Homeಅಂಕಣಗಳುಬ್ರಾಹ್ಮಣ್ಯ ಎಂಬುದು ಪ್ರಭುತ್ವದ ಸಾಂಸ್ಕೃತಿಕ ಪರಿಭಾಷೆ :  ಮಾಧ್ಯಮ ಇದರ ಸೇವಕ

ಬ್ರಾಹ್ಮಣ್ಯ ಎಂಬುದು ಪ್ರಭುತ್ವದ ಸಾಂಸ್ಕೃತಿಕ ಪರಿಭಾಷೆ :  ಮಾಧ್ಯಮ ಇದರ ಸೇವಕ

- Advertisement -
- Advertisement -

| ಬಿ. ಪೀರ್ ಬಾಷ |

1920ರ ದಶಕದಲ್ಲಿಯೆ ಮಾಧ್ಯಮದ ಹಿಡಿತ ಬ್ರಾಹ್ಮಣ್ಯದ ಕೈಯಲ್ಲಿತ್ತು. ಅಂಬೇಡ್ಕರರು ಪತ್ರಿಕೆ ಆರಂಭಿಸುತ್ತಾರೆಂಬ ಸುದ್ದಿಯೇ ಬಾಲಗಂಗಾಧರ ತಿಲಕರ ಹೊಟ್ಟೆಯೊಳಗೆ ಹುಳಿ ಹೆಚ್ಚುವಂತೆ ಮಾಡಿತ್ತು. ಆಗಲೇ ಜಾಹಿರಾತುಗಳನ್ನು ಪ್ರಕಟಿಸುತ್ತಿದ್ದ ಹಿಂದೂವಾದಿ ‘ಕೇಸರಿ’ ಪತ್ರಿಕೆ, ಅಂಬೇಡ್ಕರರ ‘ಮೂಕನಾಯಕ’ ಪತ್ರಿಕೆಯ ಜಾಹಿರಾತನ್ನು ಪ್ರಕಟಿಸಲು ನಿರಾಕರಿಸಿತ್ತು.

ಕರ್ನಾಟಕದಲ್ಲಿ ‘ಬ್ರಾಹ್ಮಣ ಮಾಧ್ಯಮ’ದ ಸಾರ್ವಭೌಮತ್ವ ಮತ್ತು ಅದರ ಕ್ಷುದ್ರ ನಡವಳಿಕೆ ಕುರಿತಂತೆ ಸಂವಾದದ ಅಗತ್ಯವನ್ನು ‘ನ್ಯಾಯಪಥ’ ಸಂಪಾದಕೀಯ ತನ್ನ ಈ ಹಿಂದಿನ ಸಂಚಿಕೆಯಲ್ಲಿ ವ್ಯಕ್ತಪಡಿಸಿದೆ. ರಾಜ್ಯದ ಪತ್ರಿಕಾರಂಗದಲ್ಲಿ ಶೇ.90ರಷ್ಟು ಮುಖ್ಯಸ್ಥರು ಹವ್ಯಕ ಬ್ರಾಹ್ಮಣರಾಗಿದ್ದು, ಕನ್ನಡದ ಯಾವುದೇ ಮಾಧ್ಯಮ ಸಂಸ್ಥೆಗೆ ಹೋದರೆ ಅಲ್ಲೆಲ್ಲಾ ಹವ್ಯಕ ಬ್ರಾಹ್ಮಣ ಹುಡುಗರೇ ಕಾಣುತ್ತಿದ್ದು ಅವರ ಸಂಖ್ಯೆ ಇನ್ನೂ ಹೆಚ್ಚಾಗಬೇಕೆಂದು ಹವ್ಯಕ ಬ್ರಾಹ್ಮಣ ಸಮ್ಮೇಳನದಲ್ಲಿ, ವಿಶ್ವೇಶ್ವರ ಭಟ್ ಹೇಳಿರುವುದನ್ನು ಉಲ್ಲೇಖಿಸಿದೆ. ಮುಖ್ಯವಾಗಿ, ದೇಶದ ಮಾಜಿ ಪ್ರಧಾನಿಗಳಾದ ದೇವೇಗೌಡರೇ, ಸ್ವತಃ ಬ್ರಾಹ್ಮಣ ವರದಿಗಾರಿಕೆಯ ಬಗ್ಗೆ ರೋಸಿಹೋಗಿ, ‘ನಾನು ಶೂದ್ರ ಅಷ್ಟೇನೆ’ ಎಂದಿರುವ ವಿಡಿಯೋವನ್ನು ಉಲ್ಲೇಖಿಸುತ್ತಾ, ‘ಬಹುಪಾಲು ಮಾಧ್ಯಮಗಳು ಶೂದ್ರ ರಾಜಕಾರಣಿ-ರಾಜಕಾರಣವನ್ನು ಹಣಿಯುತ್ತಿವೆ’ ಎಂಬುದನ್ನು ಪ್ರಸ್ತಾಪಿಸಿದೆ.

