Homeಕರ್ನಾಟಕಮೇ ಸಾಹಿತ್ಯ ಮೇಳದ ಮಹತ್ವ: ‘ಅಭಿವೃದ್ಧಿ’ ವಿವಿಧ ನೆಲೆಗಳಿಂದ ಒಂದು ವಿಶ್ಲೇಷಣೆ

ಮೇ ಸಾಹಿತ್ಯ ಮೇಳದ ಮಹತ್ವ: ‘ಅಭಿವೃದ್ಧಿ’ ವಿವಿಧ ನೆಲೆಗಳಿಂದ ಒಂದು ವಿಶ್ಲೇಷಣೆ

- Advertisement -
- Advertisement -

| ಡಾ. ಎಚ್.ಎಸ್. ಅನುಪಮಾ |

ಒಂದು ಪ್ರದೇಶದ ಜನ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಿರತೆ ಮತ್ತು ಸುಸ್ಥಿತಿಯಲ್ಲಿ ಬದುಕಲು ಸಾಧ್ಯ ಮಾಡುವುದು ಅಭಿವೃದ್ಧಿ. ಆರೋಗ್ಯ, ಶಿಕ್ಷಣ, ಪೌಷ್ಟಿಕತೆ, ಮೂಲಸೌಕರ್ಯಗಳನ್ನು ಒದಗಿಸಿ ಜನರಿಗೆ ಘನತೆಯ ಬದುಕನ್ನು ಬದುಕಲು ಸಾಧ್ಯ ಮಾಡುವುದು ಅಭಿವೃದ್ಧಿ. ಸ್ವಾಯತ್ತ ಬದುಕಿಗೆ ಅವಕಾಶ ಕಲ್ಪಿಸಿಕೊಡುವುದು ಅಭಿವೃದ್ಧಿ. ಎಂದೇ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಒಂದು ದೇಶ, ಸಮಾಜ ತೊಡಗಿಕೊಳ್ಳುತ್ತ ಹೋದಂತೆ ಜನರ ಸುತ್ತಮುತ್ತಲ ಪರಿಸರ, ಸಾಮುದಾಯಿಕ ಅಂತರ್ ಸಂಬಂಧಗಳು, ಮನುಷ್ಯ-ಪ್ರಕೃತಿ ಸಂಬಂಧಗಳು ಸುಧಾರಿಸುತ್ತವೆ.

ಇಂಥ ಉದಾತ್ತ ವ್ಯಾಖ್ಯಾನವನ್ನಿಟ್ಟುಕೊಂಡು ಕಳೆದ ಶತಮಾನದಲ್ಲಿ ವಿಶ್ವಾದ್ಯಂತ ನಾನಾ ದೇಶಗಳಲ್ಲಿ ಅಭಿವೃದ್ಧಿ ಪ್ರಕ್ರಿಯೆ ಶುರುವಾಯಿತು. ಹಲವು ಅಳತೆಗೋಲುಗಳು ರೂಪುಗೊಂಡವು. ವಿಶ್ವಯುದ್ಧಗಳ ನಂತರ ಹಲವು ದೇಶಗಳಲ್ಲಿ ತಾಂಡವವಾಡುತ್ತಿದ್ದ ಅನಕ್ಷರತೆ, ಬಡತನ, ನಿರುದ್ಯೋಗ, ತಾಯಿ ಮರಣ, ಶಿಶು ಮರಣ, ರೋಗರುಜಿನಗಳೇ ಮುಂತಾದ ಅಂಶಗಳನ್ನು ಆಧಾರವಾಗಿಟ್ಟುಕೊಂಡು ದೇಶಗಳು ಅಭಿವೃದ್ಧಿ ಹೊಂದಿದ, ಅಭಿವೃದ್ಧಿಶೀಲ, ಹಿಂದುಳಿದ ಎಂದು ಗೆರೆಯೆಳೆದು ಗುರುತುಗೊಂಡವು. ಅಭಿವೃದ್ಧಿ ಹೊಂದುತ್ತಿರುವ ಮತ್ತು ಹಿಂದುಳಿದ ದೇಶಗಳಿಗೆ ತಾವೂ ಅಭಿವೃದ್ಧಿ ಹೊಂದುವ ಕನಸು ರೆಕ್ಕೆಪುಕ್ಕ ಕಟ್ಟಿಕೊಂಡು ಹಾರತೊಡಗಿತು. ಹೆಚ್ಚುಕಡಿಮೆ ವಿಶ್ವದ ಎಲ್ಲ ದೇಶಗಳೂ ಅಭಿವೃದ್ಧಿ ಕಾರ್ಯಕ್ರಮಗಳಿಗೆಂದು ತಮ್ಮ ಆರ್ಥಿಕತೆಯನ್ನು, ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು, ಆದ್ಯತೆಗಳನ್ನು ಮರುರೂಪಿಸಿಕೊಂಡವು. ಆರ್ಥಿಕ ಸಹಾಯಕ್ಕಾಗಿ ಸಂಪನ್ಮೂಲ ಕ್ರೋಢೀಕರಿಸಿಕೊಳ್ಳಲು ಯತ್ನಿಸಿದವು. ದೇಶ ಕಟ್ಟುವ ಮಾದರಿಗಾಗಿ, ಆರ್ಥಿಕ ಸಂಪನ್ಮೂಲ ಹೊಂದಿಸಿಕೊಳ್ಳಲಿಕ್ಕಾಗಿ ವಿಶ್ವದ ದೊಡ್ಡಣ್ಣಂದಿರಂತೆ ವರ್ತಿಸುವ ಯಜಮಾನ ದೇಶಗಳ ಕಡೆಗೆ ನೋಡಿದವು.

ದಶಕಗಳು ಕಳೆದವು. ಅಭಿವೃದ್ಧಿಯ ನೆಪದಲ್ಲಿ, ಸಾಲ ಕೊಡುವ ನೆಪದಲ್ಲಿ, ಸಾಲ ಕೊಡುವ ಮುನ್ನ ಹೇರುವ ಷರತ್ತುಗಳ ನೆಪದಲ್ಲಿ ಬಡದೇಶಗಳ ನೆಲ-ಜಲ-ಜನಜೀವನದ ತಲೆಯ ಮೇಲೆ ನವ ವಸಾಹತುಶಾಹಿಗಳು ಅಂಕುಶ ಹಿಡಿದು ಕುಳಿತುಕೊಳ್ಳಲು ಇದೇ ಅಭಿವೃದ್ಧಿ ಮಾತುಗಳು ಕಾರಣವಾದವು. ಬಡವರು ಮತ್ತು ಸಿರಿವಂತರ ನಡುವಿನ ಕಂದಕ ಹಿಂದೆಂದಿಗಿಂತ ಇವತ್ತು ಹಿರಿದಾಗಿದೆ. ಒಂದಷ್ಟು ಜನ ಸಿರಿವಂತರು ಸೃಷ್ಟಿಯಾಗಲು ಅಸಂಖ್ಯ ಜನಸಮುದಾಯ ತನ್ನ ನೆಲೆ, ಸಂಪನ್ಮೂಲದಿಂದ ವಂಚಿತರಾಗಿದ್ದಾರೆ. ಅಭಿವೃದ್ಧಿಯ ಹೆಸರಲ್ಲಿ ಪರಿಸರ ಮತ್ತೆ ಮೊದಲ ಸ್ಥಿಗೆ ಎಂದೆಂದೂ ತಲುಪಲು ಸಾಧ್ಯವಾಗದಷ್ಟು ನಾಶವಾಗಿದೆ. ಜನಜೀವನದ ಮೇಲೆ ನಿರುದ್ಯೋಗ, ಸಾಂಸ್ಕøತಿಕ ಪಲ್ಲಟಗಳು, ರಾಜಕೀಯ ಅಸ್ಥಿರತೆ, ಬಡತನ, ಕೋಮುಘರ್ಷಣೆಯೇ ಮೊದಲಾದ ಬಿಕ್ಕಟ್ಟುಗಳು ಹೇರಲ್ಪಟ್ಟಿವೆ. ಅಭಿವೃದ್ಧಿ ಪ್ರಕ್ರಿಯೆ ಚುರುಕುಗೊಂಡಷ್ಟೂ ಆರ್ಥಿಕ ಪ್ರಗತಿ ಕುಂಠಿತಗೊಳ್ಳುತ್ತಿರುವುದನ್ನು, ಜನಸಮುದಾಯಗಳು ತಮ್ಮ ಸ್ವಾತಂತ್ರ್ಯ, ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ.

ಈ ವೈರುಧ್ಯಕ್ಕೆ ಕಾರಣವೇನು? ಇದನ್ನು ವಿವರಿಸುವುದು ಹೇಗೆ?

‘ನಮ್ಮ ಆಯ್ಕೆಯಂತೆ, ನಮಗೆ ಮೌಲಿಕವೆನಿಸುವ ಬದುಕನ್ನು ಬದುಕಲು ಸಾಧ್ಯಮಾಡುವುದೇ ಅಭಿವೃದ್ಧಿ. ಸಮಾಜವೊಂದರ ಯಶಸ್ಸು ಅದರಲ್ಲಿರುವ ಜನರು ಅನುಭವಿಸುವ ಸ್ವಾತಂತ್ರ್ಯವೇ ಆಗಿದೆ. ಅಭಿವೃದ್ಧಿ ಎಂದರೆ ಜನಸಮುದಾಯಗಳ ಅನುಭವಕ್ಕೆ ನಿಲುಕುವ ಹಿಗ್ಗುತ್ತಿರುವ ಸ್ವಾತಂತ್ರ್ಯ. ವ್ಯಕ್ತಿ ತನ್ನ ಸಂಪೂರ್ಣ ಮಾನವ ಸಾಮಥ್ರ್ಯವನ್ನರಿಯಲು ಸಾಧ್ಯ ಮಾಡುವುದೇ ಸ್ವಾತಂತ್ರ್ಯ ಮತ್ತು ಅಭಿವೃದ್ಧಿ.’ – ಅಮತ್ರ್ಯ ಸೆನ್

ನಿಜ. ಆದರೆ ನಮ್ಮ ಅಭಿವೃದ್ಧಿ ಮಾದರಿಗಳು ಇದನ್ನು ಸಾಧ್ಯಮಾಡಿವೆಯೆ? ಜನಸಮುದಾಯಗಳ ಮೇಲೆ, ಭಾಷೆ-ಶಿಕ್ಷಣ-ಕೃಷಿ-ಪರಿಸರದ ಮೇಲೆ, ದಮನಿತರ ಸಬಲೀಕರಣ ಪ್ರಕ್ರಿಯೆಯ ಮೇಲೆ ಅಭಿವೃದ್ಧಿ ಮಾದರಿಗಳ ಪ್ರಭಾವವೇನು? ಅಭಿವೃದ್ಧಿ ಹೊಂದುತ್ತಿರುವ ಈ ಕಾಲದಲ್ಲಿ ಸಮುದಾಯಗಳ ನಡುವಿನ ಸಂಬಂಧದ ಸೂಕ್ಷ್ಮ ಒಳತೋಟಿಗಳೇನು? ಮಹಿಳೆಯರು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಎಷ್ಟು ಪಾಲುದಾರರು? ಅವರ ಮೇಲಾದ ಪರಿಣಾಮಗಳೇನು?

ಅಭಿವೃದ್ಧಿಯ ದಾರಿಯಲ್ಲಿ ಇಷ್ಟು ದೂರ ನಡೆದು ಬಂದಿರುವಾಗ ಅದರ ಸಾಧಕ-ಬಾಧಕಗಳ ಕುರಿತು ವಸ್ತುನಿಷ್ಠವಾಗಿ ಚರ್ಚಿಸುವ ಹೊತ್ತು ಬಂದಿದೆ. ಫಲಾನುಭವಿಗಳ ದೃಷ್ಟಿಯಿಂದಲ್ಲ, ವಂಚಿತರ ದೃಷ್ಟಿಕೋನದಿಂದ ಅಭಿವೃದ್ಧಿಯ ಮಾನದಂಡಗಳು ಹಾಗೂ ಮಾರ್ಗಗಳನ್ನು ಮರುಪರಿಶೀಲಿಸಬೇಕಾದ ತುರ್ತು ಹುಟ್ಟಿಕೊಂಡಿದೆ. ಅದರ ಸಲುವಾಗಿ 6ನೇ ಮೇ ಸಾಹಿತ್ಯ ಮೇಳವನ್ನು ಗದಗದ ಅಂಬೇಡ್ಕರ್ ಭವನದಲ್ಲಿ ಇದೇ ಮೇ 4, 5ರಂದು ಏರ್ಪಡಿಸಲಾಗಿದೆ. `ಅಭಿವೃದ್ಧಿ ಭಾರತ: ಕವಲುದಾರಿಗಳ ಮುಖಾಮುಖಿ’ ಎಂಬ ಶೀರ್ಷಿಕೆಯಡಿ ಅಭಿವೃದ್ಧಿ ಹೆಸರಿನಲ್ಲಿ ನಾವು ಕ್ರಮಿಸಿದ ದಾರಿಯನ್ನು ವಿಶ್ಲೇಷಿಸಲು, ಮರುಪರಿಶೀಲಿಸಲು, ಚರ್ಚಿಸಲು ಗೋಷ್ಠಿಗಳನ್ನು ಆಯೋಜಿಸಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...