Homeಅಂಕಣಗಳುಸಾಧ್ವಿ ಪ್ರಗ್ಯಾ ಭಯೋತ್ಪಾದನೆ ಮತ್ತು ದ್ವಂದ್ವಗಳು

ಸಾಧ್ವಿ ಪ್ರಗ್ಯಾ ಭಯೋತ್ಪಾದನೆ ಮತ್ತು ದ್ವಂದ್ವಗಳು

- Advertisement -
- Advertisement -

| ಗೌರಿ ಲಂಕೇಶ್ |
03 ಡಿಸೆಂಬರ್, 2008 ( ಕಂಡಹಾಗೆ ಸಂಪಾದಕೀಯದಿಂದ)

ಮೊದಲೇ ಒಂದು ಅಂಶವನ್ನು ಸ್ಪಷ್ಟಪಡಿಸಬೇಕಿದೆ. ಅದೇನೆಂದರೆ ಮಾಲೆಗಾಂವ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿರುವ ಸಾಧ್ವಿ ಪ್ರಗ್ಯಾ, ಲೆಫ್ಟಿನೆಂಟ್ ಶ್ರೀಕಾಂತ್ ಪುರೋಹಿತ ಮತ್ತು ಇತರರ ಮೇಲೆ ಪೊಲೀಸ್ ದೌರ್ಜನ್ಯ ನಿಲ್ಲಬೇಕು. ಅವರೆಲ್ಲರಿಗೆ ಸೂಕ್ತ ಕಾನೂನು ನೆರವು ನೀಡಬೇಕು. ಅವರ ಮೇಲೆ ಪೊಲೀಸರು ಮಾಡಿರುವ ಆರೋಪಗಳನ್ನು ಸಾಬೀತುಪಡಿಸುವತ್ತ ಸರ್ಕಾರ ನೋಡಿಕೊಳ್ಳಬೇಕು. ಅಕಸ್ಮಾತ್ ಸಾಧ್ವಿ ಮತ್ತಾಕೆಯ ತಂಡ ನಿರ್ದೋಷಿಗಳಾಗಿದ್ದರೆ ಅದನ್ನೂ ಸಾಬೀತುಪಡಿಸಲು ಅವರಿಗೆ ಎಲ್ಲ ಅವಕಾಶಗಳನ್ನು ಮಾಡಿಕೊಡಬೇಕು. ಇದೆಲ್ಲ ಸರಿಯಾಗಿ ನಡೆದ ನಂತರ ಎಲ್ಲರೂ ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿರಬೇಕು.

ನಾವಾಗಲಿ, ಕಾನೂನು ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿರುವವರಾಗಲಿ, ಮಾನವ ಹಕ್ಕುಗಳ ಹೋರಾಟಗಾರರಾಗಲಿ ಇದನ್ನು ಮೊದಲ ಬಾರಿ ಹೇಳುತ್ತಿಲ್ಲ. ಬಹಳ ವರ್ಷಗಳಿಂದ ನಮ್ಮೆಲ್ಲರ ನಿಲುವು ಇದೇ ಆಗಿದೆ. ಬಾಂಬ್ ಸ್ಪೋಟ ಆರೋಪಿಗಳ ಮೇಲೆ, ಸಿಮಿ ಸದಸ್ಯರು ಎಂಬ ಸಂಶಯದ ಮೇಲೆ, ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರಬಹುದು ಎಂಬ ನೆಪದಲ್ಲಿ ಸಾವಿರಾರು ಮುಸಲ್ಮಾನರನ್ನು ಪೊಲೀಸರು ಬಂಧಿಸಿದಾಗ ನಾವು ಹೇಳಿದ್ದು ಇದನ್ನೇ. ಈಗ ಸಾಧ್ವಿ, ಪುರೋಹಿತ್ ಮತ್ತು ಇತರರನ್ನು ಕುರಿತು ಹೇಳುವುದೂ ಇದೇ ಮಾತನ್ನೇ.

ಆದರೆ ಆರ್‌ಎಸ್‌ಎಸ್, ಬಿಜೆಪಿ, ವಿಶ್ವಹಿಂದೂ ಪರಿಷತ್, ಭಜರಂಗದಳ, ಅಭಿನವ ಭಾರತ್ ಮತ್ತು ಸಂಘ ಪರಿವಾರದ ಇತರೆ ತುಂಡುಗಳು ಮಾತ್ರ ಮೊದಲಿನಿಂದಲೂ ಹೇಗೆ ವರ್ತಿಸಿವೆ ನೋಡಿ.

‘ಸಾಧ್ವಿ ಪ್ರಗ್ಯಾಗೆ ಪೊಲೀಸರು ದೈಹಿಕ ಹಿಂಸೆ ನೀಡಿದ್ದಾರೆ’ ಎಂದು ಅರಚಾಡುತ್ತಿರುವ ಚೆಡ್ಡಿಗಳಿಗೆ ಅದೇ ಪೊಲೀಸರು ಮುಸಲ್ಮಾನ ಆರೋಪಿಗಳ ಮೇಲೆ ದೌರ್ಜನ್ಯ ನಡೆಸಿದ್ದು ಕಾಣಿಸಲಿಲ್ಲ. ಈಗ ಪ್ರಗ್ಯಾಳಿಗೆ ಕಾನೂನು ನೆರವು ನೀಡಲು ವಕೀಲರ ಸಂಘಗಳನ್ನು ರೂಪಿಸಿರುವ, ಆಕೆಯ ಪರವಾಗಿ ಕಾನೂನು ಸಮರಕ್ಕೆ ಹಣ ಸಂಗ್ರಹಿಸುತ್ತಿರುವ ಚೆಡ್ಡಿಗಳು ಪ್ರಗ್ಯಾಳಂತೆಯೇ ಭಯೋತ್ಪಾದನೆ ಆರೋಪದ ಮೇಲೆ ಮುಸಲ್ಮಾನ ಯುವಕರನ್ನು ಬಂಧಿಸಿದಾಗ ಪ್ರತಿಕ್ರಿಯಿಸಿದ್ದು ಹೇಗೆ? ಅಫಜಲ್‌ಗುರು ಪರವಾಗಿ ಯಾವ ವಕೀಲನೂ ವಕಾಲತ್ತು ವಹಿಸಬಾರದೆಂದು ದೆಹಲಿಯ ವಕೀಲರ ಸಂಘ ಫತ್ವಾ ಹೊರಡಿಸಿತ್ತು. ಕೊನೆಗೆ ನ್ಯಾಯಾಲಯವೇ ಅಫಜಲ್‌ಗುರುಗೆ ಓರ್ವ ವಕೀಲನನ್ನು ನೇಮಿಸಿತ್ತಾದರೂ ಆತ ಎಂದೂ ಆಫಜಲ್‌ಗುರು ಪರವಾಗಿ ನ್ಯಾಯಾಲಯದಲ್ಲಿ ದನಿ ಎತ್ತಲಿಲ್ಲ. ಪರಿಣಾಮವಾಗಿ ಆತನಿಗೆ ಗಲ್ಲುಶಿಕ್ಷೆ ನೀಡಲಾಯ್ತು.