ನಿಜ, ಇದೆಲ್ಲವೂ ಸತ್ಯ. ಆದರಿದು ಹೊಸತಾದುದಾಗಲಿ, ಅಚ್ಚರಿಪಡುವಂಥದ್ದಾಗಲಿ ಅಲ್ಲ ಎಂಬುದು ನಮಗೆ ತಿಳಿದಿರುವಂಥದ್ದೇ. ಆದರೆ ಜನತೆಗೆ ಕೇಡು ಬಗೆಯುತ್ತಿರುವ ಬ್ರಾಹ್ಮಣ್ಯ-ಬಂಡವಾಳಿಗ ಮಾಧ್ಯಮದ ಅನೀತಿಯನ್ನು ಅನಾವರಣಗೊಳಿಸುವುದು ಹಾಗೂ ಪರ್ಯಾಯ ಮಾಧ್ಯಮವನ್ನು ಬಲಗೊಳಿಸುವ ಅಗತ್ಯ ಸಂಪಾದಕೀಯದ ಆಶಯವಾಗಿದೆ ಎಂದುಕೊಂಡಲ್ಲಿ ಈ ವಿಷಯವನ್ನು ಗಂಭೀರವಾಗಿ ಚರ್ಚಿಸಲು ಸಾಧ್ಯವಿದೆ

1920ರ ದಶಕದಲ್ಲಿಯೆ ಮಾಧ್ಯಮದ ಹಿಡಿತ ಬ್ರಾಹ್ಮಣ್ಯದ ಕೈಯಲ್ಲಿತ್ತು. ಅಂಬೇಡ್ಕರರು ಪತ್ರಿಕೆ ಆರಂಭಿಸುತ್ತಾರೆಂಬ ಸುದ್ದಿಯೇ ಬಾಲಗಂಗಾಧರ ತಿಲಕರ ಹೊಟ್ಟೆಯೊಳಗೆ ಹುಳಿ ಹೆಚ್ಚುವಂತೆ ಮಾಡಿತ್ತು. ಆಗಲೇ ಜಾಹಿರಾತುಗಳನ್ನು ಪ್ರಕಟಿಸುತ್ತಿದ್ದ ಹಿಂದೂವಾದಿ ‘ಕೇಸರಿ’ ಪತ್ರಿಕೆ, ಅಂಬೇಡ್ಕರರ ‘ಮೂಕನಾಯಕ’ ಪತ್ರಿಕೆಯ ಜಾಹಿರಾತನ್ನು ಪ್ರಕಟಿಸಲು ನಿರಾಕರಿಸಿತ್ತು. ಬೇರೆ ಪತ್ರಿಕೆಗಳಿಗೆ ಸಿಗುತ್ತಿದ್ದ ಜಾಹಿರಾತುಗಳು ಮೂಕನಾಯಕ ಪತ್ರಿಕೆಗೆ ಸಿಗುತ್ತಿರಲಿಲ್ಲ. ಇಂತಹ ಅನುಭವದ ಹಿನ್ನೆಲೆಯಲ್ಲಿಯೇ ಅಂಬೇಡ್ಕರರು; ‘ಭಾರತದಲ್ಲಿ ಒಮ್ಮೆ ಪತ್ರಿಕೋದ್ಯಮ ಒಂದು ವೃತ್ತಿಯಾಗಿತ್ತು. ಈಗ ಅದು ವ್ಯಾಪಾರವಾಗಿದೆ. ಸಾಬೂನು ಉತ್ಪಾದಿಸುವುದಕ್ಕಿಂತ ಹೆಚ್ಚಿನ ನೈತಿಕ ಹೊಣೆ ಅದಕ್ಕಿಲ್ಲ’ ಎಂದಿದ್ದರು. ಈ ಮಾತು ಈ ಹೊತ್ತಿನ ಮಾಧ್ಯಮದ ಸ್ವರೂಪವನ್ನು ಕುರಿತೇ ಹೇಳಿದಂತಿದೆ ಎಂದೆನಿಸಿದರೂ ಇದು ಆ ಹೊತ್ತೇ ಇದ್ದ ಪರಿಸ್ಥಿತಿ ಎಂಬುದನ್ನು ಗಮನಿಸಬೇಕು. ಆಗಲೂ ಸ್ಪಷ್ಟವಾಗಿ ಮಾಧ್ಯಮರಂಗದಲ್ಲಿ ಯಜಮಾನಿಕೆ ಸ್ಥಾಪಿಸಿದ್ದು ಇದೇ ಬ್ರಾಹ್ಮಣ್ಯ. ಇದು ಹತ್ತಿಕ್ಕಿದ್ದು ಇದೇ ಶೂದ್ರರನ್ನು. ಅಷ್ಟುಮಾತ್ರವಲ್ಲ, ಆಗಲೂ ಈ ಬ್ರಾಹ್ಮಣ್ಯ-ಬಂಡವಾಳಿಗ ಮಾಧ್ಯಮ ತನ್ನ ಹೆಚ್ಚುಗಾರಿಕೆ ಸಾರಿದ್ದು-ಹೇರಿದ್ದು ಇದೇ ‘ರಾಷ್ಟ್ರವಾದ’ದ  ಮುಖವಾಡದ ಮೂಲಕವೇ. ಆಗಲೂ ಇದರ ವಿರೋಧಿಗಳು ಹೆಸರಿಗಷ್ಟೇ ಬ್ರಿಟಿಷರು, ನಿಜವೆಂದರೆ ಈಗ ಯಾರೋ ಆಗಲೂ ಅವರೇ! ಆದರೆ ಬದಲಾವಣೆ ಆಗಿರುವುದೇನೆಂದರೆ ಆಗ ಈ ಶಕ್ತಿ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಹೆಣಗುತ್ತಿತ್ತು. ಆದರೀಗ ಇದಕ್ಕೆ ಆಳುವ ಅಧಿಕಾರ ದಕ್ಕಿದ ಬಳಿಕ ಇದು ದಮನಕಾರಿಯಾಗಿದೆ.

ವಸಾಹತುಶಾಹಿ ಆಡಳಿತದ ಅವಧಿಯಲ್ಲಿ ತಾನು ಬದುಕುಳಿಯಲು ಹೆಣಗುತ್ತಿದ್ದ ಬ್ರಾಹ್ಮಣ್ಯ-ಮಾಧ್ಯಮ-ಬಂಡವಾಳ ‘ಸ್ವಾತಂತ್ರ್ಯಯ’ ಸಿಗುತ್ತಲೇ ತಾನು ಸಂಪೂರ್ಣ ಸ್ವಾತಂತ್ರ್ಯಯ ಪಡೆದು ಕಳೆದ ಮುಕ್ಕಾಲು ಶತಮಾನದಲ್ಲಿ ಬೇರು ಬಿಟ್ಟು ಇದೀಗ ತನ್ನ ಕೊಕ್ಕು-ಪಂಜುಗಳನ್ನು ಚೂಪು ಮಾಡಿಕೊಂಡಿದೆ. ಈಗಿದು ‘ರಾಷ್ಟ್ರ’ದೊಳಗಿನ ಪ್ರಜೆಗಳನ್ನು ‘ಗಿರಾಕಿ’ಗಳನ್ನಾಗಿಸಿಕೊಳ್ಳುತ್ತಿದೆ. ಮಾಧ್ಯಮವಂತೂ ಗಿರಾಕಿಗಳಾದವರ ಮೆದುಳಿಗೇ ಗೆದ್ದಲು ಹಿಡಿಸಿ ಪತ್ರಿಕೆಯ ಬರೆಹ ಮತ್ತು ಟಿ.ವಿಯ ದೃಶ್ಯಗಳನ್ನು ‘ಮಾದಕ’ವಾಗಿ ಮಾರ್ಪಡಿಸಿದೆ. ಈ ಮಾದಕ ವ್ಯಸನದ ಫಲವಾಗಿ ಈ ಹೊತ್ತು ‘ರಾಷ್ಟ್ರವಾದ’ ಎಂಬುದು ವಿವೇಚನಾರಹಿತ ಆವೇಶವಾಗಿ ವ್ಯಕ್ತವಾಗುತ್ತಿದೆ. ಪ್ರಜಾಪ್ರಭುತ್ವದ ಸರ್ವೋನ್ನತ ಜವಾಬ್ದಾರಿಯ ಪ್ರಧಾನ ಸ್ಥಾನವೆಂಬುದು ಪ್ರಶ್ನಾತೀತ ಭಾವೋನ್ಮಾದಿ ಪ್ರತಿಮೆಯಾಗಿದೆ. ಇದೆಲ್ಲವೂ ಪಕ್ಕಾ ಅವರ ಲೆಕ್ಕಾಚಾರದಂತೆಯೇ ನಡೆಯುತ್ತಿದೆ. ಆದರೆ ‘ನಾವು’ ಎಂದುಕೊಂಡ ನಮಗೆ, ಅವರ ಲೆಕ್ಕ ತಪ್ಪಿಸುವ ಅಥವಾ ನಮ್ಮದೇ ಆದ ‘ಲೆಕ್ಕಾಚಾರ’ ಎಂಬುದೊಂದು ಇದೆಯೇ? ಇದು ಮುಖ್ಯ ಪ್ರಶ್ನೆ.

ಕನಿಷ್ಟ ಕಾಮನ್ಸೆನ್ಸ್ ಇದ್ದವರಿಗೂ ತಿಳಿಯುತ್ತದೆ; ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುವ ವಿಶೇಷ ವರದಿಗಳ ಶೀರ್ಷಿಕೆಯೇ ಇದು ಯಾರನ್ನು ಎತ್ತಿಕಟ್ಟಲು ಅಥವಾ ಹಣಿಯಲು ಹೆಣೆಯಲಾದ ಕತೆ ಎಂಬುದನ್ನು ಹೇಳಿಬಿಡುತ್ತದೆ. ಸ್ಟುಡಿಯೋಗಳಲ್ಲಿ ನಡೆಸುವ ‘ಚರ್ಚೆ’ (ತಲೆ ಹರಟೆ)ಗಳ ನಿರೂಪಕರ ನಾಟಕೀಯ ಪಾಂಡಿತ್ಯ, ಹೇಸಿಗೆ ತರಿಸುವ ಅವರ ಧ್ವನಿ ವಿನ್ಯಾಸ-ಕುಹಕ, ನಿರೂಪಕನೇ ವಿಚಾರಣಾಧಿಕಾರಿಯಾಗುವ, ವಕೀಲನಾಗುವ, ನ್ಯಾಯಾಧೀಶನಾಗುವ ಏಕಪಾತ್ರಾಭಿನಯದ ಎದುರು ಪ್ಯಾನಲಿಸ್ಟರು ಸ್ಟುಡಿಯೋ ಎಂಬ ಶೋರೂಮಿನ ಗೊಂಬೆಗಳಾಗಿರುತ್ತಾರೆ. ಮೊದಲೇ ನಿಶ್ಚಯಿಸಿಕೊಂಡಂತೆ ತಮ್ಮ ಪರವಿರುವವರಿಗೆ ಮಾತಾಡಲು ಹೆಚ್ಚು ಅವಕಾಶ ಕೊಡುವುದು, ತಮ್ಮ ಪೂರ್ವನಿಶ್ಚಿತ ಉದ್ದೇಶಕ್ಕೆ ಪ್ರತಿಯಾಗಿ ಮಾತಾಡುವವರ ಮಾತು ಇದ್ದಕ್ಕಿದ್ದಂತೆ ಮೊಟಕು ಮಾಡುವುದು ಇಲ್ಲವೇ ‘ಬ್ರೇಕ್’-ವಿರಾಮ ಬೀಳುವುದು ಇದೆಲ್ಲ ಸ್ಪಷ್ಟವಾಗಿ ‘ಒಬ್ಬ’ರ ಪರವಾಗಿದೆ ಎಂದು ಯಾರಿಗೆ ತಿಳಿಯುವುದಿಲ್ಲ? ಚುನಾವಣಾ ಕ್ಷೇತ್ರಗಳಲ್ಲಿ ವಿಶ್ಲೇಷಣೆಯ ಸಂದರ್ಭದಲ್ಲಿಯೂ ವರದಿಗಾರರ ಮೈಕುಗಳು ಯಾರ ಮುಂದೆ ಹೆಚ್ಚುಹೊತ್ತು ನಿಲ್ಲುತ್ತವೆ, ಯಾರ ಮಾತಿಗೆ ತಕ್ಷಣ ಸರಿದು ಬಿಡುತ್ತವೆ ಎಂಬುದೂ ಈಗ ಆಯಾ ವರದಿಗಾರರಿಗೂ ನಾಚಿಕೆಯಾಗುವ ವಿಷಯವಾಗಿ ಉಳಿದಿಲ್ಲ. ಅಷ್ಟುಮಾತ್ರವಲ್ಲ ಸ್ಪಷ್ಟವಾಗಿ ಹೇಳಬೇಕೆಂದರೆ ಸಿದ್ದರಾಮಯ್ಯನವರ ಸರಕಾರವನ್ನು ಕೆಡಹುವಲ್ಲಿ ಪ್ರಧಾನ ಪಾತ್ರವಹಿಸಿರುವುದು ಮತ್ತು ಕುಮಾರಸ್ವಾಮಿಯವರ ಸರಕಾರವನ್ನು ಕೆಡಹುವುದೇ ತಮ್ಮ ಮುಂದಿನ ಗುರಿ ಮಾಡಿಕೊಂಡಿರುವುದು ರಾಜ್ಯದ ಬಿ.ಜೆ.ಪಿ. ಅಲ್ಲ, ಬದಲಿಗೆ ಬೆರಳೆಣಿಕೆಯ ಮಾಧ್ಯಮಗಳು ಎನ್ನುವುದು ಆ ಮಾಧ್ಯಮಗಳ ‘ಶಕ್ತಿ’ಗೆ ಕೊಡುವ ಪ್ರಮಾಣಪತ್ರವಲ್ಲ ಬದಲಿಗೆ ಅವುಗಳ ದೈತ್ಯಶಕ್ತಿಯ ಸರಿ ಅಂದಾಜು ಎಂದು ಭಾವಿಸುವ ಅಗತ್ಯವಿದೆ.  ಈ ಹೊತ್ತು ಬ್ರಾಹ್ಮಣ-ಬನಿಯಾ ಮಾಲಕತ್ವದ ದೃಶ್ಯ-ಮುದ್ರಣ ಮಾಧ್ಯಮಗಳು ನಿಕ್ಕಿ ಫ್ಯಾಸಿಸಮ್ಮಿನ ಮುಖವಾಣಿಯಾಗಿವೆ.

1920ರ ಅಂಬೇಡ್ಕರರ ಅನುಭವದಿಂದ ಮೊದಲು ಮಾಡಿ 2020ರ ನಡುವಿನ ನೂರು ವರ್ಷಗಳ ಅವಧಿಯ ಇತಿಹಾಸ, ನಮ್ಮ ತಿಳಿವಳಿಕೆಗಿರುವ ಬಹುದೊಡ್ಡ ಪಠ್ಯ ಎಂಬುದನ್ನು ಅರಿತು ಅದನ್ನು ಪುನರಾವಲೋಕನ ಮಾಡಿದರೆ ಖಂಡಿತ ನಮಗೆ ಇಲ್ಲಿ ಪಾಠ ಇದೆ. ಉಧ್ಯಮದ ಸ್ವರೂಪ ಪಡೆದ ಮಾಧ್ಯಮ ಯಾವತ್ತೂ ಅದು ಪ್ರಭುತ್ವದ ಬಾಲಬಡುಕವೇ ಆಗಿರುತ್ತದೆ ಎಂಬುದು ತೀರಾ ‘ಸಣ್ಣ’ಮಾತು. ನಿಜವೆಂದರೆ ಇಂತಹ ಮಾಧ್ಯಮ ಪ್ರಜಾಪ್ರಭುತ್ವಕ್ಕೆ ಕಂಟಕಕಾರಿಯೇ ಆಗಿರುತ್ತದೆ. ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನ್ನುವ ಬಣ್ಣನೆಯ ಮಾತು ಈ ಹೊತ್ತು ಆತ್ಮವಂಚಕ ಮಾತಾಗುತ್ತದೆ. ‘ಮಾರುಕಟ್ಟೆ ಪ್ರಜಾಪ್ರಭುತ್ವ’ದಲ್ಲಿ ಮಾಧ್ಯಮ ಸ್ವಯಂ ಪ್ರಚಾರ ಸಾಮಗ್ರಿಯಾಗಿರುತ್ತದಷ್ಟೇ. ಸುದ್ದಿಯ ನಡುವಿನ ಜಾಹಿರಾತುಗಳ ಪ್ರಸಾರ ಮತ್ತು ಸುದ್ದಿಯ ಹೆಸರಿನಲ್ಲಿ ಬಂಡವಾಳಿಗರ ಪರವಾಗಿರುವ ರಾಜಕಾರಣಿಗಳ ಪ್ರಚಾರವೇ ದೃಶ್ಯಮಾಧ್ಯಮಗಳ ನಿಜವಾದ ಉದ್ದೆÃಶವಾಗಿರುತ್ತದೆ ಎಂಬುದನ್ನು ಪ್ರೇಕ್ಷಕ ಶ್ರೀಸಾಮಾನ್ಯನಿಗೆ ತಿಳಿಸಿಕೊಡಬೇಕಾದ ತುರ್ತು ಕೂಡ ಈ ಹೊತ್ತು ಜನಪರರ ಎದುರಿಗಿದೆ.

ಮುಖ್ಯವಾದ ಮಾತನ್ನಷ್ಟೇ ಹೇಳಿ ಮುಗಿಸುವೆ. ಬ್ರಾಹ್ಮಣ ಮಾಧ್ಯಮ ಎಂಬ ಮಾತಿನ ಸಂದರ್ಭದಲ್ಲಿ ಗಮನಿಸಬೇಕಿರುವುದು, ಭಾರತದ ಚರಿತ್ರೆಯಲ್ಲಿ ಈತನಕದ ಎಲ್ಲ ಪ್ರಸಾರ ಪ್ರಕಾರಗಳಲ್ಲೂ ಬ್ರಾಹ್ಮಣ್ಯ ಅವಿಭಜಿತ ಅಂಶವಾಗಿ ಚಾಲ್ತಿಯಲ್ಲಿದೆ. ಇನ್ನು ಅರ್ಥಮಾಡಿಕೊಳ್ಳಬೇಕಿರುವುದು ‘ಬ್ರಾಹ್ಮಣ್ಯ’ ಎಂಬುದರ ಅರ್ಥವೇ ಪ್ರಭುತ್ವ ಎನ್ನುವುದನ್ನು. ಬ್ರಾಹ್ಮಣ್ಯ ಎಂಬುದು ಪ್ರಭುತ್ವದ ಸಾಂಸ್ಕೃತಿಕ ಪರಿಭಾಷೆ ಎಂಬುದನ್ನು ಖಚಿತಪಡಿಸಿಕೊಳ್ಳದ ಹೊರತು ಭಾರತದಲ್ಲಿ ಪ್ರಜೆಗಳ ವಿಮೋಚನೆಯಾಗಲಿ, ಪ್ರಜಾಪ್ರಭುತ್ವದ ನಿರ್ಮಾಣವಾಗಲಿ ಸಾಧ್ಯವಿಲ್ಲ. ಇದರ ವಿವರಣೆಯಲ್ಲಿ ಬಂಡವಾಳವೂ ಬ್ರಾಹ್ಮಣ್ಯದ ಅಂತರ್ಗತ ಧಾತು ಎಂಬುದು ಮನವರಿಕೆಯಾಗುತ್ತದೆ. ಇಲ್ಲಿ ಮಾಧ್ಯಮವು ಇದರ ಹಿತದ ಪೋಷಣೆ ಮತ್ತು ರಕ್ಷಣೆಗಾಗಿ ತಾನು ದುಡಿಯುತ್ತದೆ.
ದೇಶಿ ಬಂಡವಾಳ ನೇತೃತ್ವದ ಜಾಗತಿಕ ಬಂಡವಾಳಿಗ ಮೈತ್ರಿಕೂಟದ ರಾಜಕೀಯ ಸಿದ್ಧಾಂತವಾದ ‘ಹಿಂದೂ-ರಾಷ್ಟ್ರವಾದ’ವು ಎದೆಸೆಟೆಸುತ್ತಿರುವ ಕಾಲಮಾನದಲ್ಲಿ ಮಾಧ್ಯಮದ ಬಗೆಗಿನ ಚರ್ಚೆ, ಸಶಕ್ತ ಪ್ರತಿರೋಧ ಮತ್ತು ಕ್ರಿಯಾತ್ಮಕ ಪರ್ಯಾಯದ ಕಣ್ಣೋಟವನ್ನು ಬಯಸುತ್ತದೆ. ಈ ಹೊತ್ತು ‘ಈ’ ಮಾಧ್ಯಮ ಜನಹಿತಾಸಕ್ತಿಗೆ ಘಾತಕವಾದುದು ಎಂಬುದನ್ನು, ಇದು ಸತ್ಯವನ್ನು ತಿರುಚುತ್ತದೆ, ಸುಳ್ಳನ್ನು ಹೇಳುತ್ತದೆ, ಇದು ಓದುಗ-ನೋಡುಗರ ಪ್ರಜ್ಞೆ ತಗ್ಗಿಸಿ ಗಿರಾಕಿಗಳನ್ನಾಗಿಸುತ್ತದೆ ಎಂಬುದನ್ನು ಜನತೆಗೆ ಮನವರಿಕೆ ಮಾಡಿಕೊಡುವುದು ಮತ್ತು ಪರ್ಯಾಯ ಮಾಧ್ಯಮ ಸಾಧ್ಯತೆಗಳನ್ನು ಕಂಡುಕೊಳ್ಳುವುದೂ ಅತಿ ಜರೂರಿನ ಕ್ರಿಯೆಯಾಗಿದೆ. ಈ ಬ್ರಾಹ್ಮಣ್ಯ ಮಾಧ್ಯಮವನ್ನು ಪ್ರಶ್ನಿಸುವ ಸಾಮರ್ಥ್ಯ, ಕಾರ್ಯಕ್ರಮ ಮತ್ತು ಸೇಡು ತೀರಿಸಿಕೊಳ್ಳುವ ಈ ಮಾಧ್ಯಮಗಳನ್ನು ಎದುರಿಸಿ ಗೆಲ್ಲುವ ವಿಧಾನಗಳ ಹುಡುಕಾಟ, ಕಾರ್ಯಗತಗೊಳಿಸುವಿಕೆ, ಮಾತ್ರವಲ್ಲ ಈ ಬಂಡವಾಳವನ್ನು ಮಣಿಸಿ ಜನಹಿತಕ್ಕೆ ಬಳಸಿಕೊಳ್ಳುವ ಸಂಭವನೀಯತೆಗಳ ಬಗ್ಗೆ ಈ ಹೊತ್ತು ಚಿಂತಿಸಬೇಕಿದೆ. ಅನುಸರಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...