲ್‌

ಮೇ ಸಾಹಿತ್ಯ ಮೇಳ: ಮೇ 27 ಮತ್ತು 28, ದಾವಣಗೆರೆ

ಸಂವಿಧಾನ ನಮ್ಮೆಲ್ಲರ ಆಶಯ, ಸತ್ಯದ ಹುಡುಕಾಟಕ್ಕೆ ಸಾಕ್ಷಿಯಾಗೋಣ ಎಂಬ ಉದ್ದೇಶದಿಂದ ಮೇ 27 ಮತ್ತು 28ರಂದು ದಾವಣಗೆರೆಯಲ್ಲಿ ಲಡಾಯಿ ಪ್ರಕಾಶನದ ವತಿಯಿಂದ ಮೇ ಸಾಹಿತ್ಯ ಮೇಳ ನಡೆಯಲಿದೆ. ತಾಜ್ ಪ್ಯಾಲೇಸ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೂರಾರು ಸಾಹಿತ್ಯ ಆಸಕ್ತರು, ಹೋರಾಟಗಾರರು ಭಾಗವಹಿಸಲಿದ್ದಾರೆ.

ಇದಲ್ಲದೆ ಕೊಪ್ಪಳ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಹಲವಾರು ಸೌಹಾರ್ದ ಕಾರ್ಯಕ್ರಮಗಳು ಮೇ ತಿಂಗಳಿನಲ್ಲಿ ಜರುಗಲಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...