ಸಂಘ ಪರಿವಾರ ಯಾಕೆ ತನಗೊಂದು ನ್ಯಾಯ, ಇತರರಿಗೊಂದು ನ್ಯಾಯ ಎಂದು ವಾದಿಸುತ್ತದೆ?
ಬೆಂಗಳೂರಿನ ಡಾ.ಹನೀಫ್‌ರನ್ನು ಸುಳ್ಳು ಅರೋಪಗಳ ಮೇಲೆ ಆಸ್ಟ್ರೇಲಿಯಾದ ಪೊಲೀಸರು ಬಂಧಿಸಿದಾಗ ಹನೀಪರ ಹೆಂಡತಿ ಮತ್ತು ತಾಯಿ ಕಣ್ಣೀರಿಟ್ಟಿದ್ದನ್ನು ನೋಡಿ ತನಗೆ ನಿದ್ದೆ ಬರಲಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದರು. ಆ ವಾಕ್ಯವನ್ನು ಚೆಡ್ಡಿಗಳು ಹಲವಾರು ಬಾರಿ ಲೇವಡಿ ಮಾಡಿದ್ದಾರೆ. ಯಾವ ಪರಿ ಎಂದರೆ ಜೈಪುರದಲ್ಲಿ ಸರಣಿ ಬಾಂಬ್ ಸ್ಪೋಟಗೊಂಡಾಗ ‘ಈಗ ನಿಮಗೆ ನೆಮ್ಮದಿಯ ನಿದ್ರೆ ಬರುತ್ತಿದೆಯೇ?’ ಎಂದು ಹಂಗಿಸಿದ್ದರು. ವಾಸ್ತವವಾಗಿ, ಆ ಬಾಂಬ್ ಸ್ಪೋಟಗಳ ‘ಮಸ್ಟರ್ ಮೈಂಡ್’ಗಳೆಂದು ಬಂಧಿಸಲಾಗಿದ್ದ ಹತ್ತಾರು ಮುಸಲ್ಮಾನ ಯುವಕರ ವಿರುದ್ಧ ಯಾವ ಮಾಹಿತಿಯೂ ಇಲ್ಲ ಎಂದು ರಾಜಸ್ತಾನದ ಮುಖ್ಯಮಂತ್ರಿ ವಸುಂಧರ ರಾಜೆ ಅವರ ಬಿಜೆಪಿ ಸರ್ಕಾರವೇ ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಸಂಭವಿಸುವ ಎಲ್ಲಾ ಭಯೊತ್ಪಾದಕ ಕೃತ್ಯಗಳ ಹಿಂದೆ ಮುಸಲ್ಮಾನರೇ ಇರುತ್ತಾರೆಂಬ ಭಾವನೆ ನಮ್ಮ ಪೊಲೀಸ್ ಮತ್ತು ಮಾಧ್ಯಮಗಳಲ್ಲಿ ಆಳವಾಗಿ ಬೇರುಬಿಟ್ಟಿದೆ. ಆದ್ದರಿಂದಲೇ ಹೈದರಾಬಾದಿನ ಮೆಕ್ಕಾ ಮಸೀದಿಯಲ್ಲಿ ಬಾಂಬ್ ಸ್ಪೋಟಗೊಂಡು ಆರು ಜನ ಮುಸಲ್ಮಾನರೆ ಸತ್ತರೂ, ಮಾಲೆಗಾಂವ್‌ನ ಮಸೀದಿಯ ಹತ್ತಿರ ಶುಕ್ರವಾರದ ನಮಾಜಿನ ಮೇಲೆ ಬಾಂಬ್ ಸ್ಪೋಟಿಸಿ 37 ಜನ ಮುಸಲ್ಮಾನರೇ ಸಾವಿಗೀಡಾಗಿದ್ದರೂ, ಸಂಜೋತಾ ಟ್ರೈನಿನಲ್ಲಿ ಸ್ಪೋಟ ಸಂಭವಿಸಿ ಸತ್ತ 68 ಜನರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರೇ ಇದ್ದರೂ ಆ ಎಲ್ಲಾ ಪ್ರಕರಣಗಳ ಹಿಂದೆ ಮುಸಲ್ಮಾನ್ ಸಂಘಟನೆಗಳೇ ಇದ್ದವು ಎಂಬಂತೆ ಪೊಲೀಸರು ಮತ್ತು ಮಾಧ್ಯಮಗಳು ಬಿಂಬಿಸಿದ್ದವು. ಸಾಮಾನ್ಯ ಜ್ಞಾನ ಇದ್ದವನಿಗೂ ಕೂಡ ಮುಸಲ್ಮಾನ ಭಯೋತ್ಪಾದಕರೇ ಯಾಕೆ ತಮ್ಮ ಪ್ರರ್ಥನಾ ಸ್ಥಳಗಳನ್ನು ಸ್ಪೋಟಿಸುತ್ತಾರೆ. ತಮ್ಮ ಸಮುದಾಯದವರನ್ನು ಕೊಲ್ಲುತ್ತಾರೆ, ಇದರ ಹಿಂದೆ ಬೇರೆ ಸಂಘಟನೆಗಳ ಕೈವಾಡವಿದೆ ಎಂದು ಹೊಳೆಯುತ್ತದೆ. ಆದರೆ ಪೊಲೀಸರು ಮಾತ್ರ ಎಂದಿನಂತೆ ಸಿಮಿ, ಲಷ್ಕರ್, ಜೈಷ್, ತಾಲಿಬಾನ್ ಎಂದೇ ಬಾಯಿಬಡಿದುಕೊಳ್ಳುತ್ತಿರುತ್ತಾರೆ.

ಹಿಂದೂತ್ವವಾದಿಗಳ ಭಂದತನ ಯಾವ ಮಟ್ಟದ್ದೆಂದರೆ ಅದರ ಮುಖವಾಣಿಯಾದ ಪಾಂಚಜನ್ಯದ ಸಂಪಾದಕ ತರುಣ್ ವಿಜಯ್ ಎಂಬಾತ ‘ಒಬ್ಬನೇ ಒಬ್ಬ ಹಿಂದೂ ಕೂಡ ಭಯೋತ್ಪಾದನೆಯನ್ನು ಸಮರ್ಥಿಸುವುದಿಲ್ಲ. ಅದು ನಮ್ಮ ವಂಶವಾಹಿಯಲ್ಲೇ ಇಲ್ಲ. ಈ ವಿಷಯದಲ್ಲಿ ನಮ್ಮ ರಕ್ತವರ್ಗವೇ ಬೇರೆಯದ್ದು’ ಎಂದು ವಾದಿಸಿದ್ದಾನೆ. ಅಷ್ಟೇ ಅಲ್ಲದೆ ‘ಸಾಧ್ವಿ ಪ್ರಗ್ಯಾ ಈಗ ಹೀರೋ ಆಗಿದ್ದಾಳೆ’ ಎಂದು ಹೇಳಿದ್ದಾನೆ. ಇ ತರುಣ್ ವಿಜಯ್‌ನನ್ನು ಯಾರಾದರೂ ಪ್ರಶ್ನಿಸಬೇಕಿದೆ: ‘ನೀಣೇ ಹೇಳಿರುವಂತೆ ಹಿಂದೂಗಳ ಅನುವಂಶದಲ್ಲಿ ಮತ್ತು ರಕ್ತವರ್ಗದಲ್ಲಿ ಭಯೋತ್ಪಾದನೆ ಇಲ್ಲ ಎಂಬುಬು ನಿಜವಾದರೆ, ಭಯೋತ್ಪಾದನೆ ಇಲ್ಲ ಎಂಬುದು ನಿಜವಾದರೆ, ಬಯೋತ್ಪಾದನೆ ಆರೊಪ ಹೊತ್ತಿರುವ ಪ್ರಗ್ಯಾ ಹಿಂದೂ ಅಲ್ಲ ಎಂದಾಯಿತಲ್ಲವೇ?’

ಈತನಂತೆ ಇನ್ನೊಬ್ಬ ಹಿಂದೂತ್ವವಾದಿ ನಾನಾ ವಾಡೇಕರ್ ಎಂಬಾತ, ಈಗ ಭಾರತ ಸೇನೆಗೆ ಕಳಂಕದಂತಾಗಿರುವ ಲೆಫ್ಟಿನೆಂಟ್ ಕರ್ನಲ್ ಪುರೋಹಿತನನ್ನು ಕ್ರಾಂತಿಕಾರಿ ಮಂಗಲ್ ಪಾಂಡೆಗೆ ಹೋಲಿಸಿದ್ದಾನಲ್ಲದೆ, ‘ಪ್ರಗ್ಯಾ ಮತ್ತು ಪುರೋಹಿತ್ ಬಾಂಬ್ ಸ್ಫೊಟದಲ್ಲಿ ಭಾಗವಹಿಸಿದ್ದು ನಿಜವಾದರೆ ಅವರ ಬಗ್ಗೆ ನಾವು ಹೆಮ್ಮೆಪಡುತ್ತೇವೆ’ ಎಂದಿದ್ದಾನೆ. ಅಮಾಯಕರನ್ನು ಕೊಲ್ಲುವುದು ಅದು ಹೇಗೆ ಹೆಮ್ಮೆಯ ವಿಷಯವಾಗುತ್ತದೆ? ಆದರೆ ತರುಣ್ ವಿಜಯ್ ಮತ್ತು ವಾಡೇಕರ್ ತರಹದವರು ಭೈರಪ್ಪ ಮತ್ತು ಚಿಮೂನ ಸಂತತಿಯವರೇ ಆಗಿರುವುದರಿಂದ ಇವೆಲ್ಲ ಅವರಿಗೆ ಅರ್ಥವಾಗುವುದಿಲ್ಲ ಬಿಡಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...