Homeಕರ್ನಾಟಕಪಿಯುಸಿ ಪಠ್ಯ ಪರಿಷ್ಕರಣೆಯ ‘ಚಕ್ರತೀರ್ಥ ವರದಿ’ ಪಡೆಯಲ್ಲ ಎಂದ ಸಚಿವ ಬಿಸಿ ನಾಗೇಶ್‌; ಜನಾಕ್ರೋಶಕ್ಕೆ ಮಣಿದ...

ಪಿಯುಸಿ ಪಠ್ಯ ಪರಿಷ್ಕರಣೆಯ ‘ಚಕ್ರತೀರ್ಥ ವರದಿ’ ಪಡೆಯಲ್ಲ ಎಂದ ಸಚಿವ ಬಿಸಿ ನಾಗೇಶ್‌; ಜನಾಕ್ರೋಶಕ್ಕೆ ಮಣಿದ ಸರ್ಕಾರ

- Advertisement -
- Advertisement -

ಬಲಪಂಥೀಯ ಟ್ರೋಲರ್‌ ರೋಹಿತ್ ಚಕ್ರತೀರ್ಥ ಅವರನ್ನು ದ್ವಿತೀಯ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಿಂದ ಕೈಬಿಟ್ಟಿದ್ದು, ಅವರು ನೀಡುವ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆಯ ವರದಿಯನ್ನು ಪಡೆಯುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ ಎಂದು ಟಿವಿ9 ಮಂಗಳವಾರ ವರದಿ ಮಾಡಿದೆ. ಈ ಮೂಲಕ ಪಠ್ಯ ಪರಿಷ್ಕರಣೆ ವಿರುದ್ದ ರಾಜ್ಯದಾದ್ಯಂತ ಎದ್ದಿರುವ ಜನರ ಆಕ್ರೋಶಕ್ಕೆ ಸರ್ಕಾರ ಮಣಿದಿದೆ.

ಪ್ರಾಥಮಿಕ ಮತ್ತು ಹೈಸ್ಕೂಲ್ ಪಠ್ಯ ಪುಸ್ತಕಗಳ ಬ್ರಾಹ್ಮಣೀಕರಣ ಮಾಡಿರುವ ರೋಹಿತ್ ಚಕ್ರತೀರ್ಥ ವಿರುದ್ಧ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದರೂ, ರಾಜ್ಯ ಸರ್ಕಾರ ಮತ್ತೇ ದ್ವಿತೀಯ ಪಿಯುಸಿ ಪಠ್ಯಪುಸ್ತಕದ ಪರಿಷ್ಕರಣೆಗೆ ಅವರ ಸಮಿತಿಯನ್ನೇ ನೇಮಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ದ್ವಿತೀಯ ಪಿಯುಸಿ ಪಠ್ಯದಲ್ಲಿರುವ ‘ಹೊಸ ಧರ್ಮಗಳ ಉದಯ’ ಎಂಬ ಪಠ್ಯಭಾಗದ ಪರಿಷ್ಕರಣೆ ಮಾಡುವ ಬಗ್ಗೆ ಸರ್ಕಾರ ರೋಹಿತ್ ಚಕ್ರತೀರ್ಥ ಸಮಿತಿಗೆ ಸೂಚಿಸಿತ್ತು. ಇದೀಗ ರಾಜ್ಯದಾದ್ಯಂತ ಚಕ್ರತೀರ್ಥ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಮಿತಿಯನ್ನು ಕೈಬಿಡಲು ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ: ಬಾಬಾ ಸಾಹೇಬರಿಗೆ ಅಗೌರವ: ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌’ ಎಂಬ ಸಾಲನ್ನೇ ಕತ್ತರಿಸಿದ ಚಕ್ರತೀರ್ಥ ಸಮಿತಿ!

“ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ವಿಸರ್ಜಿಸಿರುವ ಕಾರಣ, ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆಯ ವರದಿಯನ್ನು ಪಡೆಯುವುದಿಲ್ಲ” ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ ಎಂದು ಟಿವಿ9 ವರದಿ ಮಾಡಿದೆ.

ಹೈಸ್ಕೂಲ್ ಮತ್ತು ಪ್ರಾಥಮಿಕ ತರಗತಿಗಳ ಪಠ್ಯಪುಸ್ತಕ ಮರು ಪರಿಶೀಲನೆ ಮಾಡುವಾಗ ಚಕ್ರತೀರ್ಥ ಸಮಿತಿ ಮಾಡಿರುವ ಎಡವಟ್ಟುಗಳು ಒಂದೊಂದಾಗಿ ಹೊರಬೀಳತೊಡಗಿವೆ. ಏಳನೇ ತರಗತಿಯ ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕ ‘ಸಿರಿ ಕನ್ನಡ’ದಲ್ಲಿ ‘ಆಡಿಸಿ ನೋಡು ಬೀಳಿಸಿ ನೋಡು’ ಪದ್ಯವನ್ನು ಪೂರಕ ಪಠ್ಯವಾಗಿ ರೋಹಿತ್ ಚಕ್ರತೀರ್ಥ ಸಮಿತಿ ನೀಡಿದೆ. ಅದನ್ನು ಬರೆದವರು ‘ಆರ್‌.ಎನ್‌.ಜಯಗೋಪಾಲ್‌’ ಎಂದು ತಿಳಿಸಿ ಕವಿ ಪರಿಚಯವನ್ನೂ ನೀಡಲಾಗಿದೆ. ವಾಸ್ತವದಲ್ಲಿ ಇದನ್ನು ಬರೆದವರು ಖ್ಯಾತ ಗೀತರಚನಾಕಾರ ಚಿ.ಉದಯಶಂಕರ್‌ ಆಗಿದ್ದಾರೆ.

ಸಾಹಿತಿ ಚೆನ್ನಣ್ಣ ವಾಲೀಕಾರ ಅವರು ಅಂಬೇಡ್ಕರ್‌‌ ಬರೆದಿರುವ ‘ನೀ ಹೋದ ಮರುದಿನ’ ಎಂಬ ಪದ್ಯವನ್ನು ಆರನೇ ತರಗತಿಯ ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕ ‘ಸಿರಿ ಕನ್ನಡ’ದಲ್ಲಿ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯಪರಿಶೀಲನಾ ಸಮಿತಿ ಅಳವಡಿಸಿತ್ತು. ಈ ಪದ್ಯವನ್ನು ನೂತನ ಪಠ್ಯಪುಸ್ತಕಗಳ ಪರಿಶೀಲನಾ ಸಮಿತಿಯು ತೆಗೆದುಹಾಕಿದೆ.

ಇದನ್ನೂ ಓದಿ: ಬಲಪಂಥೀಯ ಟ್ರೋಲರ್ ಒಬ್ಬನ ಕೈಗೆ ಪಠ್ಯ ಪರಿಷ್ಕರಣೆ ಜವಾಬ್ದಾರಿ..: ರೋಹಿತ್ ಚಕ್ರತೀರ್ಥ ಮಾಡಿದ ಅಸಹ್ಯದ ಪೋಸ್ಟ್‌ಗಳಿವು

ಆರನೇ ತರಗತಿಯ ‘ಸಿರಿಗನ್ನಡ’ ಪ್ರಥಮಭಾಷಾ ಪಠ್ಯಪುಸ್ತಕದಲ್ಲಿ ‘ಮೆರವಣಿಗೆ’ ಎಂಬ ಪಾಠ ಇತ್ತು. ಈ ಪಠ್ಯವನ್ನು ಸಮಿತಿಯೇ ರೂಪಿಸಿತ್ತು. ಕನ್ನಡ ರಾಜ್ಯೋತ್ಸವಕ್ಕಾಗಿ ಶಾಲೆಯೊಂದರಲ್ಲಿ ನಡೆದ ಸಿದ್ಧತೆ ಕುರಿತು ಮಾತನಾಡುವ ಈ ಪಾಠ, ನವೆಂಬರ್‌ 1ರ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯನ್ನು ತಿಳಿಸುತ್ತದೆ. ವಿವಿಧ ಧರ್ಮಗಳ ಹಿನ್ನೆಲೆಯ ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ಉದ್ದೀಪಿಸುವ ಕೆಲಸವನ್ನು ಈ ಗದ್ಯಭಾಗ ಮಾಡುತ್ತದೆ. ಆದರೆ ಈ ಪಾಠವನ್ನು ಚಕ್ರತೀರ್ಥ ಸಮಿತಿ ಕಿತ್ತು ಹಾಕಿದೆ.

ಹಳೆಯ ಪಠ್ಯದಲ್ಲಿದ್ದ ಹಲವಾರು ಮೌಲ್ಯಯುತ ವಿಚಾರಗಳಿಗೆ ಕತ್ತರಿ ಪ್ರಯೋಗ ಮಾಡಿರುವ ಸಮಿತಿಯು, ‘ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌’ ಕುರಿತ ವಿಚಾರಗಳನ್ನೂ ತಿರುಚುವ ಕೆಲಸ ಮಾಡಿದೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬೌದ್ಧಧರ್ಮಕ್ಕೆ ಮರಳಿದ್ದು ಏಕೆಂಬ ವಿಷಯವನ್ನು ಹೊಸ ಪಠ್ಯದಲ್ಲಿ ಮರೆಮಾಚಿರುವುದು ಬೆಳಕಿಗೆ ಬಂದಿತ್ತು. ಇತಿಹಾಸವಷ್ಟೇ ಅಲ್ಲದೇ ರಾಜಶಾಸ್ತ್ರ ವಿಭಾಗದಲ್ಲೂ ಬಾಬಾ ಸಾಹೇಬರ ವಿಚಾರಗಳಲ್ಲಿ ಕತ್ತರಿ ಪ್ರಯೋಗ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅಂಬೇಡ್ಕರ್‌ ಅವರು ‘ಸಂವಿಧಾನ ಶಿಲ್ಪಿ’ ಎಂಬ ವಾಕ್ಯಕ್ಕೆ ಚಕ್ರತೀರ್ಥ ಸಮಿತಿ ಕತ್ತರಿ ಹಾಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಲಿವ್ ಇನ್ ರಿಲೇಷನ್ ಭಾರತಕ್ಕೆ ಆಮದು ಸಂಸ್ಕೃತಿ, ಕಳಂಕ’; ಛತ್ತೀಸ್‌ಗಢ ಹೈಕೋರ್ಟ್

0
'ಲಿವ್ ಇನ್ ಸಂಬಂಧವು ಭಾರತೀಯ ತತ್ವಗಳ ಸಾಮಾನ್ಯ ನಿರೀಕ್ಷೆಗಳಿಗೆ ವಿರುದ್ಧವಾದ ಆಮದು ತತ್ವವಾಗಿದೆ; ದೇಶದ ಸಂಸ್ಕೃತಿಯಲ್ಲಿ ಅದನ್ನು ಇನ್ನೂ ಕಳಂಕ ಎಂದು ಪರಿಗಣಿಸಲಾಗಿದೆ' ಎಂದು ಛತ್ತೀಸ್‌ಗಢ ಹೈಕೋರ್ಟ್ ಹೇಳಿದೆ. ಲಿವ್ ಇನ್ ಸಂಬಂಧದಿಂದ ಜನಿಸಿದ